LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅಬ್ಬಾಟ್ಟ್ ನಿಂದ ಭಾರತದಲ್ಲಿ ಆರೋಗ್ಯಕರ ವಯಸ್ಸಾಗುವಿಕೆಗೆ ಎನ್ಷೂರ್® ಸ್ಟ್ರೆಂಥ್ ಪ್ರೊ ಬಿಡುಗಡೆ

ಎನ್ಷೂರ್® ಸ್ಟ್ರೆಂಥ್ ಪ್ರೊ ಆರೋಗ್ಯದ ಪ್ರಮುಖ ವಲಯಗಳಿಗೆ ಬೆಂಬಲಿಸಲು ಪ್ರಮುಖ ಪೋಷಕಾಂಶಗಳನ್ನು ಹೊಂದಿದೆ  •    30 ಗ್ರಾಂಗಳ ಪ್ರೊಟೀನ್  ಒಳಗೊಂಡು ಉನ್ನತ ಗುಣಮಟ್ಟದ 31 ಪೋಷಕಾಂಶಗಳನ್ನು ಹೊಂದಿದ್ದು ಅದು ಪ್ರತಿನಿತ್ಯದ ಸ್ವಾಸ್ಥ್ಯಕ್ಕೆ ಪೌಷ್ಠಿಕತೆಯ ಅಸಮರ್ಪಕತೆಗಳನ್ನು ನಿವಾರಿಸಲು ನೆರವಾಗುತ್ತದೆ .

ಮುಂಬೈ: ಜಾಗತಿಕ ಆರೋಗ್ಯಸೇವಾ ಕಂಪನಿ ಅಬ್ಬಾಟ್ಟ್  ಎನ್ಷೂರ್® ಸ್ಟ್ರೆಂಥ್ ಪ್ರೊ ಇದನ್ನು ವಿಶೇಷವಾಗಿ ಶಕ್ತಿ ಮತ್ತು ಒಟ್ಟಾರೆ ಸ್ವಾಸ್ಥ್ಯಕ್ಕೆ ಬೆಂಬಲಿಸುವ ಪೋಷಕಾಂಶಗಳ ಸಂಯೋಜನೆಯಾಗಿ ವೈಜ್ಞಾನಿಕವಾಗಿ ವಿನ್ಯಾಸಗೊಳಿಸಲಾಗಿದ್ದು ದೇಹದ ಸ್ನಾಯುಗಳು, ಮೂಳೆಗಳು,ಹೃದಯ, ರಕ್ತದ ಕಣಗಳು, ಪ್ರತಿರಕ್ಷಣಾ ವ್ಯವಸ್ಥೆ, ಚಯಾಪಚಯ ಮತ್ತು ನರ ವ್ಯವಸ್ಥೆ ಒಳಗೊಂಡು ದೇಹದ ಏಳು ಆಯಾಮಗಳ ಪೋಷಣೆಗೆ ನೆರವಾಗುತ್ತದೆ. 

ವೃದ್ಧರಲ್ಲಿ ದೇಹವು ಸಹಜವಾಗಿ ಬದಲಾವಣೆಗೆ ಒಳಗಾಗುತ್ತದೆ ಅದು ಶಕ್ತಿ, ಸಾಮರ್ಥ್ಯ, ಚಯಾಪಚಯ ಮತ್ತು ರೋಗ ನಿರೋಧಕ ಶಕ್ತಿಗೆ ಪ್ರಭಾವಿಸುತ್ತದೆ . ನಮ್ಮ ದೇಹವು ಹಲವಾರು ಅಂಶಗಳ ಮೇಲೆ ಆಧಾರಪಟ್ಟಿದ್ದು ಅವು ಒಟ್ಟಿಗೆ ಕೆಲಸ ಮಾಡುವ ಮೂಲಕ ನಮ್ಮನ್ನು ಸಕ್ರಿಯ, ಶಕ್ತಿಯುತ ಮತ್ತು ಸ್ವತಂತ್ರವಾಗಿರಲು ನೆರವಾಗುತ್ತವೆ . ಸಂಶೋಧನೆಯ ಪ್ರಕಾರ 40 ಮತ್ತು 80ರ ವರ್ಷಗಳ ವಯಸ್ಸಿನ ನಡುವೆ ಮೂಳೆಯ ಸಾಂದ್ರತೆಯಲ್ಲಿ, ಚಯಾಪಚಯ ವ್ಯವಸ್ಥೆಯಲ್ಲಿ ಮತ್ತು ರೋಗ ಪ್ರತಿರೋಧ ಕಾರ್ಯದಲ್ಲಿ ಕ್ರಮೇಣ ಬದಲಾವಣೆ ಕಾಣುತ್ತಾರೆ, ಇದರೊಂದಿಗೆ  ಸ್ನಾಯುವಿನ ದ್ರವ್ಯರಾಶಿಯಲ್ಲಿ ಶೇ.33ರಷ್ಟು ನಷ್ಟವಾಗುತ್ತದೆ ಎಂದು ಸಂಶೋಧನೆಗಳು ತೋರಿಸಿವೆ , . ಭಾರತವು ಅಪಾರವಾದ ಪೌಷ್ಠಿಕತೆಯ ಅಂತರ ಎದುರಿಸುತ್ತಿದ್ದು ಹಲವು ರಾಜ್ಯಗಳಲ್ಲಿ ಆಹಾರಗಳಲ್ಲಿ 25 ಅಗತ್ಯ ಪೋಷಕಾಂಶಗಳಲ್ಲಿ 11ರ ಕೊರತೆ ಎದುರಿಸುತ್ತಿದ್ದು ಇದಕ್ಕೆ ಆಹಾರದ ವೈವಿಧ್ಯತೆಯ ಕೊರತೆ ಕಾರಣವಾಗಿದೆ , . ವಯಸ್ಸಾಗುವುದರೊಂದಿಗೆ ದೇಹವು ಹೇಗೆ ವಿಕಾಸಗೊಳ್ಳುತ್ತದೆ ಮತ್ತು ಪೌಷ್ಠಿಕತೆಯ ಅಂತರ ಉಂಟಾಗುತ್ತದೆ ಎಂದು ಅರ್ಥ ಮಾಡಿಕೊಳ್ಳಲು ಎನ್ಷೂರ್® ಸ್ಟ್ರೆಂಥ್ ಪ್ರೊ ಆರೋಗ್ಯದ ಏಳು ಪ್ರಮುಖ ಕ್ಷೇತ್ರಗಳನ್ನುಪೋಷಿಸುವ ಪೋಷಕಾಂಶಗಳನ್ನು ಪೂರೈಸುವ ಮೂಲಕ ಜನರು ಶಕ್ತಿಯುತವಾಗಿರುವಂತೆ ನೆರವಾಗುತ್ತದೆ. 

“ನಮಗೆ ವಯಸ್ಸಾದಂತೆ ಶಕ್ತಿಯುತವಾಗಿರುವಂತೆ ಭಾವಿಸುವುದು ಒಂದು ಅಂಶದಿಂದ ಪ್ರೇರಿತವಾಗಿರುತ್ತದೆ, ಅದು ದೇಹದ ಹಲವಾರು ಕಾರ್ಯಗಳು ಪರಸ್ಪರ ಬೆಂಬಲಿಸುವುದರ ಫಲಿತಾಂಶವಾಗಿದೆ” ಎಂದು ಭಾರತದಲ್ಲಿ ಅಬ್ಬಾಟ್ಟ್ ನ್ಯೂಟ್ರಿಷನ್ ಬಿಸಿನೆಸ್ ನ ಜನರಲ್ ಮ್ಯಾನೇಜರ್ ಅನಿರ್ಬನ್ ಬಸು ಹೇಳುತ್ತಾರೆ. “ನಮ್ಮ ವೈಜ್ಞಾನಿಕವಾಗಿ ರೂಪಿಸಲಾದ ಎನ್ಷೂರ್ ಸ್ಟ್ರೆಂಥ್ ಪ್ರೊ ವಯಸ್ಕರಿಗೆ ಮುಖ್ಯವಾಗಿ ಸಾಮಾನ್ಯ ಪೋಷಕಾಂಶದ ಅಸಮರ್ಪಕತೆಗಳ ಸಂದರ್ಭಗಳಲ್ಲಿ ಅವರ ವಿಕಾಸಗೊಳ್ಳುತ್ತಿರುವ ಪೌಷ್ಠಿಕತೆಯ ಅಗತ್ಯಗಳನ್ನು ಪೂರೈಸಲು ನೆರವಾಗುತ್ತದೆ, ಇದರಿಂದ ಅವರು ಯಾವುದೇ ವಯಸ್ಸಿನಲ್ಲಿ ಸಕ್ರಿಯ, ತೊಡಗಿಕೊಳ್ಳುವ ಮತ್ತು ವಿಶ್ವಾಸದಿಂದ ಇರಬಹುದು” ಎಂದರು. 

ವೈಜ್ಞಾನಿಕವಾಗಿ ವಿನ್ಯಾಸಗೊಳಿಸಲಾದ ಎನ್ಷೂರ್ ಸ್ಟ್ರೆಂಥ್ ಪ್ರೊ 31 ಪೋಷಕಾಂಶಗಳ‍ನ್ನು ಪೂರೈಸುತ್ತಿದ್ದು ಅದರಲ್ಲಿ 330 ಗ್ರಾಂಗಳ ಉನ್ನತ ಗುಣಮಟ್ಟದ ಪ್ರೊಟೀನ್ ವಯಸ್ಕರ ವಿಕಾಸಗೊಳ್ಳುವ ಪೌಷ್ಠಿಕತೆಯ ಅಗತ್ಯಗಳನ್ನು ಪೂರೈಸುತ್ತದೆ. ಇದು ಮೂಳೆಗಳು, ಹೃದಯ, ರಕ್ತದ ಕಣಗಳು, ರೋಗ ಪ್ರತಿರೋಧ ವ್ಯವಸ್ಥೆ, ಚಯಾಪಚಯ ವ್ಯವಸ್ಥೆ ಮತ್ತು ನರ ವ್ಯವಸ್ಥೆಗೆ ಬೆಂಬಲಿಸುವ ಪ್ರಮುಖ ಪೋಷಕಾಂಶಗಳನ್ನು ಹೊಂದಿದೆ. 
ಭಾರತದಲ್ಲಿ ಅಬ್ಬಾಟ್ಟ್ ನ ನ್ಯೂಟ್ರಿಷನ್ ಬಿಸಿನೆಸ್ ವೈದ್ಯಕೀಯ ಮತ್ತು ವೈಜ್ಞಾನಿಕ ನಿರ್ದೇಶಕಿ ಡಾ. ಪ್ರೀತಿ ಠಾಕೊರ್, “ನಮಗೆ ವಯಸ್ಸಾದಂತೆ ಪೌಷ್ಠಿಕತೆಯು ಹಲವು ಜನರು ತಿಳಿದಿರುವುದಕ್ಕಿಂತ ಹೆಚ್ಚಿನ ಪಾತ್ರ ವಹಿಸುತ್ತದೆ. ದೇಹಕ್ಕೆ ಬೇಕಾದುದು ಕಾಲ ಕಳೆದಂತೆ ಬದಲಾವಣೆ ಮತ್ತು ಪೌಷ್ಠಿಕತೆಯ ಸಮತೋಲನದ ವಿಧಾನವು ಬರೀ ಸ್ನಾಯುವಿನ ಆರೋಗ್ಯದ ಆಚೆಗೂ ಒಟ್ಟಾರೆ ಶಕ್ತಿ ಮತ್ತು ಸದೃಢತೆಗೆ ಬೆಂಬಲಿಸಬಲ್ಲದು” ಎಂದರು. 
ಉನ್ನತ ಗುಣಮಟ್ಟ ಮತ್ತು ಪ್ರಮಾಣದ ಪ್ರೊಟೀನ್ ಗಳೊಂದಿಗೆ ಕ್ಯಾಲ್ಷಿಯ, ವಿಟಮಿನ್ ಡಿ, ವಿಟಮಿನ್ ಕೆ, ರಂಜಕ ಮತ್ತು ಸತುವು ಸಾಮಾನ್ಯ ಮೂಳೆಗಳನ್ನು ಕಾಪಾಡಲು ನೆರವಾಗುತ್ತದೆ: ಅದರಲ್ಲಿ ಕಡಿಕೆ ಕೊಬ್ಬು ಮತ್ತು ಸಕ್ಕರೆಯು ಹೆಚ್ಚಿನ ಪ್ರೊಟೀನ್ ನೊಂದಿಗೆ ಎಲ್-ಕಾರ್ನಿಟೈನ್ ಮತ್ತು ಮೈಕ್ರೊನ್ಯೂಟ್ರಿಯೆಂಟ್ಸ್ ಆದ ವಿಟಮಿನ್ ಬಿ ಕಾಂಪ್ಲೆಕ್ಸ್, ವಿಟಮಿನ್ ಡಿ, ಕಬ್ಬಿಣ ಮತ್ತು ಪೌಷ್ಠಿಕತೆಯ ಬಳಕೆ ಮತ್ತು ಶಕ್ತಿಯ ಚಯಾಪಚಯ ವ್ಯವಸ್ಥೆ, ಅಯೋಡಿನ್ ಮತ್ತು ಸೆಲೆನಿಯಂ ಸಾಮಾನ್ಯ ಥೈರಾಯ್ಡ್ ಕಾರ್ಯಕ್ಕೆ ನೆರವಾಗುತ್ತದೆ ಮತ್ತು 10 ಪೋಷಕಾಂಶಗಳು ಸಾಮಾನ್ಯ ರೋಗ ಪ್ರತಿರೋಧಕ ವ್ಯವಸ್ಥೆ ಕಾಪಾಡಲು ನೆರವಾಗುತ್ತವೆ, ಅವುಗಳಲ್ಲಿ ವಿಟಮಿನ್ ಎ, ಸಿ, ಡಿ. ಬಿ6 ಮತ್ತು ಬಿ12 ಸತುವು, ಕಬ್ಬಿಣ, ಫೊಲೇಟ್, ತಾಮ್ರ ಮತ್ತು ಸೆಲೆನಿಯಂ ಒಳಗೊಂಡಿರುತ್ತವೆ. 
ಈ ಬಿಡುಗಡೆಯು ಅಬ್ಬಾಟ್ಟ್ ನ “ಪವರ್ ಆಫ್ 7” ಅಭಿಯಾನದೊಂದಿಗೆ ನಡೆದಿದ್ದು ಅದು ಆರೋಗ್ಯದ ಏಳು ಪ್ರಮುಖ ಕ್ಷೇತ್ರಗಳಲ್ಲಿ ಕ್ರೋಢೀಕೃತ ಪೋಷಣೆಯಿಂದ ಪ್ರತಿನಿತ್ಯದ ಶಕ್ತಿ ಉಳಿಸುವುದನ್ನು ಎತ್ತಿ ತೋರಿಸುತ್ತದೆ. ವಿಜ್ಞಾನ- ಆಧರಿತ ಸಂವಹನ, ತಜ್ಞರ ತೊಡಗಿಕೊಳ್ಳುವಿಕೆ ಮತ್ತು ಗ್ರಾಹಕರ ಶಿಕ್ಷಣದ ಮೂಲಕ ಅಬ್ಬಾಟ್ಟ್ ಸದೃಢ ದೇಹಗಳು, ಹೆಚ್ಚಿನ ಸ್ಥಿತಿ ಸ್ಥಾಪಕತೆ ಮತ್ತು ಉತ್ತಮ ಜೀವನದ ಗುಣಮಟ್ಟಕ್ಕೆ ಬೆಂಬಲಿಸುವ ಕ್ರಿಯಾಶೀಲ ಪೌಷ್ಠಿಕತೆಯ ಆಯ್ಕೆಗಳನ್ನು ಉತ್ತೇಜಿಸುವ ಗುರಿ ಹೊಂದಿದೆ. 

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೀಟ್ ಮರುಪರೀಕ್ಷೆ: ಮಕ್ಕಳ ಭವಿಷ್ಯದ ಜೊತೆ ಕೇಂದ್ರದ ಚೆಲ್ಲಾಟ:ಮಧುಬಂಗಾರಪ್ಪನೀಟ್ ಮರುಪರೀಕ್ಷೆ: ಮಕ್ಕಳ ಭವಿಷ್ಯದ ಜೊತೆ ಕೇಂದ್ರದ ಚೆಲ್ಲಾಟ:ಮಧುಬಂಗಾರಪ್ಪಭಾರತ್ ಸ್ಕೌಟ್ಸ್ ಗೈಡ್ಸ್ ಜಿಲ್ಲಾ ಸಂಸ್ಥೆ ಹಾಸನ ವತಿಯಿಂದ ವಿಶ್ವ ಅಮ್ಮಂದಿರ ದಿನಾಚರಣೆಅಬ್ಬಾಟ್ಟ್ ನಿಂದ ಭಾರತದಲ್ಲಿ ಆರೋಗ್ಯಕರ ವಯಸ್ಸಾಗುವಿಕೆಗೆ ಎನ್ಷೂರ್® ಸ್ಟ್ರೆಂಥ್ ಪ್ರೊ ಬಿಡುಗಡೆಸಚಿವ ಡಿ.ಸುಧಾಕರ್ ಅವರ ನಿಧನಕ್ಕೆಸಚಿವ ಡಿ.ಸುಧಾಕರ್ ಅವರ ನಿಧನಕ್ಕೆಯುವ ಶಕ್ತಿಗೆ ಆಡಳಿತಗಾರರನ್ನು ಆಯ್ಕೆ ಮಾಡುವ ತಾಕತ್ತಿದೆ: ದಕ್ಷಿಣ ಭಾರತದ ಫಲಿತಾಂಶವೇ ಇದಕ್ಕೆ ಸಾಕ್ಷಿನೆನ್ನೆ ಮೋದಿ ಭಾಷಣದ ಹೇಳಿಕೆಗೆ ಸಿದ್ದರಾಮಯ್ಯ ಇಂದು ತಿರುಗೇಟುಮೇ.15ಕ್ಕೆ ರಾಜ್ಯ ಮಟ್ಟದ JPL ಕ್ರಿಕೇಟ್ ಪಂದ್ಯಾವಳಿ,ಲೋಗೋ ಅನಾವರಣಶ್ರೀಗಂಧ ಮರ ಕಳವು ತಡೆಗೆ ಕೆ ಎಸ್ ಡಿ ಎಲ್ ಉಪಕ್ರಮ: ಸಾರ್ವಜನಿಕರಿಂದ ತಾಂತ್ರಿಕ ಪರಿಹಾರಗಳಿಗೆ ಆಹ್ವಾನ