LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

'ಗಿಚ್ಚಿ ಗಿಲಿಗಿಲಿ' ಈಗ ಪುಟಾಣಿ ಮಕ್ಕಳೊಂದಿಗೆ ಹೊಸ ಅವತಾರದಲ್ಲಿ

ಇತ್ತೀಚೆಗೆ ವಾಹಿನಿಗಳಲ್ಲಿ ರಿಯಾಲಿಟಿ ಶೋಗಳ ಅಬ್ಬರ ಜೊತೆಗೆ ಸ್ಪರ್ಧೆಯನ್ನು ಒಡ್ಡುವ ಕಾಲದಲ್ಲಿ ಸೀರಿಯಲ್ ಗಳ ಹಾವಳಿ ಹೆಚ್ಚಾಗಿದೆ. ನೆಚ್ಚಿನ ಕಲರ್ಸ್‌ ಕನ್ನಡದಲ್ಲಿ ಕುಟುಂಬದ ಹಿರಿಯರಿಂದ ಮನೆಯಲ್ಲಿನ ಪುಟ್‌ ಪುಟಾಣಿ ಮಕ್ಕಳಿಗೂ ಇದು ಹೇಳಿ ಮಾಡಿಸಿದ ಶೋ.. ಅದೇ ನೆಚ್ಚಿನ 'ಗಿಚ್ಚಿ ಗಿಲಿಗಿಲಿ' ಈಗ ಪುಟಾಣಿ ಮಕ್ಕಳೊಂದಿಗೆ ಹೊಸ ಅವತಾರದಲ್ಲಿ ಬರುತ್ತಿದೆ.


ಇಂದಿನಿಂದ ಪ್ರತಿ ಶನಿ-ಭಾನುವಾರ ರಾತ್ರಿ 9ಕ್ಕೆ ನಿಮ್ಮ ನೆಚ್ಚಿನ ಕಲರ್ಸ್‌ ಕನ್ನಡದಲ್ಲಿ  ಬರಲಿದೆ.ಕನ್ನಡ ಕಿರುತೆರೆಯ ಇತಿಹಾಸದಲ್ಲಿ ನಗೆಯ ಹಬ್ಬವನ್ನು ಸೃಷ್ಟಿಸಿದ್ದ ಕಲರ್ಸ್‌ ಕನ್ನಡದ 'ಗಿಚ್ಚಿ ಗಿಲಿಗಿಲಿ' ಈಗ ಮೂರು ಯಶಸ್ವಿ ಸೀಸನ್‌ಗಳ ನಂತರ ಮಕ್ಕಳ ಸೈನ್ಯದೊಂದಿಗೆ ವಿಶೇಷ ಆವೃತ್ತಿಯೊಂದಿಗೆ ನಿಮ್ಮ ಮನೆಮನ ಬೆಳಗಲು ಸಿದ್ಧವಾಗಿದೆ. ಮಕ್ಕಳಿಂದ ಹಿರಿಯರವರೆಗೂ ಇಡೀ ಕುಟುಂಬ ಕೂತು ನೋಡುವಂಥ ಶೋವನ್ನು ಕರುನಾಡಿನ ಮುಂದೆ ತರ್ತಿದೆ. ಈಗಾಗಲೇ ಪ್ರೋಮೋಗಳ ಮೂಲಕವೇ ವೀಕ್ಷಕರ ಗಮನ ಸೆಳೆದಿದೆ. 5 ರಿಂದ 10 ವರ್ಷದೊಳಗಿನ ಪ್ರತಿಭೆಗಳು ಹಿರಿಯ ಹಾಸ್ಯ ಕಲಾವಿದರ ಜೊತೆಗೂಡಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.


ಈ ಭಾರಿಯ ವಿಶೇಷ:


