ಬೆಂಗಳೂರು: ಭಾರತದ ಅತ್ಯುನ್ನತ ಆಸ್ಪತ್ರೆಗಳಲ್ಲಿ ಒಂದಾಗಿರುವ ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಯು ಕ್ಯಾನ್ಸರ್ ನ ಒಂದು ವಿಧವಾದ ರಿಲ್ಯಾಪ್ಸ್ಡ್ ಫಾಲಿಕುಲರ್ ಲಿಂಫೋಮಾ ಎಂಬ ಸಮಸ್ಯೆ ಹೊಂದಿದ್ದ ಮೂವರು ರೋಗಿಗಳಿಗೆ ಕಾರ್ ಟಿ- ಸೆಲ್ ಥೆರಪಿ ಚಿಕಿತ್ಸೆ ನೀಡಿದ್ದು, ಈ ರೋಗಿಗಳು 3 ವರ್ಷಗಳ ಬಳಿಕವೂ ಉತ್ತಮ ಜೀವನ ನಡೆಸುವ ಮೂಲಕ ಆಸ್ಪತ್ರೆಯು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಹೊಸ ಮೈಲಿಗಲ್ಲು ಸಾಧನೆ ಮಾಡಿದೆ ಎಂದು ನಾರಾಯಣ ಹೆಲ್ತ್ ಸಿಟಿಯ ಸೀನಿಯರ್ ಕನ್ಸಲ್ಟೆಂಟ್, ಹೆಮಟಾಲಜಿಸ್ಟ್ ಮತ್ತು ಅಡಲ್ಟ್ ಬಿಎಂಟಿ ವಿಭಾಗದ ಮುಖ್ಯಸ್ಥು ಹಾಗೂ ನಾರಾಯಣ ಹೆಲ್ತ್ ನ ಆಂಕಾಲಜಿ ಕೊಲೀಜಿಯಂನ ಮುಖ್ಯಸ್ಥರಾದ ಡಾ. ಶರತ್ ದಾಮೋದರ್ ತಿಳಿಸಿದರು.
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದವರು, ರಿಲ್ಯಾಪ್ಸ್ಡ್ ಫಾಲಿಕುಲರ್ ಲಿಂಫೋಮಾ ಕ್ಯಾನ್ಸರ್ ಗಳು ಭಾರಿ ಅಪಾಯಕಾರಿಯಾಗಿದ್ದು, ಆಸ್ಪತ್ರೆಯು ಈ ಸಮಸ್ಯೆಗೆ ಚಿಕಿತ್ಸೆ ನೀಡಿ ಮಹತ್ವದ ಸಾಧನೆ ಮಾಡಿದೆ. ಕೈಮೆರಿಕ್ ಆಂಟಿಜೆನ್ ರಿಸೆಪ್ಟರ್ ಟಿ- ಸೆಲ್ (ಕಾರ್ ಟಿ) ಥೆರಪಿಯು ಒಂದು ಅತ್ಯಾಧುನಿಕ ಇಮ್ಯುನೊಥೆರಪಿಯಾಗಿದ್ದು, ರಿಲ್ಯಾಪ್ಸ್ಡ್ ಅಥವಾ ಚಿಕಿತ್ಸೆಗೆ ಪ್ರತಿರೋಧ ಒಡ್ಡುವ ಲಿಂಫೋಮಾ ಸಮಸ್ಯೆ ಹೊಂದಿರುವ ರೋಗಿಗಳಿಗೆ ಆಶಾಕಿರಣವಾಗಿ ಮೂಡಿಬಂದಿದೆ. ಭಾರತವು ಈಗ ಸ್ಥಳೀಯವಾಗಿ ಕಾರ್ ಟಿ ಥೆರಪಿಯನ್ನು ಉತ್ಪಾದಿಸುತ್ತಿದ್ದು, ಸಿ ಡಿ ಎಸ್ ಸಿ ಓ ಅನುಮೋದಿತ ಎರಡು ಉತ್ಪನ್ನಗಳಾದ ನೆಕ್ಸ್ ಕಾರ್19 ಮತ್ತು ಕ್ವಾರ್ಟೆಮಿಗಳು ಈ ಜೀವರಕ್ಷಕ ಚಿಕಿತ್ಸೆಯನ್ನು ಸುಲಭದಲ್ಲಿ ಲಭ್ಯವಾಗುವಂತೆ ಮಾಡಿವೆ ಎಂದರು.
