ತುಮಕೂರು: ಚುನಾವಣೆಗೂ ಮುಂಚೆ save nandini ಕನ್ನಡಿಗರ ಆತ್ಮಗೌರವ ಮಾರಾಟಕ್ಕಿಲ್ಲ ಎಂದು ಕಾಂಗ್ರೆಸ್ ದೊಡ್ಡ ಹೋರಾಟ ಮಾಡಿದ್ರು ಆದರೆ ಈಗ ಕಮಿಷನ್ ಗೆ ಅಮೂಲ್ ನನ್ನ ಗುತ್ತಿಗೆ ಕೊಡುವಂತ ವ್ಯವಸ್ಥೆ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ನಂದಿನಿ ಉಳಿಸಬೇಕು ಅಂತ ಹಿಂದೆ ಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಸೇವ್ ನಂದಿನಿ ಎಂಬ ಹ್ಯಾಶ್ ಟ್ಯಾಗ್ ಹಿಡಿದು ಕೈನಲ್ಲಿ ಹಾಲಿನ ಪ್ಯಾಕೇಟ್ ಹಿಡಿದು ಫೋಟೋಗೆ ಪೋಸ್ ಕೊಟ್ಟ ಹಾಗಲ್ಲ, ನಮ್ಮ ನಂದಿನಿಯನ್ನ ಉಳಿಸಬೇಕು. ಇವತ್ತು ಅಧಿಕಾರಕ್ಕೆ ಬರುತ್ತಿದ್ದಂತೆ ನಮ್ಮ ಹೆಮ್ಮೆಯ ನಂದಿನಿಯನ್ನ ಕಡೆಗಣಿಸಿದ್ದಾರೆ ಎಂದು ಅವರು ಆರೋಪಿಸಿರು.
ಅಮೂಲ್ ಸೇರಿದಂತೆ ಬೇರೆ ಬೇರೆಯವರಿಗೆ ಗುತ್ತಿಗೆ ಕೊಡುವಂತ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ. ಇವತ್ತು ಉಪ ಮುಖ್ಯಮಂತ್ರಿಗಳ ತಮ್ಮ ಬಮುಲ್ ಅಧ್ಯಕ್ಷ ಆಗಿದ್ದಾರಲ್ಲ ಅವರೇ ಉತ್ತರ ಕೊಡ್ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಾದಯಾತ್ರೆ ಮಾಡಿ ಪಕ್ಷವನ್ನ ಸಂಘಟನೆ ಮಾಡುವ ವಿಚಾರಕ್ಕೆ ಮಾತನಾಡಿದ ಅವರು, ಪಾದಯಾತ್ರೆ ಆಗಲಿ ಯಾವುದೇ ಯಾತ್ರೆ ಆಗಲಿ. ಕೆಲವೊಮ್ಮೆ ಬೇರೆ ಬೇರೆ ವಿಚಾರ ವಿಷಯಗಳನ್ನ ಇಟ್ಟುಕೊಂಡು ಜನರ ಮುಂದೆ ಹೋಗಬೇಕಾಗುತ್ತದೆ. ಸೂಕ್ತವಾದಂತಹ ಸಮಯ ಸಂದರ್ಭಗಳು ಬರುತ್ತೆ ಆಗ ಬಿದಿಗಿಳಿದು ಹೋರಾಟ ಮಾಡುತ್ತೇವೆ ಎಂದರು.
ಇವತ್ತು ನಮ್ಮ ರಾಜ್ಯದ ಜನತೆಗೆ ಅಭಿವೃದ್ಧಿಯಲ್ಲಿ ಆಗಿರುವ ಹಿನ್ನಡೆ, ಸರ್ಕಾರದ ವೈಫಲ್ಯ, ಭ್ರಷ್ಟಾಚಾರ, ಹಗರಣ ಇವನ್ನೆಲ್ಲಾ ಮುಂದೆ ಇಟ್ಟುಕೊಂಡು ಜನಗಳ ಮುಂದೆ ಇಟ್ಟು ಎಚ್ಚರಿಸುವಂತ ಕೆಲಸ ಮಾಡ್ಬೇಕು. ಮುಂದಿನ ದಿನಗಳಲ್ಲಿ ಇಂತಹ ಸರ್ಕಾರ ಬಂದರೆ ಕರ್ನಾಟಕ ಹೆಚ್ಚು ಸಾಲಗಾರ ಆಗೋದ್ರಲ್ಲಿ ಯಾವುದೇ ಸಂಶಯ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ರಾಜ್ಯ ಸರ್ಕಾರದ ವಿರುದ್ಧ ಖಂಡಿತವಾಗಲೂ ನಾವು ಬೀದಿಗೆ ಹಿಳಿಯುತ್ತೇವೆ, ನಮ್ಮದು ಮನೆಯಲ್ಲಿ ಕುಳಿತು ರಾಜಕಾರಣ ಮಾಡುವ ಪಕ್ಷ ಅಲ್ಲ. ಹಳ್ಳಿ ಹಳ್ಳಿಗೂ ಹೋಗ್ತೇವೆ, ಪ್ರತಿ ಕನ್ನಡಿಗನ ತಲುಪುತ್ತೇವೆ. ಎಲ್ಲಾ ಸಮುದಾಯಗಳನ್ನ ಜಾತ್ಯಾತೀತ ಮನೋಭಾವಾಗಿ ಒಪ್ಪಿಕೊಂಡಾಗಿದೆ ಅಪ್ಪಿಕೊಂಡಾಗಿದೆ ಎಂದು ತಿಳಿಸಿದರು.