LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕಿಮ್ಸ್ ರೆನೋವಾ ಆಂಕಾಲಜಿ ಇನ್‌ಸ್ಟಿಟ್ಯೂಟ್ ಉದ್ಘಾಟನೆ ಮಾಡಿದ ಕ್ರಿಕೆಟ್ ದಿಗ್ಗಜ ವಿವಿಎಸ್ ಲಕ್ಷ್ಮಣ್

ಮಹದೇವಪುರದ  ನಿರ್ಮಾಣವಾಗಿದೆ ಅತ್ಯಾಧುನಿಕ ಕಿಮ್ಸ್ ಆಸ್ಪತ್ರೆ,ಕಿಮ್ಸ್ ರೆನೋವಾ ಆಂಕಾಲಜಿ ಇನ್‌ಸ್ಟಿಟ್ಯೂಟ್ ಉದ್ಘಾಟನೆ ಮಾಡಿದ ಕ್ರಿಕೆಟ್ ದಿಗ್ಗಜ ವಿವಿಎಸ್ ಲಕ್ಷ್ಮಣ್ ಕ್ಯಾನ್ಸರ್ ವಿಜೇತರಿಗಾಗಿ ’ಸಮರೋಹಣ ಸಾರಥಿ’ ಕಾರ್ಯಕ್ರಮ, ಲಕ್ಷ್ಮಣ್ ಸಾಧನೆಯ ನೆನಪಿನಲ್ಲಿ ೧೩೪ ಉಚಿತ ತಪಾಸಣಾ ಶಿಬಿರಗಳ ಪ್ರತಿಜ್ಞೆ

ಬೆಂಗಳೂರು: ಮಹದೇವಪುರದಲ್ಲಿರುವ ಕಿಮ್ಸ್ ಆಸ್ಪತ್ರೆಯಲ್ಲಿ (ಕೃಷ್ಣ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್) ಅತ್ಯಾಧುನಿಕ ಹಾಗೂ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರವಾದ ’ಕಿಮ್ಸ್ ರೆನೋವಾ ಆಂಕಾಲಜಿ ಇನ್‌ಸ್ಟಿಟ್ಯೂಟ್’ ಅನ್ನು  ಅಧಿಕೃತವಾಗಿ ಮಾಜಿ ಅಂತರರಾಷ್ಟ್ರ ಕ್ರಿಕೆಟಿಗ ಹಾಗೂ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥ ಶ್ರೀ ವಿವಿಎಸ್ ಲಕ್ಷ್ಮಣ್ ಉದ್ಘಾಟಿಸಲಾಯಿತು. news_1782206215_6_894.webp

ನಂತರ ಮಾತನಾಡಿದ ಅವರು, ಸಿಲಿಕಾನ್ ಸಿಟಿಯಲ್ಲಿ ಕ್ಯಾನ್ಸರ್ ಚಿಕಿತ್ಸಾ ರಂಗವನ್ನು ಮತ್ತಷ್ಟು ಬಲಪಡಿಸುವಲ್ಲಿ ಪ್ರಮುಖ ಮೈಲಿಗಲ್ಲಾಗಿ ಹೊರಹೊಮ್ಮಿದೆ.  ಉದ್ಘಾಟನಾ ಸಮಾರಂಭದಲ್ಲಿ ಆರೋಗ್ಯ ರಂಗದ ಪ್ರಮುಖ ನಾಯಕರು, ಹೆಸರಾಂತ ಆಂಕಾಲಜಿ ತಜ್ಞರು, ಗಣ್ಯರು ಮತ್ತು ಕ್ಯಾನ್ಸರ್‌ನಿಂದ ಗುಣಮುಖರಾದ ರೋಗಿಗಳು ಭಾಗವಹಿಸಿದ್ದರು.

