LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ನ್ಯಾಂಡೋಸ್ ರೆಸ್ಟೋರೆಂಟ್ ಆರಂಭ

ಬೆಂಗಳೂರು: ಬೆಂಕಿಯಲ್ಲಿ ಗ್ರಿಲ್ ಆದ ಪೆರಿಪೆರಿ ಚಿಕನ್‌ಗೆ ಹೆಸರುವಾಸಿಯಾಗಿರುವ ದಕ್ಷಿಣ ಆಫ್ರಿಕಾದ ಪ್ರಸಿದ್ಧ ಚೈನ್ ರೆಸ್ಟೋರೆಂಟ್ ಆಗಿರುವ ನ್ಯಾಂಡೋಸ್,   ಬೆಂಗಳೂರಿನ ಫೀನಿಕ್ಸ್ ಮಾಲ್‌ ಆಫ್ ಏಷ್ಯಾದಲ್ಲಿ ತನ್ನ ಹೊಸ ರೆಸ್ಟೋರೆಂಟ್ ಆರಂಭ ವಾಗಿದೆ.

ಸ್ಯಾಂಡಲ್ ವುಡ್ ನಟಿಯರಾದ ಐಂದ್ರಿತಾ ರೇ ಮತ್ತು ಹರ್ಷಿಕಾ ಪೂಣಚ್ಚ ಅವರು ನಗರದಲ್ಲಿನ ನ್ಯಾಂಡೋಸ್ ನ ಮೂರನೇ ರೆಸ್ಟೋರೆಂಟ್ ಅನ್ನು ಉದ್ಘಾಟಿಸಿ ಮಾತನಾಡಿದ ಅವರು,  ಆಫ್ರಿಕನ್ ಶೈಲಿಯ ಪೆರಿ ಪೆರಿ ಚಿಕನ್ ಗೆ ಹೆಸರುವಾಸಿಯಾಗಿದೆ. ರುಚಿಯಲ್ಲಿ ವಿಶೇಷವಾಗಿದೆ, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಆಗಮಿಸಿ ರುಚಿಕಟ್ಟಾದ ಚಿಕನ್ ಸ್ವಾದ ಸವಿದು ಅನುಭವವನ್ನು ನೀಡಬೇಕು ಎಂದರು.

ನ್ಯಾಂಡೋಸ್ ಇಂಡಿಯಾದ ಸಿಇಓ ಸಮೀರ್ ಭಾಸಿನ್, ಮಾರ್ಕೆಟಿಂಗ್ ಮುಖ್ಯಸ್ಥರಾದ ಅನುಶ್ರೀ ಬೋಸ್, ಆಪರೇಷನ್ಸ್ ಡೈರೆಕ್ಟರ್ ಅಮಿತ್ ಭಯನಾ ಮತ್ತು ಮಾರ್ಕೆಟಿಂಗ್ ವಿಭಾಗದ ಡೆಪ್ಯುಟಿ ಮ್ಯಾನೇಜರ್ ಅನ್ಶುಲ್ ಅಗರ್ವಾಲ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನ್ಯಾಂಡೋಸ್ ಇಂಡಿಯಾದ ಸಿಇಓ ಸಮೀರ್ ಭಾಸಿನ್, "ನಮ್ಮ ವಿಶ್ವಪ್ರಸಿದ್ಧ ಪೆರಿ-ಪೆರಿ ಚಿಕನ್ ಅನ್ನು ಉತ್ತರ ಬೆಂಗಳೂರಿನ ನಿವಾಸಿಗಳಿಗೆ ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ "ನಮ್ಮ ಚಿಕನ್ ಫ್ಲೇವರ್ ಗಳು ದಕ್ಷಿಣ ಆಫ್ರಿಕಾದಲ್ಲಿ ಹುಟ್ಟಿದ್ದರೂ, ಭಾರತೀಯ ಮಸಾಲೆ ಪ್ರಿಯರ ರುಚಿಗೆ ಅನುಗುಣವಾಗಿ ಮರು ರಚನೆ ಮಾಡಿದ್ದೇವೆ. ಆಫ್ರಿಕನ್ ಬರ್ಡ್ಸ್ ಐ ಮೆಣಸಿನಿಂದ ತಯಾರಿಸಿದ ನಮ್ಮ ಪೆರಿ-ಪೆರಿ ಸಾಸ್, ನ್ಯಾಂಡೋಸ್ ನ ಹೃದಯ ಮತ್ತು ಆತ್ಮವಾಗಿದೆ. ನಮ್ಮ ಎಲ್ಲಾ ಸಾಸ್‌ಗಳು, ಬೇಸ್ಟಿಂಗ್‌ಗಳು ಮತ್ತು ಮ್ಯಾರಿನೇಡ್‌ಗಳನ್ನು ತಾಜಾ ಮತ್ತು ನೈಜ ಪದಾರ್ಥಗಳಿಂದ ತಯಾರಿಸಲಾಗುತ್ತದೆ. ನಾವು ಯಾವುದೇ ಕೃತಕ ಫ್ಲೇವರ್ ಅಥವಾ ಬಣ್ಣಗಳನ್ನು ಬಳಸುವುದಿಲ್ಲ.

ನಾವು ನಮ್ಮ ಚಿಕನ್ ನ ರುಚಿಯನ್ನು ಕಾಪಾಡಿಕೊಳ್ಳಲು ಮತ್ತು ಅದರ ಕೊಬ್ಬಿನಂಶವನ್ನು ಕಡಿಮೆ ಮಾಡಲು ಬೆಂಕಿಯಲ್ಲಿ ಸುಡುತ್ತೇವೆ. ನಿಯಮಿತವಾದ ಬೇಸ್ಟಿಂಗ್ ಬಳಕೆ ಅದನ್ನು ರಸಭರಿತವಾಗಿರಿಸುತ್ತದೆ. ಗ್ರಾಹಕರ ಆದ್ಯತೆಯ ಮಟ್ಟದ ಶಾಖದಲ್ಲಿ ಬೆಂದ ಚಿಕನ್ ಅಪೂರ್ವ ರುಚಿ ಒದಗಿಸುತ್ತದೆ. ನ್ಯಾಂಡೋಸ್ ನ ಅಭಿಮಾನಿಗಳು ಈಗ ಬೆಂಗಳೂರಿನ ಮಾಲ್ ಆಫ್ ಏಷ್ಯಾದಲ್ಲಿರುವ ನಮ್ಮ ಹೊಸ ರೆಸ್ಟೋರೆಂಟಿನಲ್ಲಿ ಪ್ರಸಿದ್ಧ ಸುಟ್ಟ ಪೆರಿ-ಪೆರಿ ಚಿಕನ್ ಅನ್ನು ಸವಿಯಬಹುದು" ಎಂದು ಹೇಳಿದರು.



ನ್ಯಾಂಡೋಸ್ ನ ಪ್ರಯಾಣ ಆರಂಭವಾಗಿದ್ದು 36 ವರ್ಷಗಳ ಹಿಂದೆ. ದಕ್ಷಿಣಾ ಆಫ್ರಿಕಾದ ಜೋಹಾನ್ಸ್ ಬರ್ಗ್ ನಲ್ಲಿ. ನಂತರ ಭಾರತಕ್ಕೆ ವಿಸ್ತಾರಗೊಂಡಿತು. ಇವತ್ತು 20ಕ್ಕೂ ಹೆಚ್ಚು ದೇಶಗಳ ಗ್ರಾಹಕರಿಗೆ ರುಚಿಕರ ಖಾದ್ಯಗಳನ್ನು ಒದಗಿಸಿ ಮನಸ್ಸು ಗೆದ್ದಿದೆ.
Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