LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಾರ್ವಜನಿಕರು ಸಮುದಾಯ ಶ್ವಾನಗಳ ದತ್ತು ಪಡೆದುಕೊಳ್ಳಿ:ದಲ್ಜಿತ್ ಕುಮಾರ್

ಬೆಂಗಳೂರು:  ಮೋತಿ ನಂಬಿಕೆ ಮತ್ತು ಒಳಗೊಳ್ಳುವಿಕೆಯ ಆಂದೋಲನ ಮೂಲಕ ಸಾರ್ವಜನಿಕರು ಸಮುದಾಯ ಶ್ವಾನಗಳ ದತ್ತು ಪಡೆದುಕೊಳ್ಳಿ ಎಂದು ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ದಲ್ಜಿತ್ ಕುಮಾರ್ ಹೇಳಿದರು.news_1777823029_4_307.webp

"ಮೋತಿ" ಸಮುದಾಯದ ಶ್ವಾನಗಳ ದತ್ತು ನೀಡುವ ಕಾರ್ಯಕ್ರಮಕ್ಕೆ ಇಂದು ಚಾಲನೆ ಮಕ್ಕಳಿಂದ ಪೇಂಟಿಂಗ್ ಮೂಲಕ ಸಮುದಾಯದ ಶ್ವಾನ ದತ್ತು ಪಡೆಯಲು ಅರಿವು ಮೂಡಿಸುವ ಚಿತ್ರಗಳ ಅನಾವರಣ ಮಾಡಿ, ಪೇಂಟಿಂಗ್ ಮಾಡಿದ ಮಕ್ಕಳಿಗೆ ಪ್ರಮಾಣ ಪತ್ರ ನೀಡಿ ಮಾತನಾಡಿದ ಅವರು, ಮೋತಿ ನಂಬಿಕೆ ಮತ್ತು ಒಳಗೊಳ್ಳುವಿಕೆಯ ಆಂದೋಲನ" (MOTI) – Movement of Trust & Inclusion ಎಂಬ ವಿಶಿಷ್ಟ ಸಹಜೀವನವನ್ನು ಉತ್ತೇಜಿಸುವ ಉಪಕ್ರಮ ಅಡಿ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವತಿಯಿಂದ ಕಬ್ಬನ್ ಪಾರ್ಕ್ ನಲ್ಲಿ  ಸಮುದಾಯದ ಶ್ವಾನಗಳನ್ನು ಸಾರ್ವಜನಿಕರು ದತ್ತು ಪಡೆಯಲು ಶ್ವಾನಗಳಲ್ಲಿ ಸಹಾನುಭೂತಿ ಮತ್ತು ಸಹಜೀವನವನ್ನು ಉತ್ತೇಜಿಸಲು ಆಯೋಜಿಸಲಾದ "ಮೋತಿ" ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.* 

ಶ್ವಾನಗಳಿಗೆ ಬಿಸಿಲಿನ ಬೇಗೆಯಿಂದ ತಣಿಕೊಳ್ಳಲು ಬೌಲ್ ನಲ್ಲಿ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅಭಿವೃದ್ಧಿ ಅಪರ ಆಯುಕ್ತರಾದ ದಲ್ಜಿತ್ ಕುಮಾರ್ ರವರು ಸಮುದಾಯ ಶ್ವಾನಗಳಿಗೆ ಬಾಯಾರಿಕೆಯಾದಾಗ ಕೇಳಲು ಮನುಷ್ಯನಂತೆ ಕೇಳಲು ಬಾಯಿ ಇರುವುದಿಲ್ಲ ಆದ್ದರಿಂದ ತಮ್ಮ ತಮ್ಮ ಮನೆಯ ಆವರಣದಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಶ್ವಾನಗಳಿಗೆ ಬಾಯಾರಿಕೆಯನ್ನು ನೀಗಿಸಲು ಒಂದು ಪಾತ್ರೆಯಲ್ಲಿ ನೀರನ್ನು ಇಡಲು ಕೋರಿದರು.  *ಕೇಂದ್ರ ನಗರ ಪಾಲಿಕೆಯ ವತಿಯಿಂದ ನೀಡಲಾಗುವ "ಮೋತಿ" ಶ್ವಾನಗಳನ್ನು ದತ್ತು ಪಡೆಯಲು ಅವರು ಮನವಿ ಮಾಡಿದರು.

news_1777823026_1_934.webp

ಕಂದಾಯ ಅಪರ ಆಯುಕ್ತರಾದ ಕೆ.ರಂಗನಾಥ್ ಹಾಗೂ ವಲಯ ಜಂಟಿ ಆಯುಕ್ತರಾದ ಹೇಮಂತ್ ಶರಣ್ ರವರಿಂದ *(Dogathon) ಡಾಗ್ ಥಾನ್* ಚಾಲನೆ ನೀಡಿದರು. ಸಾರ್ವಜನಿಕರು, ಪ್ರಾಣಿ ಪ್ರಿಯರು, ಸಂಘ ಸಂಸ್ಥೆಗಳು, ಎನ್.ಜಿ.ಓ ಗಳು, ಮಕ್ಕಳು ಸಮುದಾಯದ ಶ್ವಾನಗಳೊಂದಿಗೆ ಸಂಕೇತಾತ್ಮಕ (ಡಾಗಥಾನ್) ಕಾಲ್ನಡಿಗೆ ಜಾಥಾವನ್ನು ಪಾಲ್ಗೊಂಡಿದ್ದರು. 

*ಪೈಂಟ್ ವಿಥ್ ಪಪ್ಪೀಸ್ ಹಾಗೂ ಮಕ್ಕಳಿಗೆ ಪ್ರಶಂಸೆ ಪತ್ರ*

"ಮೋತಿ" ಕಾರ್ಯಕ್ರಮದ ಭಾಗವಾದ ಪೈಂಟ್ ವಿಥ್ ಪಪ್ಪೀಸ್ ಕಾರ್ಯಕ್ರಮಕ್ಕೆ ಕಂದಾಯ ಅಪರ ಆಯುಕ್ತರಾದ ರಂಗನಾಥ್.ಕೆ ಹಾಗೂ ವಲಯ ಜಂಟಿ ಆಯುಕ್ತರಾದ ಹೇಮಂತ್ ಶರಣ್ ರವರಿಂದ ಸಮುದಾಯ ಮರಿ ಶ್ವಾನಗಳ ಪಾದದ ಗುರುತುಗಳನ್ನು  ಕಾಗದದ ಮೇಲೆ ಹಾಕಿಸುವುದರ ಮೂಲಕ ಮಕ್ಕಳಿಗೆ ಹಾಗೂ ಶ್ವಾನ ಪ್ರಿಯರಿಗೆ ಪೇಂಟಿಂಗ್ ಚಟುವಟಿಕೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು ನಂತರ ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೆ ಪ್ರಶಂಸಾ ಪತ್ರವನ್ನು ನೀಡಿ ಗೌರವಿಸಲಾಯಿತು.news_1777823028_3_424.webp

*ಲಸಿಕೆ ಹಾಗೂ ಕಿಟ್ ವಿತರಣೆ*: 

ಪ್ರೀತಿಯ ಮನೆಯನ್ನು ಹುಡುಕುತ್ತಿರುವ ಸಮುದಾಯದ 4 ಶ್ವಾನಗಳನ್ನು (Indie Dogs) ಸಾರ್ವಜನಿಕರು ದತ್ತು ಪಡೆದುಕೊಂಡರು. ಈ ಸಂದರ್ಭದಲ್ಲಿ ಅಗತ್ಯ ಲಸಿಕೆಗಳನ್ನು ನೀಡಿ, ಶ್ವಾನಗಳಿಗೆ ಆಹಾರ ಕಿಟ್ ಕುತ್ತಿಗೆ ಪಟ್ಟಿ, ಚೈನ್, ವಾಟರ್ ಬೌಲ್ ಒಳಗೊಂಡ ಕಿಟ್ ನೀಡಲಾಯಿತು. 

ಕಾರ್ಯಕ್ರಮದಲ್ಲಿ ಪಶು ಪಾಲನೆ ಸಹಾಯಕ ನಿರ್ದೇಶಕ ಬಸವರಾಜೇಂದ್ರ ಬಿರಾದಾರ, ಹೆಚ್.ಓ.ಡಿ. ವೀಣಾ, ಇತರೆ ನಗರ ಪಾಲಿಕೆಗಳ ಸಹಾಯಕ ನಿರ್ದೇಶಕರು, ಎನ್.ಜಿಓ ಗಳು, ಸಂಘ ಸಂಸ್ಥೆಗಳು, ಸಾರ್ವಜನಿಕರು, ಮಕ್ಕಳು ಭಾಗವಹಿಸಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಾಣಿಜ್ಯ ಸಿಲಿಂಡರ್ ಬೆಲೆ ಹೆಚ್ಚಳ : ಯುವ ಕಾಂಗ್ರೆಸ್ ಸಮಿತಿ ವತಿಯಿಂದ ವಿನೂತನ ಪ್ರತಿಭಟನೆPTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ: ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ: ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿBWSSB ಜಾರಿಗೆ ತಂದಿರುವ(OTS) ಯೋಜನೆಗೆ ಗ್ರಾಹಕರಿಂದ ಸಕಾರಾತ್ಮಕ, ಉತ್ತಮ ಪ್ರತಿಕ್ರಿಯೆನನ್ನ  ಹತ್ಯೆಯಾದರೆ  ನೀವೇ ನೇರ  ಹೊಣೆ - ಶಾಸಕ ಬೈರತಿ ಬಸವರಾಜುಗೆ  ಸತ್ಯವಾಣಿ   ಎಚ್ಚರಮಳೆಗಾಲಕ್ಕೂ ಮುನ್ನವೇ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಹೂಳೆತ್ತುವ ಕಾರ್ಯಕಾರ್ಮಿಕನ ಬೆವರ ಹನಿಯೂ ನಾಡಿನ ಪ್ರಗತಿಗೆ ಕೊಡುಗೆ: ಹೆಚ್.ಎಂ. ರಮೇಶ್ ಗೌಡಎನ್‌ಡಿಎ ಮೈತ್ರಿಕೂಟದ ಅಭೂತಪೂರ್ವ ಗೆಲುವು :HDKಕೆ.ಸಿ ರೆಡ್ಡಿಯವರು ಒಬ್ಬ ಸಮರ್ಥ, ಪ್ರಾಮಾಣಿಕ  ಆಡಳಿತಗಾರರಾಗಿದ್ದರು: ಮುಖ್ಯಮಂತ್ರಿ ಸಿದ್ದರಾಮಯ್ಯ