ಬೆಂಗಳೂರು: ಗೋಪಾಲನ್ ಮಾಲ್ಸ್ “ನೆರೆಹೋರೆ ಪ್ರತಿಭೆ ಪ್ರದರ್ಶನ”ದ ಗ್ರ್ಯಾಂಡ್ ಫಿನಾಲೆಯನ್ನು ಸ್ಥಳೀಯ ಪ್ರತಿಭೆಗಳ ಅದ್ಭುತ ಪ್ರದರ್ಶನದೊಂದಿಗೆ ಆಚರಿಸಲಾಯಿತು.
ರಾಜರಾಜೇಶ್ವರಿ ನಗರದ ಗೋಪಾಲನ್ ಆರ್ಕೇಡ್ ಮಾಲ್ನಲ್ಲಿ ಬೆಂಗಳೂರಿನ ವಸತಿ ಸಮುದಾಯಗಳ ಸ್ಥಳೀಯರ ಪ್ರದರ್ಶನ ಕಲೆಗಳ ಪ್ರತಿಭೆಯನ್ನು ಗುರುತಿಸುವಾ ಸಲುವಾಗಿ ಈ ಕಾರ್ಯಕ್ರಮವು ಆಚರಿಸಿತು. ಗ್ರ್ಯಾಂಡ್ ಫಿನಾಲೆಯಲ್ಲಿ ನೃತ್ಯ, ಸಂಗೀತ, ರಂಗಭೂಮಿ ಮತ್ತು ಜಾನಪದ ಕಲೆಗಳನ್ನು ಒಳಗೊಂಡ ಡ್ಯಾಂಸ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಗೋಪಾಲನ್ ಎಂಟರ್ಪ್ರೈಸಸ್ನ ನಿರ್ದೇಶಕ ಸಿ. ಪ್ರಭಾಕರ್, “ಈ ಕಾರ್ಯಕ್ರಮವು ನಮ್ಮ ಸಮುದಾಯಗಳಲ್ಲಿನ ಅಸಾಧಾರಣ ಪ್ರತಿಭೆಯನ್ನು ಎತ್ತಿ ತೋರಿಸಿದೆ. ಇದು ಪ್ರತಿಭಾ ಪ್ರದರ್ಶನಕ್ಕಿಂತ ಹೆಚ್ಚಿನದು – ಇದು ನಮ್ಮ ಸಾಂಸ್ಕೃತಿಕ ಏಕತೆಯ ಆಚರಣೆಯಾಗಿದೆ. ಇದನ್ನು ಸ್ಫೂರ್ತಿ ಮತ್ತು ಸಂಪರ್ಕ ಸಾಧಿಸುವ ವಾರ್ಷಿಕ ಸಂಪ್ರದಾಯವನ್ನಾಗಿ ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ” ಎಂದು ಹೇಳಿದರು.
ಉಪಕ್ರಮವು ಮಕ್ಕಳಿಂದ ಹಿರಿಯ ನಾಗರಿಕರವರೆಗೆ 400 ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು. ಅದರಲ್ಲಿ – ಶಾಸ್ತ್ರೀಯ/ಸಮಕಾಲೀನ ನೃತ್ಯ, ಗಾಯನ/ವಾದ್ಯ ಸಂಗೀತ, ಜಾನಪದ ಕಾರ್ಯಗಳು ಮತ್ತು ಸಮರ ಕಲೆಗಳಂತಹ ವಿಭಾಗಗಳಲ್ಲಿ ಪ್ರದರ್ಶನ ನೀಡಿದ್ದರು. 12 ಸಮುದಾಯಗಳಲ್ಲಿ ನಡೆದ ಪ್ರಾಥಮಿಕ ಸುತ್ತಿನಲ್ಲಿ 1,000 ಕ್ಕೂ ಹೆಚ್ಚು ಜನರು , 10,000+ ನಿವಾಸಿಗಳು ಭಾಗವಹಿಸಿದ್ದರು.
ನಟ ಕಾರ್ತಿಕ್ ವರ್ಣೇಕರ್,ಹಿರಿಯ ಭರತನಾಟ್ಯ ಕಲಾವಿದೆ ಪದ್ಮಶ್ರೀ ಪ್ರಸಾದ್ ಹೊಳ್ಳ , ವಿಧುಷಿ ಶೋಭಾ ಭಟ್ ಮತ್ತು ಡಾ. ಪದ್ಮಾ ಸುಬ್ರಹ್ಮಣ್ಯಂ ಅವರು ತೀರ್ಪುಗಾರರಾಗಿ ಭಾಗವಹಿಸಿ ಕಾರ್ಯಕ್ರಮದ ಪ್ರತಿಭೆ ಮತ್ತು ಸ್ಪೂರ್ತಿಯನ್ನು ಶ್ಲಾಘಿಸಿದರು.