ಬೆಂಗಳೂರು: ಡಿ.ಕೆ ಅಣ್ಣ, 136 ಜನ ಶಾಸಕರ ಭಾರಿ ಬಹುಮತ ಬೆನ್ನಿಗಿಟ್ಟುಕೊಂಡು ಮೂರು ವರ್ಷದಿಂದ ಹರಿದಿದ್ದೇನು? ಎಂದು ನಿಖಿಲ್ ಕುಮಾರಸ್ವಾಮಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ನೇರವಾಗಿ ತರಾಟೆಗೆ ತೆಗೆದುಕೊಂಡರು.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು ನಿಮ್ಮದೇ ಆಫೀಸಿನಲ್ಲಿ "ಡಿ.ಕೆ. ಶಿವಕುಮಾರ್ ಆದ ನಾನು..." ಅಂತ ಮುಖ್ಯಮಂತ್ರಿ ಆಗುವ ಹಗಲುಗನಸಿನ ಬೋರ್ಡ್ ಹಾಕಿಕೊಂಡು ಕಾಯುತ್ತಾ ಕುಳಿತಿರುವುದು! ಮೊದಲು ಆ ಬೋರ್ಡ್ ನಿಜ ಮಾಡಿಕೊಳ್ಳಿ, ಆಮೇಲೆ ಬೇರೆಯವರ ಸಂಖ್ಯಾಬಲದ ಬಗ್ಗೆ ಮಾತನಾಡಿ ಎಂದು ಕಿಡಿಕಾರಿದರು.
ಕೊಟ್ಟ ಕುದುರೆಯನ್ನು ನೀವೇ ಏರಿದ್ದೀರೋ ಅಥವಾ ಬೇರೆಯವರು ನಿಮ್ಮನ್ನು ಕೆಳಗೆ ಇಳಿಸಿದ್ದಾರೋ ಎಂಬುದು ರಾಜ್ಯದ ಜನತೆಗೆ ಚೆನ್ನಾಗಿ ಗೊತ್ತು ಎಂದು ನಿಖಿಲ್ ಕುಮಾರಸ್ವಾಮಿ ವ್ಯಂಗ್ಯ ಮಾಡಿದ್ದಾರೆ.