ಬೆಂಗಳೂರು :ಕರ್ನಾಟಕ ವಿಧಾನ ಪರಿಷತ್ ಚುನಾವಣಾ ಫಲಿತಾಂಶ ಐತಿಹಾಸಿಕವಾಗಿದ್ದು, ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿಪಾದಿಸಿರುವ ಜನ ಕಲ್ಯಾಣ ಮತ್ತು ನ್ಯಾಯ (NYAY) ರಾಜಕೀಯಕ್ಕೆ ನಿಸ್ಸಂಶಯ ಜಯ ಸಿಕ್ಕಿದ ಸಂದೇಶವನ್ನು ಸಾರಿವೆ ಎಂದು ಏಕೆ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅಭಿಪ್ರಾಯಪಟ್ಟರು.
ಭಾರತೀಯ ರಾಷ್ಡ್ರೀಯ ಕಾಂಗ್ರೆಸ್ 135 ಶಾಸಕರನ್ನು ಹೊಂದಿದೆ ಮತ್ತು ಇನ್ನೂ 3 ಎಸ್ಕೆಪಿ + ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಒಟ್ಟು 138 ಶಾಸಕರ ಬಲ ಹೊಂದಿದೆ. ಹೀಗಿದ್ದರೂ, ಕಾಂಗ್ರೆಸ್ ಅಭ್ಯರ್ಥಿಗಳಿಗೆ 151 ಪ್ರಥಮ ಪ್ರಾಶಸ್ತ್ಯದ ಮತಗಳು ಲಭಿಸಿವೆ.
*ಇದಕ್ಕೆ ಕಾರಣವೇನು?*
ಕರ್ನಾಟಕದ ರಾಜಕೀಯ ಇಂದು ಎರಡು ಧ್ರುವಗಳ ಸುತ್ತ ಸುತ್ತುತ್ತಿದೆ. ಒಂದು ಧ್ರುವವೆಂದರೆ ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿ ಯೋಜನೆಗಳು. ಈ ಯೋಜನೆಗಳ ಮೂಲಕ ವರ್ಷಕ್ಕೆ ₹56,000 ಕೋಟಿಗೂ ಅಧಿಕ ಹಣವನ್ನು ಕನ್ನಡಿಗರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗಿದೆ.
ಇನ್ನೊಂದು ಧ್ರುವವೆಂದರೆ ಬಿಜೆಪಿ-ಜೆಡಿಎಸ್ ಮೈತ್ರಿ. ಕಾಂಗ್ರೆಸ್ನ 5 ಗ್ಯಾರಂಟಿಗಳಿಗೆ ಕಟು ವಿರೋಧ ವ್ಯಕ್ತಪಡಿಸುತ್ತಿರುವ ಅವರು, ಅವುಗಳನ್ನು ರದ್ದುಪಡಿಸಲು ಬಯಸುತ್ತಾರೆ. ಅವರ ರಾಜಕೀಯ ಜಾತಿ ವಿಭಜನೆ ಮತ್ತು ಧಾರ್ಮಿಕ ಧ್ರುವೀಕರಣದ ಸುತ್ತ ಕೇಂದ್ರೀಕೃತವಾಗಿದೆ.
ಜನರನಾಡಿ ಮಿಡಿತ ಅರಿತ ಕರ್ನಾಟಕದ ಶಾಸಕರು ಇಂದು ತಮ್ಮ ಪಕ್ಷದ ಗಡಿಗಳನ್ನು ಮೀರಿ ಕಾಂಗ್ರೆಸ್ ಸರ್ಕಾರದ ನೀತಿಗಳು ಮತ್ತು ಕಾಂಗ್ರೆಸ್ ಗ್ಯಾರಂಟಿಗಳಿಗೆ ಮತ ಚಲಾಯಿಸುವ ಮೂಲಕ ತಮ್ಮ ಮುದ್ರೆ ಒತ್ತಿದ್ದಾರೆ. ಇದು 2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ಗ್ಯಾರಂಟಿ ಅಲೆಯ ದಿಕ್ಸೂಚಿ.
ಇದು ಸಕಾರಾತ್ಮಕತೆಗೆ ನೀಡಿದ ಮತ,
ಇದು ಕಲ್ಯಾಣ ರಾಜ್ಯದ ಪರವಾದ ಮತ,
ಇದು ಒಗ್ಗಟ್ಟಿನ ಮತ್ತು ಒಳಗೊಳ್ಳುವಿಕೆಯ ರಾಜಕಾರಣಕ್ಕಾಗಿ ಬಿದ್ದ ಮತ,
ಇದು ಗ್ಯಾರಂಟಿ ಯೋಜನೆಗಳ ಪರವಾದ ಮತ, ಇದು ಜನರ ಪರವಾದ ಮತ.