ಬೆಂಗಳೂರು: ಹೊಗಳಿಕೆ ತೆಗಳಿಕೆಗಳನ್ನು ಬಹಳ ಸೂಕ್ಷ್ಮವಾಗಿ ಅರ್ಥೈಸಿಕೊಂಡು ಬುದ್ಧಿಜೀವಿಗಳು ಹಿರಿಯರು ಸಾಧು ಸಂತರು ಹೇಳಿದ ಮಾತುಗಳನ್ನು ತಲೆಯಲ್ಲಿಟ್ಟುಕೊಂಡು ಕೆಲಸ ಕಾರ್ಯಗಳನ್ನು ಮಾಡುವುದರಿಂದ ಶ್ರೇಯೋಭಿವೃದ್ಧಿ ಆಗುತ್ತದೆ ಎಂದು ವಿಶ್ವ ಒಕ್ಕಲಿಗರ ಮಠ ಪೀಠಾಧ್ಯಕ್ಷರಾದ ಡಾ. ನಿಶ್ಚಲಾನಂದನಾಥ ಸ್ವಾಮೀಜಿ ತಿಳಿ ಹೇಳಿದರು.
ಚಿಲುಮೆ ರವಿಕುಮಾರ್ ಫೌಂಡೇಶನ್ ವತಿಯಿಂದ ರಾಜಾಜಿನಗರದಲ್ಲಿ ಜನಸೇವಾ ಕಾರ್ಯಕ್ರಮ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.
ಈ ಮೂಲಕ ನೂತನ ಕ್ಯಾಲೆಂಡರ್ ಬಿಡುಗಡೆ ಆಟೋ ಚಾಲಕರಿಗೆ ಸಮಸ್ತ ವಿತರಣೆ ಪೌರಕಾರ್ಮಿಕರಿಗೆ ದಿನಸಿ ಕಿಟ್, ಆಶಾ ಕಾರ್ಯಕರ್ತರಿಗೆ ಬಾಗಿನ ವಿತರಣೆಯನ್ನು ಮಾಡಲಾಯಿತು. ಇನ್ನು ಇದೇ ವೇಳೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನವನ್ನು ಸಹ ಮಾಡಲಾಯಿತು ಎಲ್ಲರಿಗೂ ಸಹ ಸಂಜೀವಿನಿ ಲಡ್ಡು ವಿತರಣೆ ಮಾಡಲಾಯಿತು.
ನಂತರ ಮಾತನಾಡಿರುವವರು, ತಿರುಮೆ ರವಿಕುಮಾರ್ ಫೌಂಡೇಶನ್ ವತಿಯಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿರುವುದು ಹೆಗ್ಗಳಿಕೆ ವಿಚಾರವಾಗಿದೆ. ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ, ಜನರ ಒಳಿತನ್ನು ಬಯಸುವ ನಿಟ್ಟಿನಲ್ಲಿ ಸಂಜೀವಿನಿ ಲಡ್ಡು ಜನರಿಗೆ ಬಹಳ ಉಪಯೋಗಕಾರಿಯಾಗಿದೆ ಹಾಗೂ ಅದನ್ನು ಮನೆಯಲ್ಲಿ ಮಾಡುವ ವಿಧಾನಗಳನ್ನು ಸಹ ತಿಳಿಸಿಕೊಡುವಂತಹ ಕೆಲಸವನ್ನು ಫೌಂಡೇಶನ್ ವತಿಯಿಂದ ನಡೆಯುತ್ತಿದೆ.
ಈಗಿನ ಆಧುನಿಕ ಯುಗದಲ್ಲಿ ರಾಗಿ ಕಣ ಮಾಡುವುದು ಕೇವಲ ಚಿತ್ರ ಪಟಗಳಲ್ಲಿ ನೋಡುವ ಪರಿಸ್ಥಿತಿ ಎದುರಾಗಿದೆ ರೈತರು ಮಾಡುವ ಕಣವನ್ನು ಹಾಗೂ ದವಸ ಧಾನ್ಯವನ್ನು ಹೇಗೆಲ್ಲಾ ಮಕ್ಕಳ ಮಾಡುತ್ತಾರೆ ಎಂಬುದರ ಬಗ್ಗೆ ನಗರದ ಜನರಿಗೆ ರವಿಕುಮಾರ್ ಅವರು ತೋರಿಸುವ ಹಾಗೂ ಸಂಕ್ರಾಂತಿಯ ಎಳ್ಳು ಬೆಲ್ಲ ಕಬ್ಬು ಕಡಲೆಕಾಯಿ ವಿತರಣೆ ಮಾಡುವ ಕೆಲಸವನ್ನು ಮಾಡುತ್ತಿರುವುದು ಸಂತೋಷದಾಯಕವಾಗಿದೆ.
ಹೊಗಳಿಕೆ ತೆಗಳಿಕೆಗಳು ಪ್ರಶಸ್ತಿಗಳು ಇವುಗಳಿಂದ ಕೊಂಚ ದೂರವಿದ್ದರೆ ನಿಮ್ಮ ಬದುಕಿಗೆ ನಿರಾಸದಾಯಕವಾಗಿರುತ್ತದೆ ಬುದ್ಧಿಜೀವಿಗಳು ಹಿರಿಯರು ಸಾವಸಂತರು ಹೇಳುವ ಅನುಭವದ ಮಾತುಗಳು ನಿನ್ನ ಜೀವನದ ಅಭಿವೃದ್ಧಿಗೆ ಒಳದಿದೆ ಸಹಕಾರಿಯಾಗುತ್ತದೆ ಎಂದು ಬುದ್ಧಿ ಹೇಳಿದರು.
