ಬೆಂಗಳೂರು: ದಿ ರಿವೇಂಜ್ ಸಿನಿಮಾಸ್ ಬ್ಯಾನರ್ ನ ಅಡಿಯಲ್ಲಿ ನಮ್ಮ ಪಂಚರತ್ನ ಎಂಬ ಸಿನಿಮಾದ ಟೈಟಲ್ ಲಾಂಚ್ ಅನ್ನು ಮಹಾಲಕ್ಷ್ಮಿ ಪುರ ವಿಧಾನಸಭಾ ಕ್ಷೇತ್ರ ಶಾಸಕರಾದ ಕೆ ಗೋಪಾಲಯ್ಯರವರ ಉಪಸ್ಥಿತಿ ಮತ್ತು ಅವರ ಆಶೀರ್ವಾದದೊಂದಿಗೆ ಕ್ಷೇತ್ರದಲ್ಲಿ ನೆರವೇರಿತು.
ನಂತರ ಮಾತನಾಡಿದ ಶಾಸಕರು, ನಮ್ಮ ಕ್ಷೇತ್ರದಲ್ಲಿ ನಿರ್ಮಾಪಕರಾದ ಪ್ರಭಾಕರ್ ಎನ್, ಸಚಿನ್ ಕುಮಾರ್ ಎಂ ಎಸ್ , ನಿರ್ದೇಶಕರಾದ ರಾಘವ ರಾಜೇಶ್ ಎಸ್ ಹಾಗೂ ಸ್ನೇಹಜೀವಿ ಹರ್ಷ ಬಿ ಗೌಡ ರವರು ಅಕ್ಷರ ಕಲ್ಚರಲ್ ಅಕಾಡಮಿಯಲ್ಲಿ ನಮ್ಮ ಪಂಚರತ್ನ ಎಂಬ ಸಿನಿಮಾದ ಟೈಟಲ್ ಲಾಂಚ್ ಮಾಡಿರುವುದು ಕುಷಿ ತಂದಿದೆ, ಆದಷ್ಟು ಬೇಗ ಸಿನೆಮಾ ಚಿತ್ರೀಕರಣ ಪ್ರಾರಂಭ ಮಾಡಿ, ಜನರಿಗೆ ಇಷ್ಟವಾಗುವ ರೀತಿ ಸಿನೆಮಾ ಮೂಡಿ ಬರಲಿ, ಸಿನೆಮಾ ಚಿತ್ರೀಕರಣದಲ್ಲಿ ಯಾವುದೇ ಅಡ್ಡಿ ಆತಂಕಗಳು ಬಾರದಿರಲಿ,ಸುಗಮವಾಗಿ ನೆರವೇರಲಿ ಎಂದು ಚಿತ್ರ ತಂಡಕ್ಕೆ ಆಶಿಸಿದರು.
ಶಾಸಕರ ಸಮ್ಮುಖದಲ್ಲಿ ಬಸವಣ್ಣ ದೇವಸ್ಥಾನ ಅಭಿವೃದ್ಫಿ ಟ್ರಸ್ಟ್ ನ ಅಧ್ಯಕ್ಷರಾದ ಬಿ ಡಿ ಶ್ರೀನಿವಾಸ್ ರವರು,
ಬಿ ಜೆ ಪಿ ಮುಖಂಡರಾದ ರವಿ ಕುಮಾರ್ ಸಿ ರವರು ಹಾಗೂ ಅಕ್ಷರ ಕಲ್ಚರಲ್ ಅಕಾಡಮಿ ಯ ಸಂಸ್ಥಾಪಕರಾದ ಡಾ.ಗೌರಿಪ್ರಾಸಾದ್ ಸಮ್ಮುಖದಲ್ಲಿ ನಮ್ಮ ಪಂಚರತ್ನ ಸಿನಿಮಾದ ಟೈಟಲ್ ಲಾಂಚ್ ನೆರವೇರಿತು. 
ಈ ಸಮಯದಲ್ಲಿ ನಿರ್ಮಾಪಕರಾದ ಪ್ರಭಾಕರ್ ಎನ್ ಹಾಗೂ ಸಚಿನ್ ಕುಮಾರ್ ಎಂ ಎಸ್ ನಿರ್ದೇಶಕರಾದ ರಾಘವ ರಾಜೇಶ್ ಎಸ್, ಸ್ನೇಹಜೀವಿ ಹರ್ಷ ಬಿ ಗೌಡ, ಸ್ನೇಹಿತರು, ಹಿತೈಷಿಗಳ ಸಹಕಾರದೊಂದಿಗೆ ನೆರವೇರಿತು. ಅತಿ ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ನಮ್ಮ ಪಂಚರತ್ನ ಸಿನಿಮಾ ತಂಡ ತಿಳಿಸಿದೆ.