ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿ ಗಣತಿಗಾರರಿಂದ ನಡೆಯುತ್ತಿರುವ ಜನಗಣತಿ ಕಾರ್ಯದ ಪ್ರಗತಿ ನಿಧಾನವಾಗಿದ್ದು ತೃಪ್ತಿಕರವಾಗಿಲ್ಲ. ಹೀಗಾಗಿ ಅನುಮತಿಯಿಲ್ಲದೆ ಗೈರಾಗಿರುವ ಎಲ್ಲಾ ಸಿಬ್ಬಂದಿಗಳ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರರಾವ್ ತಿಳಿಸಿದರು.
ಒಟ್ಟು 23,500 ಗಣತಿಗಾರರು ಮತ್ತು 2,900 ಮೇಲ್ವಿಚಾರಕರಿದ್ದು, ಇವರಲ್ಲಿ ಸುಮಾರು 6,000 ಮಂದಿ ಅನುಮತಿಯಿಲ್ಲದೆ ಗೈರಾಗಿದ್ದಾರೆ.
ಇವರಿಗೆ ಕಾರಣ ಕೇಳಿ ನೋಟಿಸ್ಗಳು, ದೈನಂದಿನ ಎಸ್ಎಂಎಸ್ಗಳು ಮತ್ತು ಕರೆಗಳ ಮೂಲಕ ಸಂಪರ್ಕಿಸಲಾಗುತ್ತಿದೆ. ತಕ್ಷಣ ಕರ್ತವ್ಯಕ್ಕೆ ಹಾಜರಾಗದವರ ವಿರುದ್ಧ “ಕೆಲಸ ಇಲ್ಲ–ವೇತನ ಇಲ್ಲ” (No Work–No Pay) ನಿಯಮ, ಸೇವೆ ವ್ಯತ್ಯಯ (Break-in-Service) ಆದೇಶಗಳು ಜಾರಿಗೊಳ್ಳಲಿವೆ ಹಾಗೂ ಅತ್ಯಂತ ನಿರ್ಲಕ್ಷ್ಯ ತೋರಿದವರ ವಿರುದ್ಧ ಎಫ್ಐಆರ್ ಕೂಡಾ ದಾಖಲಿಸಲಾಗುವುದು.
ಅನುಮತಿಯಿಲ್ಲದೆ ಗೈರಾಗಿರುವ ಎಲ್ಲಾ ಸಿಬ್ಬಂದಿ ತಕ್ಷಣ ಕರ್ತವ್ಯಕ್ಕೆ ಹಾಜರಾಗುವಂತೆ ಈ ಮೂಲಕ ಸೂಚಿಸಲಾಗಿದೆ. ಇಲ್ಲವಾದಲ್ಲಿ 24-04-2026 ರೊಳಗೆ ಸೂಕ್ತ ಕ್ರಮಕ್ಕೆ ಆದೇಶಗಳನ್ನು ಜಾರಿಗೊಳಿಸಲಾಗುತ್ತದೆ. ಗಣತೆದಾರರ ಗೈರು ವಿಚಾರಕ್ಕೆ ಸಂಬಂಧಿಸಿದಂತೆ ಪಟ್ಟಿಯನ್ನು ತಯಾರಿಸಲಾಯಿತು ಅದರಲ್ಲಿ ಗೈರಾದ ವರೆಗೆ ಸೂಕ್ತ ನಿರ್ದೇಶನ ನೀಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.