ಕ್ರಿಕೆಟ್ ಗೂ ಆಂಕೊಲಜಿಗೂ ಅವಿನಭಾವ ಸಂಬಂಧವಿದೆ

ಕ್ರಿಕೆಟ್ ಕ್ಯಾನ್ಸರ್ ರೋಗದ ವಿಭಾಗಗಳಿಗೂ ಸಾಕಷ್ಟು ಸಂಬಂಧ ಇದೆ ಸಮಾಜದ ಹಿಂದುಳಿದ ವರ್ಗಗಳಲ್ಲಿ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವ ನಿಟ್ಟಿನಲ್ಲಿ ಕಿಮ್ಸ್ ರೆನೋವಾ ಆಂಕಾಲಜಿ ಇನ್‌ಸ್ಟಿಟ್ಯೂಟ್ ಮತ್ತು ಸಮರೋಹಣ ಕ್ಯಾನ್ಸರ್ ಫೌಂಡೇಶನ್ ಜಂಟಿಯಾಗಿ “೧೩೪ ಉಚಿತ ಸ್ಕ್ರೀನಿಂಗ್ ಕ್ಯಾಂಪ್” ಆಯೋಜಿಸುವ ಪ್ರತಿಜ್ಞೆ ಕೈಗೊಳ್ಳಲಾಯಿತು. ಭಾರತದ ಪರವಾಗಿ ೧೩೪ ಟೆಸ್ಟ್ ಪಂದ್ಯಗಳನ್ನು ಆಡಿರುವ ವಿವಿಎಸ್ ಲಕ್ಷ್ಮಣ್ ಅವರ ಐತಿಹಾಸಿಕ ಕ್ರೀಡಾ ಸಾಧನೆಯ ಪ್ರೇರಣೆಯೊಂದಿಗೆ ಈ ೧೩೪ ಉಚಿತ ಜಾಗೃತಿ ಮತ್ತು ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದೇ ವೇಳ ಸಂವಾದದಲ್ಲಿ ಕ್ರಿಕೆಟಾಗುವ ಅಂಕಾಲಜಿ ಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಪ್ರಶ್ನಾವಳಿಗಳು ಚರ್ಚೆಗಳು ಸಂವಾದದಲ್ಲಿ ನಡೆದವು.news_1782206209_1_317.webp

ಕಿಮ್ಸ್ ಆಸ್ಪತ್ರೆಯ ಪ್ರಮುಖ ತಜ್ಞರಾದ  ಆಂಕಾಲಜಿ ವಿಭಾಗದ  ಅಧ್ಯಕ್ಷರಾಗಿರುವ ಡಾ.  ಸಂದೀಪ್ ನಾಯಕ್ ಮಾತನಾಡಿ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಹೆಸರಾಂತ ವೈದ್ಯಕೀಯ ತಜ್ಞರನ್ನು ಒಟ್ಟುಗೂಡಿಸುವ ಮೂಲಕ ನಾವು ಕ್ಯಾನ್ಸರ್ ಆರೈಕೆಯಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸುತ್ತಿದ್ದೇವೆ,ಇಂದಿನ ಕ್ಯಾನ್ಸರ್ ಚಿಕಿತ್ಸೆಗೆ ನಿಖರತೆ ಮತ್ತು ಬಹುಶಿಸ್ತೀಯ ಪರಿಣತಿಯ ಅಗತ್ಯವಿದೆ. ರೊಬೊಟಿಕ್ ಸರ್ಜರಿ, ಸುಧಾರಿತ ಶಸ್ತ್ರಚಿಕಿತ್ಸೆ ಸೇರಿದಂತೆ ರೋಗಿಗಳಿಗೆ ವೈಯಕ್ತೀಕರಿಸಿದ ಚಿಕಿತ್ಸಾ ಮಾರ್ಗಗಳನ್ನು ನಾವು ಒದಗಿಸುತ್ತೇವೆ ಎಂದು ಹೇಳಿದರು.

ಪ್ರತಿಯೊಬ್ಬರಿಗೂ ವಿಶ್ವದರ್ಜೆಯ ಸುಧಾರಿತ ಆರೋಗ್ಯ ಸೇವೆಯನ್ನು ಲಭ್ಯವಾಗುವಂತೆ ಮಾಡುವುದು ನಮ್ಮ ಮುಖ್ಯ ಆಶಯವಾಗಿದೆ. ಮಹದೇವಪುರದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲು ಸುತ್ತಮುತ್ತಲಿನ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅತ್ಯಾಧುನಿಕವಾದಂತಹ ತಂತ್ರಜ್ಞಾನವನ್ನು ಬಳಸಿಕೊಂಡು ಅಂಕಾಲಜಿ ಕೇಂದ್ರವನ್ನು ನಿರ್ಮಾಣ ಮಾಡಲಾಗಿದೆ ಇದರ ಸದುಪಯೋಗವನ್ನು ರೋಗಿಗಳು ಪಡೆದು ಕೊಳ್ಳಬೇಕೆಂದು ಮನವಿ ಮಾಡಿದರು ಅತ್ಯಧುನಿಕವಾದಂತಹ ತಂತ್ರಜ್ಞಾನ ಒಳಗೊಂಡಿದ್ದು, ಒಂದೇ ಸೂರಿನಡಿ ಎಲ್ಲಾ ಚಿಕಿತ್ಸಾ ಸೌಲಭ್ಯಗಳು ಆಸ್ಪತ್ರೆಯಲ್ಲಿ ವದಯಿಸಲಾಗಿದೆ ಎಂದು ಇದೇ ವೇಳೆ ಅವರು ತಿಳಿಸಿದರು.

