ಬೆಂಗಳೂರು; ಮಾನವೀಯ ಸೇವೆಗೆ ಹೆಸರಾದ ನಾರಾಯಣ ಸೇವಾ ಸಂಸ್ಥಾನದಿಂದ ಏಪ್ರಿಲ್ 27 ರ ಭಾನುವಾರ ಸತತ ಮೂರನೇ ವರ್ಷ ಬೆಂಗಳೂರಿನಲ್ಲಿ ಉಚಿತ ನಾರಾಯಣ್ ಉಚಿತ ಕೃತಕ ಅಂಗಾಂಗ ಮತ್ತು ಕ್ಯಾಲಿಪರ್ ಜೋಡಣಾ ಶಿಬಿರ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ.
ಬಸವನಗುಡಿಯ ಬುಲ್ ಟೆಂಪಲ್ ರಸ್ತೆಯ ಮರಾಠಾ ಹಾಸ್ಟೆಲ್ ಮೈದಾನದಲ್ಲಿ ಬೆಳಿಗ್ಗೆ 8:00 ರಿಂದ ಸಂಜೆ 5:00 ರವರೆಗೆ ನಡೆಯಲಿದ್ದು, ಅಲ್ಲಿ ಮೊದಲೇ ನೋಂದಾಯಿಸಿಕೊಂಡ ಅಂಗವಿಕಲ ವ್ಯಕ್ತಿಗಳಿಗೆ ಮಾತ್ರ ಉಚಿತ ಕೃತಕ ಅಂಗಗಳನ್ನು ಜೋಡಿಸಲಾಗುತ್ತದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾರಾಯಣ ಸೇವಾ ಸಂಸ್ಥಾನದ ನಿರ್ದೇಶಕ ಭಗವಾನ್ ಪ್ರಸಾದ್ ಗೌರ್, ಕಳೆದ 40 ವರ್ಷಗಳಿಂದ ವಿಶೇಷ ಚೇತನರ ಪರವಾಗಿ ಕೆಲಸ ಮಾಡುತ್ತಿದೆ. ಫೆಬ್ರವರಿ 2 ರಂದು ಬೆಂಗಳೂರಿನಲ್ಲಿ 1,050 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಅವರಲ್ಲಿ 694 ವ್ಯಕ್ತಿಗಳು ರಸ್ತೆ ಅಥವಾ ಇತರ ಅಪಘಾತಗಳಿಂದಾಗಿ ಕೈಕಾಲುಗಳನ್ನು ಕಳೆದುಕೊಂಡಿದ್ದರು. ಈ ವ್ಯಕ್ತಿಗಳಿಗೆ ಇದೀಗ ಅಂಗಾಂಗ ಜೋಡಿಸಲಾಗುತ್ತಿದೆ ಎಂದರು.
ಜರ್ಮನ್ ತಂತ್ರಜ್ಞಾನದಿಂದ ತಯಾರಿಸಿದ ನಾರಾಯಣ್ ಲಿಂಬ್ಸ್ ಅಳವಡಿಸಲಾಗುವುದು. ಇದು ಅವರಿಗೆ ಹೊಸ ಜೀವನವನ್ನು ನೀಡಲಿದೆ. ಈ ವ್ಯಕ್ತಿಗಳಲ್ಲಿ ಅನೇಕರು ತಮ್ಮ ಕುಟುಂಬಗಳ ಮೇಲೆ ಅವಲಂಬಿತರಾಗಿದ್ದರು, ಆದರೆ ಈ ಬೆಂಬಲದೊಂದಿಗೆ, ಅವರು ಮುಖ್ಯವಾಹಿನಿಗೆ ಮತ್ತೆ ಸೇರಲು ಸಬಲೀಕರಣಗೊಳ್ಳುತ್ತಿದ್ದಾರೆ. ಇದು ರಾಷ್ಟ್ರ ಮತ್ತು ಸಮಾಜ ಎರಡಕ್ಕೂ ಹೆಮ್ಮೆಯ ಕ್ಷಣ ಎಂದರು.
