LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವೈದ್ಯರು ವೃತ್ತಿ ಜೀವನದ ಜೊತೆ ಇತರ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು

ಬೆಂಗಳೂರು: ಭಾರತದಲ್ಲಿ ಪ್ರತಿ ವರ್ಷ ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನವನ್ನು (National Doctors' Day) ಆಚರಿಸಲಾಗುತ್ತದೆ. ಇದು ಸಮಾಜಕ್ಕೆ ವೈದ್ಯರು ನೀಡುವ ನಿಸ್ವಾರ್ಥ ಸೇವೆ ಮತ್ತು ತ್ಯಾಗವನ್ನು ಗೌರವಿಸಲು ಮೀಸಲಾದ ದಿನವಾಗಿದೆ.news_1782991436_1_692.webp

ಹೀಗಾಗಿ ರಾಜ್ಯ ರಾಷ್ಟ್ರಮಟ್ಟದಲ್ಲಿ  ಒಂದಲ್ಲ ಒಂದು ದಿನಾಚರಣೆಗಳನ್ನು ಆಚರಣೆ ಮಾಡಿಕೊಂಡು ಅನಾಧಿಕಾರದಿಂದಲೇ ಬರಲಾಗುತ್ತಿದೆ, ಅದರಲ್ಲಿ ವೈದ್ಯರ ದಿನಾಚರಣೆಯ ಸಹ ವಿಶೇಷವಾಗಿದೆ.

ಮಣಿಪಾಲ ಆಸ್ಪತ್ರೆ ಅಂಕೋಲಜಿ ಶಸ್ತ್ರಚಿಕಿತ್ಸೆ ವಿಭಾಗದ ಸಲಹೆಗಾರರಾದ ಡಾ. ಮಾಧವಿ ನಾಯರ್‌ ಅವರು ವೈದ್ಯಕೀಯ ದಿನಾಚರಣೆ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಹಂಚಿಕೊಂಡರು. ರಾಜ್ಯದಲ್ಲಿ ದಿನಾಚರಣೆಗಳು ನೂರಕ್ಕಿಂತ ಹೆಚ್ಚು ಇದ್ದಾವೆ ಹೀಗಾಗಿ ವೈದ್ಯಕೀಯ ದಿನಾಚರಣೆಯ ಸಹ ಬಹಳಷ್ಟು ವಿಶೇಷವಾಗಿದೆ.

 ಎಲ್ಲರಿಗೂ ಸಹ ದಿನಾಚರಣೆ ಗಳಿಗೆ ಸಾರ್ವತ್ರಿಕ ರಜೆಯನ್ನು ಘೋಷಣೆ ಮಾಡಲಾಗಿದೆ ಆದರೆ ವೈದ್ಯಕೀಯ ದಿನಾಚರಣೆಗೆ ಮಾತ್ರ ಯಾವುದೇ ರೀತಿಯ ರಜೆ ಇರುವುದಿಲ್ಲ ವರ್ಷದ 365 ದಿನವೂ ಸಹ ನಿರಂತರವಾಗಿ ವೈದ್ಯರು ಕೆಲಸ ಕಾರ್ಯಗಳಲ್ಲಿ ತೊಡಗಿರುತ್ತಾರೆ, ವೈದ್ಯರಿಗೂ ಸಹ ಕೆಲವು ಮನೋರಂಜನೆಗಳು ಬೇಕಾಗುತ್ತದೆ ಅದರಲ್ಲಿ ಪ್ರಸ್ತುತ ಯುವ ವೈದ್ಯರು ಮನೋರಂಜನಾತ್ಮಕ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ವೈದ್ಯಕೀಯ ವೃತ್ತಿ ಜೀವನದಲ್ಲಿ ಸಾಕಷ್ಟು ಖುಷಿ ಸಂತೋಷ ದುಃಖ ಎಲ್ಲವೂ ಸಹ ಹಡಕವಾಗಿರುತ್ತದೆ, ಅದರಲ್ಲಿ ನಾವು ಯಾವುದನ್ನು ಪಡೆಯುತ್ತೇವೆ ಎಂಬುದು ಬಹಳ ಮುಖ್ಯವಾದ ಸಂಗತಿ. ರೋಗಿಗಳು ವೈದ್ಯರಿಂದ ಚಿಕಿತ್ಸೆಯನ್ನು ಪಡೆದು ಗುಣಮುಖರಾಗಿ ಪುನಃ ಸಂತೋಷಕರ ಸುದ್ದಿಯನ್ನು ತಿಳಿಸುತ್ತಾರೋ ಆ ವೇಳೆಯಲ್ಲಿ ಸಿಗುವ ಸಂತಸ ಮತ್ತೆಲ್ಲೂ ಕಾಣಲು ಸಾಧ್ಯವಿಲ್ಲ. news_1782991436_2_122.webp

