LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಆರ್ ಆರ್ ನಗರದಲ್ಲಿ ಕಳಾಮಂದಿರ ಶೋರೂಮ್ ಉದ್ಘಾಟನೆ

ಬೆಂಗಳೂರಿನ ಆರ್ ಆರ್ ನಗರದಲ್ಲಿ ಕಲಾಮಂದಿರ ಶೋರೂಮ್ ಉದ್ಘಾಟನೆ ಚಿತ್ರನಟಿ ಆಶಿಕಾ ರಂಗನಾಥ್ ಅವರಿಂದ ಲೋಕಾರ್ಪಣೆ, ದಕ್ಷಿಣದಲ್ಲಿ 83ನೇ ಶೋರೂಮ್ ಉದ್ಘಾಟನೆಯಾಗಿದೆ, ಬೆಂಗಳೂರಿನಲ್ಲಿ ನಾಲ್ಕನೇ ನೂತನ ಮಳಿಗೆ, ಮಹಿಳೆಯರು ಮಕ್ಕಳು ಪುರುಷರು ಸೇರಿದಂತೆ ಎಲ್ಲಾ ವಯೋಮಾನದವರಿಗೆ ಗುಣಮಟ್ಟದ ಉಡುಪುಗಳು ಲಭ್ಯ

ಬೆಂಗಳೂರು : ಭಾರತದ ಜನಪ್ರಿಯ ಎಥ್ನಿಕ್ ವೇರ್ ರಿಟೇಲರ್ ಸಾಯಿ ಸಿಲ್ಕ್ ಕಳಾಮಂದಿರ್ ಲಿಮಿಟೆಡ್‌ನ 83ನೇ ಮಳಿಗೆ ಬೆಂಗಳೂರಿನ ಆರ್.ಆರ್. ನಗರದಲ್ಲಿ ಉದ್ಘಾಟನೆಗೊಂಡಿದೆ. news_1780763142_2_160.webp

ಗ್ರಾಹಕರು, ಹಿತೈಷಿಗಳು ಮತ್ತು ಎಸ್.ಎಸ್.ಕೆ.ಎಲ್. ಕುಟುಂಬ ಸದಸ್ಯರ ಸಮ್ಮುಖದಲ್ಲಿ ಈ ಮಳಿಗೆಯು ಕನ್ನಡ ಸಿನಿ ತಾರೆ ಆಶಿಕಾ ರಂಗನಾಥ್‌ರವರಿಂದ ಅದ್ದೂರಿಯಾಗಿ ಉದ್ಘಾಟನೆಗೊಂಡಿತು, ನಂತರ ಮಾತನಾಡಿದವರು  ಅಪರಿಮಿತ ಸಂಗ್ರಹಣೆ ಮತ್ತು ಗ್ರಾಹಕ ಸ್ನೇಹಿ ದರದ ಮೂಲಕ ತನ್ನ 20 ವರ್ಷಗಳ ರಿಟೇಲ್ ವ್ಯಾಪಾರ ಪಯಣವನ್ನು ದಕ್ಷಿಣ ಭಾರತದಲ್ಲಿ ಯಶಸ್ವಿಯಾಗಿ ಪೂರೈಸಿದೆ. 

ಬೆಂಗಳೂರಿನ ಆರ್.ಆರ್. ನಗರದ ನೂತನ ಶೋರೂಂನಲ್ಲಿ ಮದುವೆ, ಹಬ್ಬ ಹಾಗೂ ದೈನಂದಿನ ಬಳಕೆಗೆ ಅಗತ್ಯವಾದ ಎಲ್ಲಾ ರೀತಿಯ ವಸ್ತುಗಳಿಗಾಗಿ ವಿವಿಧ ಶ್ರೇಣಿಯ ರೇಷ್ಮೆ ಸೀರೆಗಳು, ಫ್ಯಾನ್ಸಿ ಸೀರೆಗಳು, ರೆಡಿಮೇಡ್ಸ್, ಪುರುಷರು ಮತ್ತು ಮಕ್ಕಳ ಉಡುಪುಗಳ ವಿಶೇಷ ಸಂಗ್ರಹವನ್ನು ಒಂದೇ ಸೂರಿನಡಿ ಒದಗಿಸಲಾಗಿದೆ.

news_1780763129_0_367.webp

ಕಣ್ಣಿಗೆ ಪ್ರೀತಿಯಾದಂತಹ ಉಡುಪುಗಳು ಕಳಾಮಂದಿರದಲ್ಲಿ ಲಭ್ಯವಿದ್ದು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಶಾಪಿಂಗ್ ಅನುಭವವನ್ನು ಪಡೆಯಬಹುದು ಗುಣಮಟ್ಟಕ್ಕೆ ಕಲಾಮಂದಿರ ಸಂಸ್ಥೆ ಸಾಕಷ್ಟು ಹೆಗ್ಗಳಿಕೆಯಾಗಿದೆ ಮಕ್ಕಳಿಂದ ಮಹಿಳೆಯರು ವಯಸ್ಕರ ಎಲ್ಲಾ ವಯೋಮಾನದವರಿಗೆ ವಿಶೇಷವಾದಂತಹ ಉಡುಪುಗಳು ಲಭ್ಯ ಇವೆ.

