ಬೆಂಗಳೂರು: ಕೇಂದ್ರ ನಗರ ಪಾಲಿಕೆಯ ವ್ಯಾಪ್ತಿಯ ಶಿವಾಜಿನಗರ ಬಸ್ ನಿಲ್ದಾಣದ ಹತ್ತಿರದ ಪಾದಚಾರಿ ಮಾರ್ಗದಲ್ಲಿ ಒತ್ತುವರಿಗಳನ್ನು ತೆರವುಗೊಳಿಸಿದ್ದು, ಒತ್ತುವರಿ ತೆರವಿನಿಂದ ಸಂಗ್ರಹವಾಗಿದ್ದ ತ್ಯಾಜ್ಯವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿಲಾಗಿದೆ.
ಸ್ವಚ್ಛತೆಯ ಬಳಿಕ ಗೋಡೆಗಳಿಗೆ ಬಣ್ಣ ಬಳಿದು, ಸಾರ್ವಜನಿಕ ಜಾಗವನ್ನು ಸುಂದರಗೊಳಿಸಲಾಗಿದೆ. ಜೊತೆಗೆ ನಾಗರಿಕರಲ್ಲಿ ಸ್ವಚ್ಛತೆ ಮತ್ತು ಸಾರ್ವಜನಿಕ ಜಾಗಗಳ ಸಂರಕ್ಷಣೆ ಕುರಿತು ಅರಿವು ಮೂಡಿಸಲು ಸಾರ್ವಜನಿಕ ಜಾಗೃತಿ ಫಲಕಗಳನ್ನು ಅಳವಡಿಸಲಾಗಿದೆ ಎಂದು ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ಶ್ರೀ ಜಗದೀಶ್ ಜಿ ರವರು ತಿಳಿಸಿದ್ದಾರೆ.
ಪಾದಚಾರಿಸ್ನೇಹಿ, ಸ್ವಚ್ಛ, ಸುಂದರ ಮತ್ತು ಸುರಕ್ಷಿತ ನಗರ ನಿರ್ಮಾಣಕ್ಕೆ ಕೇಂದ್ರ ನಗರ ಪಾಲಿಕೆಯ ನಿರಂತರ ಪ್ರಯತ್ನ ಮುಂದುವರಿಯಲಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಪಾದಾ ಚಾರಿಮಾರ್ಗ ವನ್ನು ಒತ್ತುವರಿ ಮಾಡಿಕೊಂಡು ಹಲವು ಸಮಸ್ಯೆಗಳಿಂದ ಕೂಡಿತ್ತು ಪಾದಾಚಾರಿ ಮಾರ್ಗ ಒತ್ತುವರಿ ತೆರವು ಮಾಡಿದ್ದ ಪರಿಣಾಮ ಇದೀಗ ಪಾದಚಾರಿ ಮಾರ್ಗವು ಸ್ವಚ್ಛ ಸುಂದರವಾಗಿ ಕಾಣುತ್ತಿರುವುದು ನೋಡಬಹುದು. 
ಕೇಂದ್ರ ನಗರಪಾಲಿಕೆ ಆಯುಕ್ತರ ಒಂದು ಶ್ರಮದಿಂದ ಇಂತಹ ಸ್ವಚ್ಛ ಸುಂದರ ಪರಿಸರ ನಿರ್ಮಾಣ ಮಾಡಲು ಸಾಧ್ಯವಾದಂತೆ ಕಾಣುತ್ತಿದೆ.