ಬೆಂಗಳೂರು : ಕೆ.ಆರ್. ಮಾರುಕಟ್ಟೆಗೆ ಜಿಬಿಎ ಮಾನ್ಯ ಮುಖ್ಯ *ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್* ಅವರು ನಿನ್ನೆ ಭೇಟಿ ನೀಡಿದಸಂದರ್ಭದಲ್ಲಿ ನೀಡಿದ ಸೂಚನೆಯಂತೆ ಕೆ.ಆರ್. ಮಾರುಕಟ್ಟೆಯ ಹಾಗೂ ಸುತ್ತಮುತ್ತಲಿನ ಪ್ರದೇಶ ಸ್ವಚ್ಛತೆ ಕೈಗೊಳ್ಳುವ ಉದ್ದೇಶಕ್ಕಾಗಿ ಇಂದು ಕೇಂದ್ರ ನಗರ ಪಾಲಿಕೆಯ *ಅಭಿವೃದ್ಧಿ ಅಪರ ಆಯುಕ್ತರಾದ ಶ್ರೀ ವೆಂಕಟಾಚಲಪತಿ ಅವರು ಅಧಿಕಾರಿಗಳೊಂದಿಗೆ* ಸಭೆ ನಡೆಸಿ ಅಗತ್ಯ ಸೂಚನೆ ನೀಡಿದರು.
*ಹೂ ಮಾರುಕಟ್ಟೆ ಶುಚಿಗೊಳಿಸಿ*
ತಳಮಹಡಿಯಲ್ಲಿರುವ ಹೂವಿನ ಮಾರುಕಟ್ಟೆಯನ್ನು ಸ್ವಚ್ಛಗೊಳಿಸಲು ಸೂಚನೆ ನೀಡಿದರು. ಮಾರುಕಟ್ಟೆ ಮುಂಭಾಗದ ಕೊತ್ತಂಬರಿ ಸೊಪ್ಪು ಮಾರುವ ಸ್ಥಳದಲ್ಲಿ ಮಳೆ ಬಂದಾಗ ನೀರು ನಿಂತು ಸಾಕಷ್ಟು ಗಲೀಜು ಆಗುವುದರಿಂದ ಸದರಿ ಸ್ಥಳದಲ್ಲಿ ಗುಂಡಿಗಳನ್ನು ಮುಚ್ಚಿ ಸಂಪೂರ್ಣ ಕಾಂಕ್ರಿಟ್ ಹಾಕಲು ಸೂಚನೆ ನೀಡಿದರು.
*ಹೆಚ್ಚುವರಿ ಮಾರ್ಷಲ್ ಗಳ ನಿಯೋಜನೆ*
ಸ್ವಚ್ಛತೆ ಕಾರ್ಯಕ್ಕೆ ಹೆಚ್ಚುವರಿ ಮಾರ್ಷಲ್ ಗಳನ್ನು ನಿಯೋಜನೆ ಮಾಡಿಕೊಂಡು ಸ್ವಚ್ಛತೆ ಕಾರ್ಯ ಸಮರ್ಪಕವಾಗಿ ನಡೆಸಲು ಸೂಚಿಸಿದರು.
*1ನೆ ಮಹಡಿಯಲ್ಲಿ ಶೌಚಾಲಯ ಬಳಕೆಗೆ ನೀಡಿ*
1ನೆ ಮಹಡಿಯಲ್ಲಿರುವ ಶೌಚಾಲಯವನ್ನು ಸಾರ್ವಜನಿಕ ಬಳಕೆಗೆ ನಿಡಲು ಸೂಚಿಸಿದರು.
*ಒತ್ತುವರಿಗಳನ್ನು ತೆರವುಗೊಳಿಸಿ:*
ಕೆ.ಆರ್. ಮಾರುಕಟ್ಟೆ ಕಟ್ಟಡದಲ್ಲಿರುವ ಮಳಿಗೆಗಳು ಹಾಗೂ ಮುಂಭಾಗದಲ್ಲಿನ ಒತ್ತುವರಿಗಳನ್ನು ಗುರುತಿಸಿ ಒತ್ತುವರಿದಾರರಿಗೆ ಅವರ ಸಾಮಾನು ಸರಂಜಾಮು ತೆರವುಗೊಳಿಸಲು ಕಾಲಾವಕಾಶ ನೀಡಿ, ನೀಡಿದ ಕಾಲಾವಕಾಶದಲ್ಲಿ ಅವರು ತೆರವುಗೊಳಿಸದಿದ್ದಲ್ಲಿ ನಗರ ಪಾಲಿಕೆಯ ಅಧಿಕಾರಿಗಳು ತೆರವುಗೊಳಿಸಲು ಸೂಚನೆ ನೀಡಿದರು.
* ತ್ಯಾಜ್ಯ ಸಮರ್ಪಕ ನಿರ್ವಹಣೆಗಾಗಿ ಶೆಡ್ ನಿರ್ಮಾಣಕ್ಕೆ ಕೂಡಲೇ ಕ್ರಮ ವಹಿಸಲು ಸೂಚನೆ.
* ಮಾರುಕಟ್ಟೆ ಮುಂಭಾಗದಲ್ಲಿ ವ್ಯಾಪಾರಿಗಳಿಗೆ ವ್ಯಾಪಾರ ಸ್ಥಳ ನಿಗದಿಪಡಿಸಿ ಲೈನಿಂಗ್ ಮಾಡಿಕೊಡುವುದು. ನಿಗದಿಪಡಿಸಿದ ಸ್ಥಳ ಬಿಟ್ಟು ಸಂಚಾರಕ್ಕೆ ತೊಂದರೆ ಮಾಡುವ ವ್ಯಾಪಾರಿಗಳಿಗೆ ದಂಡ ವಿಧಿಸಲು ಸೂಚನೆ. 
ಸಭೆಯಲ್ಲಿ ಜಂಟಿ ಆಯುಕ್ತರಾದ ಹೇಮಂತ್ ಶರಣ್, ಮುಖ್ಯ ಅಭಿಯಂತರರಾದ ವಿಜಯ್ ಕುಮಾರ್ ಹರಿದಾಸ್, ಅಧೀಕ್ಷಕ ಅಭಿಯಂತರರು, ಡಿಜಿಎಂ ಹಾಗೂ ಇತರೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಉಪಸ್ಥಿತರಿದ್ದರು.