ಬೆಂಗಳೂರು:ದಕ್ಷಿಣ ಭಾರತದ ಪಶ್ಚಿಮಘಟ್ಟಗಳ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಸಂಬAಧಿಸಿ ವೈವಿಧ್ಯಮಯ ಕಲಾಕೃತಿಗಳ ಪ್ರದರ್ಶನ ಮತ್ತು ರಾಷ್ಟಿçÃಯ (PAINTING EXHIBITION (6TH NOV. 2025) & NATIONAL CONFERENCE (10TH NOV. 2025) ON CONSERVATION & SUSTAINABLE DEVELOPMENT OF WESTERN GHATS OF SOUTH INDIA) ಕುರಿತು 4-11-2025, ಮಂಗಳವಾರ ಪ್ರಸ್ ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ಮಿತ್ರರೊಂದಿಗೆ ಮಾಹಿತಿ ಹಂಚಿಕೊಳ್ಳಲಾಯಿತು. ಈಕೋ ವಾಚ್ ಸಂಸ್ಥೆಯ ಸಂಸ್ಥಾಪಕ, ನಟ, ನಿರ್ದೇಶಕ ಸುರೇಶ್ ಹೆಬ್ಳೀಕರ್, ಭಾಗ್ಯ ಅಜಯ್ಕುಮಾರ್ ಆರ್ಟ್ ಫೌಂಡೇಶನ್ ಸಂಸ್ಥಾಪಕಿ ಭಾಗ್ಯ, ನಟಿ ಗೀತಪ್ರಿಯಾ, ಪರಿಸರ ಪ್ರಿಯ ಅಕ್ಷಯ್ ಹೆಬ್ಳೀಕರ್, ಕಲಾವಿದರಾದ ಪ್ರದೀಪ್ ಕುಮಾರ್, ಗಣಪತಿ ಅಗ್ನಿಹೋತ್ರಿ ಉಪಸ್ಥಿತರಿದ್ದರು.
ಅಕ್ಷಯ್ ಹೆಬ್ಳೀಕರ್ ಅವರು ಪಶ್ವಿಮಘಟ್ಟ ಪ್ರದೇಶಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ಈಗಾಗಲೇ ಶೇ.೪೦ರಷ್ಟು ಕಾಡು ನಾಶವಾಗಿದೆ. ಪಶ್ಚಿಮಘಟ್ಟ ಪ್ರದೇಶಗಳನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ಹಿನ್ನೆಲೆಯಲ್ಲಿ ನಾವು ಜನರಲ್ಲಿ, ವಿಶೇಷವಾಗಿ ಮುಂದಿನ ಪೀಳಿಗೆಯವರನ್ನು ಗುರಿಯಾಗಿಸಿಕೊಂಡು ಜಾಗೃತಿ ಮೂಡಿಸುವ ಅಗತ್ಯವಿದೆ. ಹೀಗಾಗಿ ಈಕೋ ವಾಚ್ ಮತ್ತು ಭಾಗ್ಯ ಅಜೈಕುಮಾರ್ ಆರ್ಟ್ ಫೌಂಡೇಶನ್ ಜಂಟಿಯಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕರ್ನಾಟಕ ಚಿತ್ರಕಲಾ ಪರಿಷತ್ನ ಗ್ಯಾಲರಿಯಲ್ಲಿ ಕಲಾಪ್ರದರ್ಶನವನ್ನು ಹಮ್ಮಿಕೊಂಡಿದ್ದು, ಇದೇ ಮೊದಲ ಬಾರಿಗೆ ಪಶ್ಚಿಮಘಟ್ಟಗಳಿಂದ ಸ್ಫೂರ್ತಿ ಪಡೆದಿರುವ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸಲಾಗುತ್ತಿದೆ. ಈ ಮೂಲಕ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದ್ದೇವೆ. ನವೆಂಬರ್ 10ರಂದು ಚಿತ್ರಕಲಾ ಪರಿಷತ್ನ ಅರಸು ಗ್ಯಾಲರಿಯಲ್ಲಿ ಪಶ್ಚಿಮಘಟ್ಟಗಳ ಬಗ್ಗೆ ಅನೇಕ ವಿಚಾರಗಳನ್ನು ಚರ್ಚಿಸಲು ರಾಷ್ಟಿçÃಯ ಸಮ್ಮೇಳನ ಆಯೋಜಿಸಲಾಗಿದೆ. ಎಲ್ಲರೂ ಈ ಕಾರ್ಯಕ್ರಮದಲ್ಲಿ ಮುಕ್ತವಾಗಿ ಭಾಗಿಯಾಗಬಹುದು ಎಂದು ತಿಳಿಸಿದರು.
ಇದೇ ವೇಳೆ ಭಾಗ್ಯ ಅಜಯ್ ಕುಮಾರ್, ಗೀತಪ್ರಿಯಾ ಅವರು ಮಾತನಾಡಿ ಕಾರ್ಯಕ್ರಮ ಎಷ್ಟು ಮಹತ್ವದ್ದಾಗಿದೆ. ಇಂದಿನ ಯುವ ಜನತೆಗೆ ಈ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು. ಕಲಾವಿದರಾದ ಪ್ರದೀಪ್ ಕುಮಾರ್, ಗಣಪತಿ ಅಗ್ನಿಹೋತ್ರಿ ಕಲಾಪ್ರದರ್ಶನ ಕುರಿತು ಮಾಹಿತಿ ನೀಡಿದರು.