
ಸ್ವಚ್ಛ ಸರ್ವೇಕ್ಷಣ 2025-26 ರ ವಿಶೇಷ ಸ್ವಚ್ಛತಾ ಅಭಿಯಾನದಲ್ಲಿ ನಗರದಲ್ಲಿರುವ ಬಸ್ ಶೆಲ್ಟರ್ (ತಂಗುದಾಣಗಳು) ಪ್ರಮುಖ ಸ್ಥಳವಾಗಿರುವ ಕಾರಣ ಮೊದಲನೇ ದಿನ 80 ಬಸ್ ಶೆಲ್ಟರ್ ಗಳ ಸ್ವಚ್ಛತೆಯನ್ನು ಆಯ್ಕೆ ಮಾಡಿಕೊಂಡು ಸ್ವಚ್ಛತೆ ಮಾಡಲಾಗಿದೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡುವುದು ಹಾಗೂ ತ್ಯಾಜ್ಯಮುಕ್ತ ನಗರಪಾಲಿಕೆಯನ್ನಾಗಿಸಿ, ಸುಂದರ ನಗರವನ್ನಾಗಿ ರೂಪಿಸಲು ಹಾಗೂ ಸ್ವಚ್ಛ ಸರ್ವೇಕ್ಷಣ 2025-26 ರ ಶ್ರೇಯಾಂಕ ಪಟ್ಟಿಯಲ್ಲಿ ರಾಷ್ಟ್ರ ಮಟ್ಟದಲ್ಲಿ ಉತ್ತಮ ಸ್ಥಾನ ಗಳಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ಬೆಂಗಳೂರು ಕೇಂದ್ರ ನಗರ ಪಾಲಿಕೆ ವತಿಯಿಂದ *ನಿನ್ನೆಯಿಂದ ವಿಶೇಷ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಈಗಾಗಲೇ ರೂಪಿಸಲಾಗಿರುವ *ಸ್ವಚ್ಛತಾ ವೇಳಾ ಪಟ್ಟಿಯಂತೆ* (ಆ್ಯಕ್ಷನ್ ಪ್ಲಾನ್ ನಂತೆ) *ಮೊದಲನೇಯ ದಿನ* ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ 6 ವಿಧಾನಸಭಾ ಕ್ಷೇತ್ರವಾರು *ಸುಮಾರು 80 ಬಸ್ ಶೆಲ್ಟರ್ ಗಳನ್ನು ಶುಚಿಗೊಳಿಸಲಾಗಿದೆ ಎಂದು ಆಯುಕ್ತರಾದ ರಾಜೇಂದ್ರ ಚೋಳನ್ ರವರು ತಿಳಿಸಿದರು.*
*ವಿಧಾನಸಭಾ ಕ್ಷೇತ್ರವಾರು ಶುಚಿಗೊಳಿಸಲಾದ ಬಸ್ ಶೆಲ್ಟರ್ ಸಂಖ್ಯೆಗಳ (ತಂಗುದಾಣ) ವಿವರ:*
1) ಶಾಂತಿನಗರ ಕ್ಷೇತ್ರದ ವ್ಯಾಪ್ತಿಯಲ್ಲಿ-11
2) ಸಿ. ವಿ. ರಾಮನ್ ನಗರ ಕ್ಷೇತ್ರದ ವ್ಯಾಪ್ತಿಯಲ್ಲಿ- 24,
3) ಗಾಂಧಿನಗರ ಕ್ಷೇತ್ರದ ವ್ಯಾಪ್ತಿಯಲ್ಲಿ-19,
4) ಚಾಮರಾಜಪೇಟೆ ಕ್ಷೇತ್ರದ ವ್ಯಾಪ್ತಿಯಲ್ಲಿ-12,
5) ಚಿಕ್ಕಪೇಟೆ ಕ್ಷೇತ್ರದ ವ್ಯಾಪ್ತಿಯಲ್ಲಿ-8,
6) ಶಿವಾಜಿನಗರ ಕ್ಷೇತ್ರದ ವ್ಯಾಪ್ತಿಯಲ್ಲಿ-7
*ಈ ವಿಶೇಷ ಸ್ವಚ್ಛತಾಅಭಿಯಾನದಲ್ಲಿ 80 ಬಸ್ ಶೆಲ್ಟರ್ ಗಳ ಮೇಲೆ ಅಂಟಿಸಲಾಗಿರುವ ಜಾಹೀರಾತು ಭಿತ್ತಿಪತ್ರಗಳ ತೆರವುಗೊಳಿಸುವುದು, ಕುಳಿತುಕೊಳ್ಳುವ ಆಸನಗಳ ಸ್ವಚ್ಛತೆ, ಅನಧಿಕೃತ ಜಾಹೀರಾತು ಫಲಕಗಳನ್ನು ತೆರವುಗೊಳಿಸುವುದು, ಬಸ್ ಶೆಲ್ಟರ್ ಪ್ರದೇಶದಲ್ಲಿ ಆಹಾರ ತಿಂದು ಬಿಸಾಕಿರುವ ಪೇಪರ್ ಪ್ಲೇಟ್, ಟೀ-ಕಾಫಿ ಕಪ್ ಗಳು, ನೀರಿನ ಬಾಟಲ್, ಪ್ಲಾಸ್ಟಿಕ್, ಇತ್ಯಾದಿ ತ್ಯಾಜ್ಯವನ್ನು ತೆರವುಗೊಳಿಸಲಾಗಿದೆ.*
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಬಸ್ ಶೆಲ್ಟರ್ ಹಾಗೂ ಸುತ್ತಮುತ್ತಲಿನ ಪ್ರದೇಶ ಸ್ವಚ್ಛಗೊಳಿಸಿರುವುದರಿಂದ ಸದರಿ ಬಸ್ ತಂಗುದಾಣಗಳಲ್ಲಿ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಅನುಕೂಲವಾಗುತ್ತದೆ.
ಈ ನಿಟ್ಟಿನಲ್ಲಿ ವಿಶೇಷ ಸ್ವಚ್ಛತಾ ಅಭಿಯಾನದ ಮೊದಲನೇ ದಿನ ಬಸ್ ಶೆಲ್ಟರ್ ಗಳನ್ನು ಆಯ್ಕೆ ಮಾಡಿಕೊಂಡು ಸುಮಾರು 80 ಬಸ್ ತಂಗುದಾಣ ಶುಚಿಗೊಳಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

*ಸ್ವಚ್ಛತಾ ಈ ಕಾರ್ಯದಲ್ಲಿ ಬೆಂ.ಘ.ತ್ಯಾ. ನಿಯಮಿತದ ಡಿ.ಜಿ.ಎಂ. ಭೀಮೇಶ್ ನಾಯ್ಕ, ವಿಭಾಗವಾರು ಎ.ಜಿ.ಎಂ. ಗಳು, ಸೂಪರ್ ವೈಸರ್ ಗಳು, ಮಾರ್ಷಲ್ ಗಳು, ಕಿರಿಯ ಆರೋಗ್ಯ ಪರಿವೀಕ್ಷಕರು, ಪೌರಕಾರ್ಮಿಕರು, ಆರೋಗ್ಯ ಸ್ವಚ್ಛತಾ ಸಿಬ್ಬಂದಿಗಳು, ಆಟೋ ಟಿಪ್ಪರ್ ಗಳ ಚಾಲಕರು ಭಾಗವಹಿಸಿದ್ದರು*