ಬೆಂಗಳೂರು: ಪ್ರೆಸ್ ಕ್ಲಬ್ ಗುಂಜೂರು ಖೋ-ಖೋ ಕ್ಲಬ್ ವತಿಯಿಂದ ಗುಂಜೂರು ವಾಜಪೇಯಿ ಕ್ರೀಡಾಂಗಣದಲ್ಲಿ 44ನೇ ರಾಷ್ಟ್ರಮಟ್ಟದ ಜೂನಿಯರ್ ಖೋ-ಖೋ ಚಾಂಪಿಯನ್ ಶಿಪ್ ಅನ್ನು ಡಿ. 31ರಿಂದ ಜ.4ರ ವರೆಗೆ ಪಂದ್ಯಾವಳಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಲೋಕೇಶ್ವರ್ ಅವರು ತಿಳಿಸಿದರು.
ನಂತರ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಖೋ-ಖೋ ಅಂತರಾಷ್ಟ್ರೀಯ ಕ್ರೀಡೆಯಾಗಿದೆ. ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿಯೂ ಸೇರ್ಪಡೆಯಾಗಿದೆ. ಪ್ರಧಾನ ಮಂತ್ರಿ ನರೇಂದ್ರಮೋದಿರವರು ಖೋ-ಖೋ ಕ್ರೀಡೆಯನ್ನು ಮುಂದಿನ ಓಲಂಪಿಕ್ ಗೇಮ್ಸ್ ನಲ್ಲಿ ಖೋ-ಖೋ ಸೇರಿಸಲಾಗುತ್ತಿದೆ ಎಂದರು. ಗುಂಜೂರ್ ವಾಜಪೇಯಿ ಕ್ರೀಡಾಂಗಣದಲ್ಲಿ ಹೊನಲು-ಬೆಳಕಿನಲ್ಲಿ ಖೋ-ಖೋ ಪಂದ್ಯಾವಳಿ ನಡೆಯಲಿದ್ದು, ನಾಲ್ಕು ಕೋರ್ಟ್ ಗಳಲ್ಲಿ ಆಟ ನಡೆಯಲಿದೆ. ಇದರಲ್ಲಿ ಎರಡು ಮ್ಯಾಟ್ ಕೋರ್ಟ್ ಗಳಿವೆ, ದೇಶದ 32 ರಾಜ್ಯಗಳ ತಂಡಗಳು ಆಟದಲ್ಲಿ ಭಾಗವಹಿಸಲಿದ್ದಾರೆ.
ಖೋ-ಖೋ ಕ್ರೀಡೆ ದೈಹಿಕವಾಗಿ, ಬುದ್ದಿಕೌಶಲ್ಯ ಕ್ರೀಡೆಯಾಗಿದೆ. ಮಾನಸಿಕ ಮತ್ತು ದೈಹಿಕವಾಗಿ ಸಧೃಡವಾಗಿ ಇರಬೇಕು, ಖೋ-ಖೋ ಕ್ರೀಡೆಯನ್ನು ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಕಲಿಯುವ ಮೂಲಕ ಆರೋಗ್ಯ,ಬೆಳೆಸಬೇಕು, ಈ ನಿಟ್ಟಿನಲ್ಲಿ ಪ್ರೋತ್ಸಾಹ ಸಹಕಾರ ನೀಡುತ್ತಿದ್ದೇವೆ ಎಂದು ಹೇಳಿದರು. ಕ್ರೀಡೆಯಲ್ಲಿ ಗೆದ್ದವರಿಗೆ ಟ್ರೋಫಿ ನೀಡಲಾಗುತ್ತದೆ. ಆಟಗಾರರಿಗೆ ಊಟದ ವ್ಯವಸ್ಥೆಯನ್ನು ಸಹಾ ಮಾಡಲಾಗುದೆ ಎಂದರು.
ಜಿ.ಟಿ.ನಾಗೇಶ್ ರವರು ಮಾತನಾಡಿ, ಗುಂಜೂರ್ ಖೋ-ಖೋ ಆಟ ಸಾಕಷ್ಟು ಹೆಸರು ಪಡೆದುಕೊಂಡಿದೆ. ನಮ್ಮ ಕ್ಲಬ್ ನಿಂದ ಸಾಕಷ್ಟು ಕ್ರೀಡಾಪಟುಗಳು ಅಂತರಾಷ್ಟ್ರೀಯ ಮಟ್ಟದ ಆಟಗಾರರಾಗಿದ್ದಾರೆ.
ಖೋ-ಖೋ ಪಂದ್ಯಾವಳಿಯನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಮತ್ತು ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಉದ್ಘಾಟನೆ ಮಾಡಲಿದ್ದಾರೆ. ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ, ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ, ಸಂಸದ ಪಿ.ಸಿ.ಮೋಹನ್ ಗಣ್ಯ ಮಹನೀಯರುಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಖೋ-ಖೋ ಸಂಸ್ಥೆ ಅಧ್ಯಕ್ಷರಾದ ಲೋಕೇಶ್ವರ್ ರವರು ಮತ್ತು ಗುಂಜೂರು ಖೋ-ಖೋ ಕ್ಲಬ್ ಅಧ್ಯಕ್ಷರಾದ ಜಿ.ಟಿ.ನಾಗೇಶ್ ರವರು , ಮತ್ತು ರಾಜ್ಯ ಖೋ-ಖೋ ಸಂಸ್ಥೆಯ ಪದಾಧಿಕಾರಿಗಳಾದ ಜಯರಾಮ್, ವೆಂಕಟೇಶ್, ಜಿ.ಟಿ.ಚಂದ್ರಪ್ಪ, ಜಗದೀಶ್ ,ಬಸವರಾಜ್ ರವರು ಮಾಧ್ಯಮಗೋಷ್ಟಿಯಲ್ಲಿ ಭಾಗವಹಿಸಿದ್ದರು.