ಯಲಹಂಕ /ಬೆಂಗಳೂರು : ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ನಾಳೆ ಬೆಳಿಗ್ಗೆ ಯೋಗ ಸಮಾವೇಶವನ್ನು ಬೆಂಗಳೂರಿನ ಯಲಹಂಕದ ಬಾಗಲೂರು ಕ್ರಾಸ್ ನ ಆರ್ಮಿ ಪೊಲೀಸ್ ತರಬೇತಿ ಶಾಲೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಾರ್ಯಕ್ರಮವನ್ನು ರೋಟರಿ ಬೆಂಗಳೂರು ಗ್ಲೋಬಲ್ ಯೋಗ ಟ್ರಸ್ಟ್ ವತಿಯಿಂದ ಆಯೋಜನೆ ಮಾಡಲಾಗಿದೆ.
ಒಂದು ಭೂಮಿ ಒಂದು ಆರೋಗ್ಯ ಎಂಬ ಧ್ಯೇಯ ವಾಕ್ಯದ ಅಡಿಯಲ್ಲಿ ಯೋಗ ದಿನಾಚರಣೆಯನ್ನು ವಿಶೇಷವಾಗಿ ಮಾಡಲಾಗುತ್ತದೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆರ್ಮಿ ಪೊಲೀಸ್ ತರಬೇತಿ ಶಾಲೆಯ ಎಸ್ ಪಿ ಎಸಿ ಮಂಜುನಾಥ್, ಅತಿಥಿಗಳಾಗಿ ಆರ್ಮಿ ಶಾಲೆಯ ಪೊಲೀಸ್ ಇನ್ಸ್ಪೆಕ್ಟರ್ ಆದ ಸಿದ್ದೇಶ್ ಹೆಚ್ಆರ್ ಭಾಗವಹಿಸಲಿದ್ದಾರೆ.
ಅಮೆರಿಕಾದ ಯೋಗ ವಿಶ್ವವಿದ್ಯಾಲಯದ ಅಂತರಾಷ್ಟ್ರೀಯ ಯೋಗ ಆಚಾರ್ಯದ ಮುಖ್ಯಸ್ಥ ಡಾ ಎಂ ಕೆ ನಾಗರಾಜರಾವ್.ಸಿದ್ದೇಶ್ವರ ಸ್ವಾಮಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯ ವೈದ್ಯ ಡಾ ಮಯೂರ್ ವಿನಯ್ ಕುಮಾರ್ ಕಾಕು, ಯೋಗಾ ಶಿಕ್ಷಕರಾದ ಕೆ ನಂದ ಕಿಶೋರ್
ಕಾರ್ಯಕ್ರಮದ ಉಸ್ತುವಾರಿ ಡಾ. ವಿನಯ್ ಕುಮಾರ್ ಸಾಕಷ್ಟು ಚಿಂತಕರು ಮಾನಸಿಕ ಆರೋಗ್ಯದಲ್ಲಿ ಯೋಗದ ಪಾತ್ರದ ಕುರಿತು ಮಾತನಾಡಲಿದ್ದಾರೆ.