ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಹಾಗೂ ಹೋಂಡಾ ಟ್ರೇಡಿಂಗ್ ಕಾರ್ಪೊರೇಷನ್ ಇಂಡಿಯಾ ಪ್ರೈ. ಲಿಮಿಟೆಡ್, ಸಹಯೋಗದೊಂದಿಗೆ ಇಂದು ಜೈವಿಕ ಇಂಧನ ಅಭಿವೃದ್ಧಿ ಹಾಗೂ ಕೃಷಿ ಬಯೋಮಾಸ್ ಬಳಕೆಯ ಒಡಂಬಡಿಕೆಯನ್ನು ಮಾಡಿಕೊಳ್ಳಲಾಯಿತು.
ಈ ಒಡಂಬಡಿಕೆಯು ಸೂರ್ಯಕಾಂತಿ ಹೈಬಿಡ್ ಬೀಜಗಳ ಉತ್ಪಾದನೆ, ಕೃಷಿ ಸಮುದಾಯಗಳನ್ನು ಒಳಗೊಂಡ ಜೈವಿಕ ಇಂಧನ ಪೂರೈಕೆ ಸರಪಳಿ ಅಭಿವೃದ್ಧಿ, ಮಣ್ಣಿನ ಸಾವಯವ ಇಂಗಾಲವನ್ನು ಹೆಚ್ಚಿಸಲು ಬಯೋಚಾರ್ ಉತ್ಪಾದನೆಗೆ ಕೃಷಿ ಬಯೋಮಾಸ್ಸ್ ತ್ಯಾಜ್ಯವನ್ನು ಬಳಸುವುದು ಮತ್ತು ಕೃಷಿ ಉಪಕರಣಗಳ ಪೂರೈಕೆಯ ಉಪಕ್ರಮಗಳನ್ನು ಒಳಗೊಂಡಿದೆ.
ಈ ಒಡಂಬಡಿಕೆಯು ಸುಸ್ಥಿರ ಕೃಷಿ, ಗ್ರಾಮೀಣ ಅಭಿವೃದ್ಧಿ ಮತ್ತು ನವೀಕರಿಸಬಹುದಾದ ಇಂಧನದ ಮೂಲಗಳನ್ನು ಉತ್ತೇಜಿಸಲು ಸಾರ್ವಜನಿಕ – ಖಾಸಗಿ ಪಾಲುದಾರಿಕೆಯನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.
ಕಾರ್ಯಕ್ರಮದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ: ಎಸ್.ವಿ.ಸುರೇಶ ಅವರಿಗೆ ಹೋಂಡಾಟ್ರೇಡಿಂಗ್ ಕಾರ್ಪೊರೇಷನ್ ಇಂಡಿಯಾ ಪ್ರೈ. ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕರು ಕೋಜಿ ಸೈತೋಹ್, ತೋಷಿಮಿಟ್ಸು ಸುಡಾ, ಕೆಂಟಾ ಮಿಜುಟಾನಿ, ಶ್ರೀಮತಿ ಅಂಜನಾ ಮುಖಿಜಾ ಮತ್ತು ಆಶ್ವಿನಿ ಅವರು ಒಡಂಬಡಿಕೆ ಪತ್ರವನ್ನು ಹಸ್ತಾಂತರಿಸಿದರು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.