ತುಮಕೂರು: ಹೇಮಾವತಿ ಲಿಂಕ್ ಕೆನಾಲ್ ಹೋರಾಟ ರೈತರ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿರೋದೆ ರಾಜ್ಯ ಸರ್ಕಾರ, ರಾಜ್ಯದಸಿಎಂ ಹಾಗೂ ಡಿಸಿಎಂ ಅವರು, ಇವತ್ತು ಡಿಸಿಎಂ ಜಲ ಸಂಪನ್ಮೂಲ ಸಚಿವರಾಗಿದ್ದಾರೆ.. ಇಷ್ಟೆಲ್ಲಾ ರಾದ್ಧಾಂತವಾಗಿದೆ ಇನ್ನೂ ಕೂಡ ಡಿಸಿಎಂ ಒಂದೇ ಒಂದು ಉತ್ತರ ನೀಡಿಲ್ಲ ಎಂದು ಡಿ.ಕೆ ಶಿವಕುಮಾರ್ ವಿರುದ್ಧ ಕಿಡಿಕಾರಿದರು.
ಜನರೊಂದಿಗೆ ಜನತಾದಳ” ಮೊದಲನೇ ದಿನದ ಪ್ರವಾಸಕ್ಕೂ ಮೊದಲು ಶ್ರೀಕ್ಷೇತ್ರ ಸಿದ್ದಗಂಗಾ ಮಠಕ್ಕೆ ನಿಖಿಲ್ ಕುಮಾರಸ್ವಾಮಿ ಅವರು ಭೇಟಿ ನೀಡಿ ಪರಮಪೂಜ್ಯ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದುಕೊಂಡು ಮಾಧ್ಯಮಗಳ ಜತೆ ಮಾತನಾಡಿದರು
ಸ್ಥಳೀಯ ರೈತ ಮುಖಂಡರನ್ನ ಹಾಗೂ ಜನಪ್ರತಿನಿಧಿಗಳನ್ನ ವಿಶ್ವಾಸಕ್ಕೆ ಪಡೆದಿಲ್ಲ. ಎಲ್ಲರನ್ನ ಕೂರಿಸಿ ಈ ರಾಜ್ಯ ಸರ್ಕಾರ ಚರ್ಚೆ ಮಾಡಿಲ್ಲ. ಈ ರೀತಿಯ ಘಟನೆಗಳು ಕುಮಾರಣ್ಣ ಕಾಲದಲ್ಲಿ ನಡೆದಿದ್ದರೆ ರೈತರು ಜನಪ್ರತಿನಿಧಿಗಳನ್ನ ಕರೆದು ಕೂರಿಸಿ ಅಲ್ಲಿರುವಂತಹ ಸಮಸ್ಯೆಯನ್ನ ಬಗೆಹರಿಸಿರೋರು. ರಾಜ್ಯಸರ್ಕಾರ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಿ ಎಂದುಅವರು ಸರ್ಕಾರಕ್ಕೆ ಆಗ್ರಹಿಸಿದರು
ಜೆಪಿ ಭವನದ ಸಭೆಯಲ್ಲಿ ಜೆಡಿಎಸ್ ಶಾಸಕರ ಗೈರು ವಿಚಾರಕ್ಕೆ ಪ್ರತಿಕ್ರಿಸಿದರು ಶಾಸಕರ ಕ್ಷೇತ್ರಗಳಲ್ಲಿ ಶನಿವಾರ ಮತ್ತು ಭಾನುವಾರ ಕಾರ್ಯಕ್ರಮ ನಿರಂತರವಾಗಿರುತ್ತೆ. ಶನಿವಾರ ಬಹುತೇಕ ಶಾಸಕರು, ಮುಖಂಡರುಗಳು ಭಾಗಿಯಾಗಿದ್ರು.ಭಾಗಿಯಾಗೋಕೆ ಆಗದೇ ಇರೋರು ಕುಮಾರಸ್ವಾಮಿ ಅವರ ಬಳಿ ತಿಳಿಸಿದರು ಎಂದು ತಿಳಿಸಿದರು.
ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಚುನಾವಣೆ ನಡೆಸುವುದಕ್ಕೆ ರಾಜ್ಯ ಸರ್ಕಾರ ಮನಸ್ಸು ಮಾಡಬೇಕಾಗಿದೆ. ಸರ್ಕಾರ ಇಲ್ಲಿವರೆರೆಗೂ ಮನಸ್ಸು ಮಾಡಿಲ್ಲ. ಇಲ್ಲಿವರೆಗೂ ತಡೆ ಹಿಡಿದು ಕುಳಿತುಕೊಂಡಿದ್ದಾರೆ. ಅತಿ ಶೀಘ್ರದಲ್ಲಿ ಜಿಪಂ,ತಾಪಂ,ಬೆಂಗಳೂರು ಪಾಲಿಕೆ ಚುನಾವಣೆ ಆಗಬೇಕು ಎಂದು ಅವರು ಆಗ್ರಹಿಸಿದರು.
