ಬೆಂಗಳೂರು: ಕಲೀಲಾ ಚಿತ್ರದ ಮಹೂರ್ತ ನಗರದ ಮಹಾಲಕ್ಷ್ಮಿ ಲೇಔಟ್ ನ ಪಂಚಮುಖಿ ಗಣೇಶ ದೇವಸ್ಥಾನದಲ್ಲಿ ಅದ್ದೂರಿಯಾಗಿ ಮೂರ್ತಕೆ ಸ್ಟಾರ್ ಡೈರೆಕ್ಟರ್ ಸಿಂಪಲ್ ಸುನಿಲ್ ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದರು.
ಇಡೀ ಚಿತ್ರತಂಡ ಗಣೇಶನಿಗೆ ಪೂಜೆ ಸಲ್ಲಿಸುವ ಮೂಲಕ ವಿಜ್ಞಾನಿಗಳು ನಿವಾರ ನಿವಾರಣೆ ಆಗಲಿ ಎಂಬುವ ಉದ್ದೇಶದಿಂದ ವಿಶೇಷ ಪೂಜೆಯನ್ನು ಸಲ್ಲಿಸಿ ಚಿತ್ರದ ಮೂರ್ತಕ್ಕೆ ಚಾಲನೆ ನೀಡಲಾಯಿತು.
ಇನ್ನು ಚಿತ್ರದ ಕಥೆ ಚಿತ್ರಕಥೆ ನಿರ್ದೇಶಕರಾದ ಕೆ ರಾಘವ್ ಅವರು ಮಾತನಾಡಿ, ಕಲೀಲ ಚಿತ್ರ ಯಾವುದೇ ಅಬ್ಬರ ಆಡಂಬರವಿಲ್ಲದೆ ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯಲ್ಲಿ ಹಾಗೂ ಮಾಸ್ ಆಗಿ ಕಾಣುವ ಇಂದಿನ ಜನತೆಗೆ ಬೇಕಾಗಿರುವ ಕಥೆಯನ್ನು ಇಟ್ಟುಕೊಂಡು ನಿರ್ಮಾಣ ಮಾಡಲು ಸಕಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಇನ್ನು ಸಿನಿಮಾದ ಚಿತ್ರೀಕರಣವು ಬೆಂಗಳೂರು ಮೈಸೂರು ಹಾಗೂ ವಿಜಯಪುರದಲ್ಲಿ ನಡೆಯಲಿದೆ ಎಂದರು.
ಸಿನಿಮಾದ ಪೋಸ್ಟರ್ನಲ್ಲಿ ಹೇಳುವ ಹಾಗೆ ಇಡೀ ಸಿನಿಮಾ ಯಾವುದೇ ರಗಡಾಗಿ ಕಾಣುವ ಉದ್ದೇಶವಿಲ್ಲ. ಕಡಿಮೆ ಬಜೆಟ್ಟಿನಲ್ಲಿಯೇ ಅತ್ಯುನ್ನತವಾಗಿ ತೋರಿಸುವ ಉದ್ದೇಶ ನಮ್ಮದಾಗಿದ್ದು ಅದನ್ನು ಜನರು ಸಹ ಮೆಚ್ಚಿಕೊಳ್ಳಲಿದ್ದಾರೆ ಎಂದರು.
ಇನ್ನು ಚಿತ್ರದ ನಾಯಕ ನಟ ನಟಿ ಮಾತನಾಡಿ ಕಲೀಲ ಚಿತ್ರದಲ್ಲಿ ಯಾವುದೇ ಹೀರೋಯಿಸಂ ಕಂಡು ಬರುವುದಿಲ್ಲ ಮಾಸಾಗಿ ಸರಳವಾಗಿ ತೋರಿಸುವಂತಹ ಪ್ರಯತ್ನವನ್ನು ನಮ್ಮ ನಿರ್ದೇಶಕರು ಮಾಡಿದ್ದಾರೆ ಇಡೀ ಚಿತ್ರತಂಡದ ಜೊತೆಗೆ ಕೆಲಸ ಮಾಡಲು ನಾನು ಸಹ ಉತ್ಸಾಹ ಬರೀತರಾಗಿದ್ದೇನೆ ಒಂದು ಒಳ್ಳೆ ಚಿತ್ರವನ್ನು ಜನಸಾಮಾನ್ಯರಿಗೆ ಕಟ್ಟಿ ಕೊಡುವಂತಹ ಕೆಲಸವನ್ನು ನನ್ನ ಅಭಿನಯದ ಮೂಲಕ ಮಾಡುತ್ತೇನೆ ಈ ಚಿತ್ರದಲ್ಲಿ ಬಜಾರಿಯ ಪಾತ್ರವಾಗಿ ಸಾಕಷ್ಟು ರಗಡ್ ಆಗಿಲ್ಲದಿದ್ದರೂ ಸಹ ಬಜಾರಿಯ ರೂಪರೇಷೆಗಳನ್ನು ಚಿತ್ರದ ಕಥೆಯಲ್ಲಿ ಇದ್ದು ಅದನ್ನು ಉತ್ತಮವಾಗಿ ನಿಭಾಯಿಸುವ ಕೆಲಸವನ್ನು ಮಾಡುತ್ತೇನೆ ಎಂದರು.
ಇನ್ನು ಸಿನಿಮಾದ ಸಹ ಕಲಾವಿದರು ಸಹ ಕಲಿಲ ಚಿತ್ರದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದು ಅದರಲ್ಲಿ ನಮ್ಮ ಪಾತ್ರಗಳು ಚಿಕ್ಕದಿದ್ದರೂ ಸಹ ಇಡೀ ಸಿನಿಮಾದಲ್ಲಿ ನಮ್ಮ ಪಾತ್ರಗಳ ಬಗ್ಗೆ ಹಾಗೂ ಪಾತ್ರಕ್ಕೆ ನ್ಯಾಯವನ್ನು ಒದಗಿಸುತ್ತೇವೆ ಎನ್ನುವ ಆಶಾಭಾವನೆ ಹಾಗೂ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಇನ್ನು ಸಿನಿಮಾಗೆ ಕೆ ವಿ ಆರ್ ಪಿಚ್ಚರ್ ನವರು ಬಂಡವಾಳವನ್ನು ಹೂಡಿದ್ದಾರೆ. ಇನ್ನು ಸಿನಿಮಾದಲ್ಲಿ ಸಹ ಕಲಾವಿದರು ಬಲರಾಜವಾಡಿ, ಕಾಕ್ರೋಚ್ ಸುಧಿ, ವರ್ಧನ್, ಶೋಭಿತ, ಮಫ್ತಿ ಪ್ರದೀಪ್, ಪುಂಗ ಉಮೇಶ್ ಇನ್ನಿತರರು ಇದ್ದಾರೆ.