ಬೆಂಗಳೂರು : ನವ ನರಸಿಂಹ ವಜ್ರಕವಚವನ್ನು ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇಗುಲಕ್ಕೆ ದೇವಾಲಯದ ಭಕ್ತರು ಧರ್ಮದರ್ಶಿಗಳು ಹಾಗೂ ಟ್ರಸ್ಟ್ ನ ಅಧ್ಯಕ್ಷರಾದ ಡಾ .ಶ್ರೀನಿವಾಸಮೂರ್ತಿ ತಿಳಿಸಿದರು.

ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ರಾಮನಗರ ಜಿಲ್ಲೆ, ಮಾಗಡಿ ತಾಲ್ಲೂಕ್ ಸಾವನದುರ್ಗದ ಲ್ಲಿ ನೆಲೆಸಿರುವ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯ ದೇಗುಲವು ಅತ್ಯಂತ ಪುರಾತನ ಪ್ರಸಿದ್ಧವಾದುದು, ಅಲ್ಲದೆ ಈ ಸ್ವಾಮಿಯು ನಮ್ಮೆಲ್ಲರ ಕುಲಾಧ್ಯವವು ಹೌದು. ಮೇಲ್ಕಂಡ ನಮ್ಮ ಟ್ರಸ್ಟ್ ವತಿಯಿಂದ ಶ್ರೀ ಲಕ್ಷ್ಮೀನರಸಿಂಹ ನರಸಿಂಹ ದೇಗುಲಕ್ಕೆ ಸುಮಾರು 30ಕೆಜಿ ಬೆಳ್ಳಿಯಲ್ಲಿ ನೂತನವಾಗಿ ತಯಾರಿಸಿರುವ ನವನರಸಿಂಹ ವಜ್ರಕವಚವನ್ನು " ನೀಡಲು ದೈವ ಪ್ರೇರಣೆಯಾಗಿದೆ.
ನಾಡಿನ ಗಣ್ಯಮಾನ್ಯರ ಸಮಕ್ಷಮದಲ್ಲಿ ಹಾಗೂ ನಿಮ್ಮೆಲ್ಲರ ಸಮ್ಮುಖದಲ್ಲಿ ಶ್ರೀ ಸಾವನದುರ್ಗದ ಲಕ್ಷ್ಮೀನರಸಿಂಹಸ್ವಾಮಿ ದೇಗುಲಕ್ಕೆ ದಿನಾಂಕ 28-01-2026 ನೇ ಬುಧವಾರದಂದು ಬೆಳಿಗ್ಗೆ 9-45 ರಿಂದ 10-30ರ ಒಳಗೆ ಅರ್ಪಿಸಲಿದ್ದೇವೆ. ಇನ್ನೂ ವಜ್ರ ಕವಚ ಸಂಪೂರ್ಣವಾಗಿ ನಮ್ಮ ಕುಟುಂಬ ಹಾಗೂ ಮನೆತನದವರ ಸೇರಿಕೊಂಡು ಸಮರ್ಪಿಸಲಾಗುತ್ತದೆ ಅಂದಾಜು ಈಗಿನ ಲೆಕ್ಕಾಚಾರದಲ್ಲಿ ಒಂದು ಕೋಟಿ ವೆಚ್ಚದಲ್ಲಿ ಹಾಕಲಿದೆ ಎಂದರು.
ಲಕ್ಷ್ಮೀ ನರಸಿಂಹ ಸ್ವಾಮಿಯ ಪವಾಡ ರೋಚಕವಾಗಿದ್ದು ಸಾರ್ವಜನಿಕರಿಗೆ ಹಾಗೂ ಭಕ್ತರಿಗೆ ಗೊತ್ತಿಲ್ಲದೆಯೇ ಹಲವು ಒಳಿತುಗಳು ಆಗಿದ್ದಾವೆ, ನಾನು ಒಬ್ಬ ವೈದ್ಯನಾಗಿಯೂ ಅದನ್ನು ನಂಬಲಿಕ್ಕೆ ಸಾಧ್ಯವಾಗುತ್ತಿಲ್ಲ ನನ್ನ ಸ್ವತಹ ಅನುಭವದಲ್ಲಿಯೇ ಒಂದು ರೋಚಕತೆ ನಡೆದಿರುವುದು ಕಣ್ಣಮುಂದೆ ಇದೆ ಹೀಗಾಗಿ ನಾನು ಹಲವು ವರ್ಷಗಳಿಂದ ಭಕ್ತನಾಗಿ ಸೇವೆ ಮಾಡಿಕೊಂಡು ಬರುತ್ತಿದ್ದೇನೆ ಎಂದರು.

ಕಾರ್ಯಕ್ರಮಕ್ಕೆ ಮಾಜಿ ಪ್ರಧಾನ ಮಂತ್ರಿಗಳಾದ ಎಚ್ ಡಿ ದೇವೇಗೌಡ ೇಂದ್ರ ಸಚಿವರಾದ ಹೆಚ್ಡಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಭಾಗವಹಿಸಲಿದ್ದಾರೆ ಅಲ್ಲದೆ ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗ ರೆಡ್ಡಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬೆಂಗಳೂರಿನಲ್ಲಿರುವ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದ ಪ್ರಶ್ನೆಗಳು ಅಧ್ಯಕ್ಷರು ಉಪಾಧ್ಯಕ್ಷರು ಖದಂಚಿಗಳು ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.