ಕ್ಯಾನ್ಸರ್ ಸಮಸ್ಯೆ ಹೊಸ ರೂಪ
ಭಾರತದಲ್ಲಿ ಪ್ರತೀವರ್ಷ 14 ಲಕ್ಷಕ್ಕೂ ಹೆಚ್ಚು ಹೊಸ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತವೆ. ಅವುಗಳಲ್ಲಿ ರಕ್ತ ಕ್ಯಾನ್ಸರ್ ಗಳಲ್ಲಿಯೇ ಲಿಂಫೋಮಾ ಸಮಸ್ಯೆಗಳು ಬಹಳ ಸಂಕೀರ್ಣವಾಗಿರುತ್ತವೆ. ಸಾಂಪ್ರದಾಯಿಕ ಚಿಕಿತ್ಸೆಗಳು ಕೆಲವು ರೋಗಿಗಳಿಗೆ ಕೊಂಚ ಮಟ್ಟಿಗೆ ಸಹಾಯ ಮಾಡಿದರೂ ಕ್ಯಾನ್ಸರ್ ಮತ್ತೆ ಮರುಕಳಿಸಿದ ಸಂದರ್ಭದಲ್ಲಿ ಅಥವಾ ಚಿಕಿತ್ಸೆಗೆ ಪ್ರತಿರೋಧ ಎದುರಾದ ಪ್ರಕರಣಗಳಲ್ಲಿ ರೋಗಿಗಳ ಬದುಕುಳಿಯುವ ಸಾಧ್ಯತೆ ಬಹಳ ಕಡಿಮೆ ಇರುತ್ತದೆ. ಈ ಕ್ಯಾನ್ಸರ್ ಎದುರಿಸಿದ ರೋಗಿಗಳು ಐದು ವರ್ಷಗಳ ಕಾಲ ಬದುಕುಳಿದಿರುವುದು ಕೇವಲ ಶೇ.20-30ಕ್ಕಿಂತಲೂ ಕಡಿಮೆ ಇರಬಹುದು. ಹಾಗಾಗಿಯೇ ಲಿಂಫೋಮಾ ಕ್ಯಾನ್ಸರ್ ಚಿಕಿತ್ಸೆಯ ಯಶಸ್ಸು ಗಮನಾರ್ಹವಾಗಿದೆ.
ಕಾರ್ ಟಿ ಥೆರಪಿಯ ಅದ್ಭುತ ಸಾಮರ್ಥ್ಯವನ್ನು ತೋರಿಸಿಕೊಟ್ಟಿವೆ. ಈ ಚಿಕಿತ್ಸೆಯನ್ನು ಈಗ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮೋದಿಸಿದ್ದು, ವಾಣಿಜ್ಯಿಕವಾಗಿ ಲಭ್ಯವಿದೆ. ಭಾರತೀಯ ರೋಗಿಗಳು ಇನ್ನು ಮುಂದೆ ಅತ್ಯಾಧುನಿಕ ಚಿಕಿತ್ಸೆಗಾಗಿ ವಿದೇಶಗಳಿಗೆ ಹೋಗಬೇಕಾಗಿಲ್ಲ,” ಎಂದು ತಿಳಿಸಿದ್ದಾರೆ.
ಬೆಂಗಳೂರು ನಾರಾಯಣ ಹೆಲ್ತ್ ನ ಚೇರ್ ಮನ್ ಮತ್ತು ಸಂಸ್ಥಾಪಕರಾದ ಡಾ. ದೇವಿ ಪ್ರಸಾದ್ ಶೆಟ್ಟಿ ಅವರು ಮಾತನಾಡಿ, “ಪ್ರತಿಯೊಬ್ಬ ಭಾರತೀಯನಿಗೂ ಅತ್ಯಾಧುನಿಕ ಚಿಕಿತ್ಸೆ ಲಭ್ಯವಾಗಬೇಕು ಎಂಬುದು ನಮ್ಮ ಉದ್ದೇಶ. ದೇಶದಲ್ಲಿ ಕ್ಯಾನ್ಸರ್ ಚಿಕಿತ್ಸೆ ಮತ್ತು ಕಾರ್ ಟಿ- ಸೆಲ್ ಥೆರಪಿಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ರೋಗಿಗಳಿಗೆ ಹೊಸ ಬದುಕನ್ನು ನೀಡಲು ನಾವು ಬದ್ಧರಾಗಿದ್ದೇವೆ. ವಿಶ್ವದರ್ಜೆಯ ಚಿಕಿತ್ಸೆಯನ್ನು ಸುಲಭವಾಗಿ ಮತ್ತು ಎಲ್ಲರಿಗೂ ಲಭ್ಯವಾಗುವಂತೆ ಮಾಡುವುದು ನಮ್ಮ ಗುರಿಯಾಗಿ,” ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕ್ಯಾನ್ಸರ್ ಸಮಸ್ಯೆಗೆ ಸಿಲುಕಿ ಅಪಾಯದಿಂದ ಪಾರಾಗಿ ಸುಸಾರ್ಜಿತ ಜೀವನ ನಡೆಸುತ್ತಿರುವ ಇಬ್ಬರು ರೋಗಿಗಳು ತಮ್ಮ ಅನುಭವದ ಮಾತುಗಳನ್ನು ವ್ಯಕ್ತಪಡಿಸಿದರು.