ಗುಜರಾತ್: ನಮ್ಮ ಗಣರಾಜ್ಯ ಹಲವು ಅಪಾಯಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ , ಈ ಸಭೆಯು ಆಧುನಿಕ ಭಾರತ ನಿರ್ಮಾಣದ ಮೂಲತತ್ವಗಳಾದ ನ್ಯಾಯ, ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಮೌಲ್ಯಗಳಿಗೆ ಪುನ: ಜೀವ ತುಂಬಲಿದೆ ಎಂದು ಸಿಎಂ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು.
ಗುಜರಾತಿನ ಅಹ್ಮದಾಬಾದ್ ನಲ್ಲಿ ನಡೆದ ಕಾಂಗ್ರೆಸ್ ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿದ ಭಾಷಣ ಮಾಡಿ ಮಾತನಾಡಿ,
· ಭಾರತ ಸ್ವಾತಂತ್ರ್ಯ ಸಂಗ್ರಾಮದ ಪರಂಪರೆಯನ್ನು ಹೊಂದಿರುವ ಅಹ್ಮದಾಬಾದ್ ನಗರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಐತಿಹಾಸಿಕ ಸಭೆಯಲ್ಲಿ ಭಾಗವಹಿಸುತ್ತಿರುವುದು ನನಗೆ ಹೆಮ್ಮೆಯ ವಿಷಯ.
· ರಾಹುಲ್ ಜೀ, ಖರ್ಗೆ ಜೀ ಮತ್ತು ಸನ್ಮಾನ್ಯ ಸೋನಿಯಾ ಜೀ ಅವರ ನಾಯಕತ್ವದಲ್ಲಿ, ನಮ್ಮ ಪಕ್ಷ ಚುನಾವಣೆಗೆ ಸಜ್ಜಾಗುವುದರ ಜೊತೆಗೆ ನಾವು ಭಾರತದ ಪರಿಕಲ್ಪನೆಯನ್ನು ಮರುಸ್ಥಾಪಿಸಲು ಸಿದ್ಧತೆ ನಡೆಸಿದ್ದೇವೆ.
· ಇದು ಕೇವಲ ಒಂದು ಸಭೆಯಲ್ಲ , ಇದೊಂದು ಭರವಸೆಯ ಆಂದೋಲನ. ಭಾರತದ ಪ್ರತಿಯೊಬ್ಬ ರೈತ, ಪ್ರತಿಯೊಬ್ಬ ಕಾರ್ಮಿಕ, ಪ್ರತಿಯೊಬ್ಬ ಯುವಕ , ಪ್ರತಿಯೊಬ್ಬ ಮಹಿಳೆ- ಘನತೆ ಹಾಗೂ ಅವಕಾಶಗಳನ್ನು ಬಯಸುವ ಪ್ರತಿಯೊಬ್ಬ ಭಾರತೀಯನ ಪರವಾಗಿ ಹೋರಾಡಲು ಕೈಗೊಳ್ಳುತ್ತಿರುವ ಸಾಮೂಹಿಕ ಪ್ರತಿಜ್ಞೆ.
· ಕಾಂಗ್ರೆಸ್ ಎಂದೂ ಅಧಿಕಾರದ ಬೆನ್ನು ಹತ್ತಿಲ್ಲ ಎಂಬುವುದನ್ನು ನಾವು ನೆನಪಿಡಬೇಕು. ನಾವು ಭಾರತಕ್ಕೆ ಸ್ಪಷ್ಟ ರೂಪುರೇಷೆಯನ್ನು ಒದಗಿಸಿದ್ದೇವೆ. ಈಗ ಮತ್ತದೇ ಧೈರ್ಯ, ಉತ್ಸಾಹ , ಸ್ಪಷ್ಟತೆ ಹಾಗೂ ಸಹಾನುಭೂತಿಯಿಂದ ಪುನ: ಈ ಕಾರ್ಯದಲ್ಲಿ ತೊಡಗುತ್ತೇವೆ.
ಭಾರತದಲ್ಲಿ ಹೆಚ್ಚುತ್ತಿರುವ ಬಿಕ್ಕಟ್ಟು
· ನಮ್ಮ ನೆಚ್ಚಿನ ದೇಶ ಇಂದು ಅಪಾಯಕಾರಿಯಾದ ಕವಲುದಾರಿಯಲ್ಲಿ ನಿಂತಿದೆ. ಜಾತ್ಯಾತೀತತೆ, ಒಕ್ಕೂಟ ವ್ಯವಸ್ಥೆ, ಪ್ರಜಾಪ್ರಭುತ್ವ ನಮ್ಮ ಸಂವಿಧಾನದ ಅಡಿಪಾಯಗಳು. ಈ ಅಡಿಪಾಯಗಳು ಇಂದು ಅಧಿಕಾರದ ಅಮಲು ಹಾಗೂ ನಿಯಂತ್ರಣದ ಗೀಳು ತುಂಬಿರುವ ಅಧಿಕಾರದ ಹಿಡಿತಕ್ಕೆ ಸಿಲುಕಿವೆ.
· ಭಾರತಕ್ಕೆ ಆಹಾರ ನೀಡಲು ಬಿಸಿಲಿನಲ್ಲಿ ಶ್ರಮಿಸುವ ರೈತರು ಇನ್ನೂ ನ್ಯಾಯಕ್ಕಾಗಿ ಕಾಯುತ್ತಿದ್ದಾರೆ. ರೈತರು ಬೀದಿಗಳಲ್ಲಿ ನಡೆಸಿದ ಹೋರಾಟ , ತಮ್ಮ ಮಕ್ಕಳನ್ನು ಕಳೆದುಕೊಂಡ ರೈತರ ಕೂಗಿಗೆ ಮೌನದ ಹಾಗೂ ಗುಂಡಿನ ಪ್ರತ್ಯುತ್ತರ ದೊರಕಿದೆ. ಭರವಸೆಗಳನ್ನು ನೀಡಲಾದರೂ , ಒಂದನ್ನೂ ಇದುವರೆಗೆ ಈಡೇರಿಸಲಾಗಿಲ್ಲ.
· ನಮ್ಮ ಮಹಿಳೆಯರು- ತಾಯಂದಿರು, ಅಕ್ಕತಂಗಿಯರು, ಹೆಣ್ಣುಮಕ್ಕಳು- ಸುರಕ್ಷತೆ , ಘನತೆ ಹಾಗೂ ಸಮಾನ ಅವಕಾಶಗಳ ಬೇಡಿಕೆಯಿರಿಸಿದ್ದಾರೆ. ಆದರೆ ಮೋದಿಯವರ ಭಾರತದಲ್ಲಿ, ಅವರ ಹೋರಾಟದ ಹಕ್ಕನ್ನೂ ಅಪರಾಧವೆಂದು ಪರಿಗಣಿಸಲಾಗುತ್ತಿದೆ. ಮಣಿಪುರದಿಂದ ಹತ್ರಾಸ್ ನವರೆಗೂ , ಅವರ ನೋವುಗಳನ್ನು ಕಡೆಗಣಿಸಿ, ಅವರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ.
· ಶತಮಾನಗಳಿಂದ ಅನ್ಯಾಯದ ವಿರುದ್ಧ ಹೋರಾಡುತ್ತಾ ಬಂದಿರುವ ನಮ್ಮ ದಲಿತ, ಆದಿವಾಸಿ ಹಾಗೂ ಅಲ್ಪಸಂಖ್ಯಾತ ಸಮುದಾಯಗಳನ್ನು ಇನ್ನಷ್ಟು ಅಂಚಿಗೆ ತಳ್ಳಲಾಗುತ್ತಿದೆ. ದ್ವೇಷದಿಂದ ಸಾಮಾಜಿಕ ವ್ಯವಸ್ಥೆಯನ್ನು ಘಾಸಿಗೊಳಿಸಲಾಗಿದೆ. ಅಭಿವೃದ್ಧಿಯ ರಾಜಕಾರಣವನ್ನು, ವಿಭಜಿಸುವ ರಾಜಕಾರಣವನ್ನಾಗಿ ಬದಲಿಸಲಾಗುತ್ತಿದೆ.
· ಯುವಜನತೆ ನಿರುದ್ಯೋಗದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬೆಲೆ ಏರಿಕೆ ಹೆಚ್ಚುತ್ತಿವೆ. ‘ಅಚ್ಛೇ ದಿನ್’ ಎಂಬ ಭರವಸೆ ಯೆಂಬುದು, ಸಾಮಾನ್ಯ ಭಾರತೀಯನ ಪಾಲಿಗೆ ಕ್ರೂರ ಹಾಸ್ಯವಾಗಿದೆ.
· ಇದು ನಮಗೆ ಭರವಸೆ ನೀಡಲಾಗಿದ್ದ ನವ ಭಾರತವೇ? ಅಥವಾ ಸ್ವಾತಂತ್ರ್ಯವನ್ನುಭಯ ಆಕ್ರಮಿಸಿರುವ, ಕಾರ್ಯಕ್ಷಮತೆಯನ್ನು ಪ್ರಚಾರ ಆಕ್ರಮಿಸಿರುವಂತಹ ಒಡೆದ ಭಾರತವೇ?
· ನಮ್ಮಲ್ಲಿ ಸ್ಪಷ್ಟತೆ ಇರಬೇಕು: ಇದು ಕೇವಲ ಆಡಳಿತದ ಬಿಕ್ಕಟ್ಟಲ್ಲ. ಇದು ನೈತಿಕತೆಯ ಬಿಕ್ಕಟ್ಟು. ತ್ಯಾಗ ಹಾಗೂ ಸೇವೆಯ ಪರಂಪರೆಯನ್ನು ಹೊಂದಿರುವ ಕಾಂಗ್ರೆಸ್ ಪಕ್ಷ ಮಾತ್ರ , ದೇಶದ ಮೇಲಾಗಿರುವ ಈ ಗಾಯವನ್ನು ಗುಣಪಡಿಸುವ ಹಾಗೂ ಈ ಗಣರಾಜ್ಯವನ್ನು ಮರುನಿರ್ಮಿಸುವ ಶಕ್ತಿಯನ್ನು ಹೊಂದಿದೆ.
ಸಂವಿಧಾನದ ಮೇಲೆ ಬಿಜೆಪಿಯ ಹಲ್ಲೆ
· ಇಂದು ಭಾರತ ಎದುರಿಸುತ್ತಿರುವುದು ಕೇವಲ ಆರ್ಥಿಕ ಅಥವಾ ಸಾಮಾಜಿಕ ಅಪಾಯವಲ್ಲ- ಸಂವಿಧಾನಿಕ ಅಪಾಯವನ್ನೂ ಎದುರಿಸುತ್ತಿದೆ.
· ಭಾರತೀಯ ಜನತಾ ಪಕ್ಷವೂ ಕೇವಲ ಅಡಳಿತವನ್ನು ನಡೆಸದೇ , ನಮ್ಮ ಗಣತಂತ್ರದ ರಚನೆಯನ್ನೇ ವ್ಯವಸ್ಥಿತವಾಗಿ ಧ್ವಂಸಗೊಳಿಸಲಾಗುತ್ತಿದೆ.
· ಒಂದೊಮ್ಮೆ ಮುಕ್ತ ಹಾಗೂ ನ್ಯಾಯಯುತ ಚುನಾವಣೆಗೆ ಹೆಸರಾಗಿದ್ದ ಚುನಾವಣಾ ಆಯೋಗವು , ಇಂದು ಆಡಳಿತ ಪಕ್ಷದವರ ಹಣ ಮತ್ತು ಮಾಧ್ಯಮಗಳ ದುರ್ಬಳಕೆಯಿಂದಾಗಿ ಅಸಹಾಯಕವಾಗಿ ನಿಂತಿದೆ. ಜಾರಿ ನಿರ್ದೇಶನಾಲಯ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಗಳನ್ನು ಶಸ್ತ್ರಗಳಂತೆ ಬಳಸಲಾಗುತ್ತಿದೆ. ಇವುಗಳಿಂದ ವಿರೋಧ ಪಕ್ಷದವರನ್ನು ದ್ವೇಷದಿಂದ ಹಿಮ್ಮೆಟ್ಟಿಸಲಾಗುತ್ತಿದ್ದು, ಬಿಜೆಪಿಯ ಅಧಿಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಕಡೆಗಣಿಸುವ ಜೊತೆಗೆ ಪುರಸ್ಕರಿಸಲಾಗುತ್ತಿದೆ.
· ಸಂಸತ್ ನ್ನು ಕೇವಲ ರಬ್ಬರ್ ಸ್ಟ್ಯಾಂಪ್ ನ ಮಟ್ಟಕ್ಕೆ ಇಳಿಸಲಾಗಿದೆ. ಯಾವುದೇ ಚರ್ಚೆಗಳಿಲ್ಲದೇ ಕಾನೂನುಗಳನ್ನು ಜಾರಿಗೊಳಿಸಲಾಗುತ್ತಿದೆ. ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕಿ , ಧ್ವನಿಗಳನ್ನು ಮೌನಗೊಳಿಸಲಾಗುತ್ತಿದೆ ಮತ್ತು ಸತ್ಯವನ್ನು ಅಪೇಕ್ಷಿಸಿದ್ದಕ್ಕಾಗಿ ವಿರೋಧಪಕ್ಷದ ಸಂಸದರನ್ನು ಅಮಾನತ್ತುಗೊಳಿಸಲಾಗುತ್ತಿದೆ.
· ಬಿಜೆಪಿಯೇತರ ರಾಜ್ಯಸರ್ಕಾರಗಳನ್ನು ಅಭದ್ರಗೊಳಿಸಲು ಸಂವಿಧಾನಬದ್ಧವಾಗಿ ಪಕ್ಷಾತೀತವಾಗಿರಬೇಕಾದ ರಾಜ್ಯಪಾಲರುಗಳನ್ನೂ ರಾಜಕೀಯ ಏಜೆಂಟ್ಸ್ ಗಳಾಗಿ ಬಳಸಲಾಗುತ್ತಿದೆ. ಇದು ಪ್ರಜಾಪ್ರಭುತ್ವವಲ್ಲ. ಧ್ವಜದ ಹೆಸರಿನಲ್ಲಿರುವ ನಿರಂಕುಶ ಪ್ರಭುತ್ವ.
· ಸಂವಿಧಾನವನ್ನು ಪಾಲಿಸುವುದಾಗಿ ಹೇಳಿಕೊಳ್ಳುವ ಬಿಜೆಪಿ , ಅದರ ಆಶಯದಿಂದ ಭಯಭೀತವಾಗಿದೆ. ‘ಭಾರತ್ ಮಾತಾ ಕೀ ಜೈ’ ಎಂದು ಮಂತ್ರಿಸುವ ಅವರು , ಭಾರತದ ಆತ್ಮವನ್ನೇ ಟೊಳ್ಳುಗೊಳಿಸುತ್ತಿದ್ದಾರೆ.
· ಈ ಸಂವಿಧಾನವನ್ನು ಕಾಪಾಡಲು ಕಾಂಗ್ರೆಸ್ ಕಾರ್ಯಕರ್ತರಾಗಿ, ದೇಶಪ್ರೇಮಿಗಳಾಗಿ, ಭಾರತದ ನಾಗರಿಕರಾಗಿ , ಶಕ್ತಿಮೀರಿ ಹೋರಾಡುವುದು ನಮ್ಮ ಆದ್ಯ ಕರ್ತವ್ಯ. ನಮಗೆ ಸಂವಿಧಾನ ಕೇವಲ ಒಂದು ಕಾನೂನಿನ ದಾಖಲೆಯಲ್ಲ , ಅದು ನಮ್ಮ ಗಣತಂತ್ರದ ಜೀವಸೆಲೆ.
ಒಂದು ದೇಶ, ಒಂದು ಸಂಸ್ಕೃತಿ, ಒಂದು ಪಕ್ಷ
· ಭಾರತ ಕೇವಲ ಒಂದೇ ದನಿಯ ನೆಲವಲ್ಲ-ಇದು ಹಲವು ಸ್ವರಗಳ ಮೇಳವಾಗಿದೆ. ಕರ್ನಾಟಕದ ಜಾನಪದ ಗೀತೆಗಳಿಂದ ತಮಿಳುನಾಡಿನ ಕಾವ್ಯಗಳವರೆಗೆ, ಬಂಗಾಲದ ಹಬ್ಬಗಳಿಂದ ಗುಜರಾತಿನ ಸಂಪ್ರದಾಯದವರೆಗೆ- ನಮ್ಮ ದೇಶದ ಏಕತೆಯು ವಿವಿಧತೆಯಲ್ಲಿ ಅರಳಿದೆ.
· ಆದರೆ ಇಂದು, ಒಂದು ದೇಶ, ಒಂದು ಭಾಷೆ, ಒಂದು ಸಂಸ್ಕೃತಿ, ಒಂದು ಪಕ್ಷ ಎನ್ನುತ್ತಾ, ಭಾರತವನ್ನು ಸಂಕುಚಿತತೆಯತ್ತ ನೂಕುವ ಅಪಾಯಕಾರಿ ಪ್ರಯತ್ನ ನಡೆಯುತ್ತಿದೆ.
· ರಾಜ್ಯಗಳು ಹೇಗೆ ವ್ಯಯಿಸಬೇಕು, ನಾಗರಿಕರು ಏನು ನುಡಿಯಬೇಕು ಮತ್ತು ಯಾರು ಒಳಪಡಲಿದ್ದಾರೆ ಎಂಬುದನ್ನು ನಿಯಂತ್ರಿಸಲಿಚ್ಛಿಸುವ ಬಿಜೆಪಿಯು ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಪ್ರಾಬಲ್ಯದ ಅಪಾಯಕಾರಿ ತ್ರಿಕೋನವನ್ನು ಹೇರುತ್ತಿದೆ. ಇದು ಒಕ್ಕೂಟ ವ್ಯವಸ್ಥೆಯಲ್ಲ. ಇದು ಬಲವಂತದ ಏಕರೂಪತೆ.
· ಈ ಚಿಂತನೆ ಸಂವಿಧಾನದ ಆಶಯಕ್ಕೆ ವಿರೋಧವಾಗಿದೆ. ನಮ್ಮ ಸಂಸ್ಥಾಪಕರು ಏಕರೂಪದ ಭಾರತದ ಕಲ್ಪನೆಯನ್ನು ಹೊಂದಿರಲಿಲ್ಲ. ಅವರು ಪ್ರತಿ ಭಾಷೆಯನ್ನು ಗೌರವಿಸುವ , ಪ್ರತಿಯೊಂದು ಸಂಸ್ಕೃತಿಯನ್ನು ಸಂಭ್ರಮಿಸುವ ಹಾಗೂ ಪ್ರತಿಯೊಂದು ಪ್ರದೇಶವನ್ನು ಸದೃಢಗೊಳಿಸುವ ಒಕ್ಕೂಟವ್ಯವಸ್ಥೆಯ ಭಾರತದ ಪರಿಕಲ್ಪನೆಯನ್ನು ಹೊಂದಿದ್ದರು.
· ಕನ್ನಡ, ತಮಿಳು, ಗುಜರಾತಿ,ತೆಲುಗು, ಅಸ್ಸಾಮಿ, ಪಂಜಾಬಿ ಹಾಗೂ ಇನ್ನಿತರ ಬಾಷೆಗಳು ಕೇವಲ ಭಾಷಾ ಮಾಧ್ಯಮವಾಗಿರದೇ , ಶತಮಾನಗಳ ಜ್ಞಾನದ, ಅಸ್ಮಿತೆಯ ಹಾಗೂ ಪ್ರತಿಷ್ಠೆಯ ಭಂಡಾರವಾಗಿದೆ. ಇವುಗಳನ್ನು, ಕಡೆಗಣಿಸಿದರೆ, ನಮ್ಮ ಜನರ ಆತ್ಮಾಭಿಮಾನವನ್ನು ಘಾಸಿಗೊಳಿಸಿದಂತೆ.
· ಮಂಡ್ಯದ ರೈತ ಕನ್ನಡದಲ್ಲಿ ಮಾತನಾಡಿದಾಗ, ಕಾಶ್ಮೀರದ ಕವಿಯೊಬ್ಬ ಉರ್ದುವಿನಲ್ಲಿ ಬರೆದಾಗ, ಕೇರಳದ ಮಗುವೊಂದು ಮಲೆಯಾಳಂ ಕಲಿತಾಗ, ಅವರೆಲ್ಲರೂ ಒಂದೇ ಭಾರತೀಯರಾಗಿರುತ್ತಾರೆ. ಯಾವುದೇ ಒಂದು ಭಾಷೆ, ಸಂಸ್ಕೃತಿ, ಪ್ರದೇಶ ಮತ್ತೊಂದಕ್ಕಿಂತ ಕಡಿಮೆಯಿರುವುದಿಲ್ಲ.
· ಕಾಂಗ್ರೆಸ್ ಎಂದಿಗೂ ಎಲ್ಲಾ ರಾಜ್ಯಗಳನ್ನು ಸಮಾನವಾಗಿ ಗೌರವಿಸುವ ಒಕ್ಕೂಟ ವ್ಯವಸ್ಥೆಯ ಭಾರತದಲ್ಲಿ ನಂಬಿಕೆಯಿರಿಸಿದೆ. ಅಂತಹ ಭಾರತದಲ್ಲಿ ಮಾತ್ರ ಪ್ರತಿಯೊಬ್ಬ ನಾಗರಿಕನಿಗೂ ತನ್ನದೆಂಬ ಭಾವವನ್ನು ಹೊಂದುತ್ತಾನೆ.
· ‘ಒಂದು ದೇಶ- ಒಂದು ವ್ಯವಸ್ಥೆ’ ಎಂಬುದಕ್ಕೆ ನೀಡಿರುವ ಒತ್ತು , ಕೇವಲ ತಾತ್ವಿಕವಾಗಿರದೇ , ಪ್ರಾದೇಶಿಕ ಸ್ವಾತಂತ್ರ್ಯ ಹಾಗೂ ಸಮಾಜಿಕ ನ್ಯಾಯದ ಮೂಲಕ್ಕೆ ಪೆಟ್ಟು ನೀಡುವಂತಹ ನೀತಿಗಳನ್ನು ಹೇರುವ ಮೂಲಕ ಅನುಷ್ಠಾನಗೊಳಿಸುವುದಾಗಿದೆ.
· ತಮಿಳುನಾಡು ಹಾಗೂ ಕರ್ನಾಟಕ ಮೇಲೆ NEET ಮಾಡಿರುವ ಪರಿಣಾಮಗಳನ್ನು ನೋಡುವುದಾದರೆ , ಉತ್ತಮವಾಗಿ ಸ್ಥಾಪಿತವಾಗಿದ್ದ , ಗ್ರಾಮೀಣ ,ಬಡ ಹಾಗೂ ಹಿಂದುಳಿದ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿದ್ದ ಎಲ್ಲರನ್ನೊಳಗೊಂಡ ಶಿಕ್ಷಣ ವ್ಯವಸ್ಥೆಯನ್ನು ಈಗ ‘ ರಾಷ್ಟ್ರೀಯ ಮಾನದಂಡ’ ದ ಹೆಸರಿನಲ್ಲಿ ಹಾಳುಗೆಡವಲಾಗುತ್ತಿದೆ.
· NEET ಎಂಬುದು ಸೇತುವೆಯಾಗದೇ , ಒಂದು ತೊಡಕಾಗಿ ಪರಿಣಮಿಸಿದೆ. NEET ಈಗ ದುಬಾರಿ ಶಿಕ್ಷಣವನ್ನು ಭರಿಸಲು ಶಕ್ತರಾಗಿರುವ ಪರವಾಗಿದ್ದು , ಸ್ಟೇಟ್ ಬೋರ್ಡ್ ಹಾಗೂ ಗ್ರಾಮೀಣ ಹಿನ್ನಲೆಯ ಪ್ರತಿಭಾವಂತ ಹಾಗೂ ಆರ್ಹ ವಿದ್ಯಾರ್ಥಿಗಳಿಗೆ ಹಿನ್ನಡೆಯಾಗಿದೆ.
· ಅಂತೆಯೇ, ಯುಜಿಸಿಯಿಂದ ತರಲಾಗಿರುವ ಸುಧಾರಣೆಗಳು, ಶಿಕ್ಷಣದ ಮೇಲಿನ ಕ್ರೇಂದ್ರೀಕೃತ ನಿಯಂತ್ರಣ ಸ್ಥಾಪಿಸುವ ಹಾಗೂ ಜ್ಞಾನ, ಅವಶ್ಯಕತೆ ಹಾಗೂ ಪ್ರತ್ಯೇಕ ರಾಜ್ಯಗಳ ಆಶಯಗಳನ್ನು ಕಡೆಗಣಿಸುವಂತಾಗಿದೆ. ಪಠ್ಯದ ಬಗೆಗಿನ ನಿರ್ಧಾರಗಳು, ಶೈಕ್ಷಣಿಕ ಸ್ವಾತಂತ್ರ್ಯ, ಭಾಷಾ ಆಯ್ಕೆ ಸೇರಿದಂತೆ ಪ್ರತಿ ವಿಷಯದ ಬಗ್ಗೆಯೂ ದೆಹಲಿಯಿಂದ ನಿರ್ದೇಶನ ನೀಡಲಾಗುತ್ತಿದೆ. ಇದರಿಂದಾಗಿ ರಾಜ್ಯಗಳು ತಮ್ಮ ವಿಶಿಷ್ಟ ಪರಂಪರೆಯನ್ನು ಸಂರಕ್ಷಿಸುವ ಹಾಗೂ ಪ್ರೋತ್ಸಾಹಿಸುವ ಅವಕಾಶವನ್ನು ಕ್ಷೀಣಿಸುತ್ತದೆ.
· ರಾಷ್ಟ್ರೀಯ ಶಿಕ್ಷಣ ನೀತಿಯು ಕಾಗದದ ಮೇಲೆ ಎಷ್ಟೇ ಮಹತ್ವಾಕಾಂಕ್ಷಿಯಾಗಿ ತೋರಿದರೂ, ವೈವಿಧ್ಯತೆಯಿಂದ ಕೂಡಿದ ದೇಶದಲ್ಲಿ ‘ಎಲ್ಲರಿಗೂ ಒಂದೇ ಅಳತೆ’ ಎಂಬ ಮಾದರಿ ಅಪಾಯಕಾರಿಯಾಗಿದೆ.
· ‘ಒಂದು ಅಳತೆ ಎಲ್ಲರಿಗೂ ಸರಿಹೊಂದುವುದಿಲ್ಲ’ ಎಂಬ ಗಾದೆ ಮಾತಿನಂತೆ, ಕಟ್ಟುನಿಟ್ಟಿನ ವ್ಯವಸ್ಥೆಯನ್ನು ಚಲನಶೀಲ ರಾಷ್ಟ್ರದ ಮೇಲೆ ಬಲವಂತವಾಗಿ ಹೇರಲಾಗುತ್ತಿದೆ.
· ಈ ನೀತಿ , ಕೊಪ್ಪಳದ ಹಳ್ಳಿಯೊಂದರಲ್ಲಿ ಓದುತ್ತಿರುವ ಹೆಣ್ಣುಮಗಳಿಗೆ ಏನು ಅರ್ಥ ಕೊಡುತ್ತದೆ? ಬಸ್ತಾರ್ ನಲ್ಲಿರುವ ಬುಡಕಟ್ಟು ಹುಡುಗನಿಗೆ ಹಾಗೂ ಮಧುರೈನ ದಲಿತ ಕುಟುಂಬದ ಮೊದಲ ತಲೆಮಾರಿನ ವಿದ್ಯಾರ್ಥಿಗೆ ಏನು ಅರ್ಥ ಕೊಡುತ್ತದೆ? ವಾಸ್ತವಿಕತೆಯಿಂದ ದೂರವಾದ ಶಿಕ್ಷಣ ವ್ಯವಸ್ಥೆಗಳು , ಈ ವಿದ್ಯಾರ್ಥಿಗಳ ಕನಸುಗಳನ್ನು ಮೊಟಕುಗೊಳಿಸಿದೆ ಎಂಬ ಅರ್ಥವನ್ನು ಕೊಡುತ್ತಿದೆ.
· ಶಿಕ್ಷಣವು ಎಂದಿಗೂ ಏಣಿಯಾಗಬೇಕೇ ಹೊರತು ಗೋಡೆಯಾಗಬಾರದು ಎಂಬು ಕಾಂಗ್ರೆಸ್ ನ ನಂಬುಗೆಯಾಗಿದೆ. ಪ್ರತಿಯೊಬ್ಬ ಭಾರತೀಯನನ್ನು ಅವನ ಸ್ವಂತ ಭಾಷೆಯಲ್ಲಿ , ತಮ್ಮದೇ ನೆಲದಲ್ಲಿ, ತಮ್ಮದೇ ರೀತಿನೀತಿಗಳ ಮೂಲಕ ಸದೃಢರನ್ನಾಗಿಸುವ ಶಿಕ್ಷಣವಿರಬೇಕು.
ಒಕ್ಕೂಟ ವ್ಯವಸ್ಥೆ ರಾಷ್ಟ್ರ ನಿರ್ಮಾಣಕ್ಕೆ ಅಡಚಣೆಯಲ್ಲ: ಅದು ನ್ಯಾಯದ ಅಡಿಪಾಯ
– ಪ್ರತಿ ರಾಜ್ಯಕ್ಕೂ ತನ್ನ ಭವಿಷ್ಯವನ್ನು ರೂಪಿಸಿಕೊಳ್ಳಲು ಅಧಿಕಾರ ದೊರಕಲು ಹಾಗೂ ಎಲ್ಲೇ ಹುಟ್ಟಿದ್ದರೂ ಪ್ರತಿ ಮಗುವೂ ಬೆಳೆಯಲು ಹಕ್ಕು ಸಿಗುವಂತಾಗುವ – ನ್ಯಾಯಸ್ಥಾಪನೆಗಾಗಿ ನಾವು ಹೋರಾಡುತ್ತೇವೆ.
• *ಏಕರೂಪತೆಯ ಹೆಸರಿನಲ್ಲಿ ನಮ್ಮ ವೈವಿಧ್ಯತೆಯನ್ನು ಅಳಿಸಿಹಾಕುವ ಪ್ರತಿ ಪ್ರಯತ್ನವನ್ನೂ ನಾವು ವಿರೋಧಿಸಬೇಕು. ಏಕೆಂದರೆ ಭಾರತಕ್ಕೆ ತನ್ನ ಬಲ ದೊರಕಿರುವುದು ಏಕರೂಪತೆಯಿಂದಲ್ಲ- ಬದಲಿಗೆ ವೈವಿಧ್ಯತೆಯಿಂದ ಸಿಕ್ಕಿದೆ.
• ಭಾರತದ ಸುಂದರ , ಬಹುತ್ವದ ಆತ್ಮವನ್ನು ಕಾಪಾಡಲು ನಾವು ಇಂದು ಸಂಕಲ್ಪ ಮಾಡೋಣ. ಅದು ಮಾತ್ರವೇ ಭಾರತೀಯತೆ ಮಾರ್ಗ. ಅದುವೇ ಸಾಂವಿಧಾನಿಕ ಮಾರ್ಗ.
ಬಿಜೆಪಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗವನ್ನು ಉಸಿರುಗಟ್ಟಿಸುತ್ತಿದೆ
• ಇಂದಿನ ಭಾರತದಲ್ಲಿ, ಬಹುತೇಕ ಮಾಧ್ಯಮದವರಿಗೆ ಪ್ರಶ್ನೆಗಳನ್ನು ಕೇಳಲು ಸ್ವಾತಂತ್ರö್ಯವಿಲ್ಲ. ಈ ಸರ್ಕಾರದಲ್ಲಿ, ಸ್ವಾತಂತ್ರö್ಯ ಮತ್ತು ಸತ್ಯಕ್ಕೆ ಬದಲಾಗಿ ಭಯ ಮತ್ತು ಪಕ್ಷಪಾತ ಎಂದು ಪರಿವರ್ತನೆಯಾಗಿದೆ.
• ಒತ್ತಡ, ಬೆದರಿಕೆ, ಆರ್ಥಿಕವಾಗಿ ಕತ್ತು ಹಿಸುಕುವಿಕೆ ಮತ್ತು ಕೆಲವರನ್ನೇ ಗುರಿಯಾಗಿಸುವುದರ ಮೂಲಕ ಪ್ರಜಾಪ್ರಭುತ್ವದ ನಾಲ್ಕನೇ ಅಂಗವನ್ನು ಪ್ರಚಾರದ ಸಾಧನವಾಗಿ ಪರಿವರ್ತಿಸಲು ಬಿಜೆಪಿ ಪ್ರಯತ್ನಿಸುತ್ತಿದೆ.
• ಪ್ರಶ್ನೆ ಮಾಡುವ ವಾಹಿನಿಗಳ ಬಾಯಿ ಮುಚ್ಚಿಸಲಾಗುತ್ತಿದ್ದು, ಸತ್ಯವನ್ನು ಹೇಳುವ ಮಾಧ್ಯಮದವರಿಗೆ ಕಿರುಕುಳ ನೀಡಲಾಗುತ್ತಿದೆ. ಪರ್ಯಾಯ ಧ್ವನಿಗಳಿಗೆ ದೇಶ ದ್ರೋಹದ ಹಣೆಪಟ್ಟಿ ಹಚ್ಚಲಾಗುತ್ತಿದೆ.
• ಮಾಧ್ಯಮಗಳು ಎದುರಿಸುತ್ತಿರುವ ತೀವ್ರ ಸವಾಲುಗಳನ್ನು ನಾವು ಗುರುತಿಸಿದ್ದೇವೆ. ಆದರೆ ಭಾರತೀಯ ಪತ್ರಿಕೋದ್ಯಮದ ಆತ್ಮ ಇನ್ನೂ ಜೀವಂತವಾಗಿದೆ. ಮಾಧ್ಯಮವು ಇನ್ನೂ ಧೈರ್ಯಶಾಲಿ, ವಿಮರ್ಶಾತ್ಮಕ ಮತ್ತು ಸತ್ಯಕ್ಕೆ ಬದ್ಧವಾಗಿದೆ.
• ಈ ಐತಿಹಾಸಿಕ ಘಟ್ಟದಲ್ಲಿ, ಮಾಧ್ಯಮದ ಸ್ನೇಹಿತರಲ್ಲಿ ನಮ್ಮ ವಿನಂತಿ: ಸಂವಿಧಾನದ ಆಶಯಗಳಾದ ವೈಚಾರಿಕತೆ, ಅಭಿವ್ಯಕ್ತಿ, ನಂಬಿಕೆ ಮತ್ತು ಆತ್ಮಸಾಕ್ಷಿಯ ಸ್ವಾತಂತ್ರö್ಯವನ್ನು ನಾವು ಒಟ್ಟಾಗಿ ಬೆಂಬಲಿಸೋಣ.
• ಪಂಡಿತ್ ನೆಹರೂ ಅವರು ಹೇಳಿದಂತೆ-“ ಸ್ವಾತಂತ್ರö್ಯ ಅಪಾಯದಲ್ಲಿದೆ, ನಿಮ್ಮ ಶಕ್ತಿಮೀರಿ ಇದನ್ನು ರಕ್ಷಿಸಿ”
ತಂತ್ರಜ್ಞಾನದ ದುರ್ಬಳಕೆ, ಹಿಂದುತ್ವದ ಪ್ರಚಾರ ಮತ್ತು ದ್ವೇಷ ಪ್ರಸರಣದ ಕುರಿತು
• ಶಿಕ್ಷಣ, ಅಭಿವೃದ್ಧಿ ಮತ್ತು ನಮ್ಮ ಯುವ ಜನಾಂಗವನ್ನು ಅವಕಾಶಗಳ ಜಗತ್ತಿಗೆ ಸಂಪರ್ಕಿಸಲು ತಂತ್ರಜ್ಞಾನವನ್ನು ಬಳಸುವ ಕಾಲಘಟ್ಟದಲ್ಲಿ ನಾವಿದ್ದೇವೆ. ಆದರೆ ಬಿಜೆಪಿಯ ಅಧಿಕಾರಾವಧಿಯಲ್ಲಿ ಮನಸ್ಸುಗಳನ್ನು ಒಡೆಯಲು, ಸತ್ಯವನ್ನು ತಿರುಚಲು ಹಾಗೂ ಸೌಹಾರ್ದತೆಯನ್ನು ಹಾಳು ಮಾಡಲು ತಂತ್ರಜ್ಞಾನವನ್ನು ಅಸ್ತçವನ್ನಾಗಿಸಿಕೊಳ್ಳಲಾಗಿದೆ.
• ವೈಚಾರಿಕ ಚಿಂತನೆಯನ್ನು ಪೋಷಿಸುವ ಬದಲಿಗೆ, ಸಾಮಾಜಿಕ ಮಾಧ್ಯಮದಲ್ಲಿ ದ್ವೇಷದ ಆಂದೋಲನವನ್ನೇ ಕೈಗೊಳ್ಳಲಾಗುತ್ತಿದೆ. ವಿಜ್ಞಾನ ಮತ್ತು ಕರುಣೆಯನ್ನು ಹೇಳಿಕೊಡುವ ಬದಲು, ಭಯ ಮತ್ತು ಕ್ರೋಧವನ್ನು ಹುಟ್ಟುಹಾಕಲು ವಿನ್ಯಾಸಗೊಳಿಸಿರುವ ಹಿಂದುತ್ವದ ಪ್ರಸರಣದಿಂದ ಆಲ್ಗೋರಿದಮ್ ಗಳನ್ನು ಭರ್ತಿಮಾಡಲಾಗುತ್ತಿದೆ.
• ನಾವೆಲ್ಲರೂ ಹಿಂದು ಧರ್ಮದ ಹೆಮ್ಮೆಯ ಅನುಯಾಯಿಗಳು: ಹಿಂದೂ ಧರ್ಮವು ಸಹಿಷ್ಣುತೆ, ಶಾಂತಿ, ಶೋಧನೆ ಮತ್ತು ಒಳಗೊಳ್ಳುವಿಕೆಯಲ್ಲಿ ನಂಬಿಕೆಯಿರಿಸಿದೆ. ಆದರೆ ನಾವು ಹಿಂದುತ್ವ ಎಂಬ ದ್ವೇಷವನ್ನೇ ಬೋಧಿಸುವ, ಇತರನ್ನು ಹೊರತುಪಡಿಸುವ ಮತ್ತು ಮಹಾನ್ ಧರ್ಮವನ್ನು ಅಧಿಕಾರಕ್ಕಾಗಿ ಬಳಸುವ ಸಾಧನವಾಗಿರುವ ರಾಜಕೀಯ ಸಿದ್ಧಾಂತವನ್ನು ತಿರಸ್ಕರಿಸುತ್ತೇವೆ ಎನ್ನುವುದನ್ನು ನಾನು ಸ್ಪಷ್ಟಪಡಿಸುತ್ತೇನೆ.
• ಯುವ ಮನಸ್ಸುಗಳಿಗೆ ವಿಷ ತುಂಬವ ಉದ್ದೇಶಪೂರ್ವಕ ಪ್ರಯತ್ನಗಳಾಗುತ್ತಿದೆ. ರಾಷ್ಟಿçÃಯತೆ ಮತ್ತು ಧರ್ಮದ ಹೆಸರಿನಲ್ಲಿ ಇತಿಹಾಸವನ್ನು ತಿದ್ದಲಾಗುತ್ತಿದ್ದು, ವಾಸ್ತವಾಂಶವನ್ನು ತಿರುಚಲಾಗುತ್ತಿದೆ ಹಾಗೂ ಒಂದು ಸಮುದಾಯವನ್ನು ಮತ್ತೊಂದರ ವಿರುದ್ಧ ಎತ್ತಿಕಟ್ಟಲಾಗುತ್ತಿದೆ.
• ಇತ್ತೀಚಿನ ವಕ್ಫ್ ಮಂಡಳಿ ವಿವಾದ ಇದಕ್ಕೊಂದು ಉದಾಹರಣೆ. ನೈಜ ಸಂಗತಿಗಳಾದ ಬಡತನ, ನಿರುದ್ಯೋಗ ಮತ್ತು ರೈತರ ಸಂಕಷ್ಟಗಳನ್ನು ಬಗೆಹರಿಸುವ ಬದಲಿಗೆ ಬಿಜೆಪಿ ನಾಯಕರು ಮುಸಲ್ಮಾನರನ್ನು ಗುರಿಯಾಗಿಸಲು, ಕಾಲ್ಪನಿಕ ಶತ್ರುಗಳನ್ನು ಸೃಷ್ಟಿಸಲು ಹಾಗೂ ನೆರೆಹೊರೆಗಳನ್ನು ರಣರಂಗವಾಗಿ ಪರಿವರ್ತಿಸಲು ಸುಳ್ಳು ಕಥೆಗಳನ್ನು ಪ್ರಚುರಪಡಿಸುತ್ತಿದ್ದಾರೆ.
• ಭಾರತಕ್ಕೆ ಇನ್ನಷ್ಟು ಗೋಡೆಗಳ ಅವಶ್ಯಕತೆಯಿಲ್ಲ. ಅದಕ್ಕೆ ಬೇಕಿರುವುದು ಸೇತುವೆಗಳು. ಭಾರತಕ್ಕೆ ಇನ್ನಷ್ಟು ದ್ವೇಷವಲ್ಲ: ಇನ್ನಷ್ಟು ಆಶಾವಾದದ ಅಗತ್ಯವಿದೆ.
• “ ವ್ಯಕ್ತಿತ್ವವನ್ನು ದ್ವೇಷದ ಮೇಲೆ ಕಟ್ಟಲಾಗುವುದಿಲ್ಲ, ಈ ದೇಶವನ್ನು ಒಗ್ಗಟ್ಟು, ಪ್ರೀತಿ ಮತ್ತು ಸತ್ಯದ ಆಧಾರದ ಮೇಲೆ ಕಟ್ಟಬೇಕು” ಎಂದು ಸ್ವಾಮಿ ವಿವೆಕಾನಂದರು ಹೇಳಿದ್ದನ್ನು ನಾವು ಸ್ಮರಿಸೋಣ.
• ಕಾಂಗ್ರೆಸ್ ಪಕ್ಷವು ಹಿಂದೂ, ಮುಸ್ಲಿಂ, ಕ್ರೆöÊಸ್ತ, ಸಿಖ್, ಜೈನ್, ಬೌಧ್ಧರು ಸೇರಿದಂತೆ ಎಲ್ಲಾ ಭಾರತೀಯರ ಪರವಾಗಿದೆ- ಏಕೆಂದರೆ ನಾವು ಅವರನ್ನು ಮತ ಬ್ಯಾಂಕುಗಳಾಗಿ ಕಾಣದೇ, ಒಂದು ಮಹಾನ್ ರಾಷ್ಟçದ ಸಮಾನ ನಾಗರಿಕರನ್ನಾಗಿ ಕಾಣುತ್ತೇವೆ.
ಕರ್ನಾಟಕ ಮಾದರಿ ಅಭಿವೃದ್ಧಿ: ವಿಭಜಕ ಬಿಜೆಪಿಗೆ ಪರ್ಯಾಯ
• ಬಿಜೆಪಿಯು ವಿಭಜನೆ ಮತ್ತು ಬೇರೆಡೆಗೆ ಗಮನ ಸೆಳೆಯುವ ತಂತ್ರಗಳ ಮೇಲೆಯೇ ವಿಜೃಂಭಿಸಿದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ನಿಜವಾದ ಆಡಳಿತ ಎಂದರೇನು ಎಂದು ಇಡೀ ದೇಶಕ್ಕೇ ನಿರೂಪಿಸುತ್ತಿದೆ.
• ಜನರಿಗೆ ಪ್ರಶಂಸನೀಯ ನೀಡುವ ಮಾದರಿಯೊಂದನ್ನು ನಾವು ರೂಪಿಸಿದ್ದೇವೆ. ತಲೆಬರಹಗಳಲ್ಲ, ದ್ವೇಷವಲ್ಲ- ಆದರೆ ಮನೆಗಳ ನಿರ್ಮಾಣ, ಆರೋಗ್ಯ, ಹಸಿವು ಮುಕ್ತ ಮತ್ತು ಆಶಾದಾಯಕ ರಾಜ್ಯನ್ನು ನಿರ್ಮಿಸಿದ್ದೇವೆ.
• ನಮ್ಮ ಗ್ಯಾರಂಟಿಗಳ ಮೂಲಕ, ನಾವು ಬದುಕುಗಳನ್ನು ಪರಿವರ್ತಿಸುತ್ತಿದ್ದೇವೆ. _ ತಾತ್ವಿಕವಾಗಿಯೋ, ಕಾಗದದ ಮೇಲೆಯೋ ಅಲ್ಲ, ಆದರೆ ಕೋಟ್ಯಾಂತರ ಕುಟುಂಬಗಳ ಹೃದಯಗಳಲ್ಲಿ ಬದಲಾವಣೆಯನ್ನು ತಂದಿದ್ದೇವೆ.
• ಗೃಹಜ್ಯೋತಿ ಯೋಜನೆಯು 1.64 ಕೋಟಿ ಮನೆಗಳನ್ನು ಬೆಳಗುತ್ತಿದ್ದು, ಮಾಸಿಕ ಹೊರೆಯನ್ನು ತಗ್ಗಿಸಿದೆ. ಅನ್ನ ಭಾಗ್ಯ ಯೋಜನೆಯು 4.39 ಕೋಟಿ ಜನರಿಗೆ ಆಹಾರ ಒದಗಿಸುತ್ತಿದೆ. ಶಕ್ತಿ ಯೋಜನೆಯು ಮಹಿಳೆಯರಿಗೆ ಸಂಚರಿಸಲು, ಕೆಲಸಕ್ಕೆ ಹೋಗಲು ಮತ್ತು ಘನತೆಯ ಬದುಕನ್ನು ಜೀವಿಸಲು ಅನುವು ಮಾಡಿಕೊಟ್ಟಿದೆ. ಈವರೆಗೆ 430 ಕೋಟಿ ಉಚಿತ ಪ್ರಯಾಣಗಳನ್ನು ಮಾಡಿದ್ದಾರೆ.
• ಯುವನಿಧಿ ಯೋಜನೆಯು ನಮ್ಮ ನಿರುದ್ಯೋಗಿ ಯುವಕg ಪರವಾಗಿದ್ದು, ಅವರನ್ನು ಕಡೆಗಣಿಸಲಾಗಿಲ್ಲ. ಗೃಹಲಕ್ಷ್ಮಿಯ ಯೋಜನೆಯು ಪ್ರತಿ ಮಾಹೆ 2000 ರೂ.ಗಳನ್ನು ಒದಗಿಸುವ ಮೂಲಕ 1.25 ಕೋಟಿ ಮಹಿಳೆಯರನ್ನು ಸಬಲರನ್ನಾಗಿಸಿದೆ.
• ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಇದನ್ನು ಗಮನಿಸಲಾಗಿದೆ. ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ ಅಧ್ಯಕ್ಷರಾದ ಫಿಲೇಮಾನ್ ಯಾಂಗ್ ಕರ್ನಾಟಕದ ಐದು ಗ್ಯಾರಂಟಿ ಯೋಜನೆಗಳನ್ನು ಶ್ಲಾಘಿಸಿದ್ದು, ವಿಶೇಷವಾಗಿ ಮಹಿಳೆಯರ ಬದುಕಿನಲ್ಲಿ ಅವುಗಳ ಪರಿವರ್ತನಾತ್ಮಕ ಪರಿಣಾಮವನ್ನು ಮೆಚ್ಚಿದ್ದಾರೆ. ಇದು ಕೇವಲ ಆಡಳಿವಲ್ಲ, ಒಳಗೊಳ್ಳುವ ಕಲ್ಯಾಣದಲ್ಲಿ ಜಾಗತಿಕ ನಾಯಕತ್ವ.
• ಇದು ನಿಜವಾದ ಸಬಲೀಕರಣ. ಸಂವಿಧಾನದ ಆಶಯಗಳಾದ ಜಾತ್ಯಾತೀತ, ಸಮಾಜವಾದಿ, ಕಲ್ಯಾಣ ಪ್ರಜಾಪ್ರಭುತ್ವವಿದು.
• ನಾವು ಗ್ಯಾರಂಟಿಗಳನ್ನು ಮಾತ್ರ ನೀಡಿಲ್ಲ. ಶಿಕ್ಷಣ, ಆರೋಗ್ಯ, ನೀರಾವರಿ, ಗ್ರಾಮೀಣ ಉದ್ಯೋಗ ಮತ್ತು ಕೈಗಾರಿಕೆಗಳ ಮೇಲೂ ಹೂಡಿಕೆ ಮಾಡಿದ್ದೇವೆ. ತನ್ಮೂಲಕ ಯಾವುದೇ ಮಗುವೂ ಹಿಂದುಳಿದಿಲ್ಲ ಮತ್ತು ಯಾವುದೇ ಗ್ರಾಮವೂ ಕಣ್ಮರೆಯಾಗಿಲ್ಲ ಎನ್ನುವುದನ್ನು ಖಾತ್ರಿಪಡಿಸುತ್ತದೆ.
• ಜವಾಬ್ದಾರಿಯುತ, ಸುಸ್ಥಿರ ಬೆಳವಣಿಗೆಯನ್ನು ಆದ್ಯತೆಯಾಗಿಸಿರುವ ಕರ್ನಾಟಕ, ತನ್ಮೂಲಕ ಹಸಿರು ಆರ್ಥಿಕತೆ, ಪರಿಸರ ಸ್ನೇಹಿ ಕೈಗಾರಿಕಾ ಕ್ಲಸ್ಟರ್ಗಳು ಮತ್ತು ಸುಸ್ಥಿರ ನಗರ ಅಭಿವೃದ್ಧಿಯತ್ತ ಹೆಜ್ಜೆಯಿಟ್ಟಿದೆ. ಭಾರತದ ಅತಿ ಹೆಚ್ಚು ಸೌರಶಕ್ತಿ ಉತ್ಪಾದಿಸುವ ರಾಜ್ಯವಾಗಿದೆಯಲ್ಲದೇ ಪವನಶಕ್ತಿ, ಎಲೆಕ್ಟಿçಕ್ ಸಂಚಾರ ಮತ್ತು ಸುಸ್ಥಿರ ನಗರ ಅಭಿವೃದ್ಧಿಯಲ್ಲಿಯೂ ಮುಂಚೂಣಿಯಲ್ಲಿದೆ.
• ತ್ಯಾಜ್ಯನೀರನ್ನು ಅಂತರ್ಜಲ ಮತ್ತು ನೀರಾವರಿಯನ್ನು ಬೆಂಬಲಿಸಲು ಮರುಬಳಕೆ ಮಾಡುವಲ್ಲಿಯೂ ಕರ್ನಾಟಕ ಮುಂಚೂಣಿಯಲ್ಲಿದ್ದು, ಕೃಷಿಯನ್ನು ಬಲಪಡಿಸಲು ಮತ್ತು ನಮ್ಮ ಭವಿಷ್ಯವನ್ನು ಭದ್ರಪಡಿಸಲು ನಾವೀನ್ಯತೆ ಮತ್ತು ಸುಸ್ಥಿರತೆ ಹೇಗೆ ಒಟ್ಟಾಗಿ ಕಾರ್ಯನಿರ್ವಹಿಸಬಹುದು ಎಂದು ನಿರೂಪಿಸಿದೆ.
• ದೇಶದಲ್ಲಿಯೇ ವಸತಿಶಾಲೆಗಳಲ್ಲಿ ಕಲಿಯುತ್ತಿರುವ ಅತಿ ಹೆಚ್ಚು ಮಕ್ಕಳನ್ನು ಹೊಂದಿರುವ ರಾಜ್ಯ ಕರ್ನಾಟಕ. ಈ ಮೂಲಕ ಗುಣಮಟ್ಟದ ಶಿಕ್ಷಣ ಮತ್ತು ಆರೈಕೆಯು ಅತ್ಯಂತ ಹಿಂದುಳಿದ ಹಾಗೂ ಅಂಚಿನಲ್ಲಿರುವ ಸಮುದಾಯಗಳನ್ನು ತಲುಪುವುದನ್ನು ಖಾತ್ರಿಪಡಿಸಲಾಗುತ್ತಿದೆ.
• ಮಹಿಳೆಯರನ್ನು ಸಬಲರನ್ನಾಗಿಸಿದಾಗ, ಸಮಾಜವನ್ನು ಪರಿವರ್ತಿಸಬಹುದು. ಆದ್ದರಿಂದ ಇಡೀ ದೇಶದಲ್ಲಿಯೇ ಅತಿ ಹೆಚ್ಚಿನ ಅನುದಾನವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ನಾವು ಮೀಸಲಿರಿಸಿದ್ದೇವೆ.
• ಶಿಕ್ಷಣಕ್ಕಾಗಿ 65,000ಕ್ಕೂ ಹೆಚ್ಚು ಕೋಟಿಗಳನ್ನು, ಅಂದರೆ ಆಯವ್ಯಯದ ಶೇ 15% ರಷ್ಟನ್ನು ಮೀಸಲಿರಿಸುವ ಮೂಲಕ ನಾವು ಶಾಲೆಗಳಲ್ಲಿ ಮಾತ್ರ ಹೂಡಿಕೆ ಮಾಡುತ್ತಿಲ್ಲ, ಪ್ರತಿ ಮಗುವಿನ ಭವಿಷ್ಯದ ಮೇಲೆ ಹೂಡಿಕೆ ಮಾಡುತ್ತಿದ್ದೇವೆ.
• ಬಂಡವಾಳ ಮೂಲಸೌಕರ್ಯಕ್ಕಾಗಿ 72 ಕೋಟಿ ರೂ.ಗಳಿಗೂ ಹೆಚ್ಚು ಅನುದಾನವನ್ನು ಮೀಸಲಿರಿಸಿ ರಸ್ತೆ, ಸೇತುವೆ, ಆರೋಗ್ಯ ಸೌಲಭ್ಯಗಳು ಮತ್ತು ಸಂಪರ್ಕಗಳನ್ನು ಕಟ್ಟುತ್ತಿದ್ದೇವೆ. ಇವು ಕೇವಲ ರಚನೆಗಳಲ್ಲ, ಒಳಗೊಳ್ಳುವ ಬೆಳವಣಿಗೆಯ ಬುನಾದಿಯಾಗಿದೆ.
ಕರ್ನಾಟಕ ರಾಜ್ಯವು ಇಂದು ನಕ್ಸಲ್ ಚಟುವಟಿಕೆಗಳಿಂದ ಮುಕ್ತವಾಗಿದೆ ಎಂದರೆ ಅದಕ್ಕೆ ಕಾರಣ ಪ್ರಬಲ ಕಾನೂನು ಸುವ್ಯವಸ್ಥೆ ಒಂದೇ ಕಾರಣವಲ್ಲ. ಸೂಕ್ತ ವಾತಾವರಣ ಕಲ್ಪಿಸಿ ಅವರನ್ನು ಮುಖ್ಯ ವಾಹಿನಿಗೆ ತರುವ ಸೂಕ್ತ ನ್ಯಾಯ ಕಲ್ಪಿಸುವ ಸರ್ಕಾರದ ಪ್ರಯತ್ನಗಳು ಸೇರಿವೆ.
ಇಂದಿರಾ ಕ್ಯಾಂಟೀನ್ ಗಳ ಮೂಲಕ ಹಸಿವು ನೀಗುವ ಯತ್ನವನ್ನು ಮಾಡಿದ್ದೇವೆ. ಸಮಾಜದ ಕಟ್ಟಕಡೆಯ ಮನುಷ್ಯನೂ ಹಸಿವೆಯಿಂದಿರದೆ ಹೊಟ್ಟೆ ತುಂಬ ಊಟ ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ.
ಸಮರ್ಥ ಆಡಳಿತದೊಂದಿಗೆ ಸ್ಪಂದನಶೀಲ ಆಡಳಿತವೂ ನಮ್ಮದಾಗಿದೆ. ವೋಟ್ ಬ್ಯಾಂಕ್ ರಾಜಕಾರಣವನ್ನು ಬದಿಗಿಟ್ಟು ಸಮಾಜದಲ್ಲಿನ ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ಮಹಿಳೆಯರು, ಯುವ ಜನತೆ, ರೈತರು, ಕಾರ್ಮಿಕರು ಹೀಗೆ ಸಮಾಜದ ಎಲ್ಲಾ ವರ್ಗಗಳಿಗೂ ನ್ಯಾಯ ಒದಗಿಸುವ ದಿಸೆಯಲ್ಲಿ ಸ್ಪಂದಿಸುತ್ತಿದೆ.
ಇದು ಕರ್ನಾಟಕದ ಮಾದರಿ- ಬಿಜೆಪಿಯ ದ್ವೇಷಪೂರಿತ, ಗಗನಮುಖಿ ಬೆಲೆಗಳ, ಪೊಳ್ಳು ಆಶ್ವಾಸನೆಗಳ ರಾಜಕೀಯದಾಟಕ್ಕೆ ಕರ್ನಾಟಕದ ಶಕ್ತಿಯುತ ಪ್ರತಿರೋಧವಾಗಿದೆ.
ಪ್ರಗತಿ ಮತ್ತು ಧ್ರುವೀಕರಣ ಎಂದು ಬಂದಾಗ ಜನರ ಆಯ್ಕೆ ಮಾಡುವುದು ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯ ಪ್ರಗತಿಯ ಹಾದಿಯನ್ನೇ ಎಂಬುದು ಇದರಿಂದ ಸಾಬೀತಾಗುತ್ತದೆ. ರಾಷ್ಟ್ರ ಪುನರ್ ನಿರ್ಮಾಣ ಕಾರ್ಯಕ್ಕೆ ಕರ್ನಾಟಕವು ಹೆಮ್ಮೆಯ ಹೆದ್ದಾರಿಯಾಗಿ ಸದಾ ಮುಂಚೂಣಿಯಲ್ಲಿರುತ್ತದೆ.
ಪಕ್ಷವನ್ನು ಸಾಂಸ್ಥಿಕವಾಗಿ ಬಲಪಡಿಸುವತ್ತ ನಮ್ಮ ಈ ಪಯಣದ ಹಾದಿಯಲ್ಲಿ ನಾವು ನಡೆಯುತ್ತಿರುವ ಹಾದಿಯನ್ನು ಬಲಪಡಿಸುತ್ತಿರುವುದೇ ಮಹಾಜನತೆಯ ಬೆಂಬಲ, ಪ್ರೋತ್ಸಾಹ ಹಾಗೂ ಕಾಂಗ್ರೆಸ್ ಪಕ್ಷವನ್ನು ಮನೆ ಮನಗಳಿಗೆ ಮುಟ್ಟಿಸುತ್ತಿರುವ ನಮ್ಮ ಕಾರ್ಯಕರ್ತರ ಶ್ರಮ.
ರಾಷ್ಟ್ರದ ಜನತೆಯ ಆಶೋತ್ತರಗಳನ್ನು ಗಮನದಲ್ಲಿರಿಸಿಕೊಂಡು ನಾವು ಇನ್ನಷ್ಟು ಕ್ಷಿಪ್ರವಾಗಿ, ಚುರುಕಾಗಿ, ಸಮಾಜದ ಎಲ್ಲಾ ಸ್ತರದ ಮಹಾಜನತೆಯ ಭಾವನೆಗಳಿಗೆ ಸ್ಪಂದಿಸುವ ಅಗತ್ಯವಿದೆ, ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನನ್ನು ಪ್ರೋತಾಹಿಸುತ್ತ ಸ್ಥಳೀಯ ನಾಯಕತ್ವದ ಬೆಂಬಲದೊಂದಿಗೆ ಬ್ಲಾಕ್ ಹಾಗೂ ಬೂತ್ ಮಟ್ಟಗಳನ್ನು ಸಬಲಗೊಳಿಸಬೇಕಿದೆ.
ಇದಕ್ಕಾಗಿ ತರಬೇತಿ, ಡಿಜಿಟೀಲೀಕರಣ, ಸಮುದಾಯದ ಸಹಭಾಗಿತ್ವದೊಂದಿಗೆ ನಾವು ಮುನ್ನಡೆಯಬೇಕಿದೆ. ಇದರಿಂದಾಗಿ ಕೇವಲ ರಾಜಕೀಯವಾಗಿಯೇ ಅಲ್ಲ, ಸಾಮಾಜಿಕವಾಗಿಯೂ ಪ್ರಗತಿ ಕಾಣಬಹುದು ಹಿರಿಯರ ಅನುಭವದೊಂದಿಗೆ, ಯುವಜನತೆಯ ಶಕ್ತಿ ಮತ್ತು ಮಹಿಳೆಯರ ದೃಷ್ಟಿಕೋನ ಎಲ್ಲವನ್ನೂ ಪರಿಗಣಿಸಿ ಮುಂದೆ ಸಾಗಬೇಕಿದೆ.
ನಮ್ಮ ಪ್ರಯತ್ನ ಕಾಂಗ್ರೆಸ್ ಪಕ್ಷವನ್ನು ಸಬಲಗೊಳಿಸುವುದು, ಚುನಾವಣೆಗೆ ಸನ್ನದ್ಧುಗಳಿಸುವುದು ಮಾತ್ರವಲ್ಲ. ಆದರೆ ಸ್ಥಿರವಾಗಿ ಮತ್ತು ಸಮರ್ಥವಾಗಿ ಸದಾಕಾಲ ಮಹಾಜನತೆಯ ಆಶೋತ್ತರಗಳಿಗೆ ಸ್ಪಂದನ ಶೀಲವಾಗಿ ಇರುವುದು.
ಪಕ್ಷವನ್ನು ಸಿದ್ಧಾಂತ ದೊಂದಿಗೆ, ತಂತ್ರಜ್ಞಾನ ದೊಂದಿಗೆ , ಸಾಂಪ್ರದಾಯಿಕತೆಯೊಂದಿಗೆ ಬೆಸೆಯುತ್ತಾ ನಾವೀನ್ಯತೆಯ, ಆಧುನಿಕ ಪಕ್ಷ ನಿರ್ಮಾಣಕ್ಕೆ ಅಂಕಿತ ಹಾಕಬೇಕಿದೆ.
ವರತಮಾನದ ಸವಾಲುಗಳಿಗೆ ಸ್ಪಂದಿಸುವುದಷ್ಟೇ ಅಲ್ಲದೇ ಭವಿತವ್ಯದ ಸಾಧನೆಗಳನ್ನು ಸಜ್ಜುಗೊಳಿಸಬೇಕಿದೆ.
ಉಪ ಸಂಹಾರ ರಾಷ್ಟ್ರ ನಿರ್ಮಾಣ ಹಾಗು ಪಕ್ಷದ ಸುದೀರ್ಘ ಪಯಣದಲ್ಲಿ ಇದೊಂದು ನಿರ್ಣಾಯಕ ಘಟ್ಟವಾಗಿದೆ. ಮಹಾತ್ಮನುದಿಸಿದ ಈ ನೆಲದಲ್ಲಿ ನಾವೆಲ್ಲರೂ ನಿಂತಿದ್ದೇವೆ. ಇಲ್ಲಿ ಇಂದು ನಾವೆಲ್ಲರೂ ನಿಂತಿರುವುದು ಭೂತಕಾಲವನ್ನು ನೆನಪಿಸಿಕೊಳ್ಳಲು ಮಾತ್ರವಲ್ಲ, ಭವಿಷ್ಯವನ್ನು ಪುನರ್ ಸ್ಥಾಪಿಸಲು . ದನಿಯಿಲ್ಲದವರ ಪರ ದನಿಯಾಗಲು. ದ್ವೇಷ, ಅನ್ಯಾಯ, ಅಕ್ರಮ, ಸರ್ವಾಧಿಕಾರಿ ಧೋರಣೆಗಳ ವಿರುದ್ಧ ದೃಢ ನಿಲುವು ತಾಳಲು ಮತ್ತು ಭಾರತವನ್ನು ಮತ್ತೊಮ್ಮೆ ಶಾಂತಿ, ಪ್ರಗತಿ ಹಾಗೂ ಸಹಬಾಳ್ವೆ, ಬಹುತ್ವಗಳ ಹಾದಿಯಲ್ಲಿ ಮುನ್ನಡೆಸಲು.
ಸ್ವಾತಂತ್ರ್ಯದ ಕಿಚ್ಚನ್ನು ಮುಂದೆ ಒಯ್ಯೋಣ, ಸೇವೆಯ ಸ್ಫೂರ್ತಿಯನ್ನು ಬೆಳಕಾಗಿಸೋಣ, ಒಗ್ಗಟ್ಟಿನ ಸಬಲತೆಯಲ್ಲಿ ಮುನ್ನುಗ್ಗೋಣ. ಕಾಂಗ್ರಸ್ ಪಕ್ಷವು ಆಡಳಿತ ನಡೆಸಲು ಸಿದ್ಧವಾಗಿದೆ, ರೂಪಾತರಗೊಳ್ಳಲು ಸಿದ್ಧವಾಗಿದೆ, ಒಗ್ಗಟ್ಟಾಗಲು ಸಿದ್ಧವಾಗಿದೆ ಎಂಬುದನ್ನು ರಾಷ್ಟ್ರಕ್ಕೆ ತೋರಿಸೋಣ.
ನಮ್ಮ ಹೋರಾಟ ಒಂದು ಪಕ್ಷದ ವಿರುದ್ಧ ಮಾತ್ರವಲ್ಲ. ಅದು ಸರವಾಧೀಕಾರದ ಹೆಸರಲ್ಲಿ ದೇಶವನ್ನು ವಿಭಜಿಸುವ, ವಿನಾಶಕ್ಕೆ ಕೊಂಡೊಯ್ಯುವ ಮನಸ್ಥಿತಿಯ ವಿರುದ್ಧ ಎಂಬುದನ್ನು ಮನಗಾಣಬೇಕಿದೆ. ಮತ್ತು ಇದಕ್ಕೆ ತಕ್ಕ ಉತ್ತರ ಕರುಣೆ, ಧೈರ್ಯ ಮತ್ತು ಸಮರ್ಪಣೆ ಮನೋಭಾವದಿಂದ ನಾವು ಮುನ್ನಡೆಯುವುದು.
ನಾವೆಲ್ಲರೂ ಒಟ್ಟಾಗಿ ಆರ್ಥಿಕವಾಗಿ ಸದೃಢವಾದ ಭಾರತವನ್ನು ಮಾತ್ರವಲ್ಲ ಸಾಮಾಜಿಕವಾಗಿ, ತಾತ್ವಿಕವಾಗಿ, ಸಾಂವಿಧಾನಿಕವಾಗಿ ಸದೃಢವಾದ ಋಾಷ್ಟ್ರ ನಿರ್ಮಾಣ ಮಾಡಬೇಕಿದೆ.
ನಾನು ಸದಾ ಹೇಳುತ್ತಿರುತ್ತೇನೆ ನಾವು ಇಲ್ಲಿ ಇರುವುದಉ ಅಧಿಕಾರಕ್ಕೋಸ್ಕರ ಅಲ್ಲ. ಒಂದು ಸದುದ್ದೇಶಕೋಸ್ಕರ ಮತ್ತು ಆ ಉದ್ದೇಶ ಪ್ರತಿಯೊಬ್ಬ ಭಾರತೀಯನಿಗಾಗಿ ಈ ಗಣರಾಜ್ಯವನ್ನು ಪುನನಿರ್ಮಿಸುವುದು.
ಕಾಂಗ್ರೆಸ್ ನ ಗೌರವಾನ್ವಿತ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರೇ, ನೆಚ್ಚಿನ ನಾಯಕರಾದ ಸೋನಿಯಾ ಗಾಂಧೀಜೀಯವರೇ, ರಾಹುಲ್ ಗಾಂಧೀಜಿಯವರೇ, ಪ್ರಿಯಾಂಕ ಗಾಂಧೀಜೀಯವರೇ, ಕಾಂಗ್ರೆಸ್ ನ ಕಾರ್ಯಕಾರಿ ಸಮಿತಿಯ ಹಿರಿಯ ಸದಸ್ಯರು ಉಪಸ್ಥಿತರಿದ್ದರು.