ಇವೆಲ್ಲವುದರ ಜೊತೆಗೆ ಸಮಾಜಮುಖಿ ಕೆಲಸಗಳನ್ನು ವಿವಿಧ ಆಯಾಮಗಳಲ್ಲಿ ಮಾಡಿಕೊಂಡು ಬರಲಾಗುತ್ತದೆ ಅವೆಲ್ಲವುದರ ಮಧ್ಯೆ ಬಹಳ ಮುಖ್ಯವಾಗಿ ರಾಸುಗಳನ್ನು ಧಾನವಾಗಿ ಬಡ ರೈತರಿಗೆ ನೀಡಿದ್ದೆ ಆದಲ್ಲಿ ಅವರ ಬದುಕು ಹಸನಾಗುತ್ತದೆ ಅಂತಹ ಕೆಲಸಗಳನ್ನು ನೀವು ಮುಂದಿನ ದಿನಗಳಲ್ಲಿ ಮಾಡಿಕೊಂಡು ಹೋಗಬೇಕಾಗಿದೆ ಅದಕ್ಕೆ ನಮ್ಮ ಸಂಪೂರ್ಣ ಸಹಕಾರ ನೀಡಲಾಗುತ್ತದೆ ಎಂದು ರವಿಕುಮಾರ್ ಅವರಿಗೆ ಅಭಯವನ್ನು ನೀಡಿದರು.
ಇನ್ನು ಚಿಲುಮೆ ರವಿಕುಮಾರ್ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಚಿಲುಮೆ ರವಿಕುಮಾರ್ ಮಾತನಾಡಿ, ರಾಜಾಜಿನಗರ ನಗರದ ಜನತೆಗೆ ಸಂಕ್ರಾಂತಿ ಹಬ್ಬ ಹಿನ್ನೆಲೆ ಹಾಗೂ ಹೊಸ ವರ್ಷ ದಿನಾಚರಣೆಯ ಮೇಲೆ ಸಂಕ್ರಾಂತಿಯ ಉಡುಗೊರೆಗಳನ್ನು ನೀಡಲಾಯಿತು ಆಟೋ ಚಾಲಕರಿಗೆ ಸಮಾವಸ್ತ್ರ ಪೌರಕಾರ್ಮಿಕರಿಗೆ ಬೆನಿಸಿಕೆಟ್ಟು ನೂತನ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಆಶಾ ಕಾರ್ಯಕರ್ತರಿಗೆ ಬಾಗಿನ ವಿತರಣೆನು ಸಹ ಮಾಡಲಾಯಿತು. ಅಲ್ಲದೆ ಕ್ಷೇತ್ರದ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಸಹ ನೀಡಲಾಯಿತು. ಇನ್ನು ಸಂಕ್ರಾಂತಿಗೆ ಮನೆಮನೆಗೂ ಸಹ ಸಂಕ್ರಾಂತಿಯ ಉಡುಗೊರೆಯನ್ನು ಕ್ಷೇತ್ರದ ಎಲ್ಲಾ ಜನರಿಗೂ ಮನೆಗಳಿಗೂ ಖುದ್ದಾಗಿ ಭೇಟಿ ನೀಡಿ ನೀಡಲಾಗುತ್ತದೆ ಎಂದರು ನಮ್ಮ ಅಳಿಲು ಸೇವೆ ಸಮಾಜಮುಖಿ ಯಾಗಿರಬೇಕಾಗಿದೆ ಅದನ್ನು ಕೆಳವರ್ಗದ ಜನರು ಉಪಯೋಗ ಪಡೆಸಿಕೊಂಡು ಸಮಾಜದಲ್ಲಿ ಮುಂದೆ ಬರಬೇಕೆಂದು ಕರೆ ನೀಡಿದರು.
ಜನಸೇವಾ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿರೂಪಾಕ್ಷ ಒಡೆಯರ್ ಮಠ ಬೈಲಮಂಗಲ ಪೀಠಾಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿಗಳು ಬಿಪಿ ಸಾನಿಧ್ಯವನ್ನು ವಹಿಸಿದರು ಇನ್ನು ಉದ್ಘಾಟನೆಯನ್ನು ರಾಷ್ಟ್ರೀಯ ಉಪಾಧ್ಯಕ್ಷರು ಅಖಿಲ ಭಾರತ ವೀರೇಶ್ ಮಹಾಸವಾದ ಬಿ ಎಸ್ ಸಚ್ಚಿದಾನಂದ ಮೂರ್ತಿಯವರು ಉಪಸ್ಥಿತರಿದ್ದರು. ಅದೇ ನೂರಾರು ಜನರಿಗೆ ಸಂಕ್ರಾಂತಿಯ ಉಡುಗೊರೆಗಳನ್ನು ನೀಡಿ ಆಶೀರ್ವಾದ ಪಡೆದುಕೊಂಡರು ಇನ್ನು ಫೌಂಡೇಶನ್ ನ ಪದಾಧಿಕಾರಿಗಳು ಸ್ವಯಂಸೇವಕರು ರಾಜಾಜಿನಗರದ ಜನತೆ ಉಪಸ್ಥಿತರಿದ್ದರು.