ಬೆಂಗಳೂರು: ವಕೀಲರಲ್ಲದವರು ಹಾಗೂ ವಾಣಿಜ್ಯ ವಾಹ ನಗಳಿಗೆ ವಕೀಲರ ಚಿಹ್ನೆಯನ್ನು ಲಗತ್ತಿಸಿಕೊಂಡು ವಕೀಲರ ಸಮುದಾಯಕ್ಕೆ ಧಕ್ಕೆ ಮಾಡುತ್ತಿರುವ ಮತ್ತು ವಕೀಲಿ ವೃತ್ತಿಗೆ ಅವಮಾನ ಮಾಡುತ್ತಿರುವವರು ಕಂಡು ಬಂದರೆ ತಮಗೆ ದೂರು ನೀಡುವಂತೆ ರಾಜ್ಯ ವಕೀಲರ ಪರಿ ಷತ್ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಪತ್ರಿಕಾ ಪ್ರಕಟಣೆಯಲ್ಲಿ ವಕೀಲರ ಪರಿಷತ್ತಿನ ಅಧ್ಯಕ್ಷ ಮಿಟ್ಟಲ ಕೋಡ ಎಸ್.ಎಸ್ ಅವರು ಹೇಳಿಕೆ ನೀಡಿದ್ದಾರೆ, ವಕೀಲರಲ್ಲದವರು ತಾವು ವಕೀಲ ರೆಂದು ಸಾರ್ವ ಜನಿಕ ಸ್ಥಳಗಳಲ್ಲಿ ಸುಳ್ಳು ಹೇಳಿಕೊಂಡು ವಕೀಲ ಸಮುದಾಯಕ್ಕೆ ಧಕ್ಕೆ ತರುತ್ತಿದ್ದಾರೆ. ಆದ್ದರಿಂದ ವಕೀಲರಲ್ಲದವರು ವಕೀಲರ ಚಿಹ್ನೆಯನ್ನು ತಮ್ಮ ವಾಹನಗಳ ಮೇಲೆ ದಾಖಲಿಸಿಕೊಂಡಿ ರುವುದು ಗಮನಕ್ಕೆ ಬಂದರೆ ವಾಹನದ ಸಂಖ್ಯೆ ಮತ್ತು ಭಾವಚಿತ್ರವನ್ನು ಕರ್ನಾಟಕ ವಕೀಲರ ಪರಿಷತ್ತಿನ 2 [email protected] & ಕಳುಹಿಸಿಕೊಡಿ. ಪರಿಷತ್ ಕಾನೂನು ಕ್ರಮ ಕೈಗೊಳ್ಳಲಿದೆ ಎಂದರು.