 

ಈ ಸಂದರ್ಭದಲ್ಲಿ ಮಾತನಾಡಿದ ಸಾಯಿ ಸಿಲ್ಕ್ಸ್ ಕಳಾಮಂದಿರ ಲಿಮಿಟೆಡ್‌ನ ನಿರ್ದೇಶಕರಾದ ದುರ್ಗಾರಾವ್ ಚಲವಾದಿ ಮಾತನಾಡಿ, ಕಳಾಮಂದಿರ ಸಂಸ್ಥೆಯ 83ನೇ ಶೋರೂಮ್ ಮೂಲಕ ತನ್ನ ಪರಂಪರೆಯನ್ನು ಆರ್.ಆರ್. ನಗರಕ್ಕೆ ತರುತ್ತಿರುವುದು ನಮಗೆ ಸಂತಸದ ವಿಚಾರ. ಒಂದೇ ಸೂರಿನಡಿ ಅತ್ಯುತ್ತಮ ಸಂಗ್ರಹಣೆ, ಗುಣಮಟ್ಟ, ವೈವಿಧ್ಯತೆ ಹಾಗೂ ಮೌಲ್ಯಯುತ ಫ್ಯಾಷನ್ ಉತ್ಪನ್ನಗಳನ್ನು ಒದಗಿಸುವುದು ನಮ್ಮ ಬದ್ಧತೆಯಾಗಿದೆ. ಪ್ರತಿಯೊಂದು ಕುಟುಂಬದ ಬದಲಾಗುತ್ತಿರುವ ಫ್ಯಾಷನ್ ಅಗತ್ಯಗಳನ್ನು ಪೂರೈಸುವುದು ನಮ್ಮ ಆದ್ಯತೆ” ಎಂದು ತಿಳಿಸಿದರು.

ನೂತನ ಮಳಿಗೆ ಚನ್ನಸಂದ್ರ ಮುಖ್ಯ ರಸ್ತೆ, ೫ನೇ ಸ್ಟೇಜ್, ಆರ್.ಆರ್. ನಗರ, ನಂದನ ರೆಸ್ಟೋರೆಂಟ್ ಹತ್ತಿರ ಪ್ರಾರಂಭಗೊಂಡಿದೆ.news_1780763142_1_105.webp

ನೂತನ ಕಲಾಮಂದಿರ ಶೋರೂಮ್ ಉದ್ಘಾಟನಾ ಕಾರ್ಯಕ್ರಮದಲ್ಲಿ  ಸಂಸ್ಥೆ ನಿರ್ದೇಶಕರಾದ ದುರ್ಗಾರಾವ್ ಚಲವಾದಿ,CEO, ಸೇರಿದಂತೆ ಕಟ್ಟಡದ ಮಾಲೀಕರು ಉಪಸ್ಥಿತರಿದ್ದರು

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಮಲಿಂಗಾರೆಡ್ಡಿ ಕಾಂಗ್ರೆಸ್ ಪಕ್ಷದ ಆಸ್ತಿ, ಅವರು ತಮ್ಮ ರಾಜಿನಾಮೆ ಹಿಂಪಡೆದಿದ್ದಾರೆ: ರಣದೀಪ್ ಸಿಂಗ್ ಸುರ್ಜೆವಾಲಆರ್ ಆರ್ ನಗರದಲ್ಲಿ ಕಳಾಮಂದಿರ ಶೋರೂಮ್ ಉದ್ಘಾಟನೆಪದ್ಮನಾಭನಗರ ಕ್ಷೇತ್ರದಲ್ಲಿ ಕಸದ ಸಮಸ್ಯೆ ನಿವಾರಣೆಗೆ ಕ್ರಮ : ರಮೇಶ್ಕೆಪಿಸಿಸಿ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್ : ಮಾಜಿ ಸಿಎಂ ಅಭಿನಂದನೆ ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡಲೇಬೇಕು: ಸುನೀಲ್ ಕುಮಾರ್ ಎನ್ ಒತ್ತಾಯಕಾಂಗ್ರೆಸ್ ಸಮಿತಿ ಸದಸ್ಯರಾಗಿರುವ ಸಿದ್ದರಾಮಯ್ಯರಿಗೆ ರಣದೀಪ್ ಸಿಂಗ್ ಸುರ್ಜೇವಾಲ ಅಭಿನಂದನೆನೂತನ ಸರ್ಕಾರದಲ್ಲಿ ಸಂತೋಷ್ ಲಾಡ್ ಅವರಿಗೆ ಡಿಸಿಎಂ ನೀಡುವಂತೆ ಒತ್ತಾಯಯುವ ವಕೀಲ ಮುತ್ತು ಕಾಳೆ ಅವರ ಹುಟ್ಟುಹಬ್ಬ ಆಚರಣೆBMTC ಸಿಬ್ಬಂದಿ ವರ್ಗದವರಿಗೆ ಆರೋಗ್ಯ ತಪಾಸಣಾ ಶಿಬಿರಕಿರ್ಗಿಜ್ ಗಣರಾಜ್ಯಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಭೇಟಿ