ತುಮಕೂರು : ನಡೆದಾಡುವ ದೇವರು ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳ ಗದ್ದುಗೆಗೆ ಪೂಜೆ ಸಲ್ಲಿಸಿ ತುಮಕೂರು ಪ್ರವಾಸ ಆರಂಭಿಸಿದ ನಿಖಿಲ್ ಕುಮಾರಸ್ವಾಮಿ ಅವರು ಗುಬ್ಬಿ ಮತ್ತು ಕುಣಿಗಲ್ ಕ್ಷೇತ್ರದಲ್ಲಿ ಜನರೊಂದಿಗೆ ಜನತಾದಳ ರಾಜ್ಯ ಪ್ರವಾಸ ಹಾಗೂ ಮಿಸ್ ಕಾಲ್ ಸದಸ್ಯತ್ವ ಅಭಿಯಾನಕ್ಕೆ ಅವರು ಚಾಲನೆ ನೀಡಿದರು.
ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು; ಇವತ್ತಿಂದ ರಾಜ್ಯ ಪ್ರವಾಸ ಮಾಡುತ್ತಿರುವುದು ನನ್ನ ಸೌಭಾಗ್ಯ ಇದು. ನಾನು ಇಡೀ ರಾಜ್ಯ ಪ್ರವಾಸ ಮಾಡುತ್ತಿರುವುದು ನಿಮ್ಮ ಜತೆಗೆ ಸಂಬಂಧ ಬೇಕು, ಸಂಪರ್ಕ ಬೇಕು, ಭಾಂದವ್ಯ ಬೇಕು ನಮ್ಮ ನಿಮ್ಮ ನಂಟು ಬೆಳಿಯಬೇಕು ಎಂದು ಕಾರ್ಯಕರ್ತರಿಗೆ ಅವರು ಮನವಿ ಮಾಡಿದರು.
ಈ ಪಕ್ಷದಲ್ಲಿ ದುಡಿದಿರುವ ಎಲ್ಲಾ ಹಿರಿಯರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಪ್ರಾಮಾಣಿಕ ಕೆಲಸ ಮಾಡ್ತೀನಿ. ಯುವಕರು ಇಂದು ದೊಡ್ಡ ಮಟ್ಟದಲ್ಲಿ ನನ್ನ ಜತೆ ಹೆಜ್ಜೆ ಹಾಕಲು ಮುಂದೆ ಬಂದಿದ್ದಾರೆ. ನಾವೆಲ್ಲರೂ ಮೊದಲು ಪಕ್ಷದಲ್ಲಿನ ಹಿರಿಯರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಹೋಗೋಣ ಎಂದು ಯುವಕರಿಗೆ ಮನವಿ ಮಾಡಿದರು.
ಶಾಸಕ, ಸಂಸದ ಆಗೋದು ನನ್ನ ಗುರಿಯಲ್ಲ – ನಿಖಿಲ್ ಕುಮಾರಸ್ವಾಮಿ
ನಾನು ಶಾಸಕನಾಗಬೇಕು, ಸಂಸದನಾಗಬೇಕೆಂದು ರಾಜ್ಯ ಪ್ರವಾಸ ಮಾಡುತ್ತಿಲ್ಲ, ನಾನು ಶಾಸಕನಾಗಬೇಕಾಗಿದ್ರೆ ನಾನು ರಾಜ್ಯ ಪ್ರವಾಸ ಮಾಡುವ ಅಗತ್ಯ ಇರಲಿಲ್ಲ. ಸಂಸದ ಆಗೋದು ನನ್ನ ಗುರಿಯಲ್ಲ.ಪಕ್ಷ ಕಟ್ಟಿದವರಿಗೆ ದಡ ಮುಟ್ಟಿಸಬೇಕು ನೀವೆಲ್ಲಾ ನಮ್ಮ ಜೊತೆ ಕೈ ಜೋಡಿಸಿ ಎಂದು ಮನವಿ ಮಾಡಿದರು.
