LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಭಾರತ್ ಸ್ಕೌಟ್ಸ್ ಗೈಡ್ಸ್ ಜಿಲ್ಲಾ ಸಂಸ್ಥೆ ಹಾಸನ ವತಿಯಿಂದ ವಿಶ್ವ ಅಮ್ಮಂದಿರ ದಿನಾಚರಣೆ

ತಾಯಂದಿರ ನಿಸ್ವಾರ್ಥಸೇವೆ, ಪ್ರೀತಿ, ತ್ಯಾಗವನ್ನು ಪ್ರತಿಯೊಬ್ಬರೂ ಗೌರವಿಸಬೇಕು : ಜಿಲ್ಲಾ ಹಿರಿಯ ಸಿವಿಲ್ ನ್ಯಾಯಧೀಶೆ ದಾಕ್ಷಾಯಿಣಿ ಜಿ.ಕೆ.*l

news_1778681445_0_766.webp

ಹಾಸನ : ತಾಯಂದಿರ ದಿನದಂದು ತಾಯಂದಿರು ಮತ್ತು ತಾಯಂದಿರನ್ನು ಅವರ ಪ್ರೀತಿ, ತ್ಯಾಗ ಮತ್ತು ಅವರ ಕುಟುಂಬ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳಿಗಾಗಿ ಗೌರವಿಸುವ ಮಹತ್ತರ ಕಾರ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ದಾಕ್ಷಾಯಿಣಿ ಜಿ.ಕೆ. ಅಭಿಪ್ರಾಯಪಟ್ಟರು.

ಅವರು ಭಾರತ್ ಸ್ಕೌಟ್ಸ್ ಗೈಡ್ಸ್ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ವಿಶ್ವ ತಾಯಂದಿರ ದಿನಾರಣೆಯಲ್ಲಿ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿ ಜಗತ್ತಿನಲ್ಲಿ ಅಮ್ಮ ಎನ್ನುವ ಪದಕ್ಕೆ ಇರುವ ಶಕ್ತಿ ಅಪ್ರತಿಮವಾದದ್ದು. ನೂರು ಜನ್ಮ ಕಳೆದರು ತಾಯಿಯ ಋಣ ತೀರಿಸಲಾಗದು ಎಂಬ ಮಾತಿದೆ. ನಿಸ್ವಾರ್ಥವಾಗಿ ಮಕ್ಕಳಿಗೆ ಎಲ್ಲವನ್ನೂ ನೀಡುವ ತಾಯಂದಿರನ್ನು ಗೌರವಿಸುವ ಸಲುವಾಗಿ ಮೇ ಎರಡನೇ ಭಾನುವಾರವನ್ನು ವಿಶ್ವ ಅಮ್ಮಂದಿರ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಈ ದಿನವನ್ನು ತಾಯಿಯ ನಿಸ್ವಾರ್ಥ ಪ್ರೀತಿ, ತ್ಯಾಗ ಮತ್ತು ಕುಟುಂಬಕ್ಕಾಗಿ ಅವರು ಮಾಡುವ ಸೇವೆಯನ್ನು ಗೌರವಿಸುವ ಸಲುವಾಗಿ ಆಚರಿಸಲಾಗುತ್ತದೆ. ಇದು ಅಮ್ಮನಿಗೆ ವಿಶೇಷ ಅನುಭೂತಿ ನೀಡುವ ಮತ್ತು ಪ್ರೀತಿ ತೋರುವ ದಿನವಾಗಿದೆ ಎಂದರು.
news_1778681445_1_210.webp
ಮಲ್ನಾಡ್ ಆಸ್ಪತ್ರೆಯ ಖ್ಯಾತ ಸ್ತ್ರೀರೋಗತಜ್ಞೆ ಡಾ. ಎ. ಸಾವಿತ್ರಿ ಮಾತನಾಡಿ ಇತ್ತೀಚೆಗೆ ತಾಯಂದಿರಿಗೆ ಬಹುವಾಗಿ ಕಾಡುವ ಕಾಯಿಲೆಗಳೆಂದರೆ ಗರ್ಭಕೋಶದ ಕ್ಯಾನ್ಸರ್ ಹಾಗೂ ಸ್ತನ ಕ್ಯಾನ್ಸರ್. ಎಷ್ಟೋ ತಾಯಂದಿರು ಮಕ್ಕಳಿಗಾಗಿ, ಮನೆಯಲ್ಲಿನ ಕಾರ್ಯಗಳಿಗಾಗಿ, ಕೌಟುಂಬಿಕ ಕಾರಣಕ್ಕಾಗಿ ಹಲವು ನೋವು ಅನುಭವಿಸಿದರೂ ಹೇಳಿಕೊಳ್ಳಲಾಗದೇ ಮುಚ್ಚಿಟ್ಟುಕೊಂಡು ಮೂರನೇ ಹಂತಕ್ಕೆ ಅಂತಿಮ ಹಂತಕ್ಕೆ ಬಂದಾಹ ಆಸ್ಪತ್ರಗೆ ಬರುತ್ತಾರೆ. ಅಷ್ಟೊತ್ತಿಗಾಗಲೇ ಪರಿಸ್ಥಿತಿ ಕೈಮೀರಿಹೋಗಿರುತ್ತದೆ. ಅಮ್ಮಂದಿರ ದಿನಾಚರಣೆ ಕೇವಲ ಅಮ್ಮಂದಿರಿಗಲ್ಲ, ಎಲ್ಲಾ ಪುರುಷರು ತಮ್ಮ ತಾಯಿ, ಅಕ್ಕ, ತಂಗಿ, ಹೆಂಡತಿ, ಮಕ್ಕಳ ಆರೋಗ್ಯದ ಬಗ್ಗೆಯೂ ಗಮನಹರಿಸಿ ಆಗಿದ್ದಾಗ್ಗೆ ಆಸ್ಪತ್ರೆಗೆ ತೋರಿಸುವ ಕಾಳಜಿ ವಹಿಸಬೇಕು. ಗರ್ಭಕೋಶದ ಕ್ಯಾನ್ಸರ್ ಎನ್ನುವುದು ಗರ್ಭಾಶಯದ ಕೋಶಗಳಲ್ಲಿ, ಸಾಮಾನ್ಯವಾಗಿ ಅದರ ಒಳಪದರದಲ್ಲಿ ಉಂಟಾಗುವ ಅಸಹಜ ಬೆಳವಣಿಗೆಯಾಗಿದೆ. ಇದು ಮಹಿಳೆಯರಲ್ಲಿ ಕಂಡುಬರುವ ಪ್ರಮುಖ ಸಂತಾನೋತ್ಪತ್ತಿ ಕ್ಯಾನ್ಸರ್ ಆಗಿದ್ದು, ಮುಖ್ಯವಾಗಿ ಋತುಬಂಧದ ನಂತರದ ಮಹಿಳೆಯರಲ್ಲಿ ಕಂಡುಬರುತ್ತದೆ. ಆರಂಭಿಕ ಹಂತದಲ್ಲಿ ಪತ್ತೆಹಚ್ಚಿದರೆ ಇದು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತದೆ. ಶ್ರೋಣಿಯ ಭಾಗದಲ್ಲಿ ನೋವು, ಹೊಟ್ಟೆಯ ಕೆಳಭಾಗ ಅಥವಾ ಶ್ರೋಣಿಯ ಭಾಗದಲ್ಲಿ ನಿರಂತರ ನೋವು. ಅಸಾಮಾನ್ಯ ವಿಸರ್ಜನೆ ಇದರ ಪ್ರಮುಖ ಲಕ್ಷಣಗಳು. ಸ್ತನ ಕ್ಯಾನ್ಸರ್ ಎಂದರೆ ಸ್ತನದ ಜೀವಕೋಶಗಳಲ್ಲಿ, ವಿಶೇಷವಾಗಿ ಹಾಲು ಉತ್ಪಾದಿಸುವ ನಾಳಗಳಲ್ಲಿ ಕ್ಯಾನ್ಸರ್ ಕೋಶಗಳು ಅನಿಯಂತ್ರಿತವಾಗಿ ಬೆಳೆದು ಗಡ್ಡೆಯಾಗುವ ಸ್ಥಿತಿಯಾಗಿದೆ. ಇದು ಮಹಿಳೆಯರಲ್ಲಿ ಅತಿ ಹೆಚ್ಚು ಕಂಡುಬರುವ ಕ್ಯಾನ್ಸರ್ ಆಗಿದ್ದು, ಆರಂಭಿಕ ಪತ್ತೆಹಚ್ಚುವಿಕೆ ಮತ್ತು ಚಿಕಿತ್ಸೆಯಿಂದ ಗುಣಪಡಿಸಬಹುದು ಎಂದರು.
ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವಾಧ್ಯಕ್ಷ ಹಾಗೂ ಪತ್ರಕರ್ತ ರವಿ ನಾಕಲಗೂಡು ಮಾತನಾಡಿ ಭಾರತದಲ್ಲಿ ತಾಯಂದಿರ ದಿನವು ಅಪಾರ ಸಾಂಸ್ಕೃತಿಕ ಮತ್ತು ಭಾವನಾತ್ಮಕ ಮಹತ್ವವನ್ನು ಹೊಂದಿದ್ದು, ತಾಯಂದಿರು ಮತ್ತು ತಾಯಂದಿರ ವ್ಯಕ್ತಿಗಳ ನಿಸ್ವಾರ್ಥ ಪ್ರೀತಿ ಮತ್ತು ತ್ಯಾಗಗಳನ್ನು ಗೌರವಿಸುತ್ತದೆ. ಇದು ಮಕ್ಕಳು ಮತ್ತು ಅವರ ತಾಯಂದಿರ ನಡುವಿನ ಬಾಂಧವ್ಯವನ್ನು ಬಲಪಡಿಸುತ್ತದೆ, ಅವರ ಮಾರ್ಗದರ್ಶನ ಮತ್ತು ಬೆಂಬಲವನ್ನು ಪ್ರಶಂಸಿಸಲು ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ. ಸಾಂಪ್ರದಾಯಿಕ ಕುಟುಂಬ ಮೌಲ್ಯಗಳಲ್ಲಿ ಬೇರೂರಿರುವ ಆಧುನಿಕ ಆಚರಣೆಗಳಲ್ಲಿ ಉಡುಗೊರೆಗಳು, ಕೈಬರಹದ ಟಿಪ್ಪಣಿಗಳು ಮತ್ತು ಸಾಮಾಜಿಕ ಮಾಧ್ಯಮ ಗೌರವಗಳು ಸೇರಿವೆ. ಈ ದಿನವು ಜೀವನವನ್ನು ರೂಪಿಸುವಲ್ಲಿ ತಾಯಂದಿರು ವಹಿಸುವ ಪ್ರಮುಖ ಪಾತ್ರಕ್ಕಾಗಿ ಪ್ರತಿಬಿಂಬ ಮತ್ತು ಕೃತಜ್ಞತೆಯನ್ನು ಪ್ರೇರೇಪಿಸುತ್ತದೆ, ಸಂಪ್ರದಾಯದ ಗೌರವವನ್ನು ಪ್ರೀತಿಯ ಸಮಕಾಲೀನ ಅಭಿವ್ಯಕ್ತಿಗಳೊಂದಿಗೆ ಸಂಯೋಜಿಸುತ್ತದೆ. ಆಚರಣೆಯ ಹೊರತಾಗಿ, ಇದು ತಾಯಂದಿರು ಒದಗಿಸುವ ಅಚಲ ಭಕ್ತಿ ಮತ್ತು ಕಾಳಜಿಗೆ ಗೌರವವಾಗಿದೆ ಎಂದರು.
news_1778681446_2_803.webp
ಭಾರತ್ ಸ್ಕೌಟ್ಸ್ ಗೈಡ್ಸ್ ಜಿಲ್ಲಾ ಉಪಾಧ್ಯಕ್ಷೆ ಎಂ.ಬಿ.ಗಿರಿಜಾಂಬಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಗೈಡ್ ಆಯುಕ್ತೆ ಜಯರಮೇಶ್, ಆಲೂರು ತಾಲ್ಲೂಕು ಕಾರ್ಯದರ್ಶಿ ಕೊಟ್ರೇಶ್ ಎಸ್. ಉಪ್ಪಾರ್, ಜಿಲ್ಲಾ ತರಬೇತಿ ಆಯುಕ್ತ ಎಂ.ಎಸ್.ಪ್ರಕಾಶ್, ಹಿರಿಯ ಗೈಡ್ ಕ್ಯಾಪ್ಟನ್ ಎಚ್.ಜಿ.ಕಾಂಚನಮಾಲ, ಜಿಲ್ಲಾ ಖಜಾಂಚಿ ಆರ್.ಎಸ್.ರಮೇಶ್, ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಎಚ್.ಎಂ. ಪ್ರಿಯಾಂಕ, ಶಿಬಿರ ನಾಯಕಿ ಬಿ.ಎಲ್.ಮಮತ, ಸಂಪನ್ಮೂಲ ವ್ಯಕ್ತಿ ಸೋಫಿಯಾ ಫನಾಂಡೀಸ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಸಾಮೂಹಿಕ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಗೈಡ್ ಕ್ಯಾಪ್ಟನ್ ಲತಾಮಣಿ ಎಂ.ಕೆ.ತುರುವೇಕೆರೆ ನಿರ್ವಹಣೆ ಮಾಡಿದರು.
Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೀಟ್ ಮರುಪರೀಕ್ಷೆ: ಮಕ್ಕಳ ಭವಿಷ್ಯದ ಜೊತೆ ಕೇಂದ್ರದ ಚೆಲ್ಲಾಟ:ಮಧುಬಂಗಾರಪ್ಪನೀಟ್ ಮರುಪರೀಕ್ಷೆ: ಮಕ್ಕಳ ಭವಿಷ್ಯದ ಜೊತೆ ಕೇಂದ್ರದ ಚೆಲ್ಲಾಟ:ಮಧುಬಂಗಾರಪ್ಪಭಾರತ್ ಸ್ಕೌಟ್ಸ್ ಗೈಡ್ಸ್ ಜಿಲ್ಲಾ ಸಂಸ್ಥೆ ಹಾಸನ ವತಿಯಿಂದ ವಿಶ್ವ ಅಮ್ಮಂದಿರ ದಿನಾಚರಣೆಅಬ್ಬಾಟ್ಟ್ ನಿಂದ ಭಾರತದಲ್ಲಿ ಆರೋಗ್ಯಕರ ವಯಸ್ಸಾಗುವಿಕೆಗೆ ಎನ್ಷೂರ್® ಸ್ಟ್ರೆಂಥ್ ಪ್ರೊ ಬಿಡುಗಡೆಸಚಿವ ಡಿ.ಸುಧಾಕರ್ ಅವರ ನಿಧನಕ್ಕೆಸಚಿವ ಡಿ.ಸುಧಾಕರ್ ಅವರ ನಿಧನಕ್ಕೆಯುವ ಶಕ್ತಿಗೆ ಆಡಳಿತಗಾರರನ್ನು ಆಯ್ಕೆ ಮಾಡುವ ತಾಕತ್ತಿದೆ: ದಕ್ಷಿಣ ಭಾರತದ ಫಲಿತಾಂಶವೇ ಇದಕ್ಕೆ ಸಾಕ್ಷಿನೆನ್ನೆ ಮೋದಿ ಭಾಷಣದ ಹೇಳಿಕೆಗೆ ಸಿದ್ದರಾಮಯ್ಯ ಇಂದು ತಿರುಗೇಟುಮೇ.15ಕ್ಕೆ ರಾಜ್ಯ ಮಟ್ಟದ JPL ಕ್ರಿಕೇಟ್ ಪಂದ್ಯಾವಳಿ,ಲೋಗೋ ಅನಾವರಣಶ್ರೀಗಂಧ ಮರ ಕಳವು ತಡೆಗೆ ಕೆ ಎಸ್ ಡಿ ಎಲ್ ಉಪಕ್ರಮ: ಸಾರ್ವಜನಿಕರಿಂದ ತಾಂತ್ರಿಕ ಪರಿಹಾರಗಳಿಗೆ ಆಹ್ವಾನ