ಕರ್ನಾಟಕ ರಾಜ್ಯ ಪಡಿತರ ಆಹಾರ ಧಾನ್ಯಗಳ ಸಗಟು ಹಾಗೂ ಚಿಲ್ಲರೆ ಸಾಗಾಣಿಕೆ ಗುತ್ತಿಗೆದಾರರ ಸಂಘ (ರಿ)
ಕರ್ನಾಟಕ ರಾಜ್ಯದ ಲಾರಿ ಮಾಲೀಕರು ರಾಜ್ಯದ ಪಡಿತರ ಆಹಾರ ಧಾನ್ಯಗಳ ಸಗಟು ಹಾಗೂ ಚಿಲ್ಲರೆ ಗೋದಾಮುಗಳಿಗೆ ಸರ್ಕಾರದ ಕಾಂಟ್ರಾಕ್ಟ್ ಮೇರೆಗೆ ಸಾಗಾಣಿಕೆ ಮಾಡಿ 3 (ಮೂರು) ತಿಂಗಳು ಕಳೆದರೂ ಸಾಗಾಣಿಕೆ ಮಾಡಿದಂತ ವಾಹನಗಳ ಬಾಡಿಗೆ ನೀಡಿರುವುದಿಲ್ಲ ಈಗಾಗಲೇ ಸರ್ಕಾರಕ್ಕೆ ಸಾಕಷ್ಟು ಭಾರಿ ಇದರ ಸಂಬಂದ ಮನವಿ ಮಾಡಿದ್ದರೂ ಸಹ ಇದುವರೆವಿಗೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಆದ್ದರಿಂದ ಕೂಡಲೇ ವಾಹನ ಮಾಲೀಕರಿಗೆ ಕೊಡಬೇಕಾಗಿರುವ ಬಾಕಿ ಮೊತ್ತವನ್ನು ಮಂಜೂರು ಮಾಡಬೇಕೆಂದು ಕೋರಲು, ಆಗೊಂದು ವೇಳೆ ಸರ್ಕಾರ ಇದಕ್ಕೆ ಸ್ಪಂಧಿಸದಿದ್ದರೆ ಅನಿರ್ಧಿಷ್ಟ ಕಾಲ ಮುಷ್ಕರ ಕೈಗೊಳ್ಳುವ ಬಗ್ಗೆ ದಿನಾಂಕ 18-06-2025 ರಂದು ಸಂಜೆ 6.00 ಗಂಟೆಗೆ “ಹೋಟೆಲ್ ಮೌರ್ಯ” ರೇಸ್ ಕೋರ್ಸ್ ರಸ್ತೆ ಹಿಂಭಾಗದಲ್ಲಿ ಪ್ರೆಸ್ ಮೀಟ್ ಕರೆಯಲಾಗಿರುತ್ತದೆ. ಆದ್ದರಿಂದ ತಾವು ನಿಗದಿತ ಸಮಯಕ್ಕೆ ಬಂದು ಸರ್ಕಾರದ ಗಮನಕ್ಕೆ ತರುವಂತೆ ಈ ಮೂಲಕ ಕೋರಿದೆ.
ಸಮಯದ ಅಭಾವದ ಕಾರಣ ಸಭೆ ಕರೆಯಲು ತುರ್ತಾಗಿ ತೀರ್ಮಾನಿಸಿದ್ದರಿಂದ ಕ್ಷಮೆ ಇರುತ್ತದೆ.
ಅಧ್ಯಕ್ಷರು
(ಜಿ.ಆರ್.ಷಣ್ಮುಗಪ್ಪ)