ರಾಜ್ಯಾಧ್ಯಕ್ಷ ಸ್ಥಾನ ನೀಡುವ ವಿಚಾರಕ್ಕೆ ಮಾತನಾಡಿದ ಅವರು, ನಾನು ಈ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಕಾರ್ಯಕರ್ತರ ಜೊತೆಗೂಡಿ ಈ ಪಕ್ಷವನ್ನ ಬೇರು ಮಟ್ಟದಿಂದ ಬೆಳೆಸಲು ಪ್ರವಾಸ ಮಾಡ್ತಿದ್ದೇನೆ. ಈ ವಿಚಾರ ಈಗ ಅಪ್ರಸ್ತುತ ಎಂದು ತಿಳಿಸಿದರು.
ಜೆಡಿಎಸ್ ಮುಳುಗೋ ದೋಣಿ ಕಾಂಗ್ರೆಸ್ ಆರೋಪಕ್ಕೆ ಉತ್ತರಿಸಿದ ಅವರು, ಯಾವುದು ಮಳುಗೋಗಿರುವ ದೋಣಿ..? ಸದಾಕಾಲ ಹೆಚ್.ಡಿ ದೇವೆಗೌಡರ ಹಾಗೂ ಕುಮಾರಣ್ಣನವರ ನಿರಂತರ ಹೋರಾಟಕ್ಕೆ ಪ್ರತಿಫಲವಾಗಿ ರಾಜ್ಯದ ಜನ ಆಶಿರ್ವಾದ ಮಾಡಿದ್ದಾರೆ. ಅನೇಕ ಚುನಾವಣೆಗಳಲ್ಲಿ ಅದು ಸಾಬೀತಾಗಿದೆ. ನಮ್ಮದು ಪ್ರಾದೇಶಿಕ ಪಕ್ಷ ಆದರೂ ಶೇ 20% ನಷ್ಟು ಓಟ್ ಶೇರ್ ಇಟ್ಟುಕೊಂಡಿದ್ದೇವೆ..ಜಿಲ್ಲೆಯಲ್ಲಿ ಕಳೆದ ಚುನಾವಣೆಯಲ್ಲಿ 34% ಓಟಿಂಗ್ ಶೆರ್ ನನ್ನ ಜನ ನೀಡಿದ್ದಾರೆ ಎಂದರು.
ಚುನಾವಣೆಯಲ್ಲಿ ಗೆಲುವು ಸೋಲು ಸರ್ವೆ ಸಾಮಾನ್ಯ.. ಅದನ್ನ ಸಮಚ್ಚಿತ್ತವಾಗಿ ಕೊಂಡೊಯ್ಯುವ ಮನಸ್ಥಿತಿಯನ್ನು ನಾವು ಹೊಂದಿದ್ದೇವೆ..ಕಾರ್ಯಕರ್ತರಿದ್ದಾರೆ, ಹುಮ್ಮಸ್ಸಿದೆ, ಅಭ್ಯರ್ಥಿಗಳಲ್ಲಿ ಉಮ್ಮಸ್ಸಿದೆ.. ನಾವೆಲ್ಲಾ ಕೆಲಸ ಮಾಡಿ ಜನರ ಆಶೀರ್ವಾದ ಪಡೆಡುಕೊಳ್ಳುತ್ತೇವೆ
ಮುಂದಿನ ಚುನಾವಣೆಯಲ್ಲಿ ಮೈತ್ರಿ ವಿಚಾರಕ್ಕೆ ಮಾತನಾಡಿದ ಅವರು, ಈ ರಾಜ್ಯದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಜೆಡಿಎಸ್ ಹೊಂದಾಣಿಕೆ ಆಗಿರುವಂತಾದ್ದು. ಎರಡು ಪಕ್ಷಗಳಿಗೆ ಅನುಕೂಲವಾಗಿದೆ, ಕಳೆದ ಎಂಪಿ ಚುನಾವಣೆಯಲ್ಲಿ ಅದು ಸಾಬೀತಾಗಿದೆ ಎಂದು ಉತ್ತರಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಸುರೇಶ್ ಬಾಬು ಅವರು, ಬಿಜೆಪಿ ಶಾಸಕರುಗಳಾದ ಬಿ.ಸುರೇಶ್ ಗೌಡ ಅವರು, ಜ್ಯೋತಿ ಗಣೇಶ್ ಅವರು,ಮಾಜಿ ಶಾಸಕರಾದ ಹೆಚ್. ನಿಂಗಪ್ಪ ಅವರು, ಕೆ.ಟಿ ಶಾಂತಕುಮಾರ್ ಅವರು, ತುಮಕೂರು ಜಿಲ್ಲಾಧ್ಯಕ್ಷರಾದ ಅಂಜಿನಪ್ಪ ಅವರು ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಜತೆಯಲ್ಲಿದ್ದರು.