ಬೆಂಗಳೂರು: ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘದಲ್ಲಿ ಯಾವುದೇ ಹಣ ದುರುಪಯೋಗವಾಗಿಲ್ಲ, ಸಮಾಜದಲ್ಲಿ ಕೆಲ ಹಿತಾಸಕ್ತಿ ವ್ಯಕ್ತಿಗಳು ನಮ್ಮನ್ನು ತೇಜೊವದೆ ಮಾಡುವ ಉದ್ದೇಶದಿಂದ ಚುನಾವಣೆಯನ್ನು ಎದುರಿಸಲು ಸಾಧ್ಯವಾಗದ ಹಿನ್ನೆಲೆ ಸುಖ ಸುಮ್ಮನೆ ಹಣ ದುರುಪಯೋಗದ ಕಟ್ಟುಕಥೆ ಹೇಳಿಕೊಂಡು ಸಮಾಜವನ್ನು ಹೊಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಸಂಘದ ನಿಕಟಪೂರ್ವ ಅಧ್ಯಕ್ಷ ಬಿ ಮೌಲಾಲಿ ಅವರು ತಿಳಿಸಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2018 ನಂಬರ್ ನಲ್ಲಿ ಸಂಘ ಸಂಘಕ್ಕೆ ಯಾವುದೇ ವರಮಾನ ಬರುತ್ತಿರಲಿಲ್ಲ ಕೇವಲ 16,000 ಬಾಡಿಗೆ ಮಾತ್ರ ಬರುತ್ತಿತ್ತು. ಕರ್ನಾಟಕ ಸರ್ಕಾರದಿಂದ ಒಂದು ಕೋಟಿ ಅನುದಾನ ಬರುವುದು ಆದರೆ ಕರ್ನಾಟಕ ರಾಜ್ಯ ಗಂಗಮತ ಸಂಘದ ಯಾವುದೇ ದಾಖಲಾತಿಗಳು ಲಭ್ಯವಿರಲಿಲ್ಲ ನವೀಕರಣವಾಗಿರಲಿಲ್ಲ.
ಬಿಬಿಎಂಪಿ ಆದಾಯ ತೆರಿಗೆ ಮತ್ತು ಇಸಿತೈಸುವ ಮೂಲಕ ಎಲ್ಲಾ ದಾಖಲೆಗಳನ್ನು ಪುನಹ ಪಡೆದು ಸರಕಾರಕ್ಕೆ ದಾಖಲಾತಿಗಳು ಉದಯಿಸಿ, ಒಂದು ಕೋಟಿ ಅನುದಾನಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಆ ಒಂದು ಕೋಟಿ ಹಣ ಬಿಡುಗಡೆಯಾದ ನಂತರ ಹಳೆ ವಿದ್ಯಾರ್ಥಿ ನಿಲಯವನ್ನು ಕೆಡವಿ ಹೊಸದಾಗಿ ನಿರ್ಮಾಣ ಮಾಡಲಾಯಿತು. ಅಲ್ಲದೆ ದಾನಿಗಳಿಂದ ಸಂಗ್ರಹವಾಗಿರುವ ಹಣದಿಂದ ಕಟ್ಟಡಕ್ಕೆ ಬೇಕಾಗಿರುವ ಸಾಮಗ್ರಿಗಳನ್ನು ಖರೀದಿ ಮಾಡಲಾಯಿತು.
ಸಂಘದ ಮನವಿಯನ್ನು ಪರಿಗಣಿಸಿ ಸರ್ಕಾರ ಒಂದು ಪಾಯಿಂಟ್ ಐದು ಕೋಟಿ ಅನುದಾನವನ್ನು ಬಿಡುಗಡೆ ಮಾಡಲು ಆದೇಶಿಸಲಾಗಿತ್ತು ಮೊದಲ ಹಂತದಲ್ಲಿ 75 ಲಕ್ಷ ಬಿಡುಗಡೆಯಾಗಿದೆ ಅದರಲ್ಲಿ ರಸ್ತೆ ಕಟ್ಟಡ ಪ್ರಾರಂಭ ಮಾಡಲಾಯಿತು ಎರಡನೇ ಹಂತದಲ್ಲಿ 37 ವರೆ ಲಕ್ಷ ಹಣ ಬಿಡುಗಡೆ ಮಾಡಲಾಯಿತು. ಇದರಲ್ಲಿ ಸಹ ಮುಂದುವರೆದ ಕಾಮಗಾರಿಗಳನ್ನು ನಡೆಸಲಾಯಿತು. ಗುಣಮಟ್ಟದ ಕೆಲಸ ಕಾರ್ಯಗಳು ಮಾಡಲಾಗಿದೆ ಎಂಬುದಕ್ಕೆ ಮೂರನೇ ವ್ಯಕ್ತಿಗಳಿಂದ ಪ್ರಮಾಣ ಪತ್ರವನ್ನು ಸಹ ನೀಡಲಾಗಿದೆ.
ಒಟ್ಟಿನಲ್ಲಿ ಸರ್ಕಾರದಿಂದ 2 ಕೋಟಿ 12 ವರೆ ಲಕ್ಷ ಅನುದಾನವನ್ನು ಪಡೆಯಲಾಗಿದ್ದು, ಇನ್ನು 37 ವರೆ ಲಕ್ಷ ಸರ್ಕಾರ ದಿಂದ ಬರಬೇಕಾಗಿದೆ ಎಂದು ತಿಳಿಸಿದರು.
ಸಮುದಾಯದ ಗಂಗಾಪರಮೇಶ್ವರಿ ದೇವಸ್ಥಾನ ಅಭಿವೃದ್ಧಿಪಡಿಸಲು ಹದಿನಾಲ್ಕುಲಕ್ಷ ವೆಚ್ಚದಲ್ಲಿ ಮಾಡಲಾಗಿದೆ ಸೆಲ್ಫಿಗಳಾದ ವಿಶ್ವನಾಥ್ ಭಟ್ ಅವರಿಗೆ 94 ಲಕ್ಷ 50,000 ಹಣವನ್ನು ನೀಡಲಾಗಿದೆ. ಮೌಲಾಲಿ ಅವರ ಆಡಳಿತ ಅವಧಿಯಲ್ಲಿ 2018 ನಂಬರ್ ಇಂದ 2024 ಏಪ್ರಿಲ್ ವರೆಗೆ ಕೇವಲ 3 ವರ್ಷ ಮಾತ್ರ. ನಂತರ ಕೊರೊನಾ ರೋಗ ಪ್ರಾರಂಭವಾಯಿತು. ಈ ವೇಳೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದ ಜನರಲ್ ಬಾಡಿ ಮೀಟಿಂಗ್ ನಲ್ಲಿ 6 ತಿಂಗಳ ಅವಕಾಶ ಕೇಳಿ ಸರ್ವ ಸದಸ್ಯರ ಒಪ್ಪಿಗೆ ಮೇರೆಗೆ ಅಧಿಕಾರದ ಅವಧಿ ವಿಸ್ತರಿಸುವಂತೆ ಮಾಡಲಾಯಿತು. ನಮ್ಮ ಆಡಳಿತ ಅವಧಿಯಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಕೆಲವು ಚಿತ್ರಗಳ ಸಮೇತ ದಾಖಲೆಗಳನ್ನು ಸಹ ಬಿಡುಗಡೆ ಮಾಡಿದರು.
ನಮ್ಮ ಆಡಳಿತದ ಅವಧಿಯಲ್ಲಿ ಸಮಾಜದ ಸದಸ್ಯರ ಸಂಖ್ಯೆ ಸಂಘದಲ್ಲಿ ಹೆಚ್ಚಳ ಮಾಡಲಾಗಿದೆ, ಸಂಘಕ್ಕೆ ಸಮುದಾಯಕ್ಕೆ ಇಷ್ಟೆಲ್ಲ ಕೆಲಸ ಕಾರ್ಯಗಳನ್ನು ಮಾಡಿದರು ಸಹ ನಮ್ಮ ಮೇಲೆ ಸುಳ್ಳು ಹಾರಪುಗಳನ್ನು ವರಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಆಡಳಿತ ಅಧಿಕಾರಿಗಳು ಬಂದು ಅದು ಮೂರ್ತಿಗಳು ಕಳೆದರೂ ಸಹ ಇಲ್ಲಿವರೆಗೂ ಸಂಘಕ್ಕೆ ಚುನಾವಣೆ ನಡೆದಿಲ್ಲ ಆದರೆ ನಮ್ಮ ಮೇಲೆ ಸುಳ್ಳು ಆರೋಪಗಳನ್ನು ವಿವರಿಸಿ ದಿನ ನೂಕುತ್ತಿದ್ದಾರೆ ಎಂದು ತಿಳಿಸಿದರು.
ನಿಕಟ ಪೂರ್ವ ಆಡಳಿತ ಮಂಡಳಿಯವರ ಮೇಲೆ ಸಮಾಜದ ಹಾಗೂ ಸಂಘದ ಕೆಲ ಹಿತಾಸಕ್ತಿ ವ್ಯಕ್ತಿಗಳು ಕೋರ್ಟ್ ಕಟ್ಟಕಟ್ಟೆಯಲ್ಲಿ ನಿಲ್ಲುವಂತೆ ಮಾಡಿದ್ದಾರೆ, ಇವೆಲ್ಲವೂ ಸಹ ತನಿಕೆಯಿಂದ ಬರಬೇಕಿದ್ದು, ತದನಂತರ ಸತ್ಯ ಸತ್ಯತೆ ತಿಳಿಯಲಿದೆ ಎಂದರು. ಪ್ರಕರಣವು ನ್ಯಾಯದಲ್ಲಿ ಇರುವ ಕಾರಣ ಮುಂದಿನ ದಿನಗಳಲ್ಲಿ ನಮ್ಮ ಪರವಾಗಿ ಬರುತ್ತದೆ ಆದರೆ ಚುನಾವಣೆ ಮಾತ್ರ ನಿಲ್ಲುವುದಿಲ್ಲ ಈಗಾಗಲೇ ಚುನಾವಣೆ ದಿನಾಂಕ ಘೋಷಣೆ ಆಗಿದೆ ಅಂತ ತಿಳಿಸಿದರು.
ಮುಂಬರುವ ಸಂಘದ ಚುನಾವಣೆಯಲ್ಲಿ ನಿಕಟಪೂರ್ವ ಅಧ್ಯಕ್ಷರಾಗಿರುವ ಮೌಲಾಲಿ ಅವರ ತಂಡಕ್ಕೆ ಸಮಾಜದ ಬಂಧುಗಳು ಅಭೂತಪೂರ್ವ ವೋಟನ್ನು ನೀಡಿ ಗೆಲ್ಲಿಸಿಕೊಟ್ಟರೆ ಮತ್ತಷ್ಟು ಸಮಾಜಕ್ಕೆ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತೆ ಎಂದು ವಿನಂತಿ ಮಾಡಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಗಂಗಾ ಮತಸ್ಥರ ಕೆ ಮನೋಹರ್ ನಿಕಟ ಪೂರ್ವ ಕಾರ್ಯದರ್ಶಿ,ಮಹದೇವ ಕರ್ಜಗಿ ನಿಕಟಪೋರ, ಉಪಾಧ್ಯಕ್ಷರು ತಮ್ಮಣ್ಣ ನಿಕಟಪೂರ್ವ ಉಪಾಧ್ಯಕ್ಷರು, ಗೋಪಾಲ್ನಿ ನಿಕಟಪೂರ್ವ ಉಪಾಧ್ಯಕ್ಷರು,ಪ್ರಕಾಶ್ ನಿಕಟ ಪೂರ್ವ ಸಂಘಟನಾ ಕಾರ್ಯದರ್ಶಿ ಸೇರಿದಂತೆ ಸಮಾಜದ ಬಂಧುಗಳು ಉಪಸ್ಥಿತರಿದ್ದರು.