ಈ ವೇಳೆ ಕ್ರಿಕೆಟ್ ಮತ್ತು ಕ್ಯಾನ್ಸರ್ ಚಿಕಿತ್ಸೆಯ ನಡುವಿನ ಸಾಮ್ಯತೆಗಳ ಬಗ್ಗೆ ಚರ್ಚಿಸಿದ ಅವರು "ಕ್ಯಾನ್ಸರ್ ಅನ್ನು ಜಯಿಸಲು ಬಲವಾದ ಜಂಟಿ ಪಾಲುದಾರಿಕೆ, ಬದಲಾಗುತ್ತಿರುವ ಪರಿಸ್ಥಿತಿಗಳಿಗೆ ತಕ್ಕಂತೆ ತಂತ್ರಗಳನ್ನು ರೂಪಿಸುವುದು ಮತ್ತು ಕ್ರೀಡಾಂಗಣದಂತೆ ಚಿಕಿತ್ಸೆಯಲ್ಲೂ ’ದೀರ್ಘ ಇನ್ನಿಂಗ್ಸ್’ ಆಡುವುದು ಅತ್ಯಂತ ಅವಶ್ಯಕವಾಗಿದೆ," ಎಂದು ತಜ್ಞರು ಅಭಿಪ್ರಾಯಪಟ್ಟರು.news_1782206209_0_614.webp

ಬೆಂಗಳೂರು ಕಿಮ್ಸ್ ಹಾಸ್ಪಿಟಲ್ಸ್ ವ್ಯವಸ್ಥಾಪಕ ನಿರ್ದೇಶಕರಾದ ಡಾ.ನಿತೀಶ್ ಶೆಟ್ಟಿ, , ಕಿಮ್ಸ್ ಗ್ರೂಪ್ ಆಫ್ ಹಾಸ್ಪಿಟಲ್ಸ್ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಾ.ಬಿ. ಭಾಸ್ವರ್‌ರಾವ್,ರೆನೋವಾ ಹಾಸ್ಪಿಟಲ್ಸ್ ಸಂಸ್ಥಾಪಕ ಮತ್ತು ಸಿಇಒ, ಶ್ರೀಧರ್ ಪೆದ್ದಿರೆಡ್ಡಿ, ಸೇರಿದಂತೆ ಆಸ್ಪತ್ರೆಯ ವೈದ್ಯರು ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಘನ ತ್ಯಾಜ್ಯ ನಿರ್ವಹಣೆ, ಬ್ಲ್ಯಾಕ್ ಸ್ಪಾಟ್ ತೆರವು, ಸಿಬ್ಬಂದಿ ಕಾರ್ಯಕ್ಷಮತೆ ಕುರಿತು ಪ್ರಗತಿ ಪರಿಶೀಲನಾ ಸಭೆಕಸ ಸಂಗ್ರಹಣ ಆಟೋಗಳ ಮೇಲೆ ನಿಗಾ ಇಡಲು ಪ್ರಾಯೋಗಿಕವಾಗಿ MATRA app ಬಳಕೆ: ಆಯುಕ್ತ ಕೆ. ಎನ್. ರಮೇಶ್ವಾರ್ಡ್ ಮಟ್ಟದ  ಕಾಮಗಾರಿಗಳಲ್ಲಿ ಗುಣಮಟ್ಟವನ್ನು ಕಾಪಾಡಿಕೊಳ್ಳಿ: ಲೋಖಂಡೆ ಸ್ನೇಹಲ್ ಸುಧಾಕರ್ರಕ್ಷಣಾ ವಲಯದಲ್ಲಿ ಆತ್ಮನಿರ್ಭರತೆ: ರಾಜ್ಯದ ನೇತೃತ್ವದಲ್ಲಿ ಪಾಲುದಾರರ ಕಾರ್ಯಾಗಾರಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ತಡೆಗಟ್ಟಲು ಮುಂಜಾಗ್ರತಾ ಕ್ರಮ ಕೈಗೊಳ್ಳಿ: ಜಲಮಂಡಳಿ ಅಧ್ಯಕ್ಷರಾದ ಡಾ ಮಂಜುಳಾ ಸೂಚನೆ*ಕಿಮ್ಸ್ ರೆನೋವಾ ಆಂಕಾಲಜಿ ಇನ್‌ಸ್ಟಿಟ್ಯೂಟ್ ಉದ್ಘಾಟನೆ ಮಾಡಿದ ಕ್ರಿಕೆಟ್ ದಿಗ್ಗಜ ವಿವಿಎಸ್ ಲಕ್ಷ್ಮಣ್15 ಲಕ್ಷ ಸ್ಥಳೀಯ ತಳಿ ಸಸಿಗಳ ನೆಡುವ ಬೃಹತ್ ಅಭಿಯಾನಕ್ಕೆ ಸಕಲ ಸಿದ್ಧತೆಶ್ರೀ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮಿಗಳು ಲಿಂಗೈಕ್ಯಸಮಗ್ರ ಯೋಜನೆ ರೂಪಿಸಿ ಕಾಮಗಾರಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ : ಕೃಷ್ಣ ಬೈರೇಗೌಡಪಂಚ ಗ್ಯಾರಂಟಿ ನಾವೆಂದೂ ನಿಲ್ಲಿಸುವುದಿಲ್ಲ, ಕೊಟ್ಟ ಮಾತು ತಪ್ಪುವರಲ್ಲ:ಸಿದ್ದರಾಮಯ್ಯ