ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಶ್ರೀ ಪ್ರಸನ್ನ ವೀರಾಂಜನೇಯ ಸೇವಾ ಟ್ರಸ್ಟ್ ಹಾಗೂ GRIP ಹಳೆಯ ವಿದ್ಯಾರ್ಥಿಗಳ ಸಂಘದ ಸಾಯುವದ ವತಿಯಿಂದ ವಿಶೇಷವಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಖ್ಯಾತ ವಾಗ್ಮಿ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ನಿವೃತ್ತ ನಿರ್ದೇಶಕರಾದ ಡಾ. ಕೆಪಿ ಪುತ್ತೂರಾಯ ಅವರು ವಿಶೇಷವಾದಂತಹ ಉಪನ್ಯಾಸವನ್ನು ನೀಡಿದರು, ಅಲ್ಲದೆ ನೆರೆದಿದ್ದವರನ್ನು ಮಾತಿನ ಮೂಲಕ ನಗೆ ಹಬ್ಬವನ್ನೇ ಸುರಿಸಿದರು.
ಇನ್ನು ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಸಾಕಷ್ಟು ಮೇಳಸಿದವು ಜಾನಪದ ಹಾಡುಗಳು ನೃತ್ಯ ಸಂಗೀತ ನಾಟಕಗಳು ಯೋಗ ಪ್ರದರ್ಶನ ಹಲವು ಸಂಘ ಸಂಸ್ಥೆಗಳು ಹಾಗೂ ಜಿ ಆರ್ ಐ ಸಿ ಪಿ ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳು ವಿಶೇಷವಾದಂತಹ ಸಾಂಸ್ಕೃತಿಕ ಚಟುವಟಿಕೆಗಳನ್ನು ವೇದಿಕೆ ಮೇಲೆ ನಡೆಸಿಕೊಟ್ಟರು. ಇನ್ನು ಕಾರ್ಯಕ್ರಮದಲ್ಲಿ ವಿಶೇಷವಾಗಿ ಯೋಗ ಕೇಂದ್ರಗಳಿಂದ ವಿದ್ಯಾರ್ಥಿಗಳು ವಿಭಿನ್ನ ಹಾಗೂ ವಿಶೇಷವಾದಂತಹ ಯೋಗದ ಭಂಗಿಗಳನ್ನು ಮಾಡುವ ಮೂಲಕ ಆರೋಗ್ಯದ ಬಗ್ಗೆ ಜಾಗೃತಿಯನ್ನು ಸಹ ಮೂಡಿಸಿದರು. ಅಭಿರುಚಿ ಭರತನಾಟ್ಯ ಕಲಾ ಕೊಟ್ಟಿರದಿಂದ ಭರತನಾಟ್ಯ ಹಾಗೂ ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯಿಂದ ಯೋಗ ಪ್ರದರ್ಶನ ನಯನ ಮನೋಹರವಾಗಿತ್ತು.
ಇನ್ನು ಕಾರ್ಯಕ್ರಮದಲ್ಲಿ ಶ್ರೀ ಪ್ರಸನ್ನ ವೀರಾಂಜನೇಯ ಸೇವಾ ಟ್ರಸ್ಟಿಗಳಾದ ಪ್ರಸನ್ನ ಕುಮಾರ್ ರಾಜನ್ ಶಾಂತಕುಮಾರ್ ನಾಗೇಶ್ವರ ಹಾಗೂ ಜಿ ಆರ್ ಐ ಸಿ ಪಿ ಸಂಘದ ಮುಖ್ಯಸ್ಥರಾದ ಸೂರ್ಯನಾರಾಯಣ ಉಪಾಧ್ಯಕ್ಷರಾದ ರಾಮಚಂದ್ರ ಖಜಂಚಿಯಾದ ರವೀಂದ್ರ ಆರ್ ಎಲ್ ಕಾರ್ಯದರ್ಶಿಯಾದ ನಾಗೇಶ್ ರಾವ್ ಹಾಗೂ ಸಂಸ್ಥೆ ಸಂಸ್ಥೆಯ ಹಳೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.