ಬೆಂಗಳೂರು: ಮಹಿಳೆಯರಿಗೆ ಎಲ್ಲ ರಂಗದಿಂದಲೂ ರಕ್ಷಣೆ ಬೇಕಾಗಿದೆ, ಅದೇ ರೀತಿ ಎಲ್ಲಾ ಕಡೆಯೂ ಕಿರುಕುಳ ಹೆಚ್ಚಾಗುತ್ತದೆ ಅದಕ್ಕೆ ಮಹಿಳಾ ಆಯೋಗದಿಂದಲೇ ಮಹಿಳೆಯರ ರಕ್ಷಣೆಗೋಸ್ಕರ ಕಾಲ್ ಸೆಂಟರ್ ನಂಬರ್ ಸಹ ಇದು ಯಾವುದೇ ತುರ್ತು ಸಂದರ್ಭದಲ್ಲಿ ಸಹಾಯವಣಿಗೆ ಕರೆ ಮಾಡಿದರೆ ತುರ್ಥಾಗಿ ಸ್ಪಂದಿಸುವ ಕೆಲಸವನ್ನು ಸಂಬಂಧಪಟ್ಟ ಇಲಾಖೆಯಿಂದ ಮಾಡಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ ಹೇಳಿದರು.
ಬೆಂಗಳೂರಿನ ಆನಂದ್ ವೃತ್ತದ ಕೆಇಬಿ ಇಂಜಿನಿಯರ್ಸ್ ಸಂಘದಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 150ನೇ ಜನ್ಮ ದಿನಾಚರಣೆ ಹಿನ್ನೆಲೆ ಭಾರತ ಭಾರತಿ ಸಂಘದಿಂದ ಮಹಿಳಾ ಭಜನಾ ಸಂಧ್ಯಾ ಸ್ಪರ್ಧೆಯನ್ನು ಆಯೋಜನೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಪ್ರತಿಯೊಬ್ಬ ಮಹಿಳೆಯರು ಮಹಿಳಾ ಆಯೋಗಕ್ಕೆ ಬರುವಾಗ ಅಳುತ್ತಲೇ ಬರುತ್ತಾರೆ ಅವರ ಕಣ್ಣಲ್ಲಿ ಧಾರಾಕಾರವಾಗಿ ನೀರು ಸುರಿಯುತ್ತದೆ. ಇದರಿಂದ ಗೊತ್ತಾಗುತ್ತೆ ಮಹಿಳೆಯರಿಗೆ ಎಷ್ಟು ಕಿರುಕುಳ ನಡೆಯುತ್ತಿದೆ ಎಂಬುದು, ಅದನ್ನು ನಿಭಾಯಿಸುವ ಹಾಗೂ ತಡೆಗಟ್ಟುವ ನಿಟ್ಟಿನಲ್ಲಿ ಆಯೋಗವು ನಿರಂತರವಾಗಿ ಕೆಲಸ ಮಾಡುವ ಮೂಲಕ ಮಹಿಳೆಯರಿಗೆ ಪ್ರಾಮಾಣಿಕ ನ್ಯಾಯವನ್ನು ಒದಗಿಸುವ ಕೆಲಸ ಮಾಡುತ್ತದೆ.
ಕರ್ನಾಟಕ ರಾಜ್ಯ ಮಹಿಳಾ ಆಯೋಗದಿಂದ ಮಹಿಳೆಯರ ಸುರಕ್ಷತೆಗಾಗಿ ಸಹಾಯವಾಣಿಯನ್ನು, 112 ಹಾಗೂ 181 ತೆರೆದಿದ್ದು ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ ಅದರಲ್ಲಿ ವೈದ್ಯರು ವಕೀಲರು ಆರಕ್ಷಕ ಠಾಣೆಯ ಸಿಬ್ಬಂದಿ ನಿರಂತರವಾಗಿ ಒಂದೇ ಸೂರಿನಡಿಯಲ್ಲಿ ಮಾಹಿತಿ ಹಾಗೂ ರಕ್ಷಣೆಗೆ ಬರುತ್ತಾರೆ ಎಂದು ಮಹಿಳೆಯರಿಗೆ ಅಭಯಹಸ್ತ ನೀಡಿದರು.
ಮಹಿಳೆಯರಿಗೆ ನ್ಯಾಯವನ್ನು ಬೋದಯಿಸುವ ನಿಟ್ಟಿನಲ್ಲಿ ನಾನು ನಿರಂತರವಾಗಿ ಕೆಲಸ ಮಾಡುತ್ತೇನೆ ನಿಮ್ಮ ಜೊತೆಯಲ್ಲಿ ಸದಾ ಬೆನ್ನೆಲುಬಾಗಿ ನಿಲ್ಲುತ್ತೇನೆ ಎಂದರು. ಮಕ್ಕಳ ದಂತ ವೈದ್ಯರಾಗಿ ರಾಜಕೀಯ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಬೇಕಾದರೆ ಒತ್ತಡಗಳು ಇರುವುದು ಸಾಮಾನ್ಯ ಆದರೆ ಅದರಿಂದ ಎದುರಿಸುವ ಶಕ್ತಿ ನಮ್ಮದಾಗಬೇಕು.
ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಜನ್ಮ ದಿನೋತ್ಸವ ಹಿನ್ನೆಲೆ ಭಾರತ ಭಾರತಿ ಸಂಘದಿಂದ ಬೆಂಗಳೂರಿನಲ್ಲಿ ನೆಲೆಸಿರುವ ವಿವಿಧ ಮಹಿಳೆಯರು ಭಜನಾ ಸ್ಪರ್ಧೆಯನ್ನು ಆಯೋಜನೆ ಮಾಡಲಾಯಿತು ಇದರ ಉದ್ದೇಶ ಎಲ್ಲಾ ಭಾಷಿಕರನ್ನು ಒಟ್ಟುಗೂಡಿಸುವ ಹಾಗೂ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಮೂಡಿಸುವ ಸಲುವಾಗಿ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಮೊದಲನೇ ಬಾರಿಗೆ ಆ ಯೋಜನೆ ಮಾಡಲಾಗಿದೆ.