ಸಾರ್ವತ್ರಿಕ ಚುನಾವಣೆ ಯಾವಾದರೂ ಆಗಲಿ ತಾಲೂಕು.. ಜಿಲ್ಲಾ ಪಂಚಾಯತಿ ಚುನಾವಣೆ ಬುನಾದಿಯಾಗಲಿ. ಸಾಕಷ್ಟು ಜನ ದೊಡ್ಡ ದೊಡ್ಡ ಹಿರಿ ತಲೆಗಳು ದೇವೇಗೌಡರ ಜತೆ ರಾಜಕಾರಣ ಮಾಡಿದ್ದಾರೆ, ಅಂದು 58 ಶಾಸಕರನ್ನ ಜೆಡಿಎಸ್ ಗಳಿಸಿತ್ತು. ಆದ್ರೆ ಇವತ್ತು ನಾವೆಲ್ಲರೂ ಶಪಥ ಮಾಡೋಣ. ಮುಂದಿನ ದಿನಗಳಲ್ಲಿ ಎರಡು ರಾಷ್ಟೀಯ ಪಕ್ಷಗಳಿಗಿಂತ ಅತೀ ಹೆಚ್ಚು ಸ್ಥಾನಗಳನ್ನ ಗಳಿಸೋಣ ಎಂದು ಕಾರ್ಯಕರ್ತರಿಗೆ ತಿಳಿಸಿದರು.
ನಿಮ್ಮ ಜೊತೆಗೆ ಸಂಬಂಧ ಬೇಕು, ಸಂಪರ್ಕ ಬೇಕು, ಭಾಂದವ್ಯ ಬೇಕು, ನಮ್ಮ ನಿಮ್ಮ ನಂಟು ಬೆಳೆಯಬೇಕು
ಅಕ್ಕ ಪಕ್ಕದ ತಮಿಳುನಾಡು -ಆಂಧ್ರಪ್ರದೇಶ, ತೆಲಂಗಾಣದಲ್ಲಿ ಪ್ರಾದೇಶಿಕ ಪಕ್ಷ ಆಡಳಿತ ನಡೆಸುತ್ತಿದೆ. ಆದರೆ ದೇವೇಗೌಡರ ಕೊಡುಗೆ, ಅವರ ಸಾಧನೆಗಳು ಅತ್ಯಂತ ಕಡಿಮೆ ಅವಧಿಯಲ್ಲಿ ಅಪಾರ, ಈಗ ಕುಮಾರಣ್ಣ ಅವರು ಏಕಾಂಗಿಯಾಗಿ ಪಕ್ಷವನ್ನ ಕಟ್ಟಿದ್ದಾರೆ.ಈ ಪಕ್ಷಕ್ಕೆ ಕಾರ್ಯಕರ್ತರೇ ಶಕ್ತಿ ಎಂದರು.
ನನಗೆ ಒಂದು ಬೇಸರಯಿದೆ. ನಮ್ಮ ಕಾರ್ಯಕರ್ತರು ಎಲ್ಲಾ ರೀತಿಯಲ್ಲಿ ಹಿಂದುಳಿದಿದ್ದಾರೆ. ಅಧಿಕಾರದಲ್ಲಿದ್ದಾಗ ಅವರನ್ನ ಗುರುತಿಸಬೇಕು. ಆ ಹೊಣೆಗಾರಿಕೆಯನ್ನು ನೀವು ಹೊತ್ತುಕೊಳ್ಳಬೇಕು ಎಂದು ನನಗೆ ಸುರೇಶ್ ಬಾಬಣ್ಣ ಹೇಳ್ತಿದ್ರು. ನನಗೆ ದೊಡ್ಡ ಜವಾಬ್ದಾರಿ ಇದೇ 2028ಕ್ಕೆ ಅತೀ
ಶಾಸಕರನ್ನ ಗೆಲ್ಲಿಸಿಕೊಂಡು ಬರಬೇಕು ನಿಮ್ಮ ಜತೆ ನಾವಿದ್ದೇವೆ ಎಂದು ಧೈರ್ಯತುಂಬಿದರು.
ರಾಜ್ಯದ 31 ಜಿಲ್ಲೆಗಳಲ್ಲೂ ಪ್ರವಾಸ ಮಾಡುತ್ತೇನೆ, 21 ಜಿಲ್ಲೆ ಬಳಿಕ ಎರಡನೇ ಹಂತದಲ್ಲಿ ಅಭಿಯಾನ ಮಾಡ್ತೀವಿ ಕಾರ್ಯಕರ್ತರ ಜೊತೆ ನಾವಿದ್ದೇವೆ ಪಕ್ಷ ಇದೇ. HDD ಮತ್ತು HDK ಅವರ ನಾಯಕತ್ವದಲ್ಲಿ ನಾವು ಮುನ್ನಡೆಯೋಣ ಎಂದು ಕಾರ್ಯಕರ್ತರಿಗೆ ತಿಳಿಸಿದರು.
2028ಕ್ಕೆ ಪಕ್ಷವನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತರುವುದೇ ನನ್ನ ಗುರಿ
ಚುನಾವಣೆಯಲ್ಲಿ ಸೋಲು ಗೆಲುವು ಸರ್ವೆ ಸಾಮಾನ್ಯ, ಸೋಲಿನಿಂದ ಎದೆಗುಂದದೆ ಮುಂದೆ ಹೋಗಬೇಕು. ಯಾರಿಗೂ ಅಧಿಕಾರ ಶ್ವಾಶ್ವತ ಅಲ್ಲ. ಗುಬ್ಬಿ ಕ್ಷೇತ್ರದಲ್ಲಿ ನಾವು ಸೋತಿರಬಹುದು ಆದರೆ ಮುಂದೆ ಜನ ನಮ್ಮನ್ನ ಗುರುತಿಸುತ್ತಾರೆ. ರಾಜ್ಯಕ್ಕೆ ಕುಮಾರಣ್ಣನ ಅನಿವಾರ್ಯವಿದೆ ಎಂದು ಸಾಮಾನ್ಯ ಜನ ಮಾತಾಡುತ್ತಿದ್ದಾರೆ. ಅದು ಮುಂದಿನಗಳಲ್ಲಿ ಆಗಲಿದೆ ಎಂದು ತಿಳಿಸಿದರು.
ದೇವೇಗೌಡ, ಕುಮಾರಸ್ವಾಮಿ ಕೂತು ಪಂಚಾಯ್ತಿ ಚುನಾವಣೆಗಳ ಅಭ್ಯರ್ಥಿಗಳ ಅಂತಿಮ ಮಾಡಲಿದ್ದಾರೆ. ಮೈತ್ರಿ ಗೊಂದಲದ ಬಗ್ಗೆ ತಳ ಮಟ್ಟದಲ್ಲಿ ನಾವು ಗಟ್ಟಿಯಾದರೆ ನಿಮ್ಮ ಗೊಂದಲಕ್ಕೆ ಉತ್ತರ ಸಿಗಲಿದೆ. ಮೈತ್ರಿ ಗೊಂದಲಕ್ಕೆ ಅವರು ತೆರೆ ಎಳೆದರು.
ದೇವೇಗೌಡರು ಹಾಗೂ ಕುಮಾರಣ್ಣನವರಿಗೆ ನೀವು ತೋರಿಸಿದ ಪ್ರೀತಿ ವಿಶ್ವಾಸ ಅಪಾರ, ಬಹಳ ಆತ್ಮೀಯತೆಯಿಂದ ಈ ಪಕ್ಷವನ್ನು ನಿಷ್ಠಾವಂತ ಕಾರ್ಯಕರ್ತರು ಬೆಳೆಸಿದ್ದೀರಿ. ಅದೇ ರೀತಿ ನಿಮ್ಮ ವಿಶ್ವಾಸ ನನ್ನ ಮೇಲೆ ಇರಲಿ ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಅವರು, ಮಾಜಿ ವಿಧಾನ ಪರಿಷತ್ ಸದಸ್ಯರಾದ ತಿಪ್ಪೇಸ್ವಾಮಿ ಅವರು,ಮಾಜಿ ಸಚಿವರಾದ ಡಿ ನಾಗರಾಜಯ್ಯ, ಆಂಜಿನಪ್ಪ ಅವರು, ಗುಬ್ಬಿ ನಾಗರಾಜು ಅವರು, ಬೆಟ್ಟಸ್ವಾಮಿ, ಹೊನ್ನಾಗಿರಿ ಗೌಡ ಸೇರಿದಂತೆ ಪ್ರಮುಖ ಮುಖಂಡರು ಜತೆಯದ್ದರು.