ದಕ್ಷಿಣ ನಗರ ಪಾಲಿಕೆಯ ಆಯುಕ್ತರಾದ ಕೆ ಎನ್ ರಮೇಶ್ ರವರ ಆದೇಶದ ಮೇರೆಗೆ ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ 6 ವಿಧಾನಸಭಾ ಕ್ಷೇತ್ರಗಳ ರಸ್ತೆಗಳಲ್ಲಿ, ಉದ್ಯಾನವನಗಳಲ್ಲಿ ಹಾಗೂ ಕೆರೆಗಳಲ್ಲಿ ದಕ್ಷಿಣ ನಗರ ಪಾಲಿಕೆಯ ಅರಣ್ಯ ಘಟಕದಿಂದ 02-09-2025 ರಿಂದ ಇಲ್ಲಿಯವರೆಗೆ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಒಣಗಿದ ಹಾಗೂ ಅಪಾಯಕಾರಿ ಮರಗಳು ಮತ್ತು ಒಣಗಿದ ಹಾಗೂ ಅಪಾಯಕಾರಿ ರೆಂಬೆ-ಕೊಂಬೆಗಳ ತೆರವು ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ.
*ವಲಯವಾರು ತೆರವುಗೊಳಿಸಿದ ಮರ, ರೆಂಬೆ ಕೊಂಬೆಗಳ ವಿವರಗಳು ಕೆಳಗಿನಂತಿವೆ:*
*ವಲಯ-1 ರ ಜಯನಗರ ವ್ಯಾಪ್ತಿಯಲ್ಲಿ:*
* ಒಣಗಿದ ಮರಗಳು – 32
* ಒಣಗಿದ ರೆಂಬೆ-ಕೊಂಬೆಗಳು – 509
* ಅಪಾಯಕಾರಿ ಮರಗಳು – 27
* ಅಪಾಯಕಾರಿ ಕೊಂಬೆಗಳು –375
*ವಲಯ-2 ರ ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ*
* ಒಣಗಿದ ಮರಗಳು – 47
* ಒಣ ಕೊಂಬೆಗಳು – 280
* ಅಪಾಯಕಾರಿ ಮರಗಳು – 21
* ಅಪಾಯಕಾರಿ ಕೊಂಬೆಗಳು – 225
*ಬೆಂಗಳೂರು ದಕ್ಷಿಣ ನಗರ ಪಾಲಿಕೆಯಲ್ಲಿ ತೆರವುಗೊಳಿಸಿದ ಒಟ್ಟು ವಿವರ:*👇
* ಒಣಗಿದ ಮರಗಳು – 79
* ಒಣಗಿದ ರೆಂಬೆ-ಕೊಂಬೆಗಳು – 789
* ಅಪಾಯಕಾರಿ ಮರಗಳು – 48
* ಅಪಾಯಕಾರಿ ಕೊಂಬೆಗಳು – 600
ನಗರದಲ್ಲಿ ಒಣಗಿದ ಹಾಗೂ ಅಪಾಯಕಾರಿ ಮರಗಳು ಹಾಗೂ ರೆಂಬೆ ಕೊಂಬೆಗಳಿಂದ ಸಂಭವಿಸಬಹುದಾದ ಅಪಘಾತಗಳನ್ನು ತಡೆಯುವ ಹಾಗೂ ಸಾರ್ವಜನಿಕರ ಜೀವ, ಆಸ್ತಿ-ಪಾಸ್ತಿ ಸುರಕ್ಷತೆಯನ್ನು ಕಾಪಾಡುವ ಉದ್ದೇಶದಿಂದ ಈ ಕಾರ್ಯಾಚರಣೆಗಳನ್ನು ದಕ್ಷಿಣ ನಗರ ಪಾಲಿಕೆಯ ಅರಣ್ಯ ವಿಭಾಗದಿಂದ ಹಮ್ಮಿಕೊಳ್ಳಲಾಗಿದೆ. ಮುಂದೆಯೂ ಇದೇ ರೀತಿಯ ಪರಿಶೀಲನೆ ಹಾಗೂ ಅಗತ್ಯ ಕ್ರಮಗಳು ನಿರಂತರವಾಗಿ ಕೈಗೊಳ್ಳಲಾಗುತ್ತದೆ.