ಬಜನಾ ಸ್ಪರ್ಧೆಯಲ್ಲಿ ಸುಮಾರು 15 ರಾಜ್ಯಗಳಿಂದ ಹೆಚ್ಚು ಮಹಿಳಾ ಮಂಜುನಾಥಂಡಗಳು ಭಾಗವಹಿಸಿದವು ಅವರದೇ ಆದಂತಹ ಭಾಷೆ ಶೈಲಿಯಲ್ಲಿ ಭಜನೆಯನ್ನು ಮಾಡಲಾಯಿತು ಎಂದು ಆಯೋಜಕರಾದ ಅನಿತಾ ಆಚಾರ್ಯ ಹಾಗೂ ಅಂಜನ ಶರ್ಮ ತಿಳಿಸಿದರು.
ಅದರಲ್ಲಿ ಬಹಳ ಮುಖ್ಯವಾಗಿ ಹಿಂದಿ ಹಾಗೂ ಸಂಸ್ಕೃತದಲ್ಲಿ ಭಜನೆ ಮಾಡಿರುವುದು ಬಹಳ ವಿಶೇಷವಾಗಿತ್ತು. ಸ್ಪರ್ಧೆಗೆ ತೀರ್ಪುಗಾರರಾಗಿ ಬೆಂಗಳೂರಿನ ಮಾಸ್ಟರ್ ಮ್ಯೂಸಿಕ್ ಅಕಾಡೆಮಿಯ ಸಂಸ್ಥಾಪಕಯಾದ ಧರ್ಮಿಳ್ ಶಾಹ, ಭಾರತ ತಾಂಜನೇಯದ ಸಾಂಸ್ಕೃತಿಕ ಮಾಜಿ ರಾಯಭಾರಿಯಾದ ಸೌಮ್ಯ ಚೌಹಾನ್, ನಾದಸುಧ ಸಂಗೀತ ಅಕಾಡೆಮಿಯ ಪ್ರಿಪರೇಟರ್ ವಿದುಷಿ, ವಿಜಯ ಭಟ್, ಭಾಗವಹಿಸಿದ್ದರು.
ಇನ್ನು ಭಜನಾ ಸ್ಪರ್ಧೆಯು ಏಳು ನಿಮಿಷಕ್ಕೆ ಸೀಮಿತಗೊಳಿಸಲಾಗಿದೆ, 15 ತಂಡಗಳಿಂದ ಒಂದೊಂದು ಭಜನೆ ಹಾಡು ಮಾಡಲಾಗಿದೆ ಸುಮಾರು 150 ರಿಂದ 200 ಜನ ಭಾಗವಹಿಸಿದ್ದರು, ಈ ಸ್ಪರ್ಧೆಯು ಕೇವಲ ಮಹಿಳೆಯರಿಗೆ ಮಾತ್ರ ಆ ಯೋಜನೆ ಮಾಡಲಾಗಿತ್ತು.
ಭಾರತ ಭಾರತಿ ಸಂಘದ ಹಿನ್ನೆಲೆ:
ಭಾರತ ಭಾರತಿ ಸಂಘ 2005ರಲ್ಲಿ ಪ್ರಾರಂಭವಾಯಿತು, ಬೆಂಗಳೂರಿನಲ್ಲಿ 2024ರಲ್ಲಿ ಪ್ರಾರಂಭವಾಯಿತು , ಬೇರೆ ಬೇರೆ ರಾಜ್ಯದವರು ಬೆಂಗಳೂರಿನಲ್ಲಿ ನೆಲೆಸಿರುವವರು ಒಂದುಗೂಡಿಸುವ ಭಾಷೆಯಲ್ಲಿ ಸಹೋದರತ್ವ ಬೆಳೆಸಿಕೊಳ್ಳುವ ನಾವೆಲ್ಲರೂ ಒಂದೇ ಎನ್ನುವ ಭಾವನೆ ಮೂಡಿಸುವ ಸಲುವಾಗಿ ಇಂತಹ ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ. ನಾವೆಲ್ಲ ಹಿಂದೂ ನಾವೆಲ್ಲ ಒಂದು ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.
ಇದರಲ್ಲಿ ಯಾವುದೇ ರಾಜಕೀಯ ಇರೋದಿಲ್ಲ, ಇಲ್ಲಿ ಎಲ್ಲಾ ರಾಜ್ಯದ ಜನರನ್ನು ಒಟ್ಟುಗೂಡಿಸುವ ಭಾಷೆಯಲ್ಲಿ ಒಂದಾಗುವ ಸಹೋದರತ್ವ ಬೆಳೆಸಿಕೊಳ್ಳುವ ಮೂಲ ಉದ್ದೇಶವಾಗಿದೆ.
ಇನ್ನು ಕಾರ್ಯಕ್ರಮದ ಆಯೋಜಕರ ತಂಡದವರಾದ ಡಾಕ್ಟರ್ ಸೌಮ್ಯ ಚೌಹಾನ್ ಡಾ. ರೇಣು ಪ್ರಶಾಂತ ರಂಗ ದೀಪಕ್ ಶರ್ಮ ಅರ್ಚನಾಶಹ ವಿಭೂತಿ ಶರ್ಮ ಸೇರಿದಂತೆ ಸಂಘದ ಅನೇಕ ಪದಾಧಿಕಾರಿಗಳು ಉಪಸ್ಥಿತರಿದ್ದರು.