ವೈದ್ಯರ ದಿನಾಚರಣೆಗಳನ್ನು ಯಾರು ಸಹ ದೊಡ್ಡ ಮಟ್ಟದಲ್ಲಿ ಆಚರಿಸಿಕೊಳ್ಳಲು ಹೋಗುವುದಿಲ್ಲ ಕಾರಣ ಅವರದ್ದೇ ಆದಂತಹ ಒತ್ತಡದ ಕೆಲಸ ಕಾರ್ಯಗಳಲ್ಲಿ ತಲ್ಲೀನರಾಗಿರುವುದರಿಂದ. ಕೇವಲ ಚಿಕ್ಕ ಕಾರ್ಯಕ್ರಮವನ್ನಾಗಿ ರೂಪಿಸಿ ಆಚರಣೆ ಮಾಡುವುದು ರೂಢಿಯಲ್ಲಿದೆ, ಆದರೆ ಅದಕ್ಕೆ ಬದಲಾಗಿ ಸಾಮಾಜಿಕ ಕಳಕಳಿ ಹಾಗೂ ವೈದ್ಯಕೀಯ ವೃತ್ತಿ ಜೀವನದಲ್ಲಿ ಅಮೋಘ ಸಾಧನೆ ಮಾಡಿದವರಿಗೆ ಸಾಧಕ ಪ್ರಶಸ್ತಿಗಳನ್ನು ನೀಡುವ ಹಾಗೂ ಗೌರವಿಸುವ ಕೆಲಸ ಮಾಡುವುದರಿಂದ ವೈದ್ಯರು ಮತ್ತಷ್ಟು ಕೆಲಸ ಕಾರ್ಯಗಳಲ್ಲಿ ತೊಡೆಯಕೊಳ್ಳಲು ಸಹಕಾರಿಯಾಗುತ್ತದೆ ಎಂದರು.

ವೈದ್ಯರು ಹಾಗೂ ರೋಗಿಗಳಿಗೆ ಅವಿನಾಭಾವ ಸಂಬಂಧ ಇದೆ, ಅದನ್ನು ಯಾವತ್ತೂ ಯಾರು ಕಡೆದುಕೊಳ್ಳಬಾರದು ಒಬ್ಬರಿಗೊಬ್ಬರು ಸಲಹೆ ಸೂಚನೆಗಳ ಮೂಲಕ ಸಂಬಂಧ ಗಟ್ಟಿಗೊಳಿಸಬೇಕಾಗಿದೆ.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪಾದಚಾರಿಗಳ ಸುಗಮ ಸಂಚಾರಕ್ಕೆ ಒತ್ತುವರಿ ತೆರವು ಅನಿವಾರ್ಯ: ಜಗದೀಶ್ ರಾಮನಗರದಲ್ಲಿ SIR ನಿಯಮ ಉಲ್ಲಂಘನೆ; ಚುನಾವಣಾ ಆಯೋಗದ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕೆಂಡಾಮಂಡಲ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಮುಖಂಡರೊಂದಿಗೆ ಹೆಚ್.ಡಿ. ಕುಮಾರಸ್ವಾಮಿ ಮಹತ್ವದ ಸಮಾಲೋಚನೆವೈದ್ಯರು ವೃತ್ತಿ ಜೀವನದ ಜೊತೆ ಇತರ ಚಟುವಟಿಕೆಗಳಲ್ಲಿ ಭಾಗಿಯಾಗಬೇಕುಯಾರಿವಳು? ನೋವಿನಲ್ಲಿ ಅರಳಿದವಳು ಸಾಕ್ಷಾ ಚಿತ್ರ, ಪೋಸ್ಟರ್ ರಿಲೀಸ್ಪೂರ್ವಜರು ಹೋರಾಟ ಮಾಡಿ ದೇಶಕ್ಕೆ ಸ್ವಾತಂತ್ರ್ಯ ತಂದು ನಮಗೆ ಪ್ರಜಾಪ್ರಭುತ್ವ ವ್ಯವಸ್ಥೆ ಕೊಟ್ಟಿದ್ದಾರೆಸಂಪುಟದಲ್ಲಿ ಶಾಸಕರಾದ ಡಾ. ಡಿ ತಿಮ್ಮಯ್ಯರಿಗೆ ಸಚಿವ ಸ್ಥಾನ ನೀಡಲು ಆದಿ ಜಂಬವ ಕ್ಷೇಮಾಭಿವೃದ್ಧಿ ಸಂಘದಿಂದ ಒತ್ತಾಯಅಕ್ಕಿಪೇಟೆ ಮುಖ್ಯರಸ್ತೆ ಕಾಂಕ್ರೀಟ್ ರಸ್ತೆ ಉದ್ಘಾಟನೆ: ಅಭಿವೃದ್ಧಿ ಕಾಮಗಾರಿಗಳಿಗೆ ದಿನೇಶ್ ಗುಂಡೂರಾವ್ ಚಾಲನೆಶೂಟಿಂಗ್ನಲ್ಲಿ ಅಭಯಸೂರ್ಯಗೆ ನಾಲ್ಕು ಚಿನ್ನದ ಪದಕಚಿಕ್ಕಬಳ್ಳಾಪುರದಲ್ಲಿ ನಡೆದ ಘಟನೆ ಬಗ್ಗೆ ಪ್ರದೀಪ್ ಈಶ್ವರ ಸಿದ್ದರಾಮಯ್ಯಗೆ ವಿವರಣೆ