LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಜನ್ಮಧಾತೆ ಕನ್ನಡ ಸಿನೆಮಾ ಮಾ.20 ರಂದು ಪ್ರದರ್ಶನ

ವೆಂಗಳೂರು: ಸುಂದರ ಸಂಸಾರದ ಕಥೆ ಹೇಳುವ ಜನ್ಮಧಾತೆ ಕನ್ನಡ ಸಿನೆಮಾ ಮಾ.20ರಂದು ಬೆಂಗಳೂರಿನ ಸುಂಕದ ಕಟ್ಟೆಯ ಚಿತ್ರಮಂದಿರದಲ್ಲಿ ಪ್ರದರ್ಶನವಾಗಲಿದೆ ಎಂದು ಸಿನೆಮಾದ ನಿರ್ಮಾಪಕ ಸುನಿಲ್ ಹುಬ್ಬಳ್ಳಿ ತಿಳಿಸಿದರು.


ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಚಿತ್ರದ ಟೈಟಲ್ ಹೇಳುವ ಹಾಗೆ  ಜನ್ಮಧಾತೆ ಎಂದರೆ ತಾಯಿಯೆಂದು ಹೇಳುತ್ತೆವೆ. ಚಂದ್ರಪ್ಪ ರಾಮಕ್ಕ ದಂಪತಿ ಸುಂದರ ಸಂಸಾರ ಕಲಕೆಯುವಾಗ ಆಗುವ ಘಟನಾವಳಿಗಳನ್ನು  ಬಹಳ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ.


ನಾಲ್ಕು ಜನ ಹೆಣ್ಣು ಮಕ್ಕಳು  ಆಗಿದ್ದಾಗ ಸಂಸಾರದಲ್ಲಿ  ಆಗುವ ದುರಂತಗಳು ಸಂಸಾರ ಪೀಡುಕನಾಗುವ ಕಥೆ ಇದೆ. ಅಂತಿಮವಾಗಿ ಕುಟುಂಬವು ಅದೋಗತಿಗೆ ಹೋದಾಗ ಮಾಡಿದ ತಪ್ಪು ಅರಿವಾಗಿ ಚಂದ್ರಪ್ಪ  ಕುಟುಂಬದಲ್ಲಿ ಕ್ಷಮೆ ಕೇಳಿದಾಗ  ಇಡೀ ಕುಟುಂಭ ಕ್ಷಮಿಸಿ ಮತ್ತೆ ಸುಂದರ ಸಂಸಾರ ಮಾಡಲ ಸಹಕಾರಿಯಾಗುತ್ತದೆ ಎಂಬುದು ಚಿತ್ರದ ತಿರುಳಾಗಿದೆ. ಸಿನೆಮಾ 112 ಕಲಾವಧಿಯಾಗಿದ್ದು ಪ್ರೇಕ್ಷಕರು ಚಿತ್ರಮಂದಿರಕ್ಕೆ ಹೋಗಿ ಸಿನೆಮಾ ನೋಡಿ ಎಂದು ಮನವಿ ಮಾಡಿಕೊಂಡರು.


ಇನ್ನು ಜನ್ಮಧಾತೆ ಕಲಾವಿದರಲ್ಲಿ ಮೂಗ ಸುರೇಶ್,ಅಪೂರ್ವ,ಶೈಲಶ್ರೀ ಸುದರ್ಶನ್ ,ಸುನಿಲ್ ಹುಬ್ಬಳ್ಳಿ,ರಾಜಕುಮಾರಿ,ವಿಶಾಲಾಕ್ಷಿಸಿಕೆ,ವಿ ಕರಣ್ಯ ಶಶಿಧರ,ದೊರೆಗೌಡ,ದೇವಿಕಾ ಸಿಂಗ,ದೀಪಿಕಾ ಮುಂಡವಾಡ, ಜೂ.ಮಾಲಾಶ್ರೀ,ಪೂರ್ಣಿಮಾ, ದೊಡ್ಡ ತಂಡವೇ ಇದೆ.


ಜನ್ಮಧಾತೆ ತಂತ್ರಜ್ಞರ ತಂಡದಲ್ಲಿ ಕಥೆ ನಿರ್ಮಾಪಕ ಸುನಿಲ್ ಹುಬ್ಬಳ್ಳಿ,ಚಿತ್ರಕಥೆ ನಿರ್ದೇಶನ ರವೀಂದ್ರನಾಥ್ ಕಣಗಾಲ್,ಸಂಭಾಷಣೆ ರಿಷಿಕಾ ನಾಗರಾಜ್, ಛಾಯಾಗ್ರಹಣ ಕುರಿರಾಜು, ಸಂಗಿತ ರವೀಶ್,ಸಂಕಲನ ಮರಿಸ್ವಾಮಿ,ವಸ್ತ್ರಂಕಾರ  ಸಂಮೃದ್ದಿ,ಪ್ರೊಡಕ್ಷನ್ ಡಿಸೈನರ್  ದೊರೆಗೌಡ,ಡಿಸೈನರ್ ದೇವು ತಂಡದವರು ಅದ್ಬುತವಾಗಿ ಸಿನೆಮಾ ನಿರ್ಮಾಣ ಮಾಡಿದ್ದಾರೆ ಎಂದರು.


ಸಿನೆಮಾವನ್ನು SSHGS Film Company ಅಡಿಯಲ್ಲಿ ನಿರ್ಮಾಣವಾಗಿದ್ದು ,ಸಿನೆಮಾವನ್ನು ಈಗಿನ ಟ್ರೆಂಡ್ ಗೆ ತಕ್ಕನಾಗಿ ಕಟ್ಟಿಕೊಡಲಾಗಿದೆ, ಇಡೀ ಕುಟುಂಭ ನೋಡುವ ಚಿತ್ರವಾಗಿದೆ, ಪ್ರೇಕ್ಷಕರು ಚಿತ್ರಮಂದಿರಕ್ಕೆ ಹೋಗಿ ನೋಡಬೇಕು ಎಂದು ಮನವಿ ಮಾಡಿಕೊಂಡರು.


ಪತ್ರಿಕಾ ಗೋಷ್ಟಿಯಲ್ಲಿ ನಿರ್ದೇಶಕರಾದ ಕೆಎಸ್ ರವೀಂದ್ರನಾಥ್ ಕಣಗಾಲ್,ಜೂ.ಮಾಲಾಶ್ರಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