ಬೆಂಗಳೂರು: ಮಣಿಪಾಲ್ ಆಸ್ಪತ್ರೆ ಗಳ ಲೇಬರ್ ಸಂಘಟನೆ ಸದಸ್ಯೆಯೊಬ್ಬರು ಅದೇ ಸಂಘಟನೆಯ ಅಧ್ಯಕ್ಷ ರೊಬ್ಬರು ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಸುಳ್ಳು ಪ್ರಕರಣದ ಮೂಲಕ ಸಂಘಟನೆಯಿಂದ ಹಾಗೂ ಉದ್ಯೋಗದಿಂದ ಹೊರದಬ್ಬಲು ಪ್ರಯತ್ನ ಮಾಡುತ್ತಿದ್ದಾರೆಂದು ಆರೋಪಕ್ಕೆ ಸಿಲುಕಿರುವ ಸಂಘಟನೆಯ ಅಧ್ಯಕ್ಷ ರಾಜಗೋಪಾಲ್ ಅವರು ಅಳಲು ತೋಡಿಕೊಂಡರು.
ಈ ಸಂಬಂದ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಸ್ಟಿ ನಡೆಸಿ ಮಾತನಾಡಿದ ಅವರು, ಸಂಘದ ಸಹದ್ಯೋಗಿ ಮಹಿಳೆಯೊಬ್ಬರು ವಿನಾಕಾರಣ ನಾನು ಹಾಗೂ ನನ್ನ ಸಹೋದರ ಸಂಘದ ಜಂಟಿ ಕಾರ್ಯದರ್ಶಿ ರವೀಂದ್ರ ಬಾಬು ಉದ್ಯೋಗಕ್ಕೆ ಹಾಜರಿದದ ದಿನದಲ್ಲಿ ಏಪ್ರಿಲ್ 18ರಂದು ಸಂಜೆ 8 ಗಂಟೆಗೆ ನನ್ನ ಸಹೋದ್ಯೋಗಿಯೊಬ್ಬಳನ್ನು ಬಲವಂತವಾಗಿ ಕೈ ಹಿಡಿದು ಎಳೆದು ಆಕೆಯನ್ನು ನನ್ನ ಬೈಕ್ ಮೇಲೆ ಕುಳ್ಳಿರಿಸಿಕೊಂಡು ಆಕೆಯ ಮನೆಗೆ ಕರೆದೊಯ್ಯಲು ಪ್ರಯತ್ನಿಸಿದೆ ಎಂದು ಜೀವನ್ ಭೀಮಾನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದೂರಲಾಗಿದೆ.
ನನ್ನ ಮೇಲೆ ಜೀವನ್ ಭೀಮಾನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವುದು ಶುದ್ದ ಸುಳ್ಳು ಹಾಗೂ ನನ್ನನ್ನು ಕಾರ್ಮಿಕ ನಾಯಕ ಸ್ಥಾನದಿಂದ ತೆಗೆಯಬೇಕೆಂಬ ದುರುದ್ದೇಶದ ಪಡ್ಕಂತ್ರದ ಭಾಗವಾಗಿದೆ. 3 ದಶಕಗಳ ಕಾಲ ಕಪ್ಪುಚುಕ್ಕೆ ಇಲ್ಲದಂತೆ ಸಂಘದಲ್ಲಿ ಕಾರ್ಯನಿರ್ವಹಿಸಿರುವ ನಮ್ಮನ್ನು ಕ್ರಿಮಿನಲ್ ಪ್ರಕರಣಕ್ಕೆ ಸಿಲುಕಿಸುವ ಹುನ್ನಾರ ನಡೆದಿದೆ ಎಂದು ತಿಳಿಸಿದರು.
