
ಮೊದಲನೇ ದಿನದಲ್ಲಿ ನಾಡಿನ ಖ್ಯಾತ ಜ್ಯೋತಿಷಿಗಳು ಮತ್ತು ಆಗಮ ಶಾಸ್ತ್ರಜ್ಞರೂ ಆದ ಡಾ.ಭಾನು ಪ್ರಕಾಶ್ ಶರ್ಮಾ ಅವರ ನೇತೃತ್ವದಲ್ಲಿ ದೇವತಾ ಕಾರ್ಯಗಳು ಮತ್ತು ಪೂಜಾ ಕೈಂಕರ್ಯಗಳಾದ
ಗಣಪತಿಪೂಜೆ, ವಾಸ್ತು ಹೋಮ, ಪೂಜೆ, ಪುಣ್ಯಾಹ, ಪಂಚಗವ್ಯ, ರಾಕ್ಷೋಘ್ನ ಹೋಮ, ಅಗಮ ಪಂಡಿತರಿಂದ ಪೂಜಾ ಕಾರ್ಯ ಆರಂಭವಾಯಿತು.
ಜಿಬಿಎ-ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು, ನೌಕರರ ಸಂಘ, ಸಹಕಾರ ಸಂಘದ ಪದಾಧಿಕಾರಿಗಳು ನೌಕರರು ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು.

ಸರಿ ಸಮಾರು 2ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಣಗೊಂಡಿರುವ ದೇವಾಲಯವನ್ನು ಗುರುವಾರ ಬೆಳಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿರವರು ಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಶಾಸಕರಾದ ರಿಜ್ವಾನ್ ಅರ್ಷದ್, ಮುಖ್ಯ ಆಯುಕ್ತರಾದ ಮಹೇಶ್ವರರಾವ್ ರವರು ಹಾಗೂ ಗಣ್ಯ ಮಹನೀಯರುಗಳು ಭಾಗವಹಿಸಲಿದ್ದಾರೆ.