
ಬೆಂಗಳೂರು: ಗಾಂಧಿ ವಿದ್ಯಾಶಾಲಾ ಮತ್ತು ಗಾಂಧಿ ನಿಕೇತನ ಸಂಸ್ಥೆಯಲ್ಲಿ 8ನೇ ತರಗತಿಗೆ ಸೇರಿ ಇದೀಗ 59 ವರ್ಷಗಳು ಕಳೆದಿವೆ ಹೀಗಾಗಿ ಹಳೆ ವಿದ್ಯಾರ್ಥಿಗಳ ಮಹತ್ವದ ಕ್ಷಣಗಳನ್ನು ಸ್ಮರಿಸಲು 59ನೇ ವರ್ಷದ ಸುವರ್ಣ ಮಹೋತ್ಸವ ಆಚರಿಸಲಾಯಿತು.
ಬೆಂಗಳೂರಿನ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಅದ್ದೂರಿಯಾಗಿ 60 ವರ್ಷ ತುಂಬಿದ ಸಹಪಾಠಿಯರಿಗೆ ಷಷ್ಟಿ ಪೋರ್ತೀ ಅಭಿನಂದನೆ ಹಾಗೂ 1976-77ರ 8ನೇ ತರಗತಿಯ A,B,C ಮತ್ತು D ವಿಭಾಗದಿಂದ ಹಳೆಯ ವಿದ್ಯಾರ್ಥಿಗಳು ಒಂದೇ ಕಡೆ ಸೇರಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಯಾಗಿ ಅತ್ಯನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆಯಲ್ಲಿ ನಿವೃತ್ತಿಯಾಗಿದ್ದಾರೆ, ಅಲ್ಲದೆ ಕ್ರೀಡೆಯಲ್ಲಿ ರಾಜ್ಯ ,ರಾಷ್ಟ್ರ ಮಟ್ಟದಲ್ಲಿ ಉನ್ನತ ಸಾಧನೆ ಮಾಡಿದವರಿಗೆ ಸನ್ಮಾನವನ್ನು ಮಾಡಲಾಯಿತು.

25 ನೇ ವರ್ಷದ ಬೆಳ್ಳಿಹಬ್ಬವನ್ನು ಕೇವಲಬ8 ನೇ ತರಗತಿಯ ABC ವಿಭಾಗದವರಿಗೆ ಮಾತ್ರ ಸಂಭ್ರಮ ಆಚರಣೆ ಮಾಡಲಾಯಿತು. ಆದರೆ 50 ವರ್ಷ ತುಂಬಿದ ಸವಿನೆನಪನ್ನು ಶಿಕ್ಷಕರು,ವಿದ್ಯಾರ್ಥಿಗಳು ಮೆಲುಕು ಹಾಕಿದರು.
ಗಾಂಧಿ ವಿದ್ಯಾಶಾಲಾ ಮತ್ತು ಗಾಂಧಿ ನಿಕೇತನ ಸಂಸ್ಥೆಯನ್ನು ಪೆರುಮಾಳ್ ಅವರು ಶಾಲೆ ಹುಟ್ಟುಹಾಕಿದ್ದರು, ಅವರ ಕುಟುಂಬದವರು ಇಂದಿಗೂ ನಡೆಸಿಕೊಂಡು ಬರುತ್ತಿದ್ದಾರೆ.
ಗಾಂಧಿ ವಿದ್ಯಾಶಾಲಾ ಮತ್ತು ಗಾಂಧಿ ನಿಕೇತನ ಸಂಸ್ಥೆಯು ಬೆಂಗಳೂರಿನ ಶ್ರೀರಾಂಪುರದಲ್ಲಿದೆ. ಶಾಲೆಯ ಹಳೆಯ ಶಿಕ್ಷಕರಾದ ಪಂಚಾಕ್ಷಕರಿ,ಧನ ಭಾಗ್ಯಂ,ತುಂಗಾಬಾಯಿ,ನಾಗಮಣಿ,ಜಗದೀಶ್ವರಿ,ಅರುಣಗಿರಿ,ಲೂರ್ದ ಮೇರಿ,ಮಾಲಾ ಸೇರಿದಂತೆ ಅನೇಕ ಶಿಕ್ಷಕರು ಭಾಗಿಯಾಗಿದ್ದರೂ, ಅದೇ ರೀತಿ ಶಿಕ್ಷಕರಿಂದ ಕಲಿತ 65ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿ ಕುಷಲೋಪಹಾರಿಯನ್ನು ಹಂಚಿಕೊಂಡರು. 
ಕಾರ್ಯಕ್ರಮವನ್ನು ಹಳೆ ವಿದ್ಯಾರ್ಥಿಗಳ ಕೂಟದ ಯೋಜನಾ ಸಮಿತಿಯ ಆಂಡ್ರೆಸ್, ಕುಪ್ಪುಸ್ವಾಮಿ,ಎಸ್ ರಾಮು,ಉದಯಕುಮಾರ್,ತನಿಕೇಸನ್,ಹರಿಬಾಬು,ಚಂದ್ರನ್,ಶ್ರೀನಿವಾಸನ್ ಸೇರಿದಂತೆ ಅನೇಕ ದಂಪತಿ ಕಾರ್ಯಕ್ರಮದಲ್ಲಿ ಆಗಮಿಸಿದ್ದರು. ಇನ್ನೂ ಎಂಟನೇ ತರಗತಿಯಲ್ಲಿ ಶಿಕ್ಷಕರೇ ಆಗಿದ್ದ ಉಪನ್ಯಾಸಕರು ಹಳೆಯ ನೆನಪುಗಳನ್ನು ವೇದಿಕೆ ಮೇಲೆ ಮೆಲುಕು ಹಾಕಿದರೆ ಕೆಲ ಶಿಕ್ಷಕರು ಹಾಡಿನ ಮೂಲಕ ತಮ್ಮ ಉಮ್ಮಸ್ಸು ಹಾಗೂ ಸಂತೋಷವನ್ನು ವ್ಯಕ್ತಪಡಿಸಿದರು.