ನಾನು ಕಳೆದ 30 ವರ್ಷಗಳಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ ಮತ್ತು ಮಣಿಪಾಲ್ ಆಸ್ಪತ್ರೆಗಳ ಲೇಬರ್ ಅಸೋಸಿಯೇಷನ್ (ನೋಂ) ಅಧ್ಯಕ್ಷನಾಗಿದ್ದೇನೆ. ಈ ಹುದ್ದೆಯಿಂದ ನನ್ನನ್ನು ತೆಗೆದು ಹಾಕಬೇಕೆಂದು ಅಲ್ಲಿನ ಕೆಲ ಹಿತಾಶಕ್ತಿಗಳು ಪ್ರಯತ್ನಿಸುತ್ತಿವೆ. ನಾನು ಪರಿಶಿಷ್ಟ ಜಾತಿಗೆ ಸೇರಿದ್ದು ಕಾರ್ಮಿಕ ಸಂಘಟನೆಯಲ್ಲಿರುವುದು ಹಲವರಿಗೆ ಇಷ್ಟವಾಗುತ್ತಿಲ್ಲ. ಮಹಿಳೆ ನೀಡಿರುವ ದೂರಿನ ದಿನ ವಾಸ್ತವದಲ್ಲಿ ಅಂದು ಗುಡ್ ಫೈಡೇ ಹಬ್ಬವಾಗಿದ್ದು ನಾನು ಪ್ರಾರ್ಥನೆಗೆ ದೇವಾಲಯದಲ್ಲಿದ್ದೆ. ಹೀಗಿರುವಾಗ ನಾನು ಕೈ ಹಿಡಿದು ಎಳೆಯಲು ಹೇಗೆ ಸಾಧ್ಯ? ನಮ್ಮ ಮೇಲೆ ತೇಜೋವಧೆ ಮಾಡುವ ಉದ್ದೇಶದಿಂದ ನಾಟಕ ಮಾಡುತ್ತಿದ್ದಾರೆಂದು ತಿಳಿಸಿದರು.
ನಿರೀಕ್ಷಣ ಜಾಮೀನಿಂದ ಹೊರಗಡೆ
ಇಸ್ಷೆಲ್ಲ ಆದಾಗ್ಯೂ ನಾವಿಬ್ಬರೂ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ಧೆವೆ. ಪ್ರಕರಣದಲ್ಲಿ ಪೊಲೀಸರ ತನಿಖೆಯಿಂದ ನಿಜ ಬಯಲಾಗಲಿದೆ. ನಮ್ಮ ಮೊಬೈಲ್ ಟವರ್ ಲೊಕೇಷನ್ ಟ್ರೇಸ್ ಮಾಡಲಿ ವಾಸ್ತವ ಹೊರಬರುತ್ತದೆ ಇದು ನಮ್ಮನ್ನು ಕಾರ್ಮಿಕ ಸಂಘಟನೆಯಿಂದ ಹಾಗೂ ಉದ್ಯೋಗದಿಂದ ಹೊರದೊಬ್ಬಲು ಅಲ್ಲಿನ ಕೆಲ ಉದ್ಯೋಗಿಗಳು ಮಾಡಿರುವ ಷಡ್ಯಂತ್ರವಾಗಿದ್ದು ಪ್ರಕರಣದಲ್ಲಿ ಯಾವುದೇ ಹುರುಳಿಲ್ಲದಿದ್ದರೂ ಖಾಸಗಿ ಯೂಟ್ಯೂಬ್ ಚಾನೆಲ್ ನಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡಿ ನಮ್ಮ ಗೌರವಕ್ಕೆ ಧಕ್ಕೆ ತಂದಿದೆ.
ನಮ್ಮ ಜೊತೆಯಲ್ಲಿ ಪ್ರತಿಷ್ಠಿತ ಮಣಿಪಾಲ್ ಆಸ್ಪತ್ರೆ ಹೆಸರಿಗೂ ಮಸಿ ಬಳಿಯಲು ಯತ್ನಿಸುತ್ತಿದ್ದಾರೆ. ಈಗಾಗಲೇ ನಾವು ಖಾಸಗಿ ಮಧ್ಯಮ ಸಂಸ್ಸತೆಗೆ ಮಾನನಷ್ಟ ಮೊಕದ್ದಮೆಯ ನೋಟಿಸ್ ಕಳುಹಿಸಿದರೂ ಅದನ್ನು ಸ್ವೀಕರಿಸದೆ ಹಿಂದಿರುಗಿಸಿದ್ದಾರೆ. ಆದ್ದರಿಂದ ನಮ್ಮ ಸಹೋದ್ಯೋಗಿಗಳಿಗೆ ಲೈಂಗಿಕ ಕಿರುಕುಳ ನೀಡಿದ್ದೇವೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಆದ್ದರಿಂದ ಮುಂದಿನ ದಿನಗಳಲ್ಲಿ ಕಾನೂನು ರೀತ್ಯ ಹಿಒರಾಟ ಮಾಡಲಾಗುತ್ತದೆ ಎಂದು ತಿಳಿಸಿದರು.
ಪತ್ರಿಕಾಗೋಸ್ಟಿಯಲ್ಲಿ ಸಂಘದ ಅನೇಕ ಮಹಿಳಾ ಪದಾಧೀಕಾರಿಗಳು, ಸಂಘಟನೆಯ ಸದಸ್ಯರು ಇದೇ ವೇಳೆ ಉಪಸ್ಥಿತರಿದ್ದರು.