LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಲೆಗಸಿ ಜಾಹೀರಾತುಗೆ ಅನುಮತಿ ಪಡೆಯಲು ಸುವರ್ಣ ಅವಕಾಶ: ಚೋಳನ್

ಬೆಂಗಳೂರು : ಪರಂಪರಾಗತ (ಲೆಗಸಿ) ಜಾಹೀರಾತುಗಳಿಗೆ ಬೆಂಗಳೂರು ಕೇಂದ್ರ ನಗರ ಪಾಲಿಕೆ ವತಿಯಿಂದ ಅನುಮತಿ ಪಡೆಯಲು ಸುವರ್ಣಾವಕಾಶ ಕಲ್ಪಿಸಲಾಗಿದೆ ಎಂದು ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ತಿಳಿಸಿದರು.

ಗ್ರೇಟರ್ ಬೆಂಗಳೂರು ಪ್ರದೇಶ (ಜಾಹೀರಾತು) ನಿಯಮಗಳು, 2025ರ ನಿಯಮಗಳ ನಿಯಮ-8 ರಡಿಯಲ್ಲಿ ಲೆಗಸಿ ಜಾಹೀರಾತುಗಳಿಗೆ (Legacy Advertisements) ಅನುಮತಿ ಪಡೆಯಲು ಹಾಗೂ ಸ್ವಯಂ ಜಾಹೀರಾತುಗಳನ್ನು (Self Advetisements) ವಾಣಿಜ್ಯ ಜಾಹೀರಾತು ಫಲಕಗಳನ್ನಾಗಿ ಪ್ರದರ್ಶಿಸಲು One Time Opportunity (OTO) ಅವಕಾಶವನ್ನು ಕಲ್ಪಿಸಿದ್ದು, ಕೇಂದ್ರೀಕೃತವಾಗಿ ಮೇಲ್ವಿಚಾರಣೆ ನಡೆಸಲು ಶ್ರೀ ಕರಿಗೌಡ, ಭಾ.ಆ.ಸೇ., ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಬೆಂ.ಘ.ತ್ಯಾ.ನಿ. ಬೆಂಗಳೂರು ಇವರನ್ನು ನೋಡಲ್ ಅಧಿಕಾರಿಯಾಗಿ ಸರ್ಕಾರದಿಂದ ನೇಮಿಸಲಾಗಿರುತ್ತದೆ.

ದಿನಾಂಕ:13-01-2026 ರಂದು ಜಾರಿಗೆ ಬಂದಿರುವ ಗ್ರೇಟರ್ ಬೆಂಗಳೂರು ಪ್ರದೇಶ (ಜಾಹೀರಾತು) ನಿಯಮಗಳು, 2025ರ ನಿಯಮ-8.7(1) ರಲ್ಲಿ ಬಿ.ಬಿ.ಎಂ.ಪಿ. ಜಾಹೀರಾತು ಉಪವಿಧಿಗಳು-2006 ರಡಿಯಲ್ಲಿ ಖಾಸಗಿ ಆಸ್ತಿಯ ಮೇಲೆ ಜಾಹೀರಾತು ಅಳವಡಿಸಲು ಅನುಮತಿ ಪಡೆದಿರುವ ಹಾಗೂ ಸಂಪೂರ್ಣ ಜಾಹೀರಾತು ತೆರಿಗೆ ಪಾವತಿಸಿರುವ ಜಾಹೀರಾತು ಸಂಸ್ಥೆಗಳನ್ನು ಪರಂಪರಾಗತ/ಲೆಗಸಿ ಜಾಹೀರಾತು ಸಂಸ್ಥೆಗಳೆಂದು ಪರಿಗಣಿಸಲಾಗಿರುತ್ತದೆ ಹಾಗೂ ನಿಯಮ-8.7(vii) ರಲ್ಲಿ ಯಾವುದೇ ಹಿಂದಿನ ಜಾಹೀರಾತು ಉಪ ವಿಧಿಗಳ ಅಡಿಯಲ್ಲಿ ಎಲ್.ಇ.ಡಿ. ಜಾಹೀರಾತು ಪ್ರದರ್ಶನ ಫಲಕಕ್ಕಾಗಿ ಪಡೆಯಲಾದ ಮತ್ತು ಚಾಲ್ತಿಯಲ್ಲಿರುವ ಹಾಗೂ ಅನುಮತಿ ಅವಧಿಯೊಳಗೆ ಇರುವ ಎಲ್.ಇ.ಡಿ. ಸ್ವಯಂ ಜಾಹೀರಾತುಗಳನ್ನು (Self Advetisements) ವಾಣಿಜ್ಯ ಜಾಹೀರಾತು ಫಲಕಗಳನ್ನಾಗಿ ಪರಿವರ್ತಿಸಲು One Time Opportunity (OTO) ಅವಕಾಶವನ್ನು ಕಲ್ಪಿಸಿದ್ದು,

ಅರ್ಹ ಜಾಹೀರಾತುದಾರರು ಜಾಹೀರಾತು ನಿಯಮಗಳ 2025 ರಲ್ಲಿನ ನಮೂನೆ-(IV) ರಲ್ಲಿ ಬೆರಳಚ್ಚು ಮಾಡಿರುವ ಅರ್ಜಿಯನ್ನು ಪೂರಕ ದಾಖಲೆಗಳೊಂದಿಗೆ (Please submit Form- IV in typed form With all the relevant supporting documents) ದಿನಾಂಕ:13-04-2026 ರೊಳಗಾಗಿ, ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತರು ರವರ ಕಛೇರಿ, 10ನೇ ಮಹಡಿ, ನೇತಾಜಿ ಸುಭಾಸ್ ಚಂದ್ರ ಬೋಸ್ (ಪಿಯುಬಿ ಕಟ್ಟಡ), ಎಂ.ಜಿ. ರಸ್ತೆ, ಬೆಂಗಳೂರು-560001 ಈ ವಿಳಾಸದಲ್ಲಿ ಕಛೇರಿ ಸಮಯದಲ್ಲಿ ಸಲ್ಲಿಸಬಹುದಾಗಿದೆ.
Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