ಬೆಂಗಳೂರು: ವಂಡರ್ಲಾದಲ್ಲಿ ಮಜಾ ಮಾಡುತ್ತಿರುವ ಕಾಂಗ್ರೆಸ್ ಶಾಸಕರೇ, ನಿಮ್ಮ ಐಷಾರಾಮಿ ಪ್ರಪಂಚದಿಂದ ಹೊರಬಂದು ಪಕ್ಕದಲ್ಲೇ ಇರುವ ಬನ್ನಿಗಿರಿ ವ್ಯೂಪಾಯಿಂಟ್ಗೆ ಒಮ್ಮೆ ಭೇಟಿ ಕೊಡಿ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಸಾವಿರಾರು ಬಡ ರೈತ ಕುಟುಂಬಗಳ ಹೊಟ್ಟೆ ತುಂಬಿಸುತ್ತಿರುವ ಬಿಡದಿಯ ಈ ಅದ್ಭುತ ಹಸಿರನ್ನು ಕಣ್ಣಾರೆ ನೋಡಿ. ಕಳೆದ 470ಕ್ಕೂ ಹೆಚ್ಚು ದಿನಗಳಿಂದ ಈ ಬಡ ರೈತರು ತಮ್ಮ ಅಳಲು ತೋಡಿಕೊಳ್ಳಲು ಒಂದು ಸಭೆಗಾಗಿ ಕೈಮುಗಿದು ಬೇಡಿಕೊಳ್ಳುತ್ತಿದ್ದಾರೆ. ಆದರೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇವರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
*ನಿಖಿಲ್ ಗಂಭೀರ ಆರೋಪ:*
ಇದೆಲ್ಲವೂ 'ಇಂಟಿಗ್ರೇಟೆಡ್ ಟೌನ್ಶಿಪ್' ಹೆಸರಿನಲ್ಲಿ ಬಡವರ ಭೂಮಿಯನ್ನು ರಿಯಲ್ ಎಸ್ಟೇಟ್ ದಂಧೆಗೆ ಒಪ್ಪಿಸಿ, 'ಪ್ರೀಮಿಯಂ' ಹೆಸರಿನಲ್ಲಿ ಬರೋಬ್ಬರಿ ₹33,562 ಕೋಟಿ ಆದಾಯ ಲೂಟಿ ಮಾಡಲು ನಡೆಸುತ್ತಿರುವ ಸಂಚು!" ಎಂದು ಅವರು ಕಿಡಿಕಾರಿದರು
ಇನ್ನು ಮುಖ್ಯಮಂತ್ರಿಗಳು ಮಾಡದ ಕೆಲಸವನ್ನಾದರೂ ಕನಿಷ್ಠ ಶಾಸಕರು ಮಾಡಿ. ಆ ಹಸಿರನ್ನು ಕೊನೆಯ ಬಾರಿ ನೋಡಿ ಬನ್ನಿ. ಶ್ರೀ ರಾಹುಲ್ ಗಾಂಧಿಯವರ *'Green over Greed'* ಬೋಧನೆ ಕೇವಲ ಕರ್ನಾಟಕದ ಹೊರಗೆ ಮಾತ್ರ ಅನ್ವಯಿಸುತ್ತದೆಯೇ? ಎಂದು ನಿಖಿಲ್ ಪ್ರಶ್ನಿಸಿದ್ದಾರೆ.