ಉತ್ತರ ಪ್ರದೇಶ: ದೇಶವೇ ಮೆಚ್ಚುವಂತಹ ಆಧ್ಯಾತ್ಮಿಕ ಕೇಂದ್ರವಾದ ಬಾಲ ಶ್ರೀರಾಮ ಮಂದಿರ ಲೋಕಾರ್ಪಣೆ ಕಾರ್ಯಕ್ರಮವು ಅದ್ದೂರಿ ವಿಶೇಷತೆಯಿಂದ ಉತ್ತರ ಪ್ರದೇಶದಲ್ಲಿ ನೆರವೇರಿತು.
ಇಡೀ ದೇಶವೇ ಬಾಲ ಶ್ರೀರಾಮ ಮಂದಿರ ಲೋಕಾರ್ಪಣೆ ಮಾಡಿದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಲಕ್ಷಾಂತರ ಜನರು ಇಲ್ಲಿಯ ತನಕ ಪ್ರವಾಸಿ ತಾಣವನ್ನಾಗಿ ಮಾಡಿರುವುದಲ್ಲದೆ ಬೃಹತ್ ಆಧ್ಯಾತ್ಮಿಕ ಕೇಂದ್ರವನ್ನಾಗಿ ಮಾಡಿರುವ ಹೆಗ್ಗಳಿಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಸಲ್ಲುತ್ತದೆ.
ಆದರೆ ಬಾಲ ಶ್ರೀ ರಾಮ ಮಂದಿರ ಈಗ ವಿವಾದದ ಕೇಂದ್ರವಾಗಿ ಮಾರ್ಪಟ್ಟಿರುವುದು ದುರಂತದ ಸಂಗತಿಯಾಗಿದೆ. ಸುಮಾರು ಸುಮಾರು 200 ಕೋಟಿ ಯಷ್ಟು ಬೆಳೆ ವಾಳುವ ಚಿನ್ನ, ಬೆಳ್ಳಿ, ವಜ್ರ ಸೇರಿದಂತೆ ನೂರಾರು ಕೋಟಿ ಹಣವನ್ನು ಕರ ಸೇವಕರು ಲೂಟಿ ಮಾಡಿದ್ದಾರೆಂದು ಸ್ವತಃ ಬಿಜೆಪಿಯವರೇ ಆರೋಪ ಮಾಡಿದ್ದಾರೆ.
ಪ್ರಕರಣದಲ್ಲಿ ದೇವಾಲಯದ ಟ್ರಸ್ಟ್ ಅಧ್ಯಕ್ಷರು, ಭಾಗಿಯಾಗಿದ್ದಾರೆ ಎನ್ನುವ ಸಂಗತಿ ದೇವಾಲಯದಲ್ಲಿ ಅಳವಡಿಸಿತುವ CCTV ದೃಶ್ಯಾವಳಿ ಮರೆಮಾಚಲಾಗಿದೆ. ಅದರ ಜೊತೆಗೆ 13 ಹುಂಡಿಯಲ್ಲಿನ ಅಪಾರ ಪ್ರಮಾಣದ ಬೆಲೆ ಬಾಳುವ ಆಭರಣ ಸೇರಿ ಹಣ ಕಳ್ಳತನವಾಗಿದೆ.
SIT ತನಿಖೆ ಶುರು:
ಬಾಲ ರಾಮನ ದೇವಾಲಯದಲ್ಲಿ ಆಗಿರವ ಕಳ್ಳತನ ಪ್ರಕರಣವನ್ನು SITಗೆ ವಹಿಸಲಾಗಿದ್ದು, ತನಿಖೆ ಯುದ್ದೋಪಾದಿಯಲ್ಲಿ ನಡೆಯುತ್ತಿದೆ. ಅದಕ್ಕೆ ಸಿಎಂ ಯೋಗಿ ಆದಿತ್ಯನಾಥ್ ಅವರು ಸಹಕಾರ ನೀಡಿದ್ದಾರೆ ಎನ್ನಲಾಗಿದೆ. ಧಾರ್ಮಿಕ ಕೇಂದ್ರವನ್ನು ಹಾಳು ಮಾಡಲು ವಿಪಕ್ಷದವರು ಪಿತೂರಿ ನಡೆಸಿದ್ದಾರೆ ಎಂದರು. 
ಪ್ರತಿ ದಿನ ಲಕ್ಷ ಲಕ್ಷ ಲೂಟಿ:
ಬಾಲ ರಾಮನ ಮಂದಿರದಲ್ಲಿ ನಿತ್ಯ ಲಕ್ಷಾಂತರ ರೂಪಾಯಿ ಭಕ್ತರಿಂದ ಹುಂಡಿಗೆ ಆಭರಣ ಸೇರಿ ಹಣ ದೇಣಿಗೆ ಬರುತ್ತದೆ. ಪ್ರತಿನಿತ್ಯ ಲಕ್ಷ ಲಕ್ಷ ರೂಪಾಯಿ ಹಣವನ್ನು ಅರ್ಚಕರು ದೋಚಿದ್ದಾರೆ ಎಂದು ಆರೋಪಿಸಿದರು.
ಅದೇನೆ ಇರಲಿ ರಾಮನ,ಲ್ಲೂ ಲೂಟಿ ಮಾಡುವುದನ್ನು ಬಿಜೆಪಿಯವರು ಬಿಟ್ಟಿಲ್ಲ ಮತ್ತೇನು ಬಿಡುತ್ತಾರೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಪ್ರಕರಣ ಸಂಬಂಧ SIT ತನಿಖೆ ನಡೆಯುತ್ತಿದ್ದು, ಮುಂದೆ ಯಾರು ತಪ್ಪಿತಸ್ಥರಾಗುತ್ತಾರೆ ಎಂಬುದನ್ನು ಕಾದುನೋಡಬೇಕಾಗುದೆ.