ಇದೇ ಸಂದರ್ಭದಲ್ಲಿ ಶಿಬಿರದ ಅಧಿಕೃತ ಪೋಸ್ಟರ್ ಅನ್ನು ಭಗವಾನ್ ಪ್ರಸಾದ್ ಗೌರ್ ಜೊತೆ ನಾರಾಯಣ ಸೇವಾ ಸಂಸ್ಥಾನದ ಬೆಂಗಳೂರು ಉಸ್ತುವಾರಿ ಖುಬಿಲಾಲ್ ಮೆನಾರಿಯಾ, ಮುಂಬೈ ಶಾಖೆ ಮುಖ್ಯಸ್ಥ ಲಲಿತ್ ಲೋಹರ್, ಸಾಮಾಜಿಕ ಕಾರ್ಯಕರ್ತ ರಾಕೇಶ್ ವೈಷ್ಣವ್, ಗಾನವಿ ಮತ್ತು ಮಾಧ್ಯಮ ಸಂಯೋಜಕರಾದ ಚಂದ್ರಶೇಖರಯ್ಯ ಬಿಡುಗಡೆ ಮಾಡಿದರು.
ಕರ್ನಾಟಕದಲ್ಲಿ 700 ಕ್ಕೂ ಹೆಚ್ಚು ವಿಕಲ ಚೇತನರ ಬದುಕಿನಲ್ಲಿ ಆಶಾಕಿರಣ
ನಾರಾಯಣ ಸೇವಾ ಸಂಸ್ಥಾನವು ದೇಶದ ವಿವಿಧ ಪ್ರದೇಶಗಳಲ್ಲಿ ಪ್ರತಿ ವಾರ ಇದೇ ರೀತಿಯ ಶಿಬಿರಗಳನ್ನು ನಡೆಸುತ್ತದೆ. ಅಂತರರಾಷ್ಟ್ರೀಯವಾಗಿ, ಕೀನ್ಯಾ, ಉಗಾಂಡಾ, ಮೇರು, ತಾಂಜಾನಿಯಾ ಮತ್ತು ನೇಪಾಳದಂತಹ ದೇಶಗಳಲ್ಲಿಯೂ ಶಿಬಿರಗಳನ್ನು ಆಯೋಜಿಸಲಾಗಿದೆ. ಪ್ರತಿ ತಿಂಗಳು ಸರಾಸರಿ 1,800 ಕೃತಕ ಅಂಗಗಳನ್ನು ಅಳವಡಿಸಲಾಗುತ್ತದೆ ಎಂದು ಭಗವಾನ್ ಪ್ರಸಾದ್ ಗೌರ್ ಮಾಹಿತಿ ನೀಡಿದರು.
ಶಿಬಿರದ ಉದ್ಘಾಟನೆಗೆ, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಸೇರಿದಂತೆ ಹಲವಾರು ಗಣ್ಯರನ್ನು ಆಹ್ವಾನಿಸಲಾಗಿದೆ. ಭಾಗವಹಿಸುವ ಎಲ್ಲಾ ಅಂಗವಿಕಲ ವ್ಯಕ್ತಿಗಳಿಗೆ ಸಂಸ್ಥೆಯು ಉಚಿತ ಊಟ ಒದಗಿಸುತ್ತದೆ. ಫಿಟ್ಮೆಂಟ್ ನಂತರ, ಸ್ವೀಕರಿಸುವವರಿಗೆ ಸಂಸ್ಥಾನದ 60 ಸದಸ್ಯರ ಸಮರ್ಪಿತ ತಂಡದ ಮಾರ್ಗದರ್ಶನದಲ್ಲಿ ಸರಿಯಾದ ನಡಿಗೆ ತರಬೇತಿ ನೀಡಲಾಗುವುದು. ಬೆಂಗಳೂರಿನ 500 ಕ್ಕೂ ಹೆಚ್ಚು ಸಾಮಾಜಿಕ ಕಾರ್ಯಕರ್ತರು, ಸಮುದಾಯ ಮುಖಂಡರು ಮತ್ತು ಪ್ರಮುಖ ನಾಗರಿಕರು ಭಾಗವಹಿಸಲಿದ್ದಾರೆ.
ನಾರಾಯಣ ಸೇವಾ ಸಂಸ್ಥಾನವು ಎಲ್ಲಾ ಸಹಾನುಭೂತಿಯುಳ್ಳ ವ್ಯಕ್ತಿಗಳು ಮುಂದೆ ಬಂದು ಈ ಉದಾತ್ತ ಉದ್ದೇಶವನ್ನು ಬೆಂಬಲಿಸುವಂತೆ ಮನವಿ ಮಾಡುತ್ತದೆ. ಉದ್ಘಾಟನಾ ಸಮಾರಂಭ ಬೆಳಿಗ್ಗೆ 11:00 ಗಂಟೆಗೆ ಪ್ರಾರಂಭವಾಗಲಿದೆ. ಈ ಸೇವೆ ಮತ್ತು ಮನ್ನಣೆಯ ಕಾರ್ಯಕ್ರಮವು ಅನೇಕರಿಗೆ ಸ್ಫೂರ್ತಿ ನೀಡುವ ನಿರೀಕ್ಷೆಯಿದೆ.
1985 ರಲ್ಲಿ ನಿಸ್ವಾರ್ಥ ಸೇವೆ ಮೂಲಕ ಸಮಾಜಕ್ಕೆ ದುಡಿಯುವ ಕೆಲಸ
1985 ರಲ್ಲಿ “ಮಾನವೀಯತೆಯ ಸೇವೆಯೇ ದೇವರ ಸೇವೆ” ಎಂಬ ಮನೋಭಾವದೊಂದಿಗೆ ಸ್ಥಾಪನೆಯಾದ ನಾರಾಯಣ ಸೇವಾ ಸಂಸ್ಥಾಪಕ ಕೈಲಾಶ್ ಮಾನವ್ ಅವರನ್ನು ನಿಸ್ವಾರ್ಥ ಸೇವೆಗಾಗಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದರು. ಸಂಸ್ಥಾನದ ಅಧ್ಯಕ್ಷ ಪ್ರಶಾಂತ್ ಅಗರ್ವಾಲ್ ಅವರು ವೈದ್ಯಕೀಯ ನೆರವು, ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ಕ್ರೀಡಾ ಅಕಾಡೆಮಿಗಳ ಮೂಲಕ ಲಕ್ಷಾಂತರ ಅಂಗವಿಕಲರನ್ನು ಮಾನಸಿಕವಾಗಿ, ದೈಹಿಕವಾಗಿ ಮತ್ತು ಆರ್ಥಿಕವಾಗಿ ಬಲಪಡಿಸುವ ಮೂಲಕ ಸಬಲೀಕರಣಗೊಳಿಸಿದ್ದಾರೆ. 2023 ರಲ್ಲಿ, ಅವರಿಗೆ ರಾಷ್ಟ್ರಪತಿಗಳು ರಾಷ್ಟ್ರೀಯ ಪ್ರಶಸ್ತಿಯನ್ನು ಸಹ ನೀಡಿ ಗೌರವಿಸಿದರು. ಇಲ್ಲಿಯವರೆಗೆ, ಸಂಸ್ಥೆಯು 40,000 ಕ್ಕೂ ಹೆಚ್ಚು ಕೃತಕ ಅಂಗಗಳನ್ನು ಅಳವಡಿಸಿದೆ.
ಸುದ್ದಿ ಗೋಷ್ಠಿಯಲ್ಲಿ ಸಂಸ್ಥೆಯ ಪದಾಧಿಕಾರಿಗಳು, ಅಧ್ಯಕ್ಷರು ಇದೇ ವೇಳೆ ಉಪಸ್ಥಿತರಿದ್ದರು.