ಬೆಂಗಳೂರು: ಭರತನಾಟ್ಯ ಕಲಾವಿದೆ ಶ್ರದ್ಧಾ ಶ್ರೀನಿವಾಸ್ ಅವರು ವಿವಿಧ ಪ್ರಕಾರಗಳ ನೃತ್ಯ ಮಾಡುವ ಮೂಲಕ ನೆರೆದಿದ್ದವರನ್ನು ಮಂತ್ರಮುದ್ಗಗೊಳಿಸಿದರು. 
ನಗರದ ಭಾರತೀಯ ವಿದ್ಯಾಭವನದಲ್ಲಿ ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್ , ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಭಾರತೀಯ ವಿದ್ಯಭವನ, Federatation Of Internatational Students Assosatation ಸಹಭಾಗಿತ್ವದಲ್ಲಿ ಭರತನಾಟ್ಯ ಪ್ರತಿ ಶುಕ್ರವಾರದ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ವೇದಿಕೆ ಮೇಲೆ ಶ್ರದ್ದಾ ಶ್ರೀನಿವಾಸ್ ಅವರಿಂದ ಗುರು: ವಿದ್ವಾನ್ ಶ್ರೀ ಕಿರಣ್ ಸುಭ್ರಮಣ್ಯಂ, ವಿದುಷಿ ಸಂಧ್ಯಾ ಕಿರಣ್ ಅವರ ಮಾರ್ಗದರ್ಶನದಲ್ಲಿ ಹಲವು ವರ್ಷಗಳಿಂದ ಭರತನಾಟ್ಯ ಕಲಿಯುತ್ತಿದ್ದು, ಇದೀಗ ವೇದಿಕೆ ಮೇಲೆ ಅದ್ಬುತವಾಗಿ ಕಲೆಯನ್ನು ಪ್ರದರ್ಶನ ಮಾಡಿ ನೆರೆದಿದ್ದ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದರು. 
ಶ್ರದ್ದಾ ಶ್ರೀನಿವಾಸ್ ಅವರು ಭರತನಾಟ್ಯದ ಹಲವು ಪ್ರಕಾರಗಳಾದ ವಳೂತು ಮತ್ತು ಕಳಾಕ್ಷೇತ್ರ, ಕಡಗೋಲ ತಾರೆಣ್ಣ ಚಿನ್ನರೇ ನಂದಿ ಚೋಳ್, ಆದಿ ತಾಳ, ವರ್ಣಂ ಇನ್ಯುಂ ರನ್ ಮನಂ-ರಾಗ ಚಾರುಕೇಶಿ ಆದಿ ತಾಳ, ಪದಂ-ರಾಗ ಶುರುಟಿ ಮಿಶ್ರ ಚಾಪುತಾಳ, ರಾಗವಯಮನ್ ಕಲ್ಯಾಣಿ ಆದಿ ತಾಳ, ತಿಲ್ಲಾನ ಸನ ಸರಂಜಿನಿ ಆದಿ ತಾಳ ಸೇರಿದಂತೆ ಕೃಷ್ಣನ ಮೇಲಿನ ಹಾಡಿಗೆ ನೃತದಯ ಮಾಡಿದರು.
ಕಾರ್ಯಕ್ರಮಸಲ್ಲಿ ಶ್ರದ್ದಾ ಅವರ ತಂದೆ,ತಾಯಿ,ಬಂದು ಬಳಗ, ಸ್ನೇಹಿತರು, ಸಹಪಾಟಿಗಳು, ಕಲಾವಿದರು ಸೇರಿದಂತೆ ಅನೇಕರು ಭಾಗವಹಿಸಿ ಶುಭಾಷಯ ತಿಳಿಸದರು.