ಬೆಂಗಳೂರು: ಬಿಬಿಎಂಪಿಯ “ಮುಖ್ಯ ಆಯುಕ್ತರ ನಡೆ ವಲಯದ ಕಡೆ” ಕಾರ್ಯಕ್ರಮದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾತನಾಡಿದ ಆಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ” ನಗರದಲ್ಲಿ ಕಸ ನಿರ್ವಹಣೆಯ ಹೆಸರಿನಲ್ಲಿ ಪ್ರತಿಯೊಂದು ವಾರ್ಡ್ ಗಳಲ್ಲಿ ನಿಗದಿಯಾಗಿರುವ ಸಂಖ್ಯೆಯಲ್ಲಿ ಪೌರಕಾರ್ಮಿಕರುಗಳು, ಆಟೋ ಟಿಪ್ಪರ್ ಮತ್ತು ಕಾಂಪ್ಯಾಕ್ಟರ್ ಗಳು ಕಾರ್ಯನಿರ್ವಹಿಸುತ್ತಿಲ್ಲ. ಗುತ್ತಿಗೆದಾರರು ಇವುಗಳ ಹೆಸರಿನಲ್ಲಿ ನಡೆಸುತ್ತಿರುವ ಕೋಟ್ಯಾಂತರ ಬಿಲ್ ಲೂಟಿಯನ್ನು ತಡೆಗಟ್ಟಿದಲ್ಲಿ ಮಾತ್ರ ಬೆಂಗಳೂರು ನಗರವನ್ನು ಕಸಮುಕ್ತವನ್ನಾಗಿಸಬಹುದು. ಮುಖ್ಯ ಆಯುಕ್ತರು ಪ್ರಮುಖವಾಗಿ ಪ್ರತಿಯೊಂದು ವಾರ್ಡ್ ಗಳಲ್ಲಿ ಇವುಗಳ ಹೆಸರಿನಲ್ಲಿ ನಡೆಸುತ್ತಿರುವ ಲೂಟಿಯನ್ನು ತಡೆಗಟ್ಟಬೇಕು. ಅನವಶ್ಯಕವಾಗಿ ತೆರಿಗೆದಾರರ ಹಣ ಅಕ್ರಮವಾಗಿ ನಗರದ ಶಾಸಕರುಗಳು, ಅಧಿಕಾರಿಗಳು ಹಾಗೂ ಗುತ್ತಿಗೆದಾರರುಗಳ ಜೇಬಿಗೆ ಸೇರುತ್ತಿದೆ. ಅದನ್ನು ಬಿಟ್ಟು ಹೆಚ್ಚುವರಿ ಯಾಗಿ ಮತ್ತಷ್ಟು ವಾಹನಗಳನ್ನು ಪಡೆದುಕೊಂಡಲ್ಲಿ ಮತ್ತಷ್ಟು ಲೂಟಿ ಹೆಚ್ಚಾಗುತ್ತದೆಯೇ ಹೊರತು ಬೇರೇನೂ ಆಗುವುದಿಲ್ಲ ”
“ಆಯುಕ್ತರು ತಮ್ಮ ವಿಚಕ್ಷಣ ದಳವನ್ನು ಉಪಯೋಗಿಸಿಕೊಂಡು ಇವುಗಳ ಬಗ್ಗೆ ರಹಸ್ಯ ತನಿಖೆ ನಡೆಸಿ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಂಡಲ್ಲಿ ತೆರಿಗೆದಾರರುಗಳ ನೂರಾರು ಕೋಟಿ ಹಣ ಲೂಟಿ ಆಗುವುದು ನಿಲ್ಲುತ್ತದೆ. ಬೆಂಗಳೂರು ಸಹ ಕಸಮುಕ್ತವಾಗುತ್ತದೆ. ಪ್ರತಿ ದಿವಸ ಪೌರಕಾರ್ಮಿಕರು ಹಾಗೂ ವಾಹನಗಳ ಹಾಜರಾತಿಯನ್ನು ಖಾತ್ರಿಪಡಿಸಿಕೊಳ್ಳಲು ಸ್ಥಳೀಯ ನಾಗರಿಕರುಗಳ ಸಮಿತಿಯನ್ನು ರಚಿಸಿ ಇವುಗಳಿಗೆ ದೆಹಲಿ ರಾಜ್ಯದ ಮಾದರಿಯಲ್ಲಿ ಸಾಂವಿಧಾನಿಕ ಹಕ್ಕನ್ನು ನೀಡಬೇಕು”.
ಅದನ್ನು ಬಿಟ್ಟು ಒಂದೆರಡು ಕಿಲೋಮೀಟರ್ ಪಾದಯಾತ್ರೆ ನಡೆಸುವುದು ಕೇವಲ ಪ್ರದರ್ಶನ ಹಾಗೂ ಜನತೆಯ ಕಣ್ಣೊರೆಸುವ ತಂತ್ರವೇ ಹೊರತು ಬೇರೇನೂ ಅಲ್ಲ. ಇಂತಹ ಕ್ರಮಗಳ ಮೂಲಕ ನಗರದಲ್ಲಿ ಅನೇಕ ವರ್ಷಗಳಿಂದ ಬೇರು ಬಿಟ್ಟಿರುವ ಕಸದ ಮಾಫಿಯಾವನ್ನು ತಡೆಗಟ್ಟದಿದ್ದಲ್ಲಿ ಯಾವುದೇ ಕಾರಣಕ್ಕೂ ಬೆಂಗಳೂರು ನಗರವನ್ನು ಕಸಮುಕ್ತ ಮಾಡಲು ಸಾಧ್ಯವಿಲ್ಲ. ಬೇಕಾಬಿಟ್ಟಿಯಾಗಿ ಜನತೆಯ ಹಣ ಅನ್ಯರ ಪಾಲಾಗುತ್ತಿರುವುದನ್ನು ತಡೆಗಟ್ಟುವ ದಿಶೆಯಲ್ಲಿ ಸರ್ಕಾರವು ಕೂಡಲೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಜಗದೀಶ್ ವಿ.ಸದಂ ಆಗ್ರಹಿಸಿದರು.
ವಂದನೆಗಳೊಂದಿಗೆ,
ಜಗದೀಶ್ ವಿ. ಸದಂ
ರಾಜ್ಯ ಮಾಧ್ಯಮ ಸಂಚಾಲಕರು ಸಂಪರ್ಕ : 9591199556
9380029038