ಈ ಬಾರಿಯ ವಿಶೇಷತೆಯೆಂದರೆ ಮಕ್ಕಳ ಮುಗ್ಧತೆ ಮತ್ತು ಹಿರಿಯ ಕಲಾವಿದರ ಅನುಭವದ ಸಮ್ಮಿಲನ. ಈ ಪುಟ್ಟ ಮಕ್ಕಳು ಇಲ್ಲಿ ಕೇವಲ ಸ್ಪರ್ಧಿಗಳಲ್ಲ, ಇವರು ವೃತ್ತಿಪರ ನಟರಲ್ಲದಿದ್ದರೂ ಸಹಜವಾದ ಹಾಸ್ಯ ಪ್ರಜ್ಞೆಯೊಂದಿಗೆ ಸ್ಕಿಟ್‌ಗಳಲ್ಲಿ ಮಿಂಚಲಿದ್ದಾರೆ. ಅನುಭವಿ ಹಾಸ್ಯ ಕಲಾವಿದರು ಇವರಿಗೆ ಮೆಂಟರ್ಸ್‌ ಆಗಿ ಸಾಥ್ ನೀಡಲಿದ್ದಾರೆ. ಮಕ್ಕಳ ದೃಷ್ಟಿಕೋನದಲ್ಲಿ ಪ್ರಪಂಚ ಹೇಗಿರುತ್ತದೆ ಎಂಬ ಕತೆಗಳು ಹಾಗೂ ನಗೆಯ ಸನ್ನಿವೇಶಗಳು ಇಲ್ಲಿ ಅನಾವರಣಗೊಳ್ಳಲಿವೆ. ಒಬ್ಬ ಸಾಮಾನ್ಯ ಮಗು ನಟನೆಯ ಜಗತ್ತಿನಲ್ಲಿ ಹಾಸ್ಯ ಕಲಾವಿದನಾಗಿ ಹೇಗೆ ವಿಕಸನಗೊಳ್ಳುತ್ತದೆ ಎಂಬುದನ್ನು ಈ ಶೋ ಪ್ರತಿಬಿಂಬಿಸಲಿದೆ.


ಕಲರ್ಸ್‌ ಕನ್ನಡ ವಾಹಿನಿಯ ಶೋಗಳು:


ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ನೀಡುತ್ತ ಬರುತ್ತಿರುವ ಕಲರ್ಸ್‌ ಕನ್ನಡ ವಾಹಿನಿ, ‘ನನ್ನಮ್ಮ ಸೂಪರ್‌ ಸ್ಟಾರ್‌ʼ, ʼರಾಜ ರಾಣಿʼ, ʻಮಜಾ ಟಾಕೀಸ್‌ʼ ಗಳಂಥ ಟಾಪ್ ರೇಟಿಂಗ್ ಶೋಗಳನ್ನು ನೀಡಿದೆ. ಇದೀಗ ʻಗಿಚ್ಚಿ ಗಿಲಿಗಿಲಿ ಜೂನಿಯರ್ಸ್‌ʼ ಪರಿಚಯಿಸುತ್ತಿದೆ. ಈ ಸಲದ ಗಿಚ್ಚಿ ಗಿಲಿ ಜೂನಿಯರ್ಸ್‌ ಶೋಗೆ ಎಂದಿನಂತೆ ಸಾಧುಕೋಕಿಲ, ಸೃಜನ್‌ ಲೋಕೇಶ್‌, ಶ್ರುತಿ ತೀರ್ಪುಗಾರರಾಗಿ ಮುಂದುವರಿಯಲಿದ್ದಾರೆ. ಈ ಬಾರಿ ಪಟ ಪಟ ಅಂತ ಮಾತಾಡೋ ಪಟಾಕಿ ಅನುಪಮಾ ಗೌಡ ಶೋನ ನಿರೂಪಕಿಯಾಗಿದ್ದಾರೆ.


ʻಗಿಚ್ಚಿ ಗಿಲಿಗಿಲಿ ಜೂನಿಯರ್ಸ್‌ʼ:


ರಾಜ್ಯಾದ್ಯಂತ ನಡೆಸಿದ ಆಡಿಷನ್ ಮೂಲಕ ಅತ್ಯಂತ ಚುರುಕಾದ ಮಕ್ಕಳನ್ನು ಈ ಶೋಗೆ ಆಯ್ಕೆ ಮಾಡಲಾಗಿದೆ. 'ನಿನಗಾಗಿ' ಧಾರಾವಾಹಿಯಲ್ಲಿ ಕೃಷ್ಣನಾಗಿ ನಟಿಸಿ ಮನೆಮಾತಾಗಿದ್ದ 7 ವರ್ಷದ ಸಿರಿಸಿಂಚನ ಕೂಡ ಈ ತಂಡದಲ್ಲಿದ್ದಾರೆ. ಉಳಿದಂತೆ ಅಕ್ಷಯ್ ರವಿತೇಜ್ (ಚಿಕ್ಕಮಗಳೂರು), ಚಿರುಶ್ ಆದಿತ್ಯ (ಮಂಗಳೂರು), ಗೌಶಿಕ ಗೌಡ (ಶ್ರೀರಂಗಪಟ್ಟಣ, ಮಂಡ್ಯ), ಏಕಾoತ್  ಚಂದ್ರಪ್ಪ ಮಲಗುಂದ (ಹಾವೇರಿ), ಪಲ್ಲವಿ (ಅರಕಲಗೂಡು, ಹಾಸನ), ಆತ್ಮಿ ಗೌಡ (ಪುತ್ತೂರು, ದಕ್ಷಿಣ ಕನ್ನಡ), ಸಿರಿಸಿಂಚನ (ಬೆಂಗಳೂರು), ಪ್ರಗ್ಯಾ (ಮಂಗಳೂರು), ಅದ್ವಿಕಾ ಬಾಕಿಲ (ಪುತ್ತೂರು), ಪ್ರಗ್ಯ (ಮಂಗಳೂರು), ಮೋಹಕ್ ಗೌಡ (ಬೆಂಗಳೂರು), ವಿಹಾನ್ ಸೂರ್ಯ (ಮೈಸೂರು) ಮತ್ತು ಮಾದೇಶ (ಹೊಳೆನರಸೀಪುರ) ಇವರೆಲ್ಲ ಈ ಸಲದ ಶೋನ ಹೈಲೈಟ್‌.


ಈ ಪುಟ್ಟ ಕಲಾವಿದರಿಗೆ ಸೂರ್ಯ ಕುಂದಾಪುರ, ಮಾನಸ, ರಾಘವೇಂದ್ರ, ಶಿವು, ಮಂಜು, ಚಂದ್ರಪ್ರಭ, ಬಸವರಾಜ್, ವಿನೋದ್ ಗೊಬ್ಬರಗಾಲ, ಸೂರಜ್, ತುಕಾಲಿ ಸಂತೋಷ್, ಪ್ರಶಾಂತ್ ಹಾಗೂ ವಾಣಿ ಅವರಂತಹ ಅಪ್ರತಿಮ ಹಾಸ್ಯಗಾರರು ಸಾಥ್ ನೀಡಲಿದ್ದಾರೆ.


ಕಲ್ಲರ್ಸ್ ಕನ್ನಡ ಇತಿಹಾಸ:


ವಾರಾಂತ್ಯದ ರಾತ್ರಿಗಳನ್ನು ನಗೆಯ ಕಡಲಾಗಿಸಲು 'ಗಿಚ್ಚಿ ಗಿಲಿಗಿಲಿ - ಜೂನಿಯರ್ಸ್' ಸಜ್ಜಾಗಿದೆ. ಮಕ್ಕಳ ತರಲೆ, ತುಂಟಾಟ ಮತ್ತು ಅತಿ ಮುಗ್ಧತೆಯ ಈ ಹಾಸ್ಯ ಪ್ರಯಾಣವು ಪ್ರತಿ ಕನ್ನಡಿಗರ ಹೃದಯ ಗೆಲ್ಲುವುದರಲ್ಲಿ ಸಂಶಯವಿಲ್ಲ. ಮಕ್ಕಳ ಪ್ಯೂರ್‌ ಕಾಮಿಡಿ ನಿಮ್ಮ ಮನಸೂರೆಗೊಳಿಸುವುದರಲ್ಲಿ ಎರಡು ಮಾತಿಲ್ಲ. ಇನ್ನೇಕೆ ತಡ ಇದೇ ಜನವರಿ 31ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ನಿಮ್ಮ ನೆಚ್ಚಿನ ಕಲರ್ಸ್‌ ಕನ್ನಡ ವಾಹಿನಿಯಲ್ಲಿ. ಮಿಸ್‌ ಮಾಡ್ದೇ ಕುಟುಂಬ ಸಮೇತ ನೋಡಿ.


ಶೋನಲ್ಲಿ ಮಕ್ಕಳ ತರಲೆ, ತುಂಟಾಟ ಮತ್ತು ಅತಿ ಮುಗ್ಧತೆಯ ಈ ಹಾಸ್ಯ ಪ್ರಯಾಣವು ಪ್ರತಿ ಕನ್ನಡಿಗರ ಹೃದಯ ಗೆಲ್ಲುವುದರಲ್ಲಿ ಸಂಶಯವಿಲ್ಲ. ಮಕ್ಕಳ ಪ್ಯೂರ್‌ ಕಾಮಿಡಿ ನಿಮ್ಮ ಮನಸೂರೆಗೊಳಿಸುವುದರಲ್ಲಿ ಎರಡು ಮಾತಿಲ್ಲ. ಇನ್ನೇಕೆ ತಡ ಇದೇ ಜನವರಿ 31ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ನಿಮ್ಮ ನೆಚ್ಚಿನ ಕಲರ್ಸ್‌ ಕನ್ನಡ ವಾಹಿನಿಯಲ್ಲಿ. ಮಿಸ್‌ ಮಾಡ್ದೇ ಕುಟುಂಬ ಸಮೇತ ನೋಡಿ.


ಈ ಪುಟ್ಟ ಕಲಾವಿದರಿಗೆ ಸೂರ್ಯ ಕುಂದಾಪುರ, ಮಾನಸ, ರಾಘವೇಂದ್ರ, ಶಿವು, ಮಂಜು, ಚಂದ್ರಪ್ರಭ, ಬಸವರಾಜ್, ವಿನೋದ್ ಗೊಬ್ಬರಗಾಲ, ಸೂರಜ್, ತುಕಾಲಿ ಸಂತೋಷ್, ಪ್ರಶಾಂತ್ ಹಾಗೂ ವಾಣಿ ಅವರಂತಹ ಅಪ್ರತಿಮ ಹಾಸ್ಯಗಾರರು ಸಾಥ್ ನೀಡಲಿದ್ದಾರೆ.


ವಾರಾಂತ್ಯದ ರಾತ್ರಿಗಳನ್ನು ನಗೆಯ ಕಡಲಾಗಿಸಲು 'ಗಿಚ್ಚಿ ಗಿಲಿಗಿಲಿ - ಜೂನಿಯರ್ಸ್' ಸಜ್ಜಾಗಿದೆ. ಮಕ್ಕಳ ತರಲೆ, ತುಂಟಾಟ ಮತ್ತು ಅತಿ ಮುಗ್ಧತೆಯ ಈ ಹಾಸ್ಯ ಪ್ರಯಾಣವು ಪ್ರತಿ ಕನ್ನಡಿಗರ ಹೃದಯ ಗೆಲ್ಲುವುದರಲ್ಲಿ ಸಂಶಯವಿಲ್ಲ. ಮಕ್ಕಳ ಪ್ಯೂರ್‌ ಕಾಮಿಡಿ ನಿಮ್ಮ ಮನಸೂರೆಗೊಳಿಸುವುದರಲ್ಲಿ ಎರಡು ಮಾತಿಲ್ಲ. ಇನ್ನೇಕೆ ತಡ ಇದೇ ಜನವರಿ 31ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ನಿಮ್ಮ ನೆಚ್ಚಿನ ಕಲರ್ಸ್‌ ಕನ್ನಡ ವಾಹಿನಿಯಲ್ಲಿ. ಮಿಸ್‌ ಮಾಡ್ದೇ ಕುಟುಂಬ ಸಮೇತ ನೋಡಿ.


ಕನ್ನಡಿಗರ ಎದೆಯಲ್ಲಿ ಅಚ್ಚಳಿಯದೇ ಉಳಿದಿರೋ ಕಲರ್ಸ್‌ ಕನ್ನಡ, ಪ್ರತಿ ಮನೆಮನಗಳಿಗೂ ಪ್ರತಿನಿತ್ಯ ಭರ್ಜರಿ ಮನರಂಜನೆ ನೀಡುತ್ತ ಬಂದಿದೆ. ಮನ ಮಿಡಿಯುವ ದೈನಂದಿನ ಕತೆಗಳಾದ ಭಾಗ್ಯಲಕ್ಷ್ಮೀ, ಗಂಧದಗುಡಿ, ಭಾರ್ಗವಿ LLB, ನಂದಗೋಕುಲ, ಗೌರಿ ಕಲ್ಯಾಣ, ಪವಿತ್ರ ಬಂಧನ,  ಮುದ್ದುಸೊಸೆ, ಪ್ರೇಮಕಾವ್ಯ, ಯಜಮಾನ ಮತ್ತು ನಕ್ಕು ನಗಿಸುವ ಗಿಚ್ಚಿ ಗಿಲಿಗಿಲಿ, ರಾಜಾ ರಾಣಿ, ನನ್ನಮ್ಮ ಸೂಪರ್‌ಸ್ಟಾರ್, ಫ್ಯಾಮಿಲಿ ಗ್ಯಾಂಗ್‌ಸ್ಟಾರ್ಸ್ ಶೋಗಳು ಜನಪ್ರಿಯವಾಗಿವೆ. ಬಿಗ್ ಬಾಸ್ ಕನ್ನಡ ಶೋ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಎಂದೇ ಖ್ಯಾತಿ ಪಡೆದಿದೆ.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