ವೆಂಗಳೂರು: ಸುಂದರ ಸಂಸಾರದ ಕಥೆ ಹೇಳುವ ಜನ್ಮಧಾತೆ ಕನ್ನಡ ಸಿನೆಮಾ ಮಾ.20ರಂದು ಬೆಂಗಳೂರಿನ ಸುಂಕದ ಕಟ್ಟೆಯ ಚಿತ್ರಮಂದಿರದಲ್ಲಿ ಪ್ರದರ್ಶನವಾಗಲಿದೆ ಎಂದು ಸಿನೆಮಾದ ನಿರ್ಮಾಪಕ ಸುನಿಲ್ ಹುಬ್ಬಳ್ಳಿ ತಿಳಿಸಿದರು.
ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಚಿತ್ರದ ಟೈಟಲ್ ಹೇಳುವ ಹಾಗೆ ಜನ್ಮಧಾತೆ ಎಂದರೆ ತಾಯಿಯೆಂದು ಹೇಳುತ್ತೆವೆ. ಚಂದ್ರಪ್ಪ ರಾಮಕ್ಕ ದಂಪತಿ ಸುಂದರ ಸಂಸಾರ ಕಲಕೆಯುವಾಗ ಆಗುವ ಘಟನಾವಳಿಗಳನ್ನು ಬಹಳ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ.
ನಾಲ್ಕು ಜನ ಹೆಣ್ಣು ಮಕ್ಕಳು ಆಗಿದ್ದಾಗ ಸಂಸಾರದಲ್ಲಿ ಆಗುವ ದುರಂತಗಳು ಸಂಸಾರ ಪೀಡುಕನಾಗುವ ಕಥೆ ಇದೆ. ಅಂತಿಮವಾಗಿ ಕುಟುಂಬವು ಅದೋಗತಿಗೆ ಹೋದಾಗ ಮಾಡಿದ ತಪ್ಪು ಅರಿವಾಗಿ ಚಂದ್ರಪ್ಪ ಕುಟುಂಬದಲ್ಲಿ ಕ್ಷಮೆ ಕೇಳಿದಾಗ ಇಡೀ ಕುಟುಂಭ ಕ್ಷಮಿಸಿ ಮತ್ತೆ ಸುಂದರ ಸಂಸಾರ ಮಾಡಲ ಸಹಕಾರಿಯಾಗುತ್ತದೆ ಎಂಬುದು ಚಿತ್ರದ ತಿರುಳಾಗಿದೆ. ಸಿನೆಮಾ 112 ಕಲಾವಧಿಯಾಗಿದ್ದು ಪ್ರೇಕ್ಷಕರು ಚಿತ್ರಮಂದಿರಕ್ಕೆ ಹೋಗಿ ಸಿನೆಮಾ ನೋಡಿ ಎಂದು ಮನವಿ ಮಾಡಿಕೊಂಡರು.
ಇನ್ನು ಜನ್ಮಧಾತೆ ಕಲಾವಿದರಲ್ಲಿ ಮೂಗ ಸುರೇಶ್,ಅಪೂರ್ವ,ಶೈಲಶ್ರೀ ಸುದರ್ಶನ್ ,ಸುನಿಲ್ ಹುಬ್ಬಳ್ಳಿ,ರಾಜಕುಮಾರಿ,ವಿಶಾಲಾಕ್ಷಿಸಿಕೆ,ವಿ ಕರಣ್ಯ ಶಶಿಧರ,ದೊರೆಗೌಡ,ದೇವಿಕಾ ಸಿಂಗ,ದೀಪಿಕಾ ಮುಂಡವಾಡ, ಜೂ.ಮಾಲಾಶ್ರೀ,ಪೂರ್ಣಿಮಾ, ದೊಡ್ಡ ತಂಡವೇ ಇದೆ.
ಜನ್ಮಧಾತೆ ತಂತ್ರಜ್ಞರ ತಂಡದಲ್ಲಿ ಕಥೆ ನಿರ್ಮಾಪಕ ಸುನಿಲ್ ಹುಬ್ಬಳ್ಳಿ,ಚಿತ್ರಕಥೆ ನಿರ್ದೇಶನ ರವೀಂದ್ರನಾಥ್ ಕಣಗಾಲ್,ಸಂಭಾಷಣೆ ರಿಷಿಕಾ ನಾಗರಾಜ್, ಛಾಯಾಗ್ರಹಣ ಕುರಿರಾಜು, ಸಂಗಿತ ರವೀಶ್,ಸಂಕಲನ ಮರಿಸ್ವಾಮಿ,ವಸ್ತ್ರಂಕಾರ ಸಂಮೃದ್ದಿ,ಪ್ರೊಡಕ್ಷನ್ ಡಿಸೈನರ್ ದೊರೆಗೌಡ,ಡಿಸೈನರ್ ದೇವು ತಂಡದವರು ಅದ್ಬುತವಾಗಿ ಸಿನೆಮಾ ನಿರ್ಮಾಣ ಮಾಡಿದ್ದಾರೆ ಎಂದರು.
ಸಿನೆಮಾವನ್ನು SSHGS Film Company ಅಡಿಯಲ್ಲಿ ನಿರ್ಮಾಣವಾಗಿದ್ದು ,ಸಿನೆಮಾವನ್ನು ಈಗಿನ ಟ್ರೆಂಡ್ ಗೆ ತಕ್ಕನಾಗಿ ಕಟ್ಟಿಕೊಡಲಾಗಿದೆ, ಇಡೀ ಕುಟುಂಭ ನೋಡುವ ಚಿತ್ರವಾಗಿದೆ, ಪ್ರೇಕ್ಷಕರು ಚಿತ್ರಮಂದಿರಕ್ಕೆ ಹೋಗಿ ನೋಡಬೇಕು ಎಂದು ಮನವಿ ಮಾಡಿಕೊಂಡರು.
ಪತ್ರಿಕಾ ಗೋಷ್ಟಿಯಲ್ಲಿ ನಿರ್ದೇಶಕರಾದ ಕೆಎಸ್ ರವೀಂದ್ರನಾಥ್ ಕಣಗಾಲ್,ಜೂ.ಮಾಲಾಶ್ರಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.