ಬೆಂಗಳೂರು: ರಾಜ್ಯ ಗಂಗಾ ಮತಸ್ಥರ ಸಂಘದ ಹಾಗೂ ಸರಕಾರದ ನಿಯಮಗಳನ್ನು ಪಾಲಿಸದೆ ಕೋಟ್ಯಾಂತರ ರೂಪಾಯಿಗಳ ಹಣವನ್ನು ದುರುಪಯೋಗ ಮಾಡಿಕೊಂಡಿರುವ ಸಂಘದ ಹಿಂದಿನ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಸಂಬಂಧಿಸಿದ ನಿರ್ದೇಶಕರನ್ನು ಕೂಡಲೇ ಸಂಘದಿಂದ ವಜಾಗೊಳಿಸಬೇಕು ಎಂದು ಅಂಬಿಗರ ಯುವ ಸೈನ್ಯ ಕುಲಬುರಗಿ ಅಧ್ಯಕ್ಷ, ಕೂಲಿ ಸಮಾಜದ ಗೌರವ ಅಧ್ಯಕ್ಷ ಗುಂಡು ಐನಾಪೂರ್ ಆಗ್ರಹಿಸಿದ್ದಾರೆ.
ನಗರದ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಂಗಾ ಮತಸ್ಥರ ಸಂಘದ ಸದಸ್ಯರು ಸಂಘದ ಹಿಂದಿನ ಆಡಳಿತ ಮಂಡಳಿಯ ವಿರುದ್ಧ ಭ್ರಷ್ಟಾಚಾರ, ಲೆಕ್ಕಪತ್ರ ಕೃತಕ ವೇಷದ ಕುರಿತು ಸ್ಪಷ್ಟ ದಾಖಲೆಗಳಿದ್ದರೂ ಸಹಕಾರ ಸಂಘಗಳ ರಿಜಿಸ್ಟ್ರಾರ್ ಕಚೇರಿಯಿಂದ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ಅವ್ಯವಸ್ಥಿತ ಆಡಳಿತದ ಹಿನ್ನೆಲೆಯಲ್ಲಿ ನೇಮಕಗೊಂಡ ಆಡಳಿತಾಧಿಕಾರಿ ವಿದ್ಯಾರಾಣಿಯವರ ವರದಿಯಂತೆ, ಸಂಘದಲ್ಲಿ ಕೋಟ್ಯಂತರ ರೂಪಾಯಿಗಳ ಅನಿಯಮಿತ ಖರ್ಚು ಲೆಕ್ಕಪತ್ರಗಳಲ್ಲಿ ಕೃತಕತೆ ಹಾಗೂ ವ್ಯವಸ್ಥಿತವಾಗದ ಆಡಳಿತ ನಡೆದಿದೆ ಎಂಬುದು ಸ್ಪಷ್ಟವಾಗಿದೆ ಎಂದು ಆರೋಪ ಮಾಡಿದರು.
ಸಂಘದ ಮಾಜಿ ಖಜಾಂಚಿ ಶಿವಶಂಕರಪ್ಪ ಮಾತನಾಡಿ, 2018 ರಿಂದ 24ರ ವರೆಗೆ ಆಡಳಿತದ ಅವಧಿಯಲ್ಲಿ ಸಂಘದಲ್ಲಿ 2000 ಕೋಟಿಗಿಂತಲೂ ಹೆಚ್ಚು ಭ್ರಷ್ಟಾಚಾರ, ಅವ್ಯವಹಾರ ನಡೆದಿದೆ. ಪ್ರಸ್ತುತ ಆಡಳಿತ ಅಧಿಕಾರಿ ನೇಮಕ ಮಾಡಲಾಗಿದೆ. ಹಿಂದಿನ ಆಡಳಿತ ಮಂಡಳಿಯವರು ವಾರ್ಷಿಕ ಮಹಾಸಭೆ ಮಾಡದೆ ಸಂಘದ ಬೈಲಾವನ್ನು ದುರುಪಯೋಗ ಮಾಡಿಕೊಂಡು ಆಡಳಿತ ನಡೆಸಿದ್ದಾರೆ ಇದರಿಂದ ಸಮುದಾಯ ಹಾಗೂ ಸಮುದಾಯದ ಸಂಘಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂದು ತಿಳಿಸಿದರು.
ಇದರ ನಡುವೆ ಸಹಕಾರ ಸಂಘದ ರಿಟರ್ನಿಂಗ್ ಅಧಿಕಾರಿ ಸಂಘಕ್ಕೆ ಚುನಾವಣೆಯ ದಿನಾಂಕವನ್ನು ನಿಗದಿ ಮಾಡಲಾಗಿದೆ. ಜೂನ್ 23ಕ್ಕೆ ನಾಮಪತ್ರ ಸಲ್ಲಿಕೆ, 26ಕ್ಕೆ ನಾಮಪತ್ರ ಹಿಂಪಡೆಯುವ, 27ಕ್ಕೆ ನಾಮ ಪತ್ರ ಪರಿಶೀಲನೆ, 28ಕ್ಕೆ ಅಂತಿಮ ಅಭ್ಯರ್ಥಿಗಳ ಪಟ್ಟಿ ಪ್ರಕಟ, ಜುಲೈ 6ಕ್ಕೆ ಮತದಾನ, ಅಂದು ಸಂಜೆಯೇ ಫಲಿತಾಂಶ ಪ್ರಕಟ ವಾಗ್ಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಮೇಶ್, ಅಶೋಕ,ವಸಂತ ರಾಜು ಗೋವಿಂದರಾಜು, ಅಂಜನಪ್ಪ, ಮಂಜುನಾಥ್ ಸೇರಿದಂತೆ ಸಮಾಜದ ಮುಖಂಡರು ಹಾಗೂ ಸಂಘದ ಜಿಲ್ಲಾ ಅವರು ಪದಾಧಿಕಾರಿಗಳು ಉಪಸ್ಥಿತರಿದ್ದರು.