ಬೆಂಗಳೂರು: ಭಾರತಿ ಟೀಚರ್ ಏಳನೇ ತರಗತಿ’ ಚಿತ್ರವನ್ನು ಕೇವಲ 50 ರೂಪಾಯಿ ಟಿಕೆಟ್ ದರದಲ್ಲಿ ಸಿನಿಮಾ ನೋಡಬಹುದೆಂದು ನಿರ್ಮಾಪಕ ರಾಘವೇಂದ್ರ ರೆಡ್ಡಿ ಸಂಕ್ರಾಂತಿ ಹಬ್ಬಕ್ಕೆ ಸಿನೆಮಾ ಪ್ರಿಯರಿಗೆ ವಿಶೇಷ ಉಡುಗೊರೆ ಅಂತ ಪ್ರಿ ರಿಲೀಸ್ ಇವೆಂಟ್ ಕಾರ್ಯಕ್ರಮದಲ್ಲಿ ಘೋಷಣೆ ಮಾಡಿದ್ದಾರೆ. ಇದು ಕರ್ನಾಟಕದಲ್ಲಿರುವ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿಗೆ ಮಾತ್ರ ಅನ್ವಯವಾಗುತ್ತದೆ.
ಸಿರಗುಪ್ಪ ಮೂಲದ ಉದ್ಯಮಿ ರಾಘವೇಂದ್ರ ರೆಡ್ಡಿ ಅವರು ಪೂಜ್ಯಾಯ ಫಿಲಂಸ್ ಅಡಿಯಲ್ಲಿ ಬಂಡವಾಳ ಹೂಡಿದ್ದಾರೆ. ಗುರುರಾಜ್ ರೆಡ್ಡಿ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.ಕಥೆ,ಚಿತ್ರಕಥೆ,ಸಂಭಾಷಣೆ,ಸಾಹಿತ್ಯ, ಸಂಗೀತ ಮತ್ತು ನಿರ್ದೇಶನವನ್ನು ಎಂ.ಎಲ್.ಪ್ರಸನ್ನ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಕ್ರಿಷಿ ಸಂಸ್ಥೆಯ ವೆಂಕಟ್ಗೌಡ ಕ್ರಿಯೇಟೀವ್ ಹೆಡ್ ಆಗಿದ್ದಾರೆ.
ಕನ್ನಡ ಪರ ಹೋರಾಟಗಾರನಾಗಿ ರೋಹಿತ್ ರಾಘವೇಂದ್ರ ನಾಯಕ ನಟನಾಗಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಶಿಕ್ಷಕರಾಗಿ ಸಿಹಿಕಹಿಚಂದ್ರು, ಟೈಟಲ್ ರೋಲ್ದಲ್ಲಿ ಕು.ಯಶಿಕಾ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇಗೌಡ ಮೊದಲಬಾರಿ ಖಳನಟನಾಗಿ ಕಾಣಿಸಿಕೊಂಡರೆ, ಇನ್ಸ್ಪೆಕ್ಟರ್ ಆಗಿ ಅಶ್ವಿನ್ಹಾಸನ್. ಉಳಿದಂತೆ ದಿವ್ಯಾ ಅಂಚನ್, ಬೆನಕಾ ನಂಜಪ್ಪ, ಸೌಜನ್ಯಸುನಿಲ್, ಎಂ.ಜೆ.ರಂಗಸ್ವಾಮಿ ಮುಂತಾದವರು ನಟಿಸಿದ್ದಾರೆ. ಛಾಯಾಗ್ರಹಣ ಎಂ.ಬಿ.ಹಳ್ಳಿಕಟ್ಟಿ, ಸಂಕಲನ ಸುಜಿತ್ನಾಯಕ್, ವಾದ್ಯ ಸಂಯೋಜನೆ ಕೆ.ಎಂ.ಇಂದ್ರ, ನೃತ್ಯ ಕಂಬಿರಾಜ್, ಕಾರ್ಯಕಾರಿ ನಿರ್ಮಾಪಕ ರಾಘವ್ಸೂರ್ಯ-ದರ್ಶನ್ಗೌಡ ಅವರದಾಗಿದೆ.
ಭಾರತೀ ಟೀಚರ್ ಸಿನೆಮಾ ಏಕೆ ನೋಡಬೇಕು?
ಇನ್ನು ಚಿತ್ರವನ್ನು ಯಾಕೆ ನೋಡಬೇಕು ಎಂದು ನಿರ್ದೇಶಕರು ವಿವರ ನೀಡಿದ್ದಾರೆ. ಇಡೀ ಕರ್ನಾಟಕ ಕನ್ನಡಿಗರಿಂದ ತುಂಬಿರಬೇಕು. ನಾನು ಮನಸ್ಸು ಮಾಡಿ ಒಂದು ಹಳ್ಳಿ ಬದಲಾಯಿಸಿದೆ. ಹಾಗೆಯೇ ಇಲ್ಲಿ ಲಕ್ಷಾಂತರ ಮಕ್ಕಳು ಇದ್ದಾರೆ. ಪ್ರತಿ ವಿದ್ಯಾರ್ಥಿ ಕನಿಷ್ಠ 10 ಮಕ್ಕಳಿಗೆ ವಿದ್ಯಾದಾನ ಮಾಡಿದರೆ, ಇಡೀ ರಾಜ್ಯ ಕನ್ನಡಿಗರಿಂದ ವಿಧ್ಯಾವಂತರಿಂದ ತುಂಬಿರುತ್ತದೆಂದು ಮನವಿ ಮಾಡಿದ್ದಾರೆ. ಒಂದು ಹಳ್ಳಿಯನ್ನು ವಿಧ್ಯಾವಂತರನ್ನಾಗಿ ಮಾಡುವ ಕೆಲಸ ಸಿನೆಮಾದಲ್ಲಿ ತೋರಿಸಲಾಗಿದೆ.
ಕಾರ್ಮಿಕ ಸಚಿವರ ಪಾತ್ರ
ಒಬ್ಬ DC ಪಾತ್ರವನ್ನು ಹಾಲಿ ಕಾರ್ಮಿಕ ಸಚಿವರಾದ ಸಂತೋಷ್.ಎಸ್.ಲಾಡ್ ನಿಭಾಯಿಸಿದ್ದಾರೆ. ಚಿತ್ರ ನೋಡಿ ಸ್ಪೂರ್ತಿಗೊಳ್ಳುವ ಮಕ್ಕಳು ಕನಿಷ್ಠ 10 ಮಂದಿಗೆ ವಿದ್ಯಾದಾನ ಮಾಡುತ್ತಾರೆ. ದೊಡ್ಡವರು ಸಿನಿಮಾ ನೋಡಿ ಮಕ್ಕಳ ಮನಸ್ಥಿತಿ ಅರ್ಥಮಾಡಿಕೊಂಡು ಅವರಿಗೆ ಸ್ಪೂರ್ತಿ ಜತೆಗೆ ಪ್ರೋತ್ಸಾಹ ನೀಡಿದರೆ ಅವರುಗಳು ಬೇರೆಯವರಿಗೆ ಮಾದರಿಯಾಗುತ್ತಾರೆ. ನಿರ್ಮಾಪಕರು 50 ರೂಪಾಯಿ ಟಿಕೆಟ್ ದರದಲ್ಲಿ ಚಿತ್ರ ನೋಡಿ ಪ್ರೊತ್ಸಾಹಿಸ ಬೇಕೆಂದು ವೀಕ್ಷಕರಲ್ಲಿ ಮನವು ಮಾಡಿಕೊಂಡರು.
ಟೀಚರ್ ಕನಸು ಹೇಗೆ ನನಸಾಗುತ್ತದೆ!
ಭಾರತಿ ಎನ್ನುವ ಏಳನೇ ತರಗತಿ ವಿದ್ಯಾರ್ಥಿಯೊಬ್ಬಳು ಟೀಚರ್ ಕನಸನ್ನು ಹೇಗೆ ನನಸು ಮಾಡುತ್ತಾಳೆ. ಇದರಿಂದ ಮುಂದಕ್ಕೆ ಕರ್ನಾಟಕದಲ್ಲಿ ಕನ್ನಡ ಹಾಗೂ ಶಿಕ್ಷಣ ಎಷ್ಟು ಮುಖ್ಯ ಜತೆಗೆ ಮಗು ನನ್ನ ಹಾಗೆ ಲಕ್ಷಾಂತರ ಮಕ್ಕಳು ಕನಿಷ್ಟ ಹತ್ತು ಜನರಿಗೆ ಕನ್ನಡ ಕಲಿಸಬೇಕು. ಅದಕ್ಕೊಂದು ಯೋಜನೆ ಬೇಕು. ಇವರೆಡು ಅಂಶಗಳನ್ನು ಕ್ಲೈಮಾಕ್ಸ್ದಲ್ಲಿ ಹೇಳಲಾಗಿದೆ. ಚಿತ್ರವು ಕನ್ನಡ ಕಾಳಜಿಯ ಕಥೆಯಾಗಿದೆ ಎಂದು ಎಂ.ಎಲ್.ಪ್ರಸನ್ನ ಮಾಹಿತಿ ಹಂಚಿಕೊಂಡಿದ್ದಾರೆ. ಇದರ ಮಧ್ಯದಲ್ಲಿ ಹೀರೋಗೂ ಪೋಲೀಸ್ ಅಧಿಕಾರಿಗೂ ಸ್ವಲಗಪ ಟ್ಟಕ್ಕಪರ್ ಆಗುತ್ತದೆ. 
ವೆಂಕಟ್ಗೌಡ ಸಾರಥ್ಯದಲ್ಲಿ ಚಿತ್ರವು ಇದೇ ಶುಕ್ರವಾರದಂದು ಸುಮಾರು ರಾಜ್ಯದ 100 ಚಿತ್ರ ಮಂದಿರ ಕೇಂದ್ರಗಳಲ್ಲಿ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಎಲ್ಲರೂ ಥಿಯೇಟರ್ ಗೆ ಹೊಗಿ ಸಿನೆಮಾ ನೋಡಲು ಇಡೀ ಚಿತ್ರತಂಡ ಮನವಿ ಮಾಡಿಕೊಂಡರು.