ಬೆಂಗಳೂರು: ಕರ್ನಾಟಕದ ಯಾವುದೇ ಒಂದು ವಿಶ್ವವಿದ್ಯಾಲಯಕ್ಕೆ ನಮ್ಮ ಬಂಜಾರ ಸಮಾಜದ ಹಿರಿಯ ಪ್ರಾಧ್ಯಾಪಕ ಹಾಗೂ ಬಹುಭಾಷಾ ವಿದ್ವಾಂಸರಾದ ಪ್ರೊ. ಎಸ್.ಕೆ. ಪವಾರ ಇವರನ್ನು ಕುಲಪತಿ ಹುದ್ದೆಗೆ ನೇಮಕಾತಿ ಮಾಡುವಂತೆ ಸರ್ಕಾರಕ್ಕೆ ಕರ್ನಾಟಕ ರಾಜ್ಯ ಬಂಜಾರ ಯುವಕರ ಮತ್ತು ವಿದ್ಯಾರ್ಥಿ ಸಂಘದಿಂದ ಒತ್ತಾಯ ಮಾಡಲಾಯಿತು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಬಂಜಾರ ಸಮುದಾಯದ ಮುಖಂಡರು ಹಾಗೂ ಮಾಜಿ ಸಚಿವೆ ಬಿಟಿ ಲಲಿತ ನಾಯಕ್ ಮಾತನಾಡಿ,ಕರ್ನಾಟಕ ಘನ ಸರ್ಕಾರವು ಸ್ಥಾಪಿಸಿರುವ 41 ವಿಶ್ವವಿದ್ಯಾಲಯಗಳಲ್ಲಿ ಮೆಡಿಕಲ್, ಇಂಜಿನಿಯರಿಂಗ್ ಹಾಗೂ ಕೃಷಿ ವಿಶ್ವವಿದ್ಯಾಲಯಗಳನ್ನು ಹೊರತುಪಡಿಸಿ ಉಳಿದ 30 ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಕುಲಪತಿಗಳ ಹುದ್ದೆಗೆ ತಮ್ಮ ತಮ್ಮ ಜಾತಿಯವರನ್ನೇ ನೇಮಕ ಮಾಡುವ ವಿಷಯದಲ್ಲಿ ಸ್ವಜಾತಿ ಪಕ್ಷಪಾತ ನಡೆದು ಯಾವುದೇ ವಿಶ್ವವಿದ್ಯಾಲಯದಲ್ಲಿ ಬಂಜಾರ ಸಮಾಜದವರನ್ನು ಕುಲಪತಿ ಹುದ್ದೆಗೆ ಒಬ್ಬರನ್ನೂ ನೇಮಕಾತಿ ಮಾಡಿಲ್ಲ ಎಂದರು.
ಕರ್ನಾಟಕದ 30 ವಿಶ್ವವಿದ್ಯಾಲಯಗಳಲ್ಲಿ ಬ್ರಾಹ್ಮಣ -07, 07, 2๒๗ -03, 6.2.8. 03. 22-02, ໖-04. ಮಾದಿಗ-02, ವೈಶ್ಯ-01, ನಾಯಕ-01, ಭಂಟ-01 ಈ ರೀತಿಯಾಗಿ ಹಂಚಿಕೆ ಮಾಡಿಕೊಳ್ಳಲಾಗಿದೆ.
ಕರ್ನಾಟಕ ಸರ್ಕಾರವು ಇತ್ತೀಚೆಗೆ, ಧಾರವಾಡ, ಕಲಬುರ್ಗಿ, ರಾಯಾಚೂರು ಹಾಗೂ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ ವಿಶ್ವವಿದ್ಯಾಲಯಗಳಿಗೆ ಸರ್ಚ ಕಮಿಟಿ ನೇಮಿಸಿ ಇಲ್ಲಿಯೂ ಮೇಲಿನ ಸಮುದಾಯದವರಿಗೇ ಮಣಿ ಹಾಕಲಾಗಿದೆ. ಉದಾಹರಣೆಗೆ, ಛಲವಾದಿ-02, ಮಾದಿಗ-01 ಹಾಗೂ ಮುಸ್ಲಿಂ-01 ಹೀಗೆ ನೇಮಿಸಿ ಆದೇಶಕ್ಕಾಗಿ ರಾಜ್ಯಪಾಲರಿಗೆ ಕಳುಹಿಸಲಾಗಿದೆ. ಇದು ದುರಂತದ ಸಂಗತಿ ಎಂದರು.
ಪ್ರೊ. ಎಸ್.ಕೆ. ಪವಾರ ಇವರ ನಿವೃತ್ತಿಯ ನಂತರ 15 ವರ್ಷಗಳ ಕಾಲ ಯಾವೊಬ್ಬ ಬಂಜಾರ ಸಮುದಾಯದ ಪ್ರಾಧ್ಯಾಪಕರು ಕುಲಪತಿ ಹುದ್ದೆಗೆ ಅರ್ಹರಾಗುವುದಿಲ್ಲ. ಆದಕಾರಣ ತಾವು ಈ ವಿಷಯವನ್ನು ಮಹತ್ವವೆಂದು ತಿಳಿದು ಸದರಿಯವರನ್ನು ಕುಲಪತಿ ಹುದ್ದೆಗೆ ಪರಿಗಣಿಸಬೇಕು.
ಈ ವಿಷಯದಲ್ಲಿ ಬಂಜಾರ ಸಮುದಾಯಕ್ಕೆ ಅನ್ಯಾಯವಾಗಿದ್ದೇ ಆದಲ್ಲಿ ಮುಂಬರುವ ದಿನಗಳಲ್ಲಿ ನಮ್ಮ ಬಂಜಾರ ಸಮಾಜವು ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ನಡೆಯುವ ಸಾಧ್ಯತೆ ಕೂಡಾ ಇದೆ. ಆದಕಾರಣ ಮಾನ್ಯ ಘನ ಸರ್ಕಾರದ ಎಲ್ಲ ಗಣ್ಯ ಮಾನ್ಯ ಶಾಸಕರು, ಸಚಿವರು. ಸಂಸದರು. ಶಿಕ್ಷಣ ಮಂತ್ರಿಗಳು ಮತ್ತು ಮುಖ್ಯಮಂತ್ರಿಗಳಲ್ಲಿ ಈ ಬಡ ಸಮುದಾಯಕ್ಕೆ ನ್ಯಾಯ ಒದಗಿಸಲು ಮುಂದಾಗಬೇಕು ಎಂದು ವಿನಂತಿಸಿಕೊಳ್ಳುತ್ತೇವೆ ಹಾಗೂ ಸರ್ಕಾರಕ್ಕೆ ಈ ಮೂಲಕ ಒತ್ತಾಯಿಸುತ್ತೇವೆ.
ಸಂಘದ ಅಧ್ಯಕ್ಷರಾದ ಗಿರೀಶ್ ಡಿಆರ್, ರಾಜ್ಯ ಬಂಜಾರ ನಿರಾಶ್ರಿತರ ಸಂಘದ ಅಧ್ಯಕ್ಷರಾದ ಬಿಟಿ ಲಲಿತಾ ನಾಯಕ್, ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಸುರೇಶ್ ನಾಯಕ್, ಚಂದ್ರಶೇಖರ್ ನಾಯಕ್, ಮಂಜುನಾಥ್ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.