ಬೆಂಗಳೂರು: ಭೌತಿಕ ಜಗತ್ತಿನಲ್ಲಿ ವ್ಯಕ್ತಿಗಳು, ವಸ್ತುಗಳು ಮತ್ತು ಗ್ರಂಥಗಳು ಕಾಲಕ್ರಮೇಣ ಮರೆಯಾಗುವುದು ಸಹಜ. ಆದರೆ ಶ್ರೀಲ ಪ್ರಭುಪಾದರ ವ್ಯಕ್ತಿತ್ವ, ಅವರ ಭಗವದ್ಗೀತಾ ಪ್ರಚಾರ ಮತ್ತು ಅವರು ಬಿಟ್ಟುಹೋದ ಆಧ್ಯಾತ್ಮಿಕ ಪರಂಪರೆ ಶಾಶ್ವತವಾಗಿ ಉಳಿಯಲಿದೆ ಎಂದು ಖ್ಯಾತ ಶಿಕ್ಷಣತಜ್ಞ ಹಾಗೂ ಅಕಾಡೆಮಿ ಫಾರ್ ಕ್ರಿಯೇಟಿವ್ ಟೀಚಿಂಗ್ ನ ಅಧ್ಯಕ್ಷ ಡಾ. ಗುರುರಾಜ ಕರಜಗಿ ಅಭಿಪ್ರಾಯಪಟ್ಟರು.
ಶ್ರೀಲ ಪ್ರಭುಪಾದ ಚರಿತಾಮೃತಮ್ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಈ ಶಾಶ್ವತತೆಯ ಹಿಂದಿರುವ ಆಧ್ಯಾತ್ಮಿಕ ಶಕ್ತಿಯೇ ಯುಗಯುಗಾಂತರಗಳಲ್ಲಿ ಜನರನ್ನು ಅವರತ್ತ ಆಕರ್ಷಿಸುತ್ತಲೇ ಇರುತ್ತದೆ ಎಂದುರು.
ಉಡುಪಿ ಅದಮಾರು ಮಠದ ಪೀಠಾಧಿಪತಿ ಈಶಪ್ರಿಯ ತೀರ್ಥ ಶ್ರೀಪಾದರು ಮಾತನಾಡಿ, ಶ್ರೀಲ ಪ್ರಭುಪಾದರ ಅಸಾಧಾರಣ ಸಾಧನೆ ಇಂದಿಗೂ ಜನಮಾನಸದಲ್ಲಿ ಪ್ರೇರಣೆಯ ಹುರಿದುಂಬಿಸುವ ಶಕ್ತಿಯಾಗಿದೆ.
ಇಸ್ಕಾನ್ ಬೆಂಗಳೂರು ಸಂಸ್ಥೆಯು ಅವರ ಹಾದಿಯನ್ನೇ ಅನುಸರಿಸಿ ಹರಿನಾಮ ಸಂಕೀರ್ತನೆ, ಪುಸ್ತಕ ವಿತರಣೆ ಮತ್ತು ಅನ್ನದಾನದಂತಹ ಕಾರ್ಯಕ್ರಮಗಳ ಮೂಲಕ ವಿಶ್ವಮಟ್ಟದಲ್ಲಿ ಗಮನ ಸೆಳೆದಿದೆ. ಮುಂದಿನ ದಿನಗಳಲ್ಲಿ ಇಂತಹ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತಷ್ಟು ವಿಸ್ತಾರಗೊಳ್ಳಲಿ ಎಂದು ತಿಳಿಸಿದರು.
ಇಸ್ಕಾನ್ ಬೆಂಗಳೂರು ಸಂಸ್ಥೆ ಅಧ್ಯಕ್ಷ ಮಧು ಪಂಡಿತ ದಾಸ ಮಾತನಾಡಿದರು. ಈ ಸಂದರ್ಭದಲ್ಲಿ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್, ಈ ಮಹಾಕಾವ್ಯವನ್ನು ಶ್ರೀಲ ಪ್ರಭುಪಾದರ ಪದಕಮಲಗಳಿಗೆ ತಮ್ಮ ವಿನಮ್ರ ಅರ್ಪಣೆಯಾಗಿ ಸಮರ್ಪಿಸುತ್ತಿರುವುದಾಗಿ ತಿಳಿಸಿದರು.
ಅಲ್ಲದೆ, ಈ ಕೃತಿ ಕನ್ನಡದ ಮುಂದಿನ ಪೀಳಿಗೆಗಳ ಓದುಗರಿಗೆ ಶ್ರೀಲ ಪ್ರಭುಪಾದರ ಜೀವನ ಮತ್ತು ಸಂದೇಶವನ್ನು ತಲುಪಿಸಲಿದೆ, ಕೇವಲ ಸಾಹಿತಿಕವಾಗಿ ಮಾತ್ರವಲ್ಲವೇ ಲೈಂಗಿಕ ಜೀವನದ ಕೃಷ್ಣ ದಾರಿಯ ಪಾತ್ರಗಳು ಹಾಗೂ ಜೀವನದಲ್ಲಿ ಅಳವಡಿಸ ಬೇಗ ದಂತಹ ಕಾರ್ಯಕ್ರಮಗಳು ಸಹ ಈ ಪುಸ್ತಕದಲ್ಲಿ ಹಡಕವಾಗಿವೆ ಇದು ಪ್ರತಿಯೊಬ್ಬರಿಗೂ ಸಹ ಬೇಕಾಗುವ ವಿಚಾರಧಾರೆಯಾಗಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.