LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕರ್ನಾಟಕದಲ್ಲಿ ಅಕ್ರಮ ಕೇರಳ ಲಾಟರಿ ಹಾವಳಿ ತಕ್ಷಣ ನಿಲ್ಲಿಸಿ

ಬೆಂಗಳೂರು: ಕರ್ನಾಟಕದಲ್ಲಿ ಅಕ್ರಮವಾಗಿ ಕೇರಳ ಲಾಟರಿ ಮಾರಾಟ ವ್ಯಾಪಕವಾಗಿ ನಡೆಯುತ್ತಿದ್ದು, ರಾಜ್ಯ ಸರ್ಕಾರ ಕೂಡಲೇ ಅಕ್ರಮ ಲಾಟರಿ ಮಾರಾಟವನ್ನು ಸಂಪೂರ್ಣವಾಗಿ ತಡೆದು, ಶಾಸನಬದ್ಧ ಕರ್ನಾಟಕ ರಾಜ್ಯ ಲಾಟರಿ ಯೋಜನೆಯನ್ನು ಮರು ಜಾರಿಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಲಾಟರಿ ಚಿಲ್ಲರೆ ಮಾರಾಟಗಾರರ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಸಿ. ರಾಮಕೃಷ್ಣ ತಿಳಿಸಿದರು.news_1784270892_2_751.webp

ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದವರು, ರಾಜ್ಯದಲ್ಲಿ ಅಕ್ರಮ ಲಾಟರಿಯಿಂದ ಉಂಟಾಗಿರುವ ಸಮಸ್ಯೆಗಳು, ಸರ್ಕಾರದ ನಿರ್ಲಕ್ಷ್ಯ ಹಾಗೂ ಸಾವಿರಾರು ಕುಟುಂಬಗಳು ಎದುರಿಸುತ್ತಿರುವ ಸಂಕಷ್ಟಗಳು ಹಲವಾರು ಇದ್ದಾವೆ, ಸಂಘದ ಪ್ರಕಾರ, 1998ರಲ್ಲಿ ಕೇರಳ ಸರ್ಕಾರ ಆರಂಭಿಸಿದ ಲಾಟರಿ ಯೋಜನೆಯು ಕಳೆದ ಹಲವು ವರ್ಷಗಳಿಂದ ಕರ್ನಾಟಕದಲ್ಲಿ ಅಕ್ರಮವಾಗಿ ವ್ಯಾಪಕವಾಗಿ ಮಾರಾಟವಾಗುತ್ತಿದ್ದು, ಪ್ರತಿದಿನ ನೂರಾರು ಕೋಟಿ ರೂಪಾಯಿಗಳ ವ್ಯವಹಾರ ನಡೆಯುತ್ತಿದೆ. ಇದರಿಂದ ಕರ್ನಾಟಕ ಸರ್ಕಾರಕ್ಕೆ ಅಪಾರ ಪ್ರಮಾಣದ ಆದಾಯ ನಷ್ಟವಾಗುತ್ತಿದೆ ಎಂದು ಸರ್ಕಾರಕ್ಕೆ ಅಳಲನ್ನು ತೋಡಿಕೊಂಡರು.

ಈ ಹಿಂದೆ ಕರ್ನಾಟಕ ಸರ್ಕಾರದ ಲಾಟರಿ ಯೋಜನೆಯ ಮೂಲಕ ಸುಮಾರು 5,000 ರಿಂದ 6,000 ಕೋಟಿ ರೂಪಾಯಿಗಳ ವಾರ್ಷಿಕ ಆದಾಯ ರಾಜ್ಯದ ಖಜಾನೆಗೆ ಹರಿದು ಬರುತ್ತಿತ್ತು. ಜೊತೆಗೆ 10 ರಿಂದ 12 ಸಾವಿರಕ್ಕೂ ಹೆಚ್ಚು ಕುಟುಂಬಗಳು ಲಾಟರಿ ಮಾರಾಟವನ್ನೇ ಅವಲಂಬಿಸಿ ಜೀವನ ನಡೆಸುತ್ತಿದ್ದರು. ಆದರೆ 2007ರಲ್ಲಿ ರಾಜ್ಯ ಲಾಟರಿ ಯೋಜನೆ ಸ್ಥಗಿತಗೊಂಡ ನಂತರ ಈ ಕುಟುಂಬಗಳು ಉದ್ಯೋಗ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ತಳ್ಳಲ್ಪಟ್ಟಿವೆ.

ಸಂಘವು ಸರ್ಕಾರವನ್ನು ಈ ಕೆಳಗಿನಂತೆ ಒತ್ತಾಯಿಸಿದೆ: ಕರ್ನಾಟಕದಲ್ಲಿ ಅಕ್ರಮ ಕೇರಳ ಲಾಟರಿ ಮಾರಾಟವನ್ನು ತಕ್ಷಣ ಸಂಪೂರ್ಣವಾಗಿ ನಿಲ್ಲಿಸಬೇಕು.
ಕರ್ನಾಟಕ ರಾಜ್ಯ ಸರ್ಕಾರವು ಶಾಸನಬದ್ಧ ರಾಜ್ಯ ಲಾಟರಿ ಯೋಜನೆಯನ್ನು ಮರು ಜಾರಿಗೊಳಿಸಬೇಕು.

ಸಾವಿರಾರು ಲಾಟರಿ ಮಾರಾಟಗಾರರ ಬದುಕು, ಉದ್ಯೋಗ ಮತ್ತು ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ರಾಜ್ಯಕ್ಕೆ ಸಾವಿರಾರು ಕೋಟಿ ರೂಪಾಯಿ ಆದಾಯ ತರುವ ಯೋಜನೆಯನ್ನು ಪುನಃ ಆರಂಭಿಸಿ ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳಿಗೆ ಆರ್ಥಿಕ ಬಲ ಒದಗಿಸಬೇಕು ಎಂದು ಅಧ್ಯಕ್ಷರಾದ ಸಿ.ರಾಮಕೃಷ್ಣರವರು  ಹೇಳಿದರು.news_1784270892_1_588.webp

ವಕೀಲರಾದ ಭಾಸ್ಕರ್ ಬಾಬು* ರವರು ಮಾತನಾಡಿ ಲಾಟರಿ ಕಾಯಿದೆ ಆನ್ವಯ ಈ ಮುಂಚೆ ರಾಜ್ಯ ಸರ್ಕಾರ ನಡೆಸುತ್ತಿದ್ದ ಲಾಟರಿಯನ್ನು ಪುನರ್ ಆರಂಭಿಸಿ ಇದರಿಂದ ಸರ್ಕಾರಕ್ಕೆ ಅದಾಯ ಬರುತ್ತದೆ ಹಾಗೂ ಲಾಟರಿ ಏಜೆಂಟ್ ರಿಗೆ ಉದ್ಯೋಗ ಲಭಿಸುತ್ತದೆ. ಲಾಟರಿಯಿಂದ ಬಂದ ಲಾಭದ ಹಣದಲ್ಲಿ ಸರ್ಕಾರ ಅಭಿವೃದ್ದಿ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಬಹುದು.

ವಾರದ ಡ್ರಾ, ಬಂಪರ್ ಡ್ರಾ ಲಾಟರಿ ಮಾರಾಟ ಹವ್ಯಾಸವಾಗಿರುತ್ತದೆ, ಲಾಟರಿ ಖರೀದಿದಾರರು ಜೂಜಿನ ವ್ಯಸನಿಗಳಾಗುವುದಿಲ್ಲ. ಕೇರಳ ರಾಜ್ಯ ಲಾಟರಿ ರಾಜ್ಯದಲ್ಲಿ ಕಳ್ಳಸಂತೆ ಮಾರಾಟದಿಂದ ರಾಜ್ಯಕ್ಕೆ ತೆರಿಗೆ ವಂಚನೆಯಾಗುತ್ತಿದೆ. ಕೊಡಲೇ ಮುಖ್ಯಮಂತ್ರಿಗಳು ಕೇರಳ ಲಾಟರಿ ಮಾರಾಟಕ್ಕೆ ಕಡಿವಾಣ ಹಾಕಬೇಕು. ರಾಜ್ಯ ಲಾಟರಿ ಇಲಾಖೆ ಸ್ಥಾಪನೆ ಮಾಡಿ ಸಾಂಪ್ರಾದಾಯಿಕ ಕರ್ನಾಟಕ ಲಾಟರಿ ಮಾರಾಟಕ್ಕೆ ಅವಕಾಶ ನೀಡಬೇಕು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರು ಪದಾಧಿಕಾರಿಗಳು ಹಾಗೂ ಲಾಟರಿ ಮಾಲೀಕರು ಇದೆ ವೇಳೆ ಉಪಸ್ಥಿತರಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅನುಷ್ಠಾನಕ್ಕೆ ಬಂದ ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದಮಮದಾಪುರ ಕೆರೆ ಮುಳುಗಡೆ ಪ್ರದೇಶ ಸ್ವಾಧೀನ: ಸಂಪುಟಕ್ಕೆ ವಿಷಯ ಮಂಡನೆಬೆಂಗಳೂರಿನ ಹೆಚ್ಎಂಟಿ ಭೂಮಿ ಕೊಳ್ಳೆ ಹೊಡೆದ ಮಹಾಪ್ರಭಾವಿ ಯಾರು? HDK ಪ್ರಶ್ನೆಕನ್ನಡಿಗರನ್ನು ಮತ್ತಷ್ಟು ಕುಡುಕರನ್ನಾಗಿಸುತ್ತೀರಾ?ಎಎಪಿ ಪ್ರಶ್ನೆಸಂಗೀತ- ಸಂವಾದದ ಗಮ್ಮತ್ತು : ಜಯನಗರದಲ್ಲಿ ಭಕ್ತಿ, ಭಾವದ ‘ರಸಂ’ ರಸದೌತಣ!ಕೃತಕ ಬುದ್ಧಿಮತ್ತೆಯು (ಎಐ) ಆ ಗುರಿಯನ್ನೇ ತಪ್ಪನ್ನಾಗಿ ಮಾಡಿದೆ : ಡಾ. ಶ್ರೀಧರ್ ಜಿಕರ್ನಾಟಕದಲ್ಲಿ ಅಕ್ರಮ ಕೇರಳ ಲಾಟರಿ ಹಾವಳಿ ತಕ್ಷಣ ನಿಲ್ಲಿಸಿಕಾಮಗಾರಿಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಬೇಡ :ಲೋಖಂಡೆ ಸ್ನೇಹಲ್ ಸುಧಾಕರ್ಭೂಮಿ ಲೂಟಿಗೆ ಮತ್ತೆ ನೋಟಿಫಿಕೇಶನ್ ಹೊರಟಿಸಿದ್ದು ಪಾಶವೀಕೃತ ಎಂದ ಕೇಂದ್ರ ಸಚಿವರುಬರದ ಆಕ್ರಂದನ: ರೈತರ ನೋವನ್ನು ಆಲಿಸಿದ ಜೆಡಿಎಸ್ ಅಧ್ಯಯನ